ನವದೆಹಲಿ:ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿದ್ದು, ಇದರ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಿಜೆಐ ರಂಜನ್ ಗೊಗೊಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕೋರ್ಟ್ಗಳಲ್ಲಿ 43 ಲಕ್ಷ ಕೇಸ್ಗಳು ಇತ್ಯರ್ಥವಾಗದೇ , ಹಾಗೆ ಉಳಿದಿವೆ. ಈ ಸಮಸ್ಯೆ ಬಗೆಹರಿಸಲು ಎರಡು ಸಂವಿಧಾನಾತ್ಮಕ ತಿದ್ದುಪಡಿಗಳ ಅಗತ್ಯವಿದೆ ಎಂದು ಮೂರು ಪತ್ರಗಳ ಮೂಲಕ ಸಿಜೆಐ ವಿವರಿಸಿದ್ದಾರೆ.
ಪ್ರಸ್ತುತ ಸುಪ್ರೀಂಕೋರ್ಟ್ನಲ್ಲಿರುವ 31 ನ್ಯಾಯಾಧೀಶರ ಸಂಖ್ಯೆ ಹೆಚ್ಚಬೇಕು. ಹೈಕೋರ್ಟ್ ನ್ಯಾಯಮೂರ್ತಿ ನಿವೃತ್ತಿ ವಯೋಮಾನವನ್ನು 62 ರಿಂದ 65ಕ್ಕೆ ಏರಿಕೆ ಮಾಡಬೇಕು. ವಿಧಿ 128 ಹಾಗೂ 224'ಎ' ನಂತೆ ಸುಪ್ರೀಂ ಹಾಗೂ ಹೈ ಕೋರ್ಟ್ಗಳ ನಿವೃತ್ತ ನ್ಯಾಯಾಧೀಶರನ್ನು ಮತ್ತೆ ನೇಮಕ ಮಾಡಿಕೊಂಡು, ಅವರ ಅವಧಿಯಲ್ಲಿ ಬಾಕಿ ಉಳಿದ ಕೇಸ್ಗಳನ್ನು ಇತ್ಯರ್ಥ ಮಾಡಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
25 ವರ್ಷದಿಂದ 26, 20 ವರ್ಷದಿಂದ 100, 15 ವರ್ಷದಿಂದ 593 ಹಾಗೂ 10 ವರ್ಷದಿಂದ 4,977 ಕೇಸ್ಗಳು ಸುಪ್ರೀಂಕೋರ್ಟ್ನಲ್ಲಿ ಹಾಗಿಯೇ ಉಳಿದಿವೆ. ಸುಪ್ರೀಂ ಹಾಗೂ ಹೈಕೋರ್ಟ್ಗಳಲ್ಲಿ ನ್ಯಾಯಾಧೀಶರ ಪ್ರಮಾಣ ಏರಿಕೆಯಾಗಿದ್ದರೂ ಲಕ್ಷಾಂತರ ಕೇಸ್ಗಳು ಇತ್ಯರ್ಥವಾಗ್ತಿಲ್ಲ ಎಂದಿದ್ದಾರೆ.