ETV Bharat / state

ಮುಡಾ ಹಗರಣ ವಿರುದ್ಧ ಬಿಜೆಪಿ ಪ್ರತಿಭಟನೆ: ಮೈಸೂರಿಗೆ ತೆರಳುವ ಮುನ್ನವೇ ವಿಜಯೇಂದ್ರ ಸೇರಿ ಹಲವರು ವಶಕ್ಕೆ - BJP Leaders Detained

author img

By ETV Bharat Karnataka Team

Published : Jul 12, 2024, 12:09 PM IST

Updated : Jul 12, 2024, 3:09 PM IST

ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮೈಸೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ತೆರಳಲು ಮುಂದಾಗಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಬೆಂಗಳೂರಿನಲ್ಲೇ ತಡೆದಿದ್ದಾರೆ.

ಮುಡಾ ಹಗರಣ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆ
ಬಿಜೆಪಿ ನಾಯಕರು ಪೊಲೀಸರ ವಶಕ್ಕೆ (ETV Bharat)
ಪ್ರತಿಭಟನೆಗೆ ತೆರಳಲು ಮುಂದಾಗಿದ್ದ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ (ETV Bharat)

ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್ ವೇ ತಡೆದು ಬಿಜೆಪಿ ಪ್ರತಿಭಟನೆ ನಡೆಸಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಬಿಡದಿ ಠಾಣೆಗೆ ಕರೆದೊಯ್ಯಲಾಯಿತು.

ಕೆಂಗೇರಿ ಬಳಿ ಪ್ರತಿಭಟನಾ ರ್‍ಯಾಲಿ ನಂತರ ಕಾರುಗಳ ಮೂಲಕ ಮೈಸೂರು ಕಡೆ ಹೊರಟ ಬಿಜೆಪಿ ನಾಯಕರು ಕಣ್ ಮಿಣಕೆಯಲ್ಲಿ‌ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ಎಕ್ಸ್‌ಪ್ರೆಸ್‌ ಹೈವೇ ರೋಡ್ ಬ್ಲಾಕ್ ಮಾಡಿ‌ ಪ್ರತಿಭಟನೆ‌ ನಡೆಸಿದರು. ಇಡೀ ರಸ್ತೆಗೆ ಅಡ್ಡಲಾಗಿ ಕಾರುಗಳನ್ನು ನಿಲ್ಲಿಸಿ ಸಂಪೂರ್ಣ ರಸ್ತೆಯನ್ನು ಬ್ಲಾಕ್ ಮಾಡಲಾಯಿತು. ಇದರಂದಾಗಿ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತವಾಯಿತು. ಕೂಡಲೇ ಅಲ್ಲಿಗೆ ಬಂದ ಪೊಲೀಸರು, ವಿಜಯೇಂದ್ರ ಸೇರಿದಂತೆ ಪ್ರತಿಭಟನಾನಿರತರೆಲ್ಲನ್ನೂ ವಶಕ್ಕೆ ಪಡೆದುಕೊಂಡು ಬಿಡದಿ ಪೊಲೀಸ್ ಠಾಣೆಗೆ ಕರೆದೊಯ್ದರು. ಪ್ರತಿಭಟನೆ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರು, ವಿಜಯೇಂದ್ರ ನೇತೃತ್ವದಲ್ಲಿ ಬಿಡದಿ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದರು.

ಮತ್ತೊಂದೆಡೆ, ತಮ್ಮೇಶ್ ಗೌಡ ಸೇರಿ ಬಿಜೆಪಿ ನಾಯಕರ ನಿವಾಸದ ಮುಂದೆಯೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರು ಮನೆಯಿಂದ ಹೊರಬರುತ್ತಿದ್ದಂತೆ ವಶಕ್ಕೆ ಪಡೆದರು. ಕಾಂಗ್ರೆಸ್​ನ ಈ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಸ್ಥಳ ಬದಲಾವಣೆ ಮಾಡಿ ನಾಯಂಡಹಳ್ಳಿ ಬದಲು ಮೈಸೂರು ರಸ್ತೆ ಕದಂಬ ಹೋಟೆಲ್​ ಹತ್ತಿರದಲ್ಲೇ ಪ್ರತಿಭಟನಾ ರ‍್ಯಾಲಿ ನಡೆಸಿ ನಂತರ ಮೈಸೂರಿಗೆ ಕಾರುಗಳ ಮೂಲಕ ತೆರಳಲು ನಿರ್ಧರಿಸಿ ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿದರು.

ಈ ವೇಳೆ ಬಿ.ವೈ.ವಿಜಯೇಂದ್ರ ಮಾತನಾಡಿ, "ನಮ್ಮ ಮೈಸೂರು ಚಲೋ ತಡೆಯಬೇಡಿ. ರಾಜ್ಯದಲ್ಲಿ ಬೆಂಕಿ ಬೀಳುತ್ತದೆ. ಸರ್ಕಾರದ ಪಾಪದ ಕೊಡ ತುಂಬಿದೆ. ಕರ್ನಾಟಕದಿಂದ ರಾಹುಲ್ ಗಾಂಧಿಗೆ ಹಣ ಹೋಗುತ್ತಿದೆ. ನಮ್ಮ ರಾಜ್ಯ ಅವರಿಗೆ ಎಟಿಎಂ ಆಗಿದೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅದಕ್ಕೆ ಮೊದಲು ಸಿಬಿಐಗೆ ಪ್ರಕರಣ ವಹಿಸಬೇಕು" ಎಂದು ಆಗ್ರಹಿಸಿದರು.

"ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ನಮ್ಮ ನಾಯಕರನ್ನು ಬಂಧಿಸುತ್ತಿದ್ದಾರೆ. ನಾನು ಪೊಲೀಸ್​ ಇಲಾಖೆಯನ್ನು ದೂಷಿಸುತ್ತಿಲ್ಲ. ಇದು ಸರ್ಕಾರದ ಕುಮ್ಮಕ್ಕು. ವಾಲ್ಮೀಕಿ ಹಗರಣ, ದಲಿತರ ಹಣ ಎಲ್ಲವನ್ನೂ ಲೋಕಸಭಾ ಚುನಾವಣೆಗೆ ಸರ್ಕಾರ ಬಳಸಿಕೊಂಡಿದೆ" ಎಂದು ದೂರಿದರು.

"ತಾನು ಹಿಂದುಳಿದ ವರ್ಗದವ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಮಾತ್ರ ಹಿಂದುಳಿದ ವರ್ಗಗಳ ನಾಯಕ ಅಲ್ಲ. ಕಾಂಗ್ರೆಸ್​ನಲ್ಲಿ ದಲಿತ, ಹಿಂದುಳಿದ ಅನೇಕ ನಾಯಕರು ಪಕ್ಷದಲ್ಲಿ ಇದ್ದಾರೆ. ಬಿ.ಕೆ.ಹರಿಪ್ರಸಾದ್ ಏನು ಹೇಳಿದ್ದಾರೆ, ಅದು ಬಿ.ಕೆ. ಹೇಳಿಕೆಯೋ, ಅಥವಾ ಡಿ.ಕೆ. ಹೇಳಿಕೆಯೋ ನನಗೆ ಗೊತ್ತಿಲ್ಲ" ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ED ವಶಕ್ಕೆ - ED Detained B Nagendra

ಪ್ರತಿಭಟನೆಗೆ ತೆರಳಲು ಮುಂದಾಗಿದ್ದ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ (ETV Bharat)

ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್ ವೇ ತಡೆದು ಬಿಜೆಪಿ ಪ್ರತಿಭಟನೆ ನಡೆಸಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಬಿಡದಿ ಠಾಣೆಗೆ ಕರೆದೊಯ್ಯಲಾಯಿತು.

ಕೆಂಗೇರಿ ಬಳಿ ಪ್ರತಿಭಟನಾ ರ್‍ಯಾಲಿ ನಂತರ ಕಾರುಗಳ ಮೂಲಕ ಮೈಸೂರು ಕಡೆ ಹೊರಟ ಬಿಜೆಪಿ ನಾಯಕರು ಕಣ್ ಮಿಣಕೆಯಲ್ಲಿ‌ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ಎಕ್ಸ್‌ಪ್ರೆಸ್‌ ಹೈವೇ ರೋಡ್ ಬ್ಲಾಕ್ ಮಾಡಿ‌ ಪ್ರತಿಭಟನೆ‌ ನಡೆಸಿದರು. ಇಡೀ ರಸ್ತೆಗೆ ಅಡ್ಡಲಾಗಿ ಕಾರುಗಳನ್ನು ನಿಲ್ಲಿಸಿ ಸಂಪೂರ್ಣ ರಸ್ತೆಯನ್ನು ಬ್ಲಾಕ್ ಮಾಡಲಾಯಿತು. ಇದರಂದಾಗಿ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತವಾಯಿತು. ಕೂಡಲೇ ಅಲ್ಲಿಗೆ ಬಂದ ಪೊಲೀಸರು, ವಿಜಯೇಂದ್ರ ಸೇರಿದಂತೆ ಪ್ರತಿಭಟನಾನಿರತರೆಲ್ಲನ್ನೂ ವಶಕ್ಕೆ ಪಡೆದುಕೊಂಡು ಬಿಡದಿ ಪೊಲೀಸ್ ಠಾಣೆಗೆ ಕರೆದೊಯ್ದರು. ಪ್ರತಿಭಟನೆ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರು, ವಿಜಯೇಂದ್ರ ನೇತೃತ್ವದಲ್ಲಿ ಬಿಡದಿ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದರು.

ಮತ್ತೊಂದೆಡೆ, ತಮ್ಮೇಶ್ ಗೌಡ ಸೇರಿ ಬಿಜೆಪಿ ನಾಯಕರ ನಿವಾಸದ ಮುಂದೆಯೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರು ಮನೆಯಿಂದ ಹೊರಬರುತ್ತಿದ್ದಂತೆ ವಶಕ್ಕೆ ಪಡೆದರು. ಕಾಂಗ್ರೆಸ್​ನ ಈ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಸ್ಥಳ ಬದಲಾವಣೆ ಮಾಡಿ ನಾಯಂಡಹಳ್ಳಿ ಬದಲು ಮೈಸೂರು ರಸ್ತೆ ಕದಂಬ ಹೋಟೆಲ್​ ಹತ್ತಿರದಲ್ಲೇ ಪ್ರತಿಭಟನಾ ರ‍್ಯಾಲಿ ನಡೆಸಿ ನಂತರ ಮೈಸೂರಿಗೆ ಕಾರುಗಳ ಮೂಲಕ ತೆರಳಲು ನಿರ್ಧರಿಸಿ ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿದರು.

ಈ ವೇಳೆ ಬಿ.ವೈ.ವಿಜಯೇಂದ್ರ ಮಾತನಾಡಿ, "ನಮ್ಮ ಮೈಸೂರು ಚಲೋ ತಡೆಯಬೇಡಿ. ರಾಜ್ಯದಲ್ಲಿ ಬೆಂಕಿ ಬೀಳುತ್ತದೆ. ಸರ್ಕಾರದ ಪಾಪದ ಕೊಡ ತುಂಬಿದೆ. ಕರ್ನಾಟಕದಿಂದ ರಾಹುಲ್ ಗಾಂಧಿಗೆ ಹಣ ಹೋಗುತ್ತಿದೆ. ನಮ್ಮ ರಾಜ್ಯ ಅವರಿಗೆ ಎಟಿಎಂ ಆಗಿದೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅದಕ್ಕೆ ಮೊದಲು ಸಿಬಿಐಗೆ ಪ್ರಕರಣ ವಹಿಸಬೇಕು" ಎಂದು ಆಗ್ರಹಿಸಿದರು.

"ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ನಮ್ಮ ನಾಯಕರನ್ನು ಬಂಧಿಸುತ್ತಿದ್ದಾರೆ. ನಾನು ಪೊಲೀಸ್​ ಇಲಾಖೆಯನ್ನು ದೂಷಿಸುತ್ತಿಲ್ಲ. ಇದು ಸರ್ಕಾರದ ಕುಮ್ಮಕ್ಕು. ವಾಲ್ಮೀಕಿ ಹಗರಣ, ದಲಿತರ ಹಣ ಎಲ್ಲವನ್ನೂ ಲೋಕಸಭಾ ಚುನಾವಣೆಗೆ ಸರ್ಕಾರ ಬಳಸಿಕೊಂಡಿದೆ" ಎಂದು ದೂರಿದರು.

"ತಾನು ಹಿಂದುಳಿದ ವರ್ಗದವ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಮಾತ್ರ ಹಿಂದುಳಿದ ವರ್ಗಗಳ ನಾಯಕ ಅಲ್ಲ. ಕಾಂಗ್ರೆಸ್​ನಲ್ಲಿ ದಲಿತ, ಹಿಂದುಳಿದ ಅನೇಕ ನಾಯಕರು ಪಕ್ಷದಲ್ಲಿ ಇದ್ದಾರೆ. ಬಿ.ಕೆ.ಹರಿಪ್ರಸಾದ್ ಏನು ಹೇಳಿದ್ದಾರೆ, ಅದು ಬಿ.ಕೆ. ಹೇಳಿಕೆಯೋ, ಅಥವಾ ಡಿ.ಕೆ. ಹೇಳಿಕೆಯೋ ನನಗೆ ಗೊತ್ತಿಲ್ಲ" ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ED ವಶಕ್ಕೆ - ED Detained B Nagendra

Last Updated : Jul 12, 2024, 3:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.