ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೂವರು ಆರೋಪಿಗಳನ್ನು ದರ್ಶನ್​ ಮನೆಗೆ ಕರೆತಂದು ಮಹಜರು - renukaswamy murder case

author img

By ETV Bharat Karnataka Team

Published : Jun 18, 2024, 7:20 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕುಗೊಂಡಿದೆ. ಇಂದು ಪೊಲೀಸರು 9ನೇ ಆರೋಪಿಯಾಗಿರುವ ಆರ್.ಆರ್. ನಗರದ ನಿವಾಸಿ ಧನರಾಜ್, 3ನೇ ಆರೋಪಿ ಪವನ್ ಸೇರಿದಂತೆ ಮೂವರನ್ನು ದರ್ಶನ್ ಮನೆಗೆ ಕರೆದೊಯ್ದು ಒಂದು ಗಂಟೆ ಕಾಲ ಮಹಜರು ನಡೆಸಿದರು.

ಮೂವರು ಆರೋಪಿಗಳನ್ನು ದರ್ಶನ್​ ಮನೆಗೆ ಕರೆತಂದು ಮಹಜರು
ಮೂವರು ಆರೋಪಿಗಳನ್ನು ದರ್ಶನ್​ ಮನೆಗೆ ಕರೆತಂದು ಮಹಜರು (ETV Bharat)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಪೊಲೀಸರು 9ನೇ ಆರೋಪಿಯಾಗಿರುವ ಆರ್.ಆರ್.ನಗರದ ನಿವಾಸಿ ಧನರಾಜ್, ಎ-3 ಪವನ್ ಸೇರಿದಂತೆ ಮೂವರು ಆರೋಪಿಗಳನ್ನ ದರ್ಶನ್ ಅವರ ಮನೆಗೆ ಕರೆದೊಯ್ದು ಒಂದು ಗಂಟೆ ಕಾಲ ಮಹಜರು ನಡೆಸಿದರು.

ಧನರಾಜ್ ಸೇರಿದಂತೆ ಆರೋಪಿಗಳು ಕೃತ್ಯದ ದಿನ ಬಳಸಿದ್ದ ಮೂರು ದ್ವಿಚಕ್ರವಾಹಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಳಿಕ ಧನರಾಜ್​ನನ್ನು ಪಟ್ಟಣಗೆರೆಯ ಶೆಡ್​ಗೆ ಕರೆದೊಯ್ದು ಮಹಜರಿಗೆ ಒಳಪಡಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೈಸೂರಿನ ಹೋಟೆಲ್​ಗೆ ಇಬ್ಬರು ಆರೋಪಿಗಳನ್ನು ಕರೆತಂದು ಮಹಜರು - Renukaswamy murder case

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಪೊಲೀಸರು 9ನೇ ಆರೋಪಿಯಾಗಿರುವ ಆರ್.ಆರ್.ನಗರದ ನಿವಾಸಿ ಧನರಾಜ್, ಎ-3 ಪವನ್ ಸೇರಿದಂತೆ ಮೂವರು ಆರೋಪಿಗಳನ್ನ ದರ್ಶನ್ ಅವರ ಮನೆಗೆ ಕರೆದೊಯ್ದು ಒಂದು ಗಂಟೆ ಕಾಲ ಮಹಜರು ನಡೆಸಿದರು.

ಧನರಾಜ್ ಸೇರಿದಂತೆ ಆರೋಪಿಗಳು ಕೃತ್ಯದ ದಿನ ಬಳಸಿದ್ದ ಮೂರು ದ್ವಿಚಕ್ರವಾಹಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಳಿಕ ಧನರಾಜ್​ನನ್ನು ಪಟ್ಟಣಗೆರೆಯ ಶೆಡ್​ಗೆ ಕರೆದೊಯ್ದು ಮಹಜರಿಗೆ ಒಳಪಡಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೈಸೂರಿನ ಹೋಟೆಲ್​ಗೆ ಇಬ್ಬರು ಆರೋಪಿಗಳನ್ನು ಕರೆತಂದು ಮಹಜರು - Renukaswamy murder case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.