ಕರ್ನಾಟಕ

karnataka

ಅಂತೂ ಮನಮೋಹನ್​​ಸಿಂಗ್​ಗೆ ಸ್ಥಳ ಸಿಕ್ಕಿತು.. ರಾಜಸ್ಥಾನದಿಂದ ನಾಮಿನೇಷನ್​!

By

Published : Aug 13, 2019, 1:38 PM IST

ಕಳೆದ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್​​ಗೆ, ಮಾಜಿ ಪ್ರಧಾನಿ ಅವರನ್ನ ರಾಜ್ಯಸಭೆಗೆ ಕಳುಹಿಸಲು ರಾಜ್ಯದ ಹುಡುಕಾಟದಲ್ಲಿತ್ತು. ತಮಿಳುನಾಡಿನಲ್ಲಿ ಡಿಎಂಕೆ ನೆರವು ಪಡೆದು ಮಾಜಿ ಪ್ರಧಾನಿಗೆ ರಾಜ್ಯಸಭೆಯಲ್ಲಿ ಸ್ಥಾನ ಕಲ್ಪಿಸುವ ಯೋಚನೆ ಮಾಡಿತ್ತು. ಆದರೆ ಸಾಧ್ಯವಾಗಿರಲಿಲ್ಲ.. ಅಂತಿಮವಾಗಿ ರಾಜಸ್ಥಾನದಿಂದ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಮನಮೋಹನ್​​ಸಿಂಗ್​

ಜೈಪುರ:ಅಂತಿಮವಾಗಿ ರಾಜ್ಯಸಭೆ ಎಲೆಕ್ಷನ್​ಗೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ರಾಜಸ್ಥಾನದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್​​ಗೆ, ಮಾಜಿ ಪ್ರಧಾನಿ ಅವರನ್ನ ರಾಜ್ಯಸಭೆಗೆ ಕಳುಹಿಸಲು ರಾಜ್ಯದ ಹುಡುಕಾಟದಲ್ಲಿತ್ತು. ತಮಿಳುನಾಡಿನಲ್ಲಿ ಡಿಎಂಕೆ ನೆರವು ಪಡೆದು ಮಾಜಿ ಪ್ರಧಾನಿಗೆ ರಾಜ್ಯಸಭೆಯಲ್ಲಿ ಸ್ಥಾನ ಕಲ್ಪಿಸುವ ಯೋಚನೆ ಮಾಡಿತ್ತು.

ಆದರೆ, ಡಿಎಂಕೆ ಇದಕ್ಕೆ ನಿರಾಕರಿಸಿತ್ತು. ಈ ಮೊದಲು ಮನಮೋಹನ್​ ಸಿಂಗ್​ ಅಸ್ಸೋಂ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ಅಲ್ಲಿ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡಿದ್ದರಿಂದ ಮನಮೋಹನ್​ ಸಿಂಗ್​ ಮರು ಆಯ್ಕೆ ಕಠಿಣವಾಗಿತ್ತು. ಅಂತಿಮವಾಗಿ ಅವರಿಗೆ ರಾಜಸ್ಥಾನದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇಂದು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಿಎಂ ಅಶೋಕ್​ ಗೆಹ್ಲೋಟ್​​, ಡಿಸಿಎಂ ಸಚಿನ್​ ಪೈಲಟ್​​ ಹಾಜರಿದ್ದರು.

ABOUT THE AUTHOR

...view details