ETV Bharat / state

ದರ್ಶನ್ ಪ್ರಕರಣ: ಸರ್ಕಾರ ನೇಮಿಸಿರುವ ಎಸ್‌ಪಿಪಿ ಪ್ರಸನ್ನ ಕುಮಾರ್ ಯಾರು?, ಹಿನ್ನೆಲೆ ಏನು? - P Prasanna Kumar

author img

By ETV Bharat Karnataka Team

Published : Jun 19, 2024, 7:09 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ದೇಶದಲ್ಲೇ ಸಂಚಲನ ಮೂಡಿಸಿದೆ. ನಟ ದರ್ಶನ್ ಮತ್ತು ಸ್ನೇಹಿತೆ ಪವಿತ್ರಾ ಗೌಡ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಹೈ ಪ್ರೋಫೈಲ್​ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಲು ವಕೀಲ ಪಿ.ಪ್ರಸನ್ನ ಕುಮಾರ್ ನೇಮಕವಾಗಿದ್ದಾರೆ. ಇವರ ಹಿನ್ನೆಲೆಯ ಕುರಿತ ಮಾಹಿತಿ ಇಲ್ಲಿದೆ.

P Prasanna Kumar
ಪಿ.ಪ್ರಸನ್ನ ಕುಮಾರ್ (Photo Courtesy - Prasanna Kumar)

ಬೆಂಗಳೂರು: ನಟ ದರ್ಶನ್ ಮತ್ತು ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸಲು ಖ್ಯಾತ ವಕೀಲ ಪಿ.ಪ್ರಸನ್ನ ಕುಮಾರ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ)ರನ್ನಾಗಿ ಸರ್ಕಾರ ನೇಮಿಸಿದೆ. ಸಾಂವಿಧಾನಿಕ, ಕ್ರಿಮಿನಲ್, ಸಿವಿಲ್ ಮತ್ತು ಸರ್ವೀಸ್ ಪ್ರಕರಣಗಳಲ್ಲಿ ಇವರು ತಮ್ಮದೇ ಆದ ಛಾಪು ಮೂಡಿಸಿದವರು.

ಪ್ರಸನ್ನ ಕುಮಾರ್ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡು ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಲವಾದ ವಾದ ಮಂಡನೆಯಲ್ಲಿ ಪ್ರಖ್ಯಾತರು. ಇದೀಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಅವರನ್ನು ನೇಮಿಸುವ ಮೂಲಕ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂಬ ಸಂದೇಶವನ್ನು ಸರ್ಕಾರ ನೀಡಿದೆ.

ಹಿರಿಯ ವಕೀಲರಾದ ಸಿ.ಹೆಚ್.ಜಾಧವ್ ಅವರ ಕಚೇರಿಯಲ್ಲಿ ವಕೀಲಿಕೆ ವೃತ್ತಿ ಆರಂಭಿಸಿದ್ದ ಪ್ರಸನ್ನ ಕುಮಾರ್, ಸಿಬಿಐ ಪರವಾಗಿ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಅಕ್ರಮ ಗಣಿಗಾರಿಕೆ, ಕರೀಮ್ ಲಾಲ್ ತೆಲಗಿ ಭಾಗಿಯಾಗಿದ್ದ ಸ್ಟ್ಯಾಂಪ್ ಪೇಪರ್ ಹಗರಣ, ನೋಟು ಅಮಾನ್ಯೀಕರಣ ಪ್ರಕರಣಗಳು, ಐ-ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ, ಮೈಸೂರು ಮಹಾರಾಜರ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಎನ್‌ಐಎ ಪರವಾಗಿ ಎಸ್​ಪಿಪಿಯಾಗಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ, ಮೈಸೂರು ನ್ಯಾಯಾಲಯದಲ್ಲಿನ ಬಾಂಬ್ ಸ್ಫೋಟ, ಚರ್ಚ್ ಸ್ಟ್ರೀಟ್​ ಬಾಂಬ್ ಸ್ಫೋಟ, ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣಗಳಲ್ಲೂ ವಾದಿಸುತ್ತಿದ್ದಾರೆ. ಅಲ್ಲದೇ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಚೀನಾದ ತಂತ್ರಜ್ಞಾನ ಕಂಪನಿ ಶಓಮಿ ವಿರುದ್ಧ ಮತ್ತು ಅಮೆರಿಕ ಮೂಲದ ದೇವಾಸ್ ಮಲ್ಟಿಮೀಡಿಯಾ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದ್ದಾರೆ.

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಲೈಂಗಿಕ ಹಗರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ, ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ನೇಮಕಾತಿ ಹಗರಣ, ಬಿಟ್ ಕಾಯಿನ್ ಹಗರಣದಲ್ಲಿ ಸಿಸಿಬಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೆಲಸ ಮಾಡಿದ್ದಾರೆ. ಎರಡು ದಶಕಗಳಿಗೂ ಮೀರಿದ ವೃತ್ತಿ ಬದುಕಿನಲ್ಲಿ ವೃತ್ತಿಪರವಾಗಿ ಕಾನೂನು ವಲಯದಲ್ಲಿ ಹೆಸರು ಮಾಡಿರುವ ಪ್ರಸನ್ನ ಕುಮಾರ್ ವಾದಿಸಿರುವ 484ಕ್ಕೂ ಅಧಿಕ ಪ್ರಕರಣಗಳ ತೀರ್ಪುಗಳು ಇಂಡಿಯನ್ ಲಾ ರಿಪೋರ್ಟರ್, ಕರ್ನಾಟಕ ಲಾ ಜರ್ನಲ್, ಸುಪ್ರೀಂ ಕೋರ್ಟ್ ಕೇಸ್ ಆನ್​ಲೈನ್​-ಕರ್ನಾಟಕ, ಕರ್ನಾಟಕ ಸಿವಿಲ್ ಮತ್ತು ಕ್ರಿಮಿನಲ್ ರಿಪೋರ್ಟರ್, ಮನುಪತ್ರ ಸೇರಿದಂತೆ ಹಲವು ಜರ್ನಲ್​ಗಳಲ್ಲಿ ವರದಿಯಾಗಿವೆ.

ರಾಜ್ಯದ ವಿಚಾರಣಾಧೀನ ನ್ಯಾಯಾಲಯ ಮತ್ತು ಕರ್ನಾಟಕ ಹೈಕೋರ್ಟ್​ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಪ್ರಸನ್ನ ಕುಮಾರ್ ಅವರು ಸಾಂವಿಧಾನಿಕ, ಕ್ರಿಮಿನಲ್, ಸಿವಿಲ್ ಮತ್ತು ಸರ್ವೀಸ್ ಪ್ರಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಬಿ.ಎ., ಎಲ್‌ಎಲ್​ಬಿ ಪದವಿ ಪೂರೈಸಿದ್ದಾರೆ. ಹೈದರಾಬಾದ್​ನ ಎನ್‌ಎಎಲ್‌ಎಸ್‌ಎಆರ್ ವಿಶ್ವವಿದ್ಯಾಲಯದ ಪಿಜಿಡಿ-ಎಡಿಆರ್ ಪದವಿ ಪಡೆದಿದ್ದಾರೆ. 2001ರ ಆಗಸ್ಟ್ 25ರಂದು ವಕೀಲರಾಗಿ ನೋಂದಾಯಿಸಿಕೊಂಡಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಎಸ್​ಪಿಪಿ ಬದಲಾವಣೆಗೆ ಒತ್ತಡವಿಲ್ಲ, ಒತ್ತಡ ಹಾಕಿದರೆ ಕೇಳುವುದಿಲ್ಲ- ಸಿಎಂ

ಬೆಂಗಳೂರು: ನಟ ದರ್ಶನ್ ಮತ್ತು ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸರ್ಕಾರದ ಪರ ವಾದ ಮಂಡಿಸಲು ಖ್ಯಾತ ವಕೀಲ ಪಿ.ಪ್ರಸನ್ನ ಕುಮಾರ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ)ರನ್ನಾಗಿ ಸರ್ಕಾರ ನೇಮಿಸಿದೆ. ಸಾಂವಿಧಾನಿಕ, ಕ್ರಿಮಿನಲ್, ಸಿವಿಲ್ ಮತ್ತು ಸರ್ವೀಸ್ ಪ್ರಕರಣಗಳಲ್ಲಿ ಇವರು ತಮ್ಮದೇ ಆದ ಛಾಪು ಮೂಡಿಸಿದವರು.

ಪ್ರಸನ್ನ ಕುಮಾರ್ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡು ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಲವಾದ ವಾದ ಮಂಡನೆಯಲ್ಲಿ ಪ್ರಖ್ಯಾತರು. ಇದೀಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಅವರನ್ನು ನೇಮಿಸುವ ಮೂಲಕ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂಬ ಸಂದೇಶವನ್ನು ಸರ್ಕಾರ ನೀಡಿದೆ.

ಹಿರಿಯ ವಕೀಲರಾದ ಸಿ.ಹೆಚ್.ಜಾಧವ್ ಅವರ ಕಚೇರಿಯಲ್ಲಿ ವಕೀಲಿಕೆ ವೃತ್ತಿ ಆರಂಭಿಸಿದ್ದ ಪ್ರಸನ್ನ ಕುಮಾರ್, ಸಿಬಿಐ ಪರವಾಗಿ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಅಕ್ರಮ ಗಣಿಗಾರಿಕೆ, ಕರೀಮ್ ಲಾಲ್ ತೆಲಗಿ ಭಾಗಿಯಾಗಿದ್ದ ಸ್ಟ್ಯಾಂಪ್ ಪೇಪರ್ ಹಗರಣ, ನೋಟು ಅಮಾನ್ಯೀಕರಣ ಪ್ರಕರಣಗಳು, ಐ-ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ, ಮೈಸೂರು ಮಹಾರಾಜರ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಎನ್‌ಐಎ ಪರವಾಗಿ ಎಸ್​ಪಿಪಿಯಾಗಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ, ಮೈಸೂರು ನ್ಯಾಯಾಲಯದಲ್ಲಿನ ಬಾಂಬ್ ಸ್ಫೋಟ, ಚರ್ಚ್ ಸ್ಟ್ರೀಟ್​ ಬಾಂಬ್ ಸ್ಫೋಟ, ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣಗಳಲ್ಲೂ ವಾದಿಸುತ್ತಿದ್ದಾರೆ. ಅಲ್ಲದೇ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಚೀನಾದ ತಂತ್ರಜ್ಞಾನ ಕಂಪನಿ ಶಓಮಿ ವಿರುದ್ಧ ಮತ್ತು ಅಮೆರಿಕ ಮೂಲದ ದೇವಾಸ್ ಮಲ್ಟಿಮೀಡಿಯಾ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದ್ದಾರೆ.

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಲೈಂಗಿಕ ಹಗರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ, ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ನೇಮಕಾತಿ ಹಗರಣ, ಬಿಟ್ ಕಾಯಿನ್ ಹಗರಣದಲ್ಲಿ ಸಿಸಿಬಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೆಲಸ ಮಾಡಿದ್ದಾರೆ. ಎರಡು ದಶಕಗಳಿಗೂ ಮೀರಿದ ವೃತ್ತಿ ಬದುಕಿನಲ್ಲಿ ವೃತ್ತಿಪರವಾಗಿ ಕಾನೂನು ವಲಯದಲ್ಲಿ ಹೆಸರು ಮಾಡಿರುವ ಪ್ರಸನ್ನ ಕುಮಾರ್ ವಾದಿಸಿರುವ 484ಕ್ಕೂ ಅಧಿಕ ಪ್ರಕರಣಗಳ ತೀರ್ಪುಗಳು ಇಂಡಿಯನ್ ಲಾ ರಿಪೋರ್ಟರ್, ಕರ್ನಾಟಕ ಲಾ ಜರ್ನಲ್, ಸುಪ್ರೀಂ ಕೋರ್ಟ್ ಕೇಸ್ ಆನ್​ಲೈನ್​-ಕರ್ನಾಟಕ, ಕರ್ನಾಟಕ ಸಿವಿಲ್ ಮತ್ತು ಕ್ರಿಮಿನಲ್ ರಿಪೋರ್ಟರ್, ಮನುಪತ್ರ ಸೇರಿದಂತೆ ಹಲವು ಜರ್ನಲ್​ಗಳಲ್ಲಿ ವರದಿಯಾಗಿವೆ.

ರಾಜ್ಯದ ವಿಚಾರಣಾಧೀನ ನ್ಯಾಯಾಲಯ ಮತ್ತು ಕರ್ನಾಟಕ ಹೈಕೋರ್ಟ್​ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಪ್ರಸನ್ನ ಕುಮಾರ್ ಅವರು ಸಾಂವಿಧಾನಿಕ, ಕ್ರಿಮಿನಲ್, ಸಿವಿಲ್ ಮತ್ತು ಸರ್ವೀಸ್ ಪ್ರಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಬಿ.ಎ., ಎಲ್‌ಎಲ್​ಬಿ ಪದವಿ ಪೂರೈಸಿದ್ದಾರೆ. ಹೈದರಾಬಾದ್​ನ ಎನ್‌ಎಎಲ್‌ಎಸ್‌ಎಆರ್ ವಿಶ್ವವಿದ್ಯಾಲಯದ ಪಿಜಿಡಿ-ಎಡಿಆರ್ ಪದವಿ ಪಡೆದಿದ್ದಾರೆ. 2001ರ ಆಗಸ್ಟ್ 25ರಂದು ವಕೀಲರಾಗಿ ನೋಂದಾಯಿಸಿಕೊಂಡಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ಎಸ್​ಪಿಪಿ ಬದಲಾವಣೆಗೆ ಒತ್ತಡವಿಲ್ಲ, ಒತ್ತಡ ಹಾಕಿದರೆ ಕೇಳುವುದಿಲ್ಲ- ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.