ETV Bharat / state

ಮೈದುಂಬಿ ಹರಿಯುತ್ತಿದೆ ಧರ್ಮಾ ನದಿ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕಂಚಿನೆಗಳೂರು ಒಡ್ಡು - Kanchinegalur oddu falls

author img

By ETV Bharat Karnataka Team

Published : Aug 10, 2024, 11:04 PM IST

ಹಾನಗಲ್​ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಧರ್ಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಒಡ್ಡಿಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಚಿಕ್ಕ ಜಲಪಾತ ಸೃಷ್ಟಿಯಾಗಿದೆ.

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕಂಚಿನೆಗಳೂರು ಒಡ್ಡು
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕಂಚಿನೆಗಳೂರು ಒಡ್ಡು (ETV Bharat)
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕಂಚಿನೆಗಳೂರು ಒಡ್ಡು (ETV Bharat)

ಹಾವೇರಿ: ಕಳೆದ ವರ್ಷದ ಮಳೆ ಇಲ್ಲದೆ ಬರಡಾಗಿದ್ದ ಹಳ್ಳಕೊಳ್ಳಗಳು, ನದಿ, ಕೆರೆಗಳಿಗೆ ಈ ವರ್ಷದ ಮುಂಗಾರು ಮಳೆಯಿಂದ ಜೀವಕಳೆ ಬಂದಿದೆ. ಜಲಮೂಲಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ರೈತರ ಬೆಳೆಗಳು ಹಚ್ಚಹಸುರಿನಿಂದ ಕಂಗೊಳಿಸುತ್ತಿವೆ.

ಹೌದು, ಈ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ವರದಾ, ಕುಮದ್ವತಿ, ಧರ್ಮಾ, ತುಂಗಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ. ನಾಲ್ಕು ನದಿಗಳು ಹರಿಯುವ ಸ್ಥಳಗಳಲ್ಲಿ ಚಿಕ್ಕ ಚಿಕ್ಕ ಜಲಪಾತಗಳು ಸೃಷ್ಟಿಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿವೆ. ಹಾನಗಲ್​ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿನ ಧರ್ಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಒಡ್ಡಿನಲ್ಲಿ ಚಿಕ್ಕದಾದ ಜಲಪಾತ ಸೃಷ್ಟಿಯಾಗಿದೆ. ಸುಮಾರು 10 ಮೀಟರ್ ಎತ್ತರದಿಂದ ನೀರು ಧುಮ್ಮಿಕ್ಕುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

ಈ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಆಗಮಿಸುತ್ತಿದೆ. ಪ್ರವಾಸಿಗರು ಜಲಪಾತದ ಬಳಿ ಸೆಲ್ಫಿ ಕ್ಲಿಕ್ಲಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಬಳಿ ಧರ್ಮಾ ನದಿಗೆ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದಿಂದ ನೀರು ಹಾವೇರಿ ಜಿಲ್ಲೆಯ ಹಳ್ಳಕೊಳ್ಳಗಳನ್ನು ಸೇರುತ್ತಿದೆ. ಆದರಂತೆ ಕಂಚಿನೆಗಳೂರಿನ ಒಡ್ಡಿಗೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಚಿಕ್ಕ ಜಲಪಾತ ಸೃಷ್ಟಿಯಾಗಿದೆ. ಮಳೆಗಾಲದಲ್ಲಿ ಮಾತ್ರ ಈ ಜಲಪಾತ ನೋಡಲು ಕಾಣಸಿಗುತ್ತದೆ.

ಮಹಾಭಾರತದ ಕೌರವರು ಪಾಂಡವರ ಇತಿಹಾಸ; ಮುಂದೆ ಧರ್ಮಾ ನದಿ ಕೂಡಲ ಗ್ರಾಮದಲ್ಲಿ ವರದ ನದಿಯಲ್ಲಿ ಸೇರುತ್ತದೆ. ಮಹಾಭಾರತ ಕಾಲದಲ್ಲಿ ಪಾಂಡವರು ಹಾವೇರಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ಅದರಲ್ಲಿ ಧರ್ಮರಾಯನ ಬೆರಳಿನಿಂದ ನಿರ್ಮಾಣವಾದ ನದಿಯೇ ಧರ್ಮಾ ನದಿ ಎಂದು ಸ್ಥಳೀಯರು ನಂಬಿಕೆಯಾಗಿದೆ. ಕಂಚಿನೆಗಳೂರು ಒಡ್ಡಿನ ಬಳಿ ಬಸವೇಶ್ವರ ದೇವಸ್ಥಾನವಿದ್ದು, ಒಂದು ದಿನದ ಪ್ರವಾಸಕ್ಕೆ ಈ ತಾಣ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಪ್ರವಾಸಿಗರು.

ಪ್ರವಾಸಿಗ ರಾಹುಲ್ ಮಾತನಾಡಿ, ಕಂಚಿನೆಗಳೂರು ಗ್ರಾಮ ಕಂಚಿನೆಗಳೂರು ಒಡ್ಡು ಎಂದೇ ಪ್ರಖ್ಯಾತವಾಗಿದೆ. ಧರ್ಮಾ ನದಿಯ ಬಳಿ ಒಡ್ಡಿನ ಬಸವೇಶ್ವರ ದೇವಸ್ಥಾವಿದೆ. ಇಲ್ಲಿ ಧರ್ಮಾ ನದಿ ನಿರ್ಮಿಸಿರುವ ಈ ಜಲಪಾತ ನೋಡಲು ನಯನ ಮನೋಹರವಾಗಿದೆ ಎಂದು ಸಂತಸ ಹಂಚಿಕೊಂಡರು.

ಸ್ಥಳೀಯ ಮಣಿಕಂಠ ಮಾತನಾಡಿ, ಧರ್ಮಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಂಚಿನೆಗಳೂರು ಒಡ್ಡಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಸದ್ಯ ಕಂಚಿನೆಗಳೂರು ಒಡ್ಡು ಜಲಪಾತ ಮನಮೋಹಕವಾಗಿದೆ ಎಂದು ಅಲ್ಲಿನ ಜಲ ಸೌಂದರ್ಯದ ಕುರಿತು ಬಣ್ಣಿಸಿದರು.

ಇದನ್ನೂ ಓದಿ: ಹಾವೇರಿ: ಹೆಗ್ಗೇರಿ ಕೆರೆಗೆ ಯುಟಿಪಿ ಕಾಲುವೆ ನೀರು, ಕೆರೆಗೆ ಬಂತು ಜೀವಕಳೆ - heggeri lake

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಕಂಚಿನೆಗಳೂರು ಒಡ್ಡು (ETV Bharat)

ಹಾವೇರಿ: ಕಳೆದ ವರ್ಷದ ಮಳೆ ಇಲ್ಲದೆ ಬರಡಾಗಿದ್ದ ಹಳ್ಳಕೊಳ್ಳಗಳು, ನದಿ, ಕೆರೆಗಳಿಗೆ ಈ ವರ್ಷದ ಮುಂಗಾರು ಮಳೆಯಿಂದ ಜೀವಕಳೆ ಬಂದಿದೆ. ಜಲಮೂಲಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ರೈತರ ಬೆಳೆಗಳು ಹಚ್ಚಹಸುರಿನಿಂದ ಕಂಗೊಳಿಸುತ್ತಿವೆ.

ಹೌದು, ಈ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ವರದಾ, ಕುಮದ್ವತಿ, ಧರ್ಮಾ, ತುಂಗಭದ್ರಾ ನದಿಗಳು ಮೈದುಂಬಿ ಹರಿಯುತ್ತಿವೆ. ನಾಲ್ಕು ನದಿಗಳು ಹರಿಯುವ ಸ್ಥಳಗಳಲ್ಲಿ ಚಿಕ್ಕ ಚಿಕ್ಕ ಜಲಪಾತಗಳು ಸೃಷ್ಟಿಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿವೆ. ಹಾನಗಲ್​ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿನ ಧರ್ಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಒಡ್ಡಿನಲ್ಲಿ ಚಿಕ್ಕದಾದ ಜಲಪಾತ ಸೃಷ್ಟಿಯಾಗಿದೆ. ಸುಮಾರು 10 ಮೀಟರ್ ಎತ್ತರದಿಂದ ನೀರು ಧುಮ್ಮಿಕ್ಕುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

ಈ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಆಗಮಿಸುತ್ತಿದೆ. ಪ್ರವಾಸಿಗರು ಜಲಪಾತದ ಬಳಿ ಸೆಲ್ಫಿ ಕ್ಲಿಕ್ಲಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಬಳಿ ಧರ್ಮಾ ನದಿಗೆ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯದಿಂದ ನೀರು ಹಾವೇರಿ ಜಿಲ್ಲೆಯ ಹಳ್ಳಕೊಳ್ಳಗಳನ್ನು ಸೇರುತ್ತಿದೆ. ಆದರಂತೆ ಕಂಚಿನೆಗಳೂರಿನ ಒಡ್ಡಿಗೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಚಿಕ್ಕ ಜಲಪಾತ ಸೃಷ್ಟಿಯಾಗಿದೆ. ಮಳೆಗಾಲದಲ್ಲಿ ಮಾತ್ರ ಈ ಜಲಪಾತ ನೋಡಲು ಕಾಣಸಿಗುತ್ತದೆ.

ಮಹಾಭಾರತದ ಕೌರವರು ಪಾಂಡವರ ಇತಿಹಾಸ; ಮುಂದೆ ಧರ್ಮಾ ನದಿ ಕೂಡಲ ಗ್ರಾಮದಲ್ಲಿ ವರದ ನದಿಯಲ್ಲಿ ಸೇರುತ್ತದೆ. ಮಹಾಭಾರತ ಕಾಲದಲ್ಲಿ ಪಾಂಡವರು ಹಾವೇರಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ಅದರಲ್ಲಿ ಧರ್ಮರಾಯನ ಬೆರಳಿನಿಂದ ನಿರ್ಮಾಣವಾದ ನದಿಯೇ ಧರ್ಮಾ ನದಿ ಎಂದು ಸ್ಥಳೀಯರು ನಂಬಿಕೆಯಾಗಿದೆ. ಕಂಚಿನೆಗಳೂರು ಒಡ್ಡಿನ ಬಳಿ ಬಸವೇಶ್ವರ ದೇವಸ್ಥಾನವಿದ್ದು, ಒಂದು ದಿನದ ಪ್ರವಾಸಕ್ಕೆ ಈ ತಾಣ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಪ್ರವಾಸಿಗರು.

ಪ್ರವಾಸಿಗ ರಾಹುಲ್ ಮಾತನಾಡಿ, ಕಂಚಿನೆಗಳೂರು ಗ್ರಾಮ ಕಂಚಿನೆಗಳೂರು ಒಡ್ಡು ಎಂದೇ ಪ್ರಖ್ಯಾತವಾಗಿದೆ. ಧರ್ಮಾ ನದಿಯ ಬಳಿ ಒಡ್ಡಿನ ಬಸವೇಶ್ವರ ದೇವಸ್ಥಾವಿದೆ. ಇಲ್ಲಿ ಧರ್ಮಾ ನದಿ ನಿರ್ಮಿಸಿರುವ ಈ ಜಲಪಾತ ನೋಡಲು ನಯನ ಮನೋಹರವಾಗಿದೆ ಎಂದು ಸಂತಸ ಹಂಚಿಕೊಂಡರು.

ಸ್ಥಳೀಯ ಮಣಿಕಂಠ ಮಾತನಾಡಿ, ಧರ್ಮಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಂಚಿನೆಗಳೂರು ಒಡ್ಡಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಸದ್ಯ ಕಂಚಿನೆಗಳೂರು ಒಡ್ಡು ಜಲಪಾತ ಮನಮೋಹಕವಾಗಿದೆ ಎಂದು ಅಲ್ಲಿನ ಜಲ ಸೌಂದರ್ಯದ ಕುರಿತು ಬಣ್ಣಿಸಿದರು.

ಇದನ್ನೂ ಓದಿ: ಹಾವೇರಿ: ಹೆಗ್ಗೇರಿ ಕೆರೆಗೆ ಯುಟಿಪಿ ಕಾಲುವೆ ನೀರು, ಕೆರೆಗೆ ಬಂತು ಜೀವಕಳೆ - heggeri lake

ETV Bharat Logo

Copyright © 2024 Ushodaya Enterprises Pvt. Ltd., All Rights Reserved.