ಕರ್ನಾಟಕ

karnataka

By

Published : Mar 20, 2020, 1:11 PM IST

Updated : Mar 20, 2020, 1:19 PM IST

ETV Bharat / bharat

'ನ್ಯಾಯ ಮೇಲುಗೈ ಸಾಧಿಸಿದೆ': ನಿರ್ಭಯಾ ವಿಷಯ ಉಲ್ಲೇಖಿಸದೆ ಮೋದಿ ಟ್ವೀಟ್

ನಿರ್ಭಯಾ ಪ್ರಕರಣವನ್ನು ನೇರವಾಗಿ ಉಲ್ಲೇಖಿಸದೆ ಟ್ವೀಟ್​ ಮಾಡಿರುವ ಪಿಎಂ ನರೇಂದ್ರ ಮೋದಿ, ನ್ಯಾಯವು ಮೇಲುಗೈ ಸಾಧಿಸಿದೆ ಎಂದು ಹೇಳಿದ್ದಾರೆ.

PM modi tweet on nirbhaya case
ಪಿಎಂ ಮೋದಿ ಟ್ವೀಟ್​

ನವದೆಹಲಿ:ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಏಳು ವರ್ಷಗಳ ಬಳಿಕ ಕೊನೆಗೂ ಗಲ್ಲಿಗೇರಿಸಲಾಗಿದ್ದು, ನ್ಯಾಯ ಮೇಲುಗೈ ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಿರ್ಭಯಾ ಪ್ರಕರಣವನ್ನು ನೇರವಾಗಿ ಉಲ್ಲೇಖಿಸದೆ ಟ್ವೀಟ್​ ಮಾಡಿರುವ ಪಿಎಂ ಮೋದಿ, ನ್ಯಾಯವು ಮೇಲುಗೈ ಸಾಧಿಸಿದೆ. ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಖಾತ್ರಿ ಪಡಿಸುವುದು ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ನಾರಿ ಶಕ್ತಿ ಉತ್ತಮ ಸಾಧನೆ ಮಾಡಿದೆ. ಸಮಾನತೆ ಮತ್ತು ಅವಕಾಶಗಳಿಗೆ ಒತ್ತು ನೀಡಲಾಗುವ ಮಹಿಳಾ ಸಬಲೀಕರಣದ ಮೇಲೆ ಕೇಂದ್ರೀಕೃತವಾಗುವಂತಹ ರಾಷ್ಟ್ರವನ್ನು ನಾವು ನಿರ್ಮಿಸಬೇಕು ಎಂದು ಹೇಳಿದ್ದಾರೆ.

2012ರ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ ಸಿಂಗ್​ರನ್ನು ಇಂದು ಬೆಳಗ್ಗೆ 5.30ಕ್ಕೆ ದೆಹಲಿಯ ತಿಹಾರ್​ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

Last Updated : Mar 20, 2020, 1:19 PM IST

ABOUT THE AUTHOR

...view details