ಲಖನೌ:ಉತ್ತರ ಪ್ರದೇಶದ 14 ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದ್ದು ಇಲ್ಲಿಯವರೆಗೆ 15 ಜನರನ್ನ ಬಲಿ ಪಡೆದಿದೆ.
ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ 15 ಜನ, 23 ಪ್ರಣಿಗಳು ಬಲಿಯಾಗಿದ್ದು, ಒಟ್ಟು 133 ಮನೆ ಕುಸಿತಗೊಂಡಿವೆ ಎಂದು ತಿಳಿಸಿದ್ದಾರೆ. ಅಂಬೇಡ್ಕರ್ ನಗರ, ಪ್ರಯಾಗ್ರಾಜ್, ಗೋರಖ್ಪುರ, ಸೊನಭದ್ರ, ಫಿರೋಜಬಾದ್, ಸುಲ್ತಾನ್ಪುರ ಜಿಲ್ಲೆಗಳು ಮಳೆಯಿಂದ ಹಾನಿಗೊಳಗಾಗಿವೆ.