ಕರ್ನಾಟಕ

karnataka

By

Published : Jun 9, 2020, 1:09 PM IST

ETV Bharat / bharat

ವರದಿಯಾಗುತ್ತಲೇ ಇವೆ ಸಾವಿನ ಪ್ರಕರಣಗಳು:  ಕೊಳೆತ ರೀತಿಯಲ್ಲಿ ಆನೆ ಶವ ಪತ್ತೆ

ಛತ್ತೀಸ್​​ಗಢ ರಾಜ್ಯದ ಸರ್ಜಾಪುರದ ಪ್ರತಾಪ್​​ಪುರ್​ ಅರಣ್ಯ ವ್ಯಾಪ್ತಿಯಲ್ಲಿ ಮತ್ತೊಂದು ಆನೆಯ ಅಸ್ಥಿಪಂಜರ ಪತ್ತೆಯಾಗಿದೆ.

elephant  dead body found
ಆನೆ ಶವ ಪತ್ತೆ

ಛತ್ತೀಸ್​​ಗಢ: ಪ್ರತಾಪ್​​ಪುರ್​ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಆನೆಯ ಕೊಳೆತ ಮೃತದೇಹ ಪತ್ತೆಯಾಗಿದೆ.

ಆನೆ ಶವ ಪತ್ತೆ

20 ದಿನಗಳ ಹಿಂದಷ್ಟೇ ಇದೇ ಪ್ರದೇಶದಲ್ಲಿ ಆನೆ ಶವ ಪತ್ತೆಯಾಗಿತ್ತು. ಇಂದು ಮತ್ತೆ ಸುಮಾರು 15 ವರ್ಷದ ಆನೆಯ ಶವವು ಪ್ರತಾಪ್​​ಪುರ್ ಅರಣ್ಯ ಪ್ರದೇಶದ ಕಾರಂಜಾವರ್ ಕಾಡಿನ ಬಳಿ ಪತ್ತೆಯಾಗಿದೆ. ಘಟನೆಯ ಮಾಹಿತಿ ಮೇರೆಗೆ ಪ್ರತಾಪುರದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ಪರಿಶೀಲನೆ ನಡೆಸಿದ್ದಾರೆ. ಎಸ್‌ಡಿಒ ಮನೋಜ್ ವಿಶ್ವಕರ್ಮ ಅವರು ಆನೆಗಳ ನಡುವೆ ಪರಸ್ಪರ ಘರ್ಷಣೆ ನಡೆದು ಆನೆ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಆನೆಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಪ್ರತಾಪುರ ಅರಣ್ಯ ವ್ಯಾಪ್ತಿಯಲ್ಲಿ ಬರುವ ಗಣೇಶಪುರ ಗ್ರಾಮದ ಕಾಡಿನ ಅಣೆಕಟ್ಟೆಯೊಂದರ ಬಳಿ ಆನೆಯ ಶವ ಬಿದ್ದಿದ್ದನ್ನು ಕಂಡ ಗ್ರಾಮಸ್ಥರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ABOUT THE AUTHOR

...view details