ಕರ್ನಾಟಕ

karnataka

By

Published : Jul 13, 2019, 6:12 AM IST

Updated : Jul 13, 2019, 6:26 AM IST

ETV Bharat / bharat

ಭಾರೀ ಮಳೆಗೆ ನಲುಗಿದ ಉತ್ತರ ಪ್ರದೇಶ...15 ಸಾವು 133 ಮನೆ ಕುಸಿತ!

ಉತ್ತರಪ್ರದೇಶದ 14 ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇಲ್ಲಿಯವರೆಗೆ 15 ಜನ ಬಲಿಯಾಗಿದ್ದಾರೆ.

ಭಾರೀ ಮಳೆಗೆ ನಲುಗಿದ ಉತ್ತರ ಪ್ರದೇಶ

ಲಖನೌ:ಉತ್ತರ ಪ್ರದೇಶದ 14 ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದ್ದು ಇಲ್ಲಿಯವರೆಗೆ 15 ಜನರನ್ನ ಬಲಿ ಪಡೆದಿದೆ.

ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ 15 ಜನ, 23 ಪ್ರಣಿಗಳು ಬಲಿಯಾಗಿದ್ದು, ಒಟ್ಟು 133 ಮನೆ ಕುಸಿತಗೊಂಡಿವೆ ಎಂದು ತಿಳಿಸಿದ್ದಾರೆ. ಅಂಬೇಡ್ಕರ್​ ನಗರ, ಪ್ರಯಾಗ್​ರಾಜ್, ಗೋರಖ್​ಪುರ, ಸೊನಭದ್ರ, ಫಿರೋಜಬಾದ್, ಸುಲ್ತಾನ್​ಪುರ ಜಿಲ್ಲೆಗಳು ಮಳೆಯಿಂದ ಹಾನಿಗೊಳಗಾಗಿವೆ.

ಇತ್ತ ಅಸ್ಸಾಂನಲ್ಲೂ ಭಾರಿ ಮಳೆ ಸುರಿಯುತ್ತಿದ್ದು ಇಲ್ಲಿಯವರೆಗೆ 6 ಜನ ಸಾವಿಗೀಡಾಗಿದ್ದಾರೆ. ನದಿಗಳೆಲ್ಲ ಉಕ್ಕಿ ಹರಿಯುತ್ತಿದ್ದು ಹಲವು ಜನ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ಉತ್ತರಖಂಡ, ಉತ್ತರ ಪ್ರದೇಶದ ಪೂರ್ವ ಭಾಗ, ಜಾರ್ಖಂಡ್, ಅರುಣಾಚಲ ಪ್ರದೇಶ, ನಾಗಾಲೆಂಡ್, ಮಣಿಪುರ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ.

Last Updated : Jul 13, 2019, 6:26 AM IST

For All Latest Updates

TAGGED:

ABOUT THE AUTHOR

...view details