ಕರ್ನಾಟಕ

karnataka

By

Published : Sep 11, 2020, 11:06 AM IST

ETV Bharat / bharat

''ಧ್ವಂಸಗೊಂಡ ಕಚೇರಿ ಧೈರ್ಯವಂತ ಮಹಿಳೆಯ ಸಂಕೇತ, ಅದನ್ನು ನವೀಕರಿಸಲು ನನ್ನ ಬಳಿ ಹಣವಿಲ್ಲ''

ಮುಂಬೈನಲ್ಲಿರುವ ಕಂಗನಾ ಅವರ ಕಚೇರಿಯನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಭಾಗಶಃ ಧ್ವಂಸಗೊಳಿಸಿದ್ದು, ಅದನ್ನು ನವೀಕರಿಸಲು ನನ್ನ ಬಳಿ ಹಣವಿಲ್ಲ ಎಂದು ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

kangana ranaut
ಕಂಗನಾ ರಣಾವತ್

ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ ಭಾಗಶಃ ಧ್ವಂಸಗೊಳಿಸಿರುವ ಮನೆಯನ್ನು ನವೀಕರಣಗೊಳಿಸಲು ನನ್ನ ಬಳಿ ಹಣವಿಲ್ಲ ಎಂದು ಬಾಲಿವುಡ್ ನಟಿ ಕಂಗನಾ ರನೌತ್​​ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗತ್ತಿನಲ್ಲಿ ಉನ್ನತ ಸ್ಥಾನಕ್ಕೆ ಏರುವ ಮಹಿಳೆಯ ಧೈರ್ಯದ ಸಂಕೇತವಾಗಿ ಈ ಧ್ವಂಸಗೊಂಡಿರುವ ಕಚೇರಿಯನ್ನು ಇಟ್ಟುಕೊಳ್ಳುತ್ತೇನೆ ಎಂದು ಕಂಗನಾ ಮಹಾರಾಷ್ಟ್ರದ ಶಿವಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನವರಿ 15ರಂದು ನಾನು ಕಚೇರಿಯನ್ನು ತೆರೆದಿದ್ದೆ. ಕೊರೊನಾ ಕಾರಣದಿಂದ ಸ್ವಲ್ಪ ದಿನ ಮಾತ್ರವೇ ಇಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. ತುಂಬಾ ಮಂದಿ ಇಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಬೃಹನ್ಮುಂಬೈ ಮಹಾನಗರ ಪಾಲಿಕೆ ಕೆಲವು ದಿನಗಳ ಹಿಂದೆ ಕಂಗನಾ ಅವರ ಕಚೇರಿಯನ್ನು ತೆರವುಗೊಳಿಸಲು ಮುಂದಾಗಿತ್ತು. ಈ ವೇಳೆ ಬಾಂಬೆ ಹೈಕೋರ್ಟ್​ ಕಂಗನಾರ ಮನವಿಗೆ ಸ್ಪಂದಿಸಿ ಕಟ್ಟಡ ತೆರವು ಕಾರ್ಯಾಚರಣೆಗೆ ತಡೆ ನೀಡಿತ್ತು. ಇದಾದ ನಂತರ ವಿಚಾರಣೆ ಮುಂದುವರೆದಿದ್ದು, ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮುಂದೂಡಿದೆ.

ABOUT THE AUTHOR

...view details