ETV Bharat / state

ಮೈಸೂರು: ಸಾಲ ಪಡೆದವರು ಹಣ ವಾಪಸ್ ನೀಡದ ಕಾರಣಕ್ಕೆ ಮನನೊಂದು ದಂಪತಿ ಆತ್ಮಹತ್ಯೆ

author img

By ETV Bharat Karnataka Team

Published : Jan 31, 2024, 1:45 PM IST

ಸಾಲ ಪಡೆದವರು ಹಣ ವಾಪಸ್ ನೀಡದೇ ಇರುವ ಕಾರಣಕ್ಕೆ ಮನನೊಂದು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿವ ಆಲನಹಳ್ಳಿಯಲ್ಲಿರುವ ಲಾಡ್ಜ್​ವೊಂದರಲ್ಲಿ ನಡೆದಿದೆ.

ಹಣ ವಾಪಸ್ ನೀಡದ ಕಾರಣ  ದಂಪತಿ ಆತ್ಮಹತ್ಯೆ  couple committed suicide  committed suicide
ಸಾಲ ಪಡೆದವರು ಹಣ ವಾಪಸ್ ನೀಡದ ಕಾರಣಕ್ಕೆ ಮನನೊಂದು ದಂಪತಿ ಆತ್ಮಹತ್ಯೆ

ಮೈಸೂರು: ಸಾಲ ಪಡೆದವರು ಹಣವನ್ನು ಮರಳಿ ನೀಡದೇ ಇರುವ ಕಾರಣಕ್ಕೆ ಮನನೊಂದಿರುವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಆಲನಹಳ್ಳಿಯಲ್ಲಿರುವ ಲಾಡ್ಜ್​ವೊಂದರಲ್ಲಿ ನಡೆದಿದೆ.

ಸಾಲ ಪಡೆದವರು ವಾಪಸ್ ನೀಡದೇ ಸತಾಯಿಸುತ್ತಿದ್ದಾರೆ ಎಂದು ಮನನೊಂದು ಲಾಡ್ಜ್​ನಲ್ಲಿ ತಮ್ಮ ಮೂರು ವರ್ಷದ ಹೆಣ್ಣು ಮಗು ಮಲಗಿದ್ದ ವೇಳೆ, ಲಾಡ್ಜ್​ನಲ್ಲಿ ವಿಡಿಯೋ ಮಾಡಿ ಸ್ನೇಹಿತರ ವಾಟ್ಸ್​ಆ್ಯಪ್​ ಗ್ರೂಪ್​ಗೆ ಕಳುಹಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಶ್ವನಾಥ್ (30) ಹಾಗೂ ಅವರ ಹೆಂಡತಿ ಸುಶ್ಮಿತಾ(25) ಆತ್ಮಹತ್ಯೆ ಮಾಡಿಕೊಂಡವರು. ಮೈಸೂರಿನ ಹೊರವಲಯದ ಆಲನಹಳ್ಳಿಯ ರಿಂಗ್ ರಸ್ತೆಯಲ್ಲಿರುವ ಲಾಡ್ಜ್​ನಲ್ಲಿ ಜನವರಿ 28 ರಂದು ರೂಮ್ ಪಡೆದಿದ್ದರು. ಅಂದು ಒಂದು ದಿನ ರೂಮ್ ನಲ್ಲೇ ಇದ್ದರು. ನಂತರ ವಿಶ್ವನಾಥ್ ತನ್ನ ಮೊಬೈಲ್​ನಿಂದ ಎರಡು ವಾಟ್ಸ್​ಆ್ಯಪ್​ ಗ್ರೂಪ್​ಗೆ 'ನನ್ನಿಂದ ಸಾಲ ಪಡೆದ ಮೂವರು ವ್ಯಕ್ತಿಗಳು ಹಣ ವಾಪಸ್ ನೀಡುತ್ತಿಲ್ಲ. ಹಣ ಕೇಳಿದರೆ ಬೆದರಿಕೆ ಹಾಕುತ್ತಾರೆ ಎಂದು ವಿಡಿಯೋ ಮಾಡಿ, ವಾಟ್ಸ್​ಆ್ಯಪ್​ ಮೂಲಕ ಎರಡು ಗ್ರೂಪ್​ಗಳಿಗೆ ಕಳುಹಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ.

ಮಂಗಳವಾರ ಲಾಡ್ಜ್​ನವರು ಸ್ಥಳೀಯ ಆಲನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ, ನಂತರ ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಮೃತನ ಸೋದರ ಶ್ಯಾಮ್ ಸುಂದರ್ ಆಲನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮೈಸೂರು: ಹಲ್ಲರೆ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆ, 90 ಮಂದಿ ವಿರುದ್ಧ ಎಫ್ಐಆರ್

ಮೈಸೂರು: ಸಾಲ ಪಡೆದವರು ಹಣವನ್ನು ಮರಳಿ ನೀಡದೇ ಇರುವ ಕಾರಣಕ್ಕೆ ಮನನೊಂದಿರುವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಆಲನಹಳ್ಳಿಯಲ್ಲಿರುವ ಲಾಡ್ಜ್​ವೊಂದರಲ್ಲಿ ನಡೆದಿದೆ.

ಸಾಲ ಪಡೆದವರು ವಾಪಸ್ ನೀಡದೇ ಸತಾಯಿಸುತ್ತಿದ್ದಾರೆ ಎಂದು ಮನನೊಂದು ಲಾಡ್ಜ್​ನಲ್ಲಿ ತಮ್ಮ ಮೂರು ವರ್ಷದ ಹೆಣ್ಣು ಮಗು ಮಲಗಿದ್ದ ವೇಳೆ, ಲಾಡ್ಜ್​ನಲ್ಲಿ ವಿಡಿಯೋ ಮಾಡಿ ಸ್ನೇಹಿತರ ವಾಟ್ಸ್​ಆ್ಯಪ್​ ಗ್ರೂಪ್​ಗೆ ಕಳುಹಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಶ್ವನಾಥ್ (30) ಹಾಗೂ ಅವರ ಹೆಂಡತಿ ಸುಶ್ಮಿತಾ(25) ಆತ್ಮಹತ್ಯೆ ಮಾಡಿಕೊಂಡವರು. ಮೈಸೂರಿನ ಹೊರವಲಯದ ಆಲನಹಳ್ಳಿಯ ರಿಂಗ್ ರಸ್ತೆಯಲ್ಲಿರುವ ಲಾಡ್ಜ್​ನಲ್ಲಿ ಜನವರಿ 28 ರಂದು ರೂಮ್ ಪಡೆದಿದ್ದರು. ಅಂದು ಒಂದು ದಿನ ರೂಮ್ ನಲ್ಲೇ ಇದ್ದರು. ನಂತರ ವಿಶ್ವನಾಥ್ ತನ್ನ ಮೊಬೈಲ್​ನಿಂದ ಎರಡು ವಾಟ್ಸ್​ಆ್ಯಪ್​ ಗ್ರೂಪ್​ಗೆ 'ನನ್ನಿಂದ ಸಾಲ ಪಡೆದ ಮೂವರು ವ್ಯಕ್ತಿಗಳು ಹಣ ವಾಪಸ್ ನೀಡುತ್ತಿಲ್ಲ. ಹಣ ಕೇಳಿದರೆ ಬೆದರಿಕೆ ಹಾಕುತ್ತಾರೆ ಎಂದು ವಿಡಿಯೋ ಮಾಡಿ, ವಾಟ್ಸ್​ಆ್ಯಪ್​ ಮೂಲಕ ಎರಡು ಗ್ರೂಪ್​ಗಳಿಗೆ ಕಳುಹಿಸಿದ್ದಾರೆ ಎಂದು ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ.

ಮಂಗಳವಾರ ಲಾಡ್ಜ್​ನವರು ಸ್ಥಳೀಯ ಆಲನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ, ನಂತರ ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಮೃತನ ಸೋದರ ಶ್ಯಾಮ್ ಸುಂದರ್ ಆಲನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮೈಸೂರು: ಹಲ್ಲರೆ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆ, 90 ಮಂದಿ ವಿರುದ್ಧ ಎಫ್ಐಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.