ETV Bharat / state

ಹೀಗೇ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದ ಡಿಸಿ ಮುಲ್ಲೈ ಮುಗಿಲನ್: ವಿಡಿಯೋ ವೈರಲ್​ - DC talking with children

author img

By ETV Bharat Karnataka Team

Published : Jul 20, 2024, 8:02 PM IST

Updated : Jul 20, 2024, 8:12 PM IST

ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿ ಅವಲೋಕನ ನಡೆಸಿದ್ದರು. ಈ ವೇಳೆ ಅಲ್ಲಿದ್ದ ಮಕ್ಕಳಿಗೆ ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದು ಹೇಳಿದ್ದು, ಆ ವಿಡಿಯೋ ಇದೀಗ ವೈರಲ್ ಆಗಿದೆ.

ಮಕ್ಕಳಿಗೆ ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದ ಡಿಸಿ ಮುಲ್ಲೈ ಮುಗಿಲನ್
ಮಕ್ಕಳಿಗೆ ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದ ಡಿಸಿ ಮುಲ್ಲೈ ಮುಗಿಲನ್ (ETV Bharat)
ಹೀಗೇ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದ ಡಿಸಿ ಮುಲ್ಲೈ ಮುಗಿಲನ್ (ETV Bharat)

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಎಸ್​ಪಿ, ಜಿಪಂ ಸಿಇಒ ಅವರೊಂದಿಗೆ ಶುಕ್ರವಾರ ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು‌. ಈ ವೇಳೆ, ಅಲ್ಲಿದ್ದ ಮಕ್ಕಳಿಗೆ ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದು ಹೇಳಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ?: ವಿಡಿಯೋದಲ್ಲಿ ಜಿಲ್ಲಾಧಿಕಾರಿ, ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ. ಮಳೆಯಲ್ಲಿ ಓಡಾಡಬಾರದು ಎಂದಿದ್ದಾರೆ. ಈ ವೇಳೆ ಅವರಲ್ಲೋರ್ವ ಹುಡುಗ "ನಾಳೆ ಮತ್ತೆ ರಜೆಯಾ?" ಎಂದು ಡಿಸಿಯವರನ್ನೇ ಪ್ರಶ್ನಿಸಿದ್ದಾನೆ. ಆಗ ಎಲ್ಲರೂ ನಗೆಗಡಲಲ್ಲಿ ತೇಲಿದರು. ವಿದ್ಯಾರ್ಥಿಯ ಈ ಮಾತಿನಿಂದ ಮುಗುಳ್ನಕ್ಕ ಡಿಸಿಯವರು ಹುಡುಗನ ಬೆನ್ನು ತಟ್ಟಿ, ಎಲ್ಲಿ ಸ್ಕೂಲ್? ಎಂದು ಪ್ರಶ್ನಿಸಿದ್ದಾರೆ. ಆಗ ಮಕ್ಕಳು ಗೂಡಿನ ಬಳಿ ಎಂದು ಹೇಳುತ್ತಾರೆ.

ಇದನ್ನೂ ಓದಿ: ಉಡುಪಿ: ದ್ವಿಚಕ್ರ ವಾಹನಕ್ಕೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ಪ್ರಕರಣ ದಾಖಲು - man dragged a dog

ಹೀಗೇ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದ ಡಿಸಿ ಮುಲ್ಲೈ ಮುಗಿಲನ್ (ETV Bharat)

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಎಸ್​ಪಿ, ಜಿಪಂ ಸಿಇಒ ಅವರೊಂದಿಗೆ ಶುಕ್ರವಾರ ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು‌. ಈ ವೇಳೆ, ಅಲ್ಲಿದ್ದ ಮಕ್ಕಳಿಗೆ ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದು ಹೇಳಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ?: ವಿಡಿಯೋದಲ್ಲಿ ಜಿಲ್ಲಾಧಿಕಾರಿ, ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ. ಮಳೆಯಲ್ಲಿ ಓಡಾಡಬಾರದು ಎಂದಿದ್ದಾರೆ. ಈ ವೇಳೆ ಅವರಲ್ಲೋರ್ವ ಹುಡುಗ "ನಾಳೆ ಮತ್ತೆ ರಜೆಯಾ?" ಎಂದು ಡಿಸಿಯವರನ್ನೇ ಪ್ರಶ್ನಿಸಿದ್ದಾನೆ. ಆಗ ಎಲ್ಲರೂ ನಗೆಗಡಲಲ್ಲಿ ತೇಲಿದರು. ವಿದ್ಯಾರ್ಥಿಯ ಈ ಮಾತಿನಿಂದ ಮುಗುಳ್ನಕ್ಕ ಡಿಸಿಯವರು ಹುಡುಗನ ಬೆನ್ನು ತಟ್ಟಿ, ಎಲ್ಲಿ ಸ್ಕೂಲ್? ಎಂದು ಪ್ರಶ್ನಿಸಿದ್ದಾರೆ. ಆಗ ಮಕ್ಕಳು ಗೂಡಿನ ಬಳಿ ಎಂದು ಹೇಳುತ್ತಾರೆ.

ಇದನ್ನೂ ಓದಿ: ಉಡುಪಿ: ದ್ವಿಚಕ್ರ ವಾಹನಕ್ಕೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ಪ್ರಕರಣ ದಾಖಲು - man dragged a dog

Last Updated : Jul 20, 2024, 8:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.