ಕರ್ನಾಟಕ

karnataka

By

Published : Nov 5, 2020, 5:01 AM IST

ETV Bharat / bharat

ಗುರುವಾರದ ರಾಶಿಭವಿಷ್ಯ..ಈ ದಿನ ನಿಮ್ಮ ರಾಶಿಯ ಫಲಾಫಲ ಹೇಗಿದೆ...?

ಗುರುವಾರದ ರಾಶಿಭವಿಷ್ಯ

05 November 2020 Etv Bharat horoscope
05 ನವೆಂಬರ್​​ 2020 ಈಟಿವಿ ಭಾರತ ರಾಶಿಫಲ

ಮೇಷ

ನಿಮ್ಮ ದಿನ ಇಂದು ಯಶಸ್ಸಿನ ಬೆಳಕಿನಿಂದ ಹೊಳೆಯುತ್ತಿದೆ. ನೀವು ದೂರದೃಷ್ಟಿ ಉಳ್ಳ ತೀಕ್ಷ್ಣಮತಿಯಾಗಿದ್ದೀರಿ. ನಿಮ್ಮ ಮಹತ್ವಾಕಾಂಕ್ಷೆಯಿಂದ ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ಆಶಾವಾದದ ಸಾಮರ್ಥ್ಯಗಳು ನಿಮಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡುತ್ತವೆ. ಸರ್ವಶಕ್ತನ ಮೇಲೆ ನಂಬಿಕೆ ಇರಲಿ.

ವೃಷಭ

ನಿಮಗಾಗಿ ಬಿಡುವು ಪಡೆದುಕೊಂಡು ಗುಣಮಟ್ಟದ ಸಮಯ ಕಳೆಯಲು ಸೂಕ್ತವಾದ ದಿನ. ಹಿಂದೆಂದೂ ಇಲ್ಲದಂತೆ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ನವೋತ್ಸಾಹ ತುಂಬಿಕೊಳ್ಳಿರಿ. ನಿಮ್ಮ ದಿನವು ಮಿತ್ರರು ಹಾಗೂ ಕುಟುಂಬದೊಂದಿಗೆ ಆಕರ್ಷಕ ಭೋಜನ ಮತ್ತು ಮನರಂಜನೆಯೊಂದಿಗೆ ಸ್ನೇಹಮಯ ಸಮಯವನ್ನು ಒಳಗೊಂಡಿರುತ್ತದೆ.

ಮಿಥುನ

ಈ ದಿನ ನೀವು ಶಕ್ತಿ ಮತ್ತು ಉತ್ಸಾಹದಿಂದ ಇರುವ ದಿನವಾಗಿದೆ. ನಿಮಗೆ ಜೀವನ ಕುರಿತು ಭರವಸೆಯ ನೋಟವಿದೆ, ಮತ್ತು ಇದು ನಿಮಗೆ ಯಶಸ್ಸು ತಂದುಕೊಡುವಲ್ಲಿ ನೆರವಾಗುತ್ತದೆ. ನಿಮ್ಮ ಮುಕ್ತವಾದ ಇಚ್ಛಾಶಕ್ತಿಯನ್ನು ಬಳಸಿಕೊಂಡು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದೀರಿ. ಈ ದಿನ ಒತ್ತಡದಿಂದ ಕೂಡಿದ್ದರೂ ಅದು ನಿಮಗೆ ಪುರಸ್ಕಾರ ತಂದುಕೊಡುತ್ತದೆ.

ಕರ್ಕಾಟಕ

ನಿಮ್ಮ ಕುಟುಂಬ ನಿಮಗೆ ಬೆಂಬಲ ನೀಡದೆ ಇರುವುದರಿಂದ ನಿಮ್ಮ ಪ್ರಯತ್ನಗಳು ಫಲಿಸುವುದಿಲ್ಲ. ನಿಮ್ಮ ಮಕ್ಕಳು ಕೂಡಾ ನಿಮ್ಮನ್ನು ನಿರುತ್ಸಾಹಗೊಳಿಸುತ್ತಾರೆ. ನಿಮ್ಮ ಕುಟುಂಬದ ನಡುವೆ ಭಿನ್ನಾಭಿಪ್ರಾಯ ಎದುರಿಸಬಹುದು. ನೆರೆಹೊರೆಯವರ ಬಗ್ಗೆ ಎಚ್ಚರದಿಂದಿರಿ ಮತ್ತು ನಿಮ್ಮ ಸನ್ನಿವೇಶಗಳನ್ನು ಘನತೆ ಮತ್ತು ಸಮಚಿತ್ತತೆಯಿಂದ ಎದುರಿಸಿ.

ಸಿಂಹ

ನಿಮ್ಮ ಗುಣದಿಂದ ಇಂದು ಜನರನ್ನು ಪ್ರಭಾವಿಸಲು ಶಕ್ತರಾಗುತ್ತೀರಿ. ನಿಮ್ಮ ಜೊತೆ ಸಂಪರ್ಕಕ್ಕೆ ಬರುವ ಜನರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚೆಯನ್ನೂ ನಡೆಸುತ್ತೀರಿ. ನಿಮ್ಮಂತೆಯೇ ಆಲೋಚಿಸುವ ಜನರನ್ನು ಇಂದು ಭೇಟಿ ಮಾಡಲಿದ್ದೀರಿ.

ಕನ್ಯಾ

ಕೆಲಸದಿಂದ ಬಿಡುವು ಪಡೆದು ವಿಶ್ರಾಂತಿ ಪಡೆಯಿರಿ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳ ವಿರೋಧ ಎದುರಿಸುತ್ತೀರಿ. ಪರಿಸ್ಥಿತಿಯನ್ನು ನಿಯಂತ್ರಿಸಲು ತಾಳ್ಮೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಪ್ರೀತಿಯ ಜೀವನದಲ್ಲಿ ಹೊಸ ಬೆಳವಣಿಗೆಯಾಗುತ್ತದೆ.

ತುಲಾ

ಸಣ್ಣ ಸಮಸ್ಯೆಗಳು ಅಥವಾ ವಿಷಯಗಳ ಕುರಿತು ನೀವು ಒತ್ತಡ ತಂದುಕೊಳ್ಳದೇ ಇರುವುದು ಸೂಕ್ತ. ಆತಂಕ ಕಡಿಮೆ ಮಾಡಲು ಮತ್ತು ಮಾನಸಿಕ ಶಾಂತಿಯನ್ನು ಪಡೆಯಲು ನೀವು ಯೋಗ ಅಥವಾ ಧ್ಯಾನ ಮಾಡಿರಿ. ಕೆಲಸದಲ್ಲಿ ಕೆಲ ವಿಷಯಗಳಲ್ಲಿ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಸಂಕೀರ್ಣ ವಿಷಯಗಳಲ್ಲಿ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ವೃಶ್ಚಿಕ

ನೀವು ಇಂದು ಬಾಕಿ ಇರುವ ಎಲ್ಲಾ ಕೆಲಸವನ್ನು ಯಶಸ್ಸಿಯಾಗಿ ನಿಭಾಯಿಸುತ್ತೀರಿ. ವ್ಯವಸ್ಥಿತ ವಿಧಾನವನ್ನು ಅನುಸರಿಸುವ ಮೂಲಕ ಎಲ್ಲಾ ಕೆಲಸವನ್ನು ನಿಭಾಯಿಸಲಿದ್ದೀರಿ. ಇತರರಿಗೆ ನೀವು ಮಾದರಿಯಾಗಿ ಇರಲಿದ್ದೀರಿ.

ಧನು

ಏನಾದರೂ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ. ಪ್ರೀತಿಯ ಪರಿಶ್ರಮದಿಂದ ನಿಮಗೆ ಯುವ, ನವಿರಾದ ಹೃದಯ ಗೆಲ್ಲಲು ಸುಲಭಗೊಳಿಸುತ್ತದೆ. ಆಸೆಗಳಿಗೆ ಬಲಿಯಾಗದಿರಿ ಮತ್ತು ನಿಮ್ಮ ಪ್ರತಿಷ್ಠೆಯನ್ನು ಎಲ್ಲಾ ರೀತಿಯಿಂದಲೂ ಕಾಪಾಡಿಕೊಳ್ಳಿ.

ಮಕರ

ದಿನಪೂರ್ತಿ ನೀವು ಕೆಲಸದ ಒತ್ತಡದಲ್ಲಿ ಸಿಲುಕಿ ಸಂಜೆ ವೇಳೆಗೆ ಬಹಳ ದಣಿಯುವಿರಿ. ವ್ಯಾಪಾರ ಜಗತ್ತಿಗೆ ಬಂದರೆ ತೀವ್ರ ಸ್ಪರ್ಧೆಯಿದೆ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ವ್ಯಾಪಾರ ಹಾಗೂ ಪ್ರತಿಷ್ಠೆಗೆ ಧಕ್ಕೆ ತರಲು ಒಂದು ಸಣ್ಣ ಅವಕಾಶ ದೊರೆತರೂ ಸಾಕು ಎಂದು ಕಾಯುತ್ತಿದ್ದಾರೆ. ಆದರೆ ನೀವೇನೂ ಕಡಿಮೆಯಿಲ್ಲ. ಎಲ್ಲವನ್ನೂ ಸುಲಭವಾಗಿ ನಿಭಾಯಿಸಲಿದ್ದೀರಿ.

ಕುಂಭ

ಶೈಕ್ಷಣಿಕ ವಿಷಯಕ್ಕೆ ಬಂದರೆ ನೀವು ಅಸಾಧಾರಣ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಡೈನಮೈಟ್​​​​​​​​​​​ನಂತೆ ಕಾರ್ಯ ನಿರ್ವಹಿಸುತ್ತೀರಿ ಮತ್ತು ನಿಮ್ಮ ಸುತ್ತಲಿನ ಬಹುತೇಕರನ್ನು ಪ್ರೇರೇಪಿಸುತ್ತೀರಿ. ನಿಮ್ಮ ಇಮೇಜ್ ಕುರಿತು ಎಚ್ಚರವಾಗಿರಿ, ಅತಿಯಾದ ಮಹತ್ವಾಕಾಂಕ್ಷೆಗೆ ಬೀಳಬೇಡಿ.

ಮೀನ

ದಣಿವಿರದ ಹಾಗೂ ಅತ್ಯಂತ ಕಠಿಣ ಪರಿಶ್ರಮ ಪಡುವವರಿಗೆ ಇದು ಅತ್ಯುತ್ತಮ ದಿನವಾಗಿದೆ. ಇಂದು ನಿಮ್ಮ ಕೆಲಸದಲ್ಲಿ ಆವಿಷ್ಕಾರ ಮತ್ತು ಸೃಜನಶೀಲತೆಯನ್ನು ತರುತ್ತೀರಿ. ದೇವರ ಆಶೀರ್ವಾದ ಯಶಸ್ಸಿಗೆ ದಾರಿಯಾಗುತ್ತದೆ. ಆದ್ದರಿಂದ ಶ್ರಮ ವಹಿಸಿ ಕೆಲಸ ಮಾಡಿ ಮತ್ತು ವೈಫಲ್ಯಗಳಿಂದ ಕಂಗೆಡಬೇಡಿ.

ABOUT THE AUTHOR

...view details