ಕರ್ನಾಟಕ

karnataka

By

Published : Apr 27, 2020, 6:21 PM IST

ETV Bharat / bharat

ಕೊರೊನಾ ಲಸಿಕೆ ಕಂಡುಹಿಡಿಯುವತ್ತ ಭಾರತ: ಇಲ್ಲಿದೆ ಈ ಕುರಿತ ಇಂಟ್ರಸ್ಟಿಂಗ್​​​ ಸಂದರ್ಶನ

ಐಐಟಿ-ದೆಹಲಿಯ ಜೈವಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಯ್ಯದ್ ಇ ಹಸ್ನೈನ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಈ ವೈರಸ್‌ಗೆ ಲಸಿಕೆ ಮತ್ತು ಔಷಧ ಕಂಡುಹಿಡಿಯುವಲ್ಲಿ ಭಾರತೀಯ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದಿದ್ದಾರೆ.

ಕೊರೊನಾ ಲಸಿಕೆ
ಕೊರೊನಾ ಲಸಿಕೆ

ಹೈದರಾಬಾದ್: ಕೊರೊನಾ ವೈರಸ್​​ಗೆ ಲಸಿಕೆ ಕಂಡುಹಿಡಿಯಲು ಪ್ರಪಂಚದಾದ್ಯಂತ ತಜ್ಞರು ನಿರತರಾಗಿದ್ದಾರೆ. ಇದೇ ಸಂದರ್ಭದಲ್ಲಿ ಐಐಟಿ ದೆಹಲಿಯ ಹಿರಿಯ ಶಿಕ್ಷಣ ತಜ್ಞರು ಈ ವೈರಸ್​ಗೆ ಲಸಿಕೆ ಕಂಡುಹಿಡಿಯಲು ನಮ್ಮ ದೇಶವೂ ಉನ್ನತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಮತ್ತು ಅದರಿಂದ ಜೀನೋಮ್​ ಅನ್ನು ಡಿಕೋಡ್​ ಮಾಡಲಾಗಿದೆ ಎಂದು ಹೇಳಿದ್ದಾರೆ.

ಐಐಟಿ-ದೆಹಲಿಯ ಜೈವಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಯ್ಯದ್ ಇ ಹಸ್ನೈನ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಈ ವೈರಸ್‌ಗೆ ಲಸಿಕೆ ಮತ್ತು ಔಷಧ ಕಂಡುಹಿಡಿಯುವಲ್ಲಿ ಭಾರತೀಯ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದಿದ್ದಾರೆ.

ಲಸಿಕೆ ಅಭಿವೃದ್ಧಿ ಪಡಿಸಲು ಹಲವು ತಿಂಗಳುಗಳು ಬೇಕಾಗಬಹುದು ಅಥವಾ ಒಂದು ವರ್ಷವಾದ್ರೂ ಆಗಬಹುದು ಎಂದು ವಿಜ್ಞಾನ ನೀತಿ ಸಲಹೆಗಾರರಾದ ಪ್ರೊಫೆಸರ್ ಹಸ್ನೈನ್ ಹೇಳಿದ್ದಾರೆ. ಸರ್ಕಾರ ಮತ್ತು ಆರೋಗ್ಯ ತಜ್ಞರು ರೂಪಿಸಿರುವ ಮುನ್ನೆಚ್ಚರಿಕೆಗಳನ್ನು ಜನರು ಅನುಸರಿಸಬೇಕೆಂದು ಅವರು ಸಲಹೆ ನೀಡಿದರು. ಇದಲ್ಲದೇ, ಪರೀಕ್ಷೆಯ ದರವನ್ನು ಹೆಚ್ಚಿಸುವುದು ಉತ್ತಮ ಮಾರ್ಗವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರೊಫೆಸರ್ ಹಸ್ನೈನ್ ಅವರಿಗೆ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ ನೀಡಲಾಗಿದೆ. ಅವರು 2016 ರಲ್ಲಿ ಜಾಮಿಯಾ ಹಮ್ದಾರ್ಡ್ ಉಪಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಸಂದರ್ಶನದ ಆಯ್ದ ಭಾಗಗಳು:

ಹೊಸ ವೈರಲ್ ಏಕಾಏಕಿ ಬರಲು ಕಾರಣವೇನು? ನಾವು ಅವುಗಳನ್ನು ಮೊದಲೇ ಗುರುತಿಸಬಹುದೇ?

ಹೊಸ ವೈರಸ್‌ಗಳ ರಚನೆಯು ನೈಸರ್ಗಿಕ ಪ್ರಕ್ರಿಯೆಯಾಗಿದೆ. ವೈರಸ್ ಕಣಗಳು ನಿಧಾನವಾಗಿ ವಿಕಸನಗೊಳ್ಳುತ್ತವೆ. ಪ್ರಕ್ರಿಯೆಯು ಹಲವಾರು ದಶಕಗಳನ್ನು ತೆಗೆದುಕೊಳ್ಳಬಹುದು. ವೈರಸ್​​ನ ಭೌಗೋಳಿಕ ಮೂಲವು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವುಗಳನ್ನು ಮೊದಲೇ ಕಂಡುಹಿಡಿಯುವುದು ಅಸಾಧ್ಯ. COVID-19 ಗೆ ಕಾರಣವಾದ SARS-CoV-2 ನ ಮೂಲವನ್ನು ಗುರುತಿಸುವುದು ಕಷ್ಟ. ಎಚ್ಐವಿ ಕಂಡುಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್, ಕೊರೊನಾ ವೈರಸ್​​ ಪ್ರಯೋಗಾಲಯದ ಮೂಲವನ್ನು ಹೊಂದಿದೆ ಎಂದಿದ್ದಾರೆ ಎಂದರು.

ಭಾರತದಲ್ಲಿ ಕೋವಿಡ್​-19 ಕುರಿತ ಸಂಶೋಧನೆಗೆ ಸೌಲಭ್ಯಗಳು ಹೇಗೆ?

ಜೀನೋಮ್ ಅನುಕ್ರಮವನ್ನು ಗುರುತಿಸಲು ಮತ್ತು ವೈರಸ್​​ನ ಆನುವಂಶಿಕ ರೂಪಾಂತರಗಳನ್ನು ಕಂಡುಹಿಡಿಯಲು ಮೂಲ ಸೌಲಭ್ಯಗಳಿವೆ. ಕೋವಿಡ್​​​ -19 ಗಾಗಿ ಔಷಧಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ನಮ್ಮ ದೇಶದಲ್ಲಿ ಇಮ್ಯುನೊಬಯಾಲಾಜಿಕಲ್ ಪ್ರಪಂಚದಾದ್ಯಂತ ಔಷಧಗಳನ್ನು ತಯಾರಿಸುವಲ್ಲಿ ಅಗ್ರಸ್ಥಾನದಲ್ಲಿದೆ. ಹಿಂದೆ, ಹೈದರಾಬಾದ್ಮೂಲದ ಭಾರತ್ ಬಯೋಟೆಕ್ ರೋಟಾವಾಕ್ (ಮೊದಲ ರೋಟವೈರಸ್ ಲಸಿಕೆ) ಯನ್ನು ಅಭಿವೃದ್ಧಿಪಡಿಸಿದೆ ಮತ್ತು ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಉಳಿಸಿದೆ.

ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಭಾರತ ಹೇಗೆ ಮುಂದಾಗಿದೆ?

ನಾವು ಸರಿಯಾದ ಹಾದಿಯಲ್ಲಿದ್ದೇವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಸಂಪೂರ್ಣ ಅಧಿಕಾರವನ್ನು ಹಸ್ತಾಂತರಿಸುವ ಮೂಲಕ ಭಾರತ ಸರ್ಕಾರ ಸರಿಯಾದ ಕೆಲಸವನ್ನು ಮಾಡಿದೆ. ಕೌನ್ಸಿಲ್ ದಿನಕ್ಕೆ 30,000 ಪರೀಕ್ಷೆಗಳನ್ನು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಾಗುತ್ತದೆ. ಯುಎಸ್, ಸ್ಪೇನ್, ಇಟಲಿ ಮತ್ತು ಫ್ರಾನ್ಸ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ.

ಲಸಿಕೆ ಅಭಿವೃದ್ಧಿಪಡಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಹಲವಾರು ಸಂಸ್ಥೆಗಳು ಲಸಿಕೆ ಕಂಡುಹಿಡಿಯಲು ಕಾರ್ಯನಿರ್ವಹಿಸುತ್ತಿವೆ. ವಿಶ್ವಾದ್ಯಂತ ಐದು ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳಿಗಾಗಿ ಕಾಯುತ್ತಿವೆ. ಎಸ್‌ಐಐ ಪುಣೆ ಬಿಸಿಜಿ ಮಾದರಿಯನ್ನು ಆಧರಿಸಿ ಲಸಿಕೆ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ. ಭಾರತ್ ಬಯೋಟೆಕ್ ಕೂಡ ಇದರ ಬಗ್ಗೆ ಕೆಲಸ ಮಾಡುತ್ತಿದೆ. ಲಸಿಕೆ ಅಭಿವೃದ್ಧಿಪಡಿಸಲು ಕೆಲವು ತಿಂಗಳುಗಳಿಂದ ಒಂದು ವರ್ಷ ಸಮಯ ತೆಗೆದುಕೊಳ್ಳಬಹುದು ಎಂದರು.

ಕೊರೊನಾ ವೈರಸ್​​​ಗೆ ಭಾರತೀಯರಿಗೆ ವಿಶಿಷ್ಟವಾದ ವಿನಾಯಿತಿ ಇದೆಯೇ?

ಕಡಿಮೆ ಪ್ರಕರಣಗಳಂತಹ ಕೆಲವು ಅಂಶಗಳು ಭಾರತೀಯರಿಗೆ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೂ ವೈಜ್ಞಾನಿಕವಾಗಿ, ಇದು ಇನ್ನೂ ಸಾಬೀತಾಗಿಲ್ಲ. ಬಿಸಿಜಿ ಲಸಿಕೆ ನೀಡುವ ದೇಶಗಳಲ್ಲಿ COVID-19 ಸಾವುಗಳು ಕಡಿಮೆ.

ನೀವು ಸಾರ್ವಜನಿಕರಿಗೆ ಏನು ಸಲಹೆ ನೀಡುತ್ತೀರಿ?

ಇಲ್ಲಿಯವರೆಗೆ ಕೋವಿಡ್​​-19ಗೆ ಯಾವುದೇ ಲಸಿಕೆ ಇಲ್ಲ. ಔಷಧ ಅಥವಾ ಲಸಿಕೆ ಅಭಿವೃದ್ಧಿಪಡಿಸುವವರೆಗೆ, ನಾವು ಸಾಮಾಜಿಕ ಅಂತರದ ಮೂಲಕ ನಮ್ಮನ್ನು ರಕ್ಷಿಸಿಕೊಳ್ಳಬೇಕು. ಲಾಕ್​ಡೌನ್​​​ ಎಂಬುದು ಸಾಂಕ್ರಾಮಿಕ ರೋಗವನ್ನು ಹರಡಲು ವೈಜ್ಞಾನಿಕವಾಗಿ ನಿರ್ದಿಷ್ಟಪಡಿಸಿದ ಪರಿಕಲ್ಪನೆಯಾಗಿದೆ. ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು,ಮಾಸ್ಕ್​​ ಧರಿಸುವುದು ಮತ್ತು ಆಗಾಗ್ಗೆ 20 ಸೆಕೆಂಡುಗಳ ಕಾಲ ಕೈ ತೊಳೆಯುವುದು ಮುಖ್ಯ ಎಂದರು.

ABOUT THE AUTHOR

...view details