ಕರ್ನಾಟಕ

karnataka

ETV Bharat / bharat

ಸಿಂಧೂ ಜಲ ಒಪ್ಪಂದಕ್ಕೆ 60 ವರ್ಷ... ಅಂದಿನಿಂದ ಇಂದಿನವರೆಗಿನ ಸಂಪೂರ್ಣ ಮಾಹಿತಿ

ಸಿಂಧೂ ಜಲ ಒಪ್ಪಂದಕ್ಕೆ 1960ರಲ್ಲಿ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಸಹಿ ಹಾಕಿದರು. ದೇಶಗಳು ಹಂಚಿಕೊಂಡಿರುವ ಆರು ನದಿಗಳ ನೀರಿನ ಬಳಕೆಯ ಕುರಿತು ಎರಡೂ ದೇಶಗಳಿಗೆ ಮಾರ್ಗಸೂಚಿ ನೀಡಲು ಉದ್ದೇಶಿಸಲಾದ ಒಪ್ಪಂದ ಇದಾಗಿತ್ತು. ಆದರೂ ಭಾರತ ಹಾಗೂ ಪಾಕಿಸ್ತಾನದ ನಡುವೆ ಇಂದಿಗೂ ಈ ಕುರಿತು ಭಿನ್ನಾಭಿಪ್ರಾಯಗಳಿವೆ.

By

Published : Sep 18, 2020, 8:54 PM IST

60-years-to-indus-water-treaty
60-years-to-indus-water-treaty

ಹೈದರಾಬಾದ್:ಭಾರತ ಮತ್ತು ಪಾಕಿಸ್ತಾನವು 1610 ಕಿಲೋಮೀಟರ್ ಉದ್ದದ ಗಡಿ ಮತ್ತು ಆರು ನದಿಗಳಾದ ಸಿಂಧೂ, ಝೇಲಂ, ಚೆನಾಬ್, ರವಿ, ಸತ್ಲಜ್ ಮತ್ತು ಬಿಯಾಸ್ ನದಿಗಳ ನೀರನ್ನು ಹಂಚಿಕೊಳ್ಳುತ್ತವೆ.

ಸಿಂಧೂ ನದಿ ವ್ಯವಸ್ಥೆಯು ವಿಶ್ವದ ಅತಿದೊಡ್ಡ ನೀರಾವರಿ ವ್ಯವಸ್ಥೆಗೆ ಮೂಲವಾಗಿದ್ದು, ಇದರಲ್ಲಿ 20 ದಶಲಕ್ಷ ಹೆಕ್ಟೇರ್ ಪ್ರದೇಶವಿದೆ ಮತ್ತು ವಾರ್ಷಿಕ 12 ದಶಲಕ್ಷ ಹೆಕ್ಟೇರ್ ನೀರಾವರಿ ಸಾಮರ್ಥ್ಯವಿದೆ. ಸಿಂಧೂ ನದಿಯ ಮುಖ್ಯ ಮೂಲವು ಚೀನಾದಲ್ಲಿದ್ದು (ಟಿಬೆಟ್), ಜಲಾನಯನ ಪ್ರದೇಶವು ಭಾರತ ಮತ್ತು ಪಾಕಿಸ್ತಾನದಲ್ಲಿದೆ. ಸಿಂಧೂ ಜಲಾನಯನ ಪ್ರದೇಶದ 11,38,800 ಕಿ.ಮೀ ಪ್ರದೇಶದಲ್ಲಿ, ಶೇ.52 ಪಾಕಿಸ್ತಾನ ಮತ್ತು ಶೇ.34 ಭಾರತದಲ್ಲಿದೆ. ಉಳಿದ ಶೇ.14 ಚೀನಾ, ಅಫ್ಘಾನಿಸ್ತಾನ ಮತ್ತು ನೇಪಾಳದಲ್ಲಿದೆ.

1947ರಲ್ಲಿ ಭಾರತ, ಪಾಕಿಸ್ತಾನ ವಿಭಜನೆಯ ವೇಳೆ ಸಿಂಧೂ ನದಿ ನೀರಿನ ಹಂಚಿಕೆ ಹಾಗೂ ನೀರಿನ ಮೇಲಿನ ಹಕ್ಕುಗಳ ಕುರಿತು ಪಾಕಿಸ್ತಾನ, ಭಾರತವನ್ನು ವಿರೋಧಿಸಿತ್ತು.

ಹಿನ್ನೆಲೆ:

ಯೋಜಿತ ಪಂಜಾಬ್ ಅಭಿವೃದ್ಧಿಯ ಕುರಿತು ಸಿಂಧೂ ನದಿ ನೀರಿನ ಹಂಚಿಕೆಯ ಅಧ್ಯಯನ ಮಾಡಲು 1942ರಲ್ಲಿ ಬ್ರಿಟಿಷ್ ಸರ್ಕಾರವು ನ್ಯಾಯಾಂಗ ಆಯೋಗವನ್ನು ನೇಮಿಸಿತು. ಆಯೋಗವು ಸಿಂಧೂ ನದಿಯ ಹಕ್ಕುಗಳನ್ನು ಗುರುತಿಸಿ, ಜಲಾನಯನ ಪ್ರದೇಶದ ಸಮಗ್ರ ನಿರ್ವಹಣೆಗೆ ಕರೆ ನೀಡಿತು. ಅದಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವ ಮೊದಲು, ಆಗಸ್ಟ್ 15, 1947ರ ಭಾರತೀಯ ಸ್ವಾತಂತ್ರ್ಯ ಕಾಯ್ದೆಯನ್ನು ಅಂತರಾಷ್ಟ್ರೀಕರಿಸಲಾಯಿತು.

ಶತಮಾನಗಳಿಂದ ಸಿಂಧೂ ನೀರನ್ನು ಅವಲಂಬಿಸಿದ್ದ ಪಾಕಿಸ್ತಾನದ ಭೂಪ್ರದೇಶವು ದೇಶ ವಿಭಜನೆಯಾದ ಬಳಿಕ ಮತ್ತೊಂದು ದೇಶದಲ್ಲಿ ಹುಟ್ಟಿದ ಜಲಸಂಪನ್ಮೂಲಗಳನ್ನು ಬಳಸಲು, ಸ್ವಾತಂತ್ರ್ಯದ ನಂತರ ಅದರ ಭೌಗೋಳಿಕ ರಾಜಕೀಯ ಸಂಬಂಧಗಳು ಪ್ರತಿಕೂಲವಾಗಿದ್ದವು.

1948ರ ಮೇ 3-4ರಂದು ದೆಹಲಿಯಲ್ಲಿ ಅಂತರ ಡೊಮಿನಿಯನ್ ಸಮ್ಮೇಳನವನ್ನು ನಡೆಸಲಾಯಿತು. ಅಲ್ಲಿ ನದಿ ಹರಿವು ಪುನರಾರಂಭಕ್ಕೆ ಭಾರತೀಯರು ಒಪ್ಪಿಕೊಂಡರು. ಆದರೆ ಪಾಕಿಸ್ತಾನವು ಆ ನೀರಿನಲ್ಲಿ ಯಾವುದೇ ಪಾಲಿನ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡರು. 1947ರ ಸ್ಟ್ಯಾಂಡ್‌ಸ್ಟೈಲ್ ಒಪ್ಪಂದದ ಪ್ರಕಾರ ಪಾಕಿಸ್ತಾನವು ನೀರಿಗಾಗಿ ಹಣ ಪಾವತಿಸಲು ಒಪ್ಪಿಗೆ ಸೂಚಿಸಿದ್ದರಿಂದ, ಪಾಕಿಸ್ತಾನವು ಭಾರತದ ನೀರಿನ ಹಕ್ಕುಗಳನ್ನು ಗುರುತಿಸಿದೆ ಎಂಬ ಈ ಸ್ಥಾನವನ್ನು ಬಲಪಡಿಸಲಾಯಿತು.

ಸಿಂಧೂ ಜಲಾನಯನ ಪ್ರದೇಶದ ಆರು ಉಪನದಿಗಳ ಮೂಲವು ಟಿಬೆಟ್‌ನಲ್ಲಿ ನಡೆಯುತ್ತದೆ. ಅಲ್ಲಿಂದ ಅದು ಹಿಮಾಲಯನ್ ಶ್ರೇಣಿಗಳನ್ನು ದಾಟಿ ಕರಾಚಿಯ ದಕ್ಷಿಣಕ್ಕೆ ಬಂದು ಅರೇಬಿಯನ್ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ. ಸಿಂಧೂ ಜಲಾನಯನ ಪ್ರದೇಶವು ಎರಡು ರಾಷ್ಟ್ರಗಳ ನಡುವಿನ ಜಾಲಗಳಲ್ಲಿ ಒಂದಾಗಿರುವುದರಿಂದ ಮತ್ತು ಪಾಕಿಸ್ತಾನವು ಭಾರತದಿಂದ ಆಹಾರವನ್ನು ಪಡೆಯುವ ನಿರೀಕ್ಷೆ ಇದ್ದುದರಿಂದ ಈ ಒಪ್ಪಂದವನ್ನು ರೂಪಿಸಲಾಯಿತು.

ಒಪ್ಪಂದ:

ಈ ಒಪ್ಪಂದಕ್ಕೆ 1960ರಲ್ಲಿ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಸಹಿ ಹಾಕಿದರು. ದೇಶಗಳು ಹಂಚಿಕೊಂಡಿರುವ ಆರು ನದಿಗಳ ನೀರಿನ ಬಳಕೆಯ ಕುರಿತು ಎರಡೂ ದೇಶಗಳಿಗೆ ಮಾರ್ಗಸೂಚಿ ನೀಡಲು ಉದ್ದೇಶಿಸಲಾದ ಒಪ್ಪಂದ ಇದಾಗಿತ್ತು. ಭಾರತ, ಪಾಕಿಸ್ತಾನ ವಿಭಜನೆಯ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ವಿಶ್ವ ಬ್ಯಾಂಕಿನ ಸಹಾಯದಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ 9 ವರ್ಷಗಳ ಮಾತುಕತೆ ನಡೆಯಿತು. ಮಾತುಕತೆ ನಡೆಸುವುದು ವಿಶ್ವಬ್ಯಾಂಕ್ ಮಾಜಿ ಅಧ್ಯಕ್ಷ ಯುಜೀನ್ ಬ್ಲ್ಯಾಕ್ ಅವರ ನಿರ್ಧಾರವಾಗಿತ್ತು.

ಭಾರತ ಮತ್ತು ಪಾಕಿಸ್ತಾನ ಅಂತಿಮವಾಗಿ ವಿಶ್ವಬ್ಯಾಂಕ್‌ನ ಹಸ್ತಕ್ಷೇಪದೊಂದಿಗೆ ಈ ವಿಷಯದ ಕುರಿತು ನಿರ್ಣಾಯಕ ಹೆಜ್ಜೆಯನ್ನು ತಲುಪಿದವು. ನೀರನ್ನು ಹೇಗೆ ವಿಭಜಿಸಲಾಗುವುದು ಎಂಬುದರ ಕುರಿತು ನಿಖರವಾದ ವಿವರಗಳನ್ನು ನೀಡಲಾಯಿತು. ಪಾಕಿಸ್ತಾನಕ್ಕೆ ಝೇಲಂ, ಚೆನಾಬ್ ಮತ್ತು ಸಿಂಧೂ (3 ಪಶ್ಚಿಮ ನದಿಗಳು) ಹಂಚಿಕೆಯಾದರೆ, ಭಾರತವು ರವಿ, ಬಿಯಾಸ್ ಮತ್ತು ಸಟ್ಲೆಜ್ (3 ಪೂರ್ವ ನದಿಗಳು) ನಿಯಂತ್ರಣವನ್ನು ಪಡೆದುಕೊಂಡಿತು. ಕೆಲವು ನಿರ್ದಿಷ್ಟ ಪ್ರಕರಣಗಳನ್ನು ಹೊರತುಪಡಿಸಿ, ಪಶ್ಚಿಮ ನದಿಗಳಲ್ಲಿ ಭಾರತದಿಂದ ಯಾವುದೇ ಸಂಗ್ರಹಣೆ ಮತ್ತು ನೀರಾವರಿ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ.

ಪ್ರತಿ ದೇಶದಿಂದ ಆಯುಕ್ತರನ್ನು ಹೊಂದಿರುವ ಶಾಶ್ವತ ಸಿಂಧೂ ಆಯೋಗವಿದ್ದು, ನದಿಗಳ ಬಳಕೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಸಹಕಾರ ಮತ್ತು ಮಾಹಿತಿ ವಿನಿಮಯಕ್ಕಾಗಿ ಈ ಒಪ್ಪಂದವು ಕಾರ್ಯವಿಧಾನವನ್ನು ರೂಪಿಸುತ್ತದೆ. ಈ ಒಪ್ಪಂದವು ಉದ್ಭವಿಸಬಹುದಾದ ಸಮಸ್ಯೆಗಳನ್ನು ನಿಭಾಯಿಸಲು ವಿಭಿನ್ನ ಕಾರ್ಯವಿಧಾನಗಳನ್ನು ಸಹ ಸೂಚಿಸುತ್ತದೆ. ಪ್ರಶ್ನೆಗಳನ್ನು ಆಯೋಗವು ನಿರ್ವಹಿಸುತ್ತದೆ, ಭಿನ್ನಾಭಿಪ್ರಾಯಗಳನ್ನು ತಟಸ್ಥ ತಜ್ಞರಿಂದ ಪರಿಹರಿಸಬೇಕು, ವಿವಾದಗಳನ್ನು ಏಳು ಸದಸ್ಯರ ಆರ್ಬಿಟ್ರಲ್ ಟ್ರಿಬ್ಯೂನಲ್​ಗೆ ಕೋರ್ಟ್ ಆಫ್ ಆರ್ಬಿಟ್ರೇಷನ್ ಎಂದು ಕರೆಯಲಾಗುತ್ತದೆ. ಒಪ್ಪಂದಕ್ಕೆ ಸಹಿ ಹಾಕಿದಂತೆ, ವಿಶ್ವ ಬ್ಯಾಂಕ್​ನ ಪಾತ್ರ ಸೀಮಿತ ಮತ್ತು ಕಾರ್ಯವಿಧಾನವಾಗಿದೆ ಎಂದು ಸೂಚಿಸಲಾಗಿದೆ.

ಒಪ್ಪಂದದ ಪ್ರಕಾರ, ಎರಡೂ ದೇಶಗಳ ಜಲ ಆಯುಕ್ತರು ವರ್ಷಕ್ಕೆ ಎರಡು ಬಾರಿ ಭೇಟಿಯಾಗುತ್ತಾರೆ ಮತ್ತು ಯೋಜನೆಗಳ ಸ್ಥಳಗಳಿಗೆ ತಾಂತ್ರಿಕ ಭೇಟಿ ವ್ಯವಸ್ಥೆ ಮಾಡುತ್ತಾರೆ ಮತ್ತು ಪರಿಶೀಲನೆಗಾಗಿ ನಿರ್ಣಾಯಕ ನದಿ ಮುಖ್ಯಸ್ಥರು ಕೆಲಸ ಮಾಡುತ್ತಾರೆ. 2016ರಲ್ಲಿ ಉರಿ ಭಯೋತ್ಪಾದಕ ದಾಳಿಯ ನಂತರ, ಪೂರ್ವ ನದಿಗಳ ಬಳಕೆಯಾಗದ ನೀರನ್ನು ಕಳುಹಿಸಲು ಭಾರತವು ಸಿಂಧೂ ಜಲ ಆಯೋಗ ಮತ್ತು ಜಲ ವಿದ್ಯುತ್ ಯೋಜನೆಗಳ ಮಾತುಕತೆಯನ್ನು ಸ್ಥಗಿತಗೊಳಿಸಿತು. ಮೂರು ಯೋಜನೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಉಜ್ ಅಣೆಕಟ್ಟು ಯೋಜನೆ (ಜಮ್ಮು ಕಾಶ್ಮೀರ), ಶಹಪುರ್ ಕಂಡಿ ಅಣೆಕಟ್ಟು ಯೋಜನೆ ಮತ್ತು ಪಂಜಾಬ್‌ನ ಎರಡನೇ ಸಟ್ಲೆಜ್ ಬಿಯಾಸ್ ಲಿಂಕ್ ಸೇರಿವೆ.

ಒಪ್ಪಂದದಲ್ಲಿ ಭಾರತಕ್ಕೆ ಏನಿದೆ?

ರವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳಿಂದ ಭಾರತದ ಪಾಲು 33 ಮಿಲಿಯನ್ ಎಕರೆ ಅಡಿಗೆ ಬಂದಿತು. ನದಿಗಳಿಗೆ ಅಡ್ಡಲಾಗಿ ಮೂರು ಮುಖ್ಯ ಅಣೆಕಟ್ಟುಗಳನ್ನು ನಿರ್ಮಿಸಿದ ನಂತರ ದೇಶದಲ್ಲಿ ಶೇಕಡಾ 95ರಷ್ಟು ನೀರನ್ನು ಬಳಸುತ್ತಿದ್ದರೆ, ಶೇಕಡಾ 5ರಷ್ಟು ನೀರು ಅಥವಾ 1.6 ಎಂಎಎಫ್ ಪಾಕಿಸ್ತಾನಕ್ಕೆ ಹರಿಯುತ್ತದೆ.

ಈ ಒಪ್ಪಂದವು ಭಾರತದ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿತು. ಪಾಕಿಸ್ತಾನಕ್ಕೆ ಹಂಚಿಕೆಯಾದ ನದಿಗಳ ಮೇಲೆ ಸಂಗ್ರಹಣೆಗಳನ್ನು ನಿರ್ಮಿಸಲು ಭಾರತಕ್ಕೆ ಅವಕಾಶವಿರಲಿಲ್ಲ. ನದಿ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಗೆ ಭಾರತಕ್ಕೆ ಸಂಪೂರ್ಣ ಹಕ್ಕುಗಳನ್ನು ನೀಡಲಾಗಿದ್ದರೂ, ನೀರಾವರಿ ಯೋಜನೆಗಳ ಅಭಿವೃದ್ಧಿಯ ವಿಸ್ತರಣೆಗೆ ಸಂಬಂಧಿಸಿದಂತೆ ಭಾರತಕ್ಕೆ ನಿರ್ಬಂಧಗಳನ್ನು ವಿಧಿಸಲಾಯಿತು.

ವಿದೇಶಾಂಗ ಸಚಿವಾಲಯದ ಪ್ರಕಾರ, ಪಶ್ಚಿಮ ನದಿಗಳಿಗೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ, ಭಾರತವು ಸಿಂಧೂ, ಝೇಲಂ ಮತ್ತು ಚೆನಾಬ್ ನದಿಗಳ ನೀರನ್ನು ಗ್ರಾಹಕವಲ್ಲದ ಬಳಕೆ, ದೇಶೀಯ ಬಳಕೆ, ಕೃಷಿ ಬಳಕೆ ಮತ್ತು ಜಲ ವಿದ್ಯುತ್ ಶಕ್ತಿಯ ಉತ್ಪಾದನೆ ಬಳಸಬಹುದು.

ಒಪ್ಪಂದದಲ್ಲಿ ಪಾಕಿಸ್ತಾನಕ್ಕೆ ಅದರಲ್ಲಿ ಏನಿದೆ?

ಸಿಂಧೂ, ಚೆನಾಬ್ ಮತ್ತು ಝೇಲಂ ಪಾಕಿಸ್ತಾನದ ಜೀವನಾಡಿಯಾಗಿದ್ದು, ದೇಶವು ನೀರು ಸರಬರಾಜಿಗಾಗಿ ಈ ನದಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ನದಿಗಳು ಪಾಕಿಸ್ತಾನದಿಂದ ಹುಟ್ಟಿಕೊಂಡಿಲ್ಲ, ಆದರೆ ಭಾರತದ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತದೆ.

ಚೆನಾಬ್ ಮತ್ತು ಝೇಲಂ ಭಾರತದಿಂದ ಹುಟ್ಟಿಕೊಂಡರೆ, ಸಿಂಧೂ ಚೀನಾದಿಂದ ಹುಟ್ಟಿ, ಭಾರತದ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತದೆ.

ಭಿನ್ನಾಭಿಪ್ರಾಯಗಳು:

ಭಾರತ ನಿರ್ಮಿಸುತ್ತಿರುವ ಕಿಶೆಂಗಂಗಾ (330 ಮೆಗಾವ್ಯಾಟ್) ಮತ್ತು ರಾಟಲ್ (850 ಮೆಗಾವ್ಯಾಟ್) ಜಲವಿದ್ಯುತ್ ಸ್ಥಾವರಗಳ ನಿರ್ಮಾಣದ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವೆ ಭಿನ್ನಾಭಿಪ್ರಾಯವಿದೆ. ಎರಡು ಜಲವಿದ್ಯುತ್ ಸ್ಥಾವರಗಳ ತಾಂತ್ರಿಕ ವಿನ್ಯಾಸದ ಲಕ್ಷಣಗಳು ಒಪ್ಪಂದಕ್ಕೆ ವಿರುದ್ಧವಾಗಿದೆ ಎಂಬ ಕುರಿತು ಉಭಯ ದೇಶಗಳ ನಡುವೆ ಭಿನ್ನಾಪ್ರಿಯವಿದೆ. ಈ ಎರಡು ಸ್ಥಾವರಗಳು ಕ್ರಮವಾಗಿ ಝೇಲಂ ಮತ್ತು ಚೆನಾಬ್ ನದಿಗಳಲ್ಲಿವೆ.

ಒಪ್ಪಂದದ ಅನುಬಂಧಗಳಲ್ಲಿ ನಿರ್ದಿಷ್ಟಪಡಿಸಿದ ನಿರ್ಬಂಧಗಳಿಗೆ ಒಳಪಟ್ಟು ಈ ನದಿಗಳಲ್ಲಿ ಜಲವಿದ್ಯುತ್ ಸೌಲಭ್ಯಗಳನ್ನು ನಿರ್ಮಿಸಲು ಭಾರತಕ್ಕೆ ಅನುಮತಿ ಇದೆ. ಕಿಶೆಂಗಂಗಾ ಮತ್ತು ರಾಟಲ್ ಜಲವಿದ್ಯುತ್ ಸ್ಥಾವರಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ.

1984ರಲ್ಲಿ, ಭಾರತದ ಅತಿದೊಡ್ಡ ಸಿಹಿನೀರಿನ ಸರೋವರವಾದ ವುಲ್ಲರ್ಸ್ ಸರೋವರದಲ್ಲಿ ತುಲ್ಬುಲ್ ನ್ಯಾವಿಗೇಷನ್ ಮತ್ತು ವುಲ್ಲರ್ ಯೋಜನೆಯನ್ನು ನಿರ್ಮಿಸಲು ಭಾರತ ಪ್ರಸ್ತಾಪಿಸಿತು. ಇದು 1960ರ ಸಿಂಧೂ ನೀರಿನ ಒಪ್ಪಂದದ ಉಲ್ಲಂಘನೆ ಎಂದು ಪಾಕಿಸ್ತಾನ ಪ್ರತಿಭಟಿಸಿತು. ಆದರೆ ಝೇಲಂ ನದಿಯ ಹರಿವನ್ನು ನಿಯಂತ್ರಿಸಲು ಭಾರತ ಇದನ್ನು ಬಳಸಬಹುದೆಂದು ಪಾಕಿಸ್ತಾನ ಆತಂಕವ್ಯಕ್ತಪಡಿಸಿತ್ತು.

2006ರಲ್ಲಿ, ತುಲ್ಬುಲ್ ನ್ಯಾವಿಗೇಷನ್ ಮತ್ತು ವುಲ್ಲರ್ ಯೋಜನೆಗಳ ಕುರಿತು ಇಂಡೋ-ಪಾಕ್ ಮಾತುಕತೆ ನಡೆಯಿತು. ಯೋಜನೆಯ ರಚನೆಯು ಸುಮಾರು 0.3 ದಶಲಕ್ಷ ಎಕರೆ ಅಡಿ (0.369 ಬಿಲಿಯನ್ ಘನ ಮೀಟರ್) ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಝೇಲಂ ಮುಖ್ಯ ಕಾಂಡದಲ್ಲಿ ಯಾವುದೇ ಶೇಖರಣಾ ಸೌಲಭ್ಯವನ್ನು ನಿರ್ಮಿಸಲು ಭಾರತಕ್ಕೆ ಅನುಮತಿ ಇಲ್ಲ ಎಂದು ಪಾಕಿಸ್ತಾನ ಹೇಳಿತು. ಆದರೆ ಸಿಂಧೂ ನೀರಿನ ಒಪ್ಪಂದ 1960ರಲ್ಲಿ ವ್ಯಾಖ್ಯಾನಿಸಿರುವಂತೆ ಈ ರಚನೆಯು ಶೇಖರಣಾ ಸೌಲಭ್ಯವಲ್ಲ. ಆದರೆ ಸಂಚರಣೆ ಸೌಲಭ್ಯವಾಗಿದೆ ಎಂದು ಭಾರತೀಯ ಕಡೆಯವರು ತಿಳಿಸಿದ್ದಾರೆ. ಇದಲ್ಲದೇ, ವುಲ್ಲರ್ ಸರೋವರವು ನೈಸರ್ಗಿಕ ಸಂಗ್ರಹಣೆಯನ್ನು ಪಡೆಯುತ್ತದೆ ಮತ್ತು ನ್ಯಾವಿಗೇಷನ್ ಲಾಕ್ ಅನ್ನು ನಿಯಂತ್ರಿಸುವ ರಚನೆಯಾಗಿದೆ ಎಂದು ಭಾರತ ಸರ್ಕಾರ ಹೇಳಿದೆ.

ಯೋಜನೆಗಳು:

ಚೆನಾಬ್‌ನಲ್ಲಿ 850 ಮೆಗಾವ್ಯಾಟ್ ರ್ಯಾಟಲ್ ಹೈಡ್ರೊ ಯೋಜನೆಯ ಕುರಿತು ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತು. ಇದರ ನಿರ್ಮಾಣವು ಒಪ್ಪಂದದ ಉಲ್ಲಂಘನೆ ಎಂದು ಉಲ್ಲೇಖಿಸಿ 2013ರಿಂದ ವಿವಾದ ನಡೆಯುತ್ತಿದೆ. 2018ರಲ್ಲಿ ಪಾಕಿಸ್ತಾನದ ಆಕ್ಷೇಪಣೆಗಳು ಅಮಾನ್ಯವಾಗಿವೆ ಎಂದು ಭಾರತ ಸರ್ಕಾರ ಮುಂದುವರಿಯಲು ನಿರ್ಧರಿಸಿತು. 2019ರಲ್ಲಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿಯ ಉಪಸ್ಥಿತಿಯಲ್ಲಿ ರಾಜ್ಯ ಜಲವಿದ್ಯುತ್ ಜಮ್ಮು ಕಾಶ್ಮೀರ ವಿದ್ಯುತ್ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.

ಚೆನಾಬ್ ನದಿಯಲ್ಲಿ ಮತ್ತೆ 900 ಮೆಗಾವ್ಯಾಟ್ ಬಾಗ್ಲಿಹಾರ್ ಜಲ ಯೋಜನೆ ಕೂಡ ಎರಡೂ ಕಡೆಯ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಬಾಗ್ಲಿಹಾರ್ ಯೋಜನೆಯ ವಿನ್ಯಾಸ ನಿಯತಾಂಕಗಳನ್ನು 1960ರ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನ ಹೇಳಿದೆ. ಕೆಲವು ವಿನ್ಯಾಸ ನಿಯತಾಂಕಗಳು ವಿದ್ಯುತ್ ಉತ್ಪಾದನೆಗೆ ಅಗತ್ಯಕ್ಕಿಂತಲೂ ಹೆಚ್ಚು ಸಡಿಲವಾಗಿವೆ ಮತ್ತು ನದಿಯ ಹರಿವನ್ನು ವೇಗಗೊಳಿಸಲು, ಇಳಿಸಲು ಅಥವಾ ನಿರ್ಬಂಧಿಸಲು ಭಾರತಕ್ಕೆ ಹೆಚ್ಚಿನ ಸಾಮರ್ಥ್ಯವನ್ನು ಒದಗಿಸಿದೆ ಎಂದು ಪಾಕಿಸ್ತಾನ ಹೇಳಿದೆ.

ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚೆನಾಬ್​ನ ಉಪನದಿಯಲ್ಲಿ 800 ಮೆಗಾವ್ಯಾಟ್ ಬರ್ಸರ್ ಜಲವಿದ್ಯುತ್ ಯೋಜನೆಯನ್ನು 2016ರ ಉರಿ ದಾಳಿಯ ನಂತರ ಶೀಘ್ರವಾಗಿ ಸ್ಥಳಾಂತರಿಸಲಾಯಿತು. ಇತ್ತೀಚೆಗೆ ಯೋಜನೆಯ ಕಾಮಗಾರಿಗಳನ್ನು ಸಹ ಪ್ರಾರಂಭಿಸಲಾಗಿದೆ. ಬುರ್ಸರ್ ಯೋಜನೆ ಪೂರ್ಣಗೊಂಡರೆ ಅದು ಪಶ್ಚಿಮ ನದಿಗಳಲ್ಲಿ ಶೇಖರಣಾ ಮೂಲಸೌಕರ್ಯಗಳನ್ನು ಹೊಂದಿರುವ ಭಾರತದ ಮೊದಲ ಯೋಜನೆಯಾಗಲಿದೆ. ಇದಲ್ಲದೇ ಚೆನಾಬ್‌ನಲ್ಲಿ ಮತ್ತೆ 1,856 ಮೆಗಾವ್ಯಾಟ್ ಸಾವಾಲ್‌ಕೋಟ್ ಜಲವಿದ್ಯುತ್ ಸ್ಥಾವರದ ದೊಡ್ಡ ಯೋಜನೆಯೊಂದು ಸಿದ್ಧ ಹಂತದಲ್ಲಿದೆ.

ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ಈಗಾಗಲೇ ಲೇಹ್ ಮತ್ತು ಲಡಾಖ್ ಪ್ರದೇಶಗಳಲ್ಲಿ 23 ಜಿವ್ಯಾ ಮೆಗಾ ಸೌರ ಮತ್ತು ಪ್ರಸರಣ ಯೋಜನೆಗಳ ಅನುಷ್ಠಾನಕ್ಕೆ ತಂದು ಯೋಜನೆ ಪ್ರಾರಂಭಿಸಿದೆ. ಯೋಜನೆಯ ಮೊದಲ ಹಂತವು ಕಾರ್ಗಿಲ್ ಪ್ರದೇಶದಲ್ಲಿ (ಲಡಾಖ್) 2,500 ಮೆಗಾವ್ಯಾಟ್ ಸೌರ ಪಿವಿ ಸಾಮರ್ಥ್ಯವನ್ನು ಮತ್ತು ಲೇಹ್ ಜಿಲ್ಲೆಯಲ್ಲಿ 5,000 ಮೆಗಾವ್ಯಾಟ್ ಸ್ಥಾಪಿಸುತ್ತದೆ.

2020ರಲ್ಲಿ ಸಿಂಧೂ ಜಲ ಒಪ್ಪಂದದ (ಐಡಬ್ಲ್ಯೂಟಿ) ಸ್ಥಿತಿ:

ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಅಟಾರಿ ಚೆಕ್‌ಪೋಸ್ಟ್‌ನಲ್ಲಿ ಸಿಂಧೂ ಜಲ ಒಪ್ಪಂದದ ವಿಷಯಗಳ ಕುರಿತು ಸಭೆ ನಡೆಸಬೇಕೆಂದು ಪಾಕಿಸ್ತಾನದ ಮನವಿಯನ್ನು ಆಗಸ್ಟ್ 2020ರಲ್ಲಿ ಭಾರತ ನಿರಾಕರಿಸಿತು. ಜಲಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಭಾರತವು ವಾಸ್ತವ ಸಮ್ಮೇಳನವನ್ನು ಸೂಚಿಸಿತ್ತು. ಆದರೆ ಮಾರ್ಚ್ 2020ರಲ್ಲಿ ಪಾಕಿಸ್ತಾನವು ಭೌತಿಕ ಸಭೆ ನಡೆಸುವಂತೆ ಒತ್ತಾಯಿಸಿತ್ತು.

ರ್ಯಾಟಲ್ ವಿದ್ಯುತ್ ಯೋಜನೆಯ ವಿನ್ಯಾಸ ನಿಯತಾಂಕಗಳ ಕುರಿತು ಅಂತಿಮ ನಿರ್ಣಯವನ್ನು ಒಪ್ಪಿಕೊಳ್ಳಲು ಪಾಕಿಸ್ತಾನವು ಮಧ್ಯಸ್ಥಿಕೆ ನ್ಯಾಯಾಲಯವನ್ನು ಬೆಂಬಲಿಸಿದರೆ ಭಾರತವು ಎಫ್‌ಪಿಆರ್ ಅನ್ನು ತಟಸ್ಥ ಪಕ್ಷದ ನೇಮಕ ಎಂದು ಹೇಳಿದೆ.

ABOUT THE AUTHOR

...view details