ETV Bharat / state

ಹಾಸನ: ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣ; ಪ್ರಮುಖ ಆರೋಪಿಗಳ ಬಂಧನ

ಜೆಡಿಎಸ್ ಮುಖಂಡ ಕೃಷ್ಣೇಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

author img

By ETV Bharat Karnataka Team

Published : Jan 31, 2024, 5:50 PM IST

two-more-accused-arrested-in-businessman-krishnegowda-murder-case
ಹಾಸನ: ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣ; ಪ್ರಮುಖ ಆರೋಪಿಗಳ ಬಂಧನ

ಹಾಸನ: ಜೆಡಿಎಸ್ ಮುಖಂಡ, ಮಾಜಿ ಸಚಿವ ಹೆಚ್ ಡಿ ರೇವಣ್ಣರ ಆಪ್ತ ಗ್ರಾನೈಟ್ ಉದ್ಯಮಿ ಕೃಷ್ಣೇಗೌಡ ಹತ್ಯೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ನಡೆದ ಐದೂವರೆ ತಿಂಗಳ ಬಳಿಕ A1 ಆರೋಪಿ ಯೋಗಾನಂದ ಹಾಗೂ A2 ಆರೋಪಿ ಅನಿಲ್ ಎಂಬುವರ ಬಂಧನವಾಗಿದೆ.

2023ರ ಆಗಸ್ಟ್ 9 ರಂದು ಹಾಸನ ಕೆಐಡಿಬಿ ಏರಿಯಾದಲ್ಲಿನ ಫ್ಯಾಕ್ಟರಿ ಮುಂಭಾಗ ಕೃಷ್ಣೇಗೌಡರ ಹತ್ಯೆಯಾಗಿತ್ತು. ಆರಂಭದಲ್ಲಿ ಹಾಸನ ಹಾಗೂ ತುಮಕೂರು ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಕಳೆದ ಐದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಯೋಗಾನಂದ ಹಾಗೂ ಅನಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ, ''ತುಮಕೂರಿನ ತುರುವೇಕೆರೆ ಸಮೀಪದ ದಬ್ಬೆಗಟ್ಟದ ತೋಟದ ಮನೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಾದ ಯೋಗಾನಂದ ಹಾಗೂ ಅನಿಲ್ ತರಕಾರಿ ವ್ಯಾಪಾರ, ಡ್ರೈವಿಂಗ್​, ದೇವಸ್ಥಾನಗಳ ಅಕ್ಕಪಕ್ಕದಲ್ಲಿ ಕೆಲಸ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಎರಡು ಬಾರಿ ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ತುಮಕೂರು, ಚಿಕ್ಕಬಳ್ಳಾಪುರ ಸೇರಿ ಬೇರೆ ರಾಜ್ಯದ ಗಡಿಭಾಗಗಳಲ್ಲಿ ಮನೆ ಮಾಡಿಕೊಂಡಿರುತ್ತಿದ್ದರು'' ಎಂದು ತಿಳಿಸಿದ್ದಾರೆ.

krishnegowda-murder-case
ಕೊಲೆಗೀಡಾದ ಉದ್ಯಮಿ ಕೃಷ್ಣೇಗೌಡ

ಇದನ್ನೂ ಓದಿ: ಮಾಜಿ ಪತ್ನಿ, ಆಕೆಯ ಪ್ರಿಯಕರನ ಕೊಲೆ ಮಾಡಿ ವ್ಯಕ್ತಿ ಎಸ್ಕೇಪ್: ಅಥಣಿಯಲ್ಲಿ ಡಬಲ್ ಮರ್ಡರ್

ಬಂಧಿಸಲು ಹೋದಾಗ ಓರ್ವ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅಲ್ಲದೆ, ವಿಷಸೇವನೆಗೆ ಯತ್ನಿಸಿದ್ದು, ಮಂಡ್ಯದ ಬೆಳ್ಳೂರು ಕ್ರಾಸ್ ಬಳಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಸಿಐಡಿ ಡಿವೈಎಸ್​​ಪಿ ಮೊಹಮ್ಮದ್ ಷರೀಫ್ ಕೂಡ ಇದ್ದರು.

ಹಣಕಾಸು ವ್ಯವಹಾರದ ಮನಸ್ತಾಪದಿಂದ ಆರೋಪಿ ಯೋಗಾನಂದ ಕೃಷ್ಣೇಗೌಡರ ಕೊಲೆ ಮಾಡಿಸಿದ್ದ ಎಂದು ಪೊಲೀಸ್​ ತನಿಖೆಯಿಂದ ತಿಳಿದುಬಂದಿದೆ. ಈಗಾಗಲೇ 12 ಆರೋಪಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದರು. ಎರಡೂವರೆ ತಿಂಗಳ ಹಿಂದೆ ಕೇಸ್​ ಸಿಐಡಿಗೆ ವರ್ಗಾವಣೆ ಆಗಿತ್ತು.

ಇದನ್ನೂ ಓದಿ: ಹುಬ್ಬಳ್ಳಿ: ಯುವಕನ ಬರ್ಬರ ಹತ್ಯೆ, ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ

ಹಾಸನ: ಜೆಡಿಎಸ್ ಮುಖಂಡ, ಮಾಜಿ ಸಚಿವ ಹೆಚ್ ಡಿ ರೇವಣ್ಣರ ಆಪ್ತ ಗ್ರಾನೈಟ್ ಉದ್ಯಮಿ ಕೃಷ್ಣೇಗೌಡ ಹತ್ಯೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ನಡೆದ ಐದೂವರೆ ತಿಂಗಳ ಬಳಿಕ A1 ಆರೋಪಿ ಯೋಗಾನಂದ ಹಾಗೂ A2 ಆರೋಪಿ ಅನಿಲ್ ಎಂಬುವರ ಬಂಧನವಾಗಿದೆ.

2023ರ ಆಗಸ್ಟ್ 9 ರಂದು ಹಾಸನ ಕೆಐಡಿಬಿ ಏರಿಯಾದಲ್ಲಿನ ಫ್ಯಾಕ್ಟರಿ ಮುಂಭಾಗ ಕೃಷ್ಣೇಗೌಡರ ಹತ್ಯೆಯಾಗಿತ್ತು. ಆರಂಭದಲ್ಲಿ ಹಾಸನ ಹಾಗೂ ತುಮಕೂರು ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಕಳೆದ ಐದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಯೋಗಾನಂದ ಹಾಗೂ ಅನಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ, ''ತುಮಕೂರಿನ ತುರುವೇಕೆರೆ ಸಮೀಪದ ದಬ್ಬೆಗಟ್ಟದ ತೋಟದ ಮನೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಾದ ಯೋಗಾನಂದ ಹಾಗೂ ಅನಿಲ್ ತರಕಾರಿ ವ್ಯಾಪಾರ, ಡ್ರೈವಿಂಗ್​, ದೇವಸ್ಥಾನಗಳ ಅಕ್ಕಪಕ್ಕದಲ್ಲಿ ಕೆಲಸ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ಎರಡು ಬಾರಿ ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ತುಮಕೂರು, ಚಿಕ್ಕಬಳ್ಳಾಪುರ ಸೇರಿ ಬೇರೆ ರಾಜ್ಯದ ಗಡಿಭಾಗಗಳಲ್ಲಿ ಮನೆ ಮಾಡಿಕೊಂಡಿರುತ್ತಿದ್ದರು'' ಎಂದು ತಿಳಿಸಿದ್ದಾರೆ.

krishnegowda-murder-case
ಕೊಲೆಗೀಡಾದ ಉದ್ಯಮಿ ಕೃಷ್ಣೇಗೌಡ

ಇದನ್ನೂ ಓದಿ: ಮಾಜಿ ಪತ್ನಿ, ಆಕೆಯ ಪ್ರಿಯಕರನ ಕೊಲೆ ಮಾಡಿ ವ್ಯಕ್ತಿ ಎಸ್ಕೇಪ್: ಅಥಣಿಯಲ್ಲಿ ಡಬಲ್ ಮರ್ಡರ್

ಬಂಧಿಸಲು ಹೋದಾಗ ಓರ್ವ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಅಲ್ಲದೆ, ವಿಷಸೇವನೆಗೆ ಯತ್ನಿಸಿದ್ದು, ಮಂಡ್ಯದ ಬೆಳ್ಳೂರು ಕ್ರಾಸ್ ಬಳಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಸಿಐಡಿ ಡಿವೈಎಸ್​​ಪಿ ಮೊಹಮ್ಮದ್ ಷರೀಫ್ ಕೂಡ ಇದ್ದರು.

ಹಣಕಾಸು ವ್ಯವಹಾರದ ಮನಸ್ತಾಪದಿಂದ ಆರೋಪಿ ಯೋಗಾನಂದ ಕೃಷ್ಣೇಗೌಡರ ಕೊಲೆ ಮಾಡಿಸಿದ್ದ ಎಂದು ಪೊಲೀಸ್​ ತನಿಖೆಯಿಂದ ತಿಳಿದುಬಂದಿದೆ. ಈಗಾಗಲೇ 12 ಆರೋಪಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದರು. ಎರಡೂವರೆ ತಿಂಗಳ ಹಿಂದೆ ಕೇಸ್​ ಸಿಐಡಿಗೆ ವರ್ಗಾವಣೆ ಆಗಿತ್ತು.

ಇದನ್ನೂ ಓದಿ: ಹುಬ್ಬಳ್ಳಿ: ಯುವಕನ ಬರ್ಬರ ಹತ್ಯೆ, ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.