ETV Bharat / state

5 ಸಾವಿರ ಹಣದ ವಿಚಾರಕ್ಕೆ ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ: 9 ಮಂದಿ ಬಂಧನ - assault on a rowdy sheeter - ASSAULT ON A ROWDY SHEETER

ರೌಡಿಶೀಟರ್ ಮೇಲೆ ಹಲ್ಲೆ ನಡೆಸಿದ್ದ 9 ಮಂದಿ ಆರೋಪಿಗಳನ್ನು ಬೆಂಗಳೂರಿನ ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೊಡಿಗೆಹಳ್ಳಿ ಪೊಲೀಸ್​ ಠಾಣೆ
ಕೊಡಿಗೆಹಳ್ಳಿ ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Aug 24, 2024, 3:51 PM IST

ಬೆಂಗಳೂರು: ರೌಡಿಶೀಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ 9 ಮಂದಿ ಆರೋಪಿಗಳನ್ನು ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 21 ರಂದು ರಾತ್ರಿ ವಿಜಯ್ ಕುಮಾರ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಆರೋಪದಡಿ ಮುತ್ತು, ನಂದ, ಕಿರಣ್, ಶಿವ, ಮಾರುತಿ, ಸುನೀಲ್, ಶರತ್, ರಿತು ಹಾಗೂ ಮೂರ್ತಿ ಎಂಬುವರನ್ನು ಬಂಧಿಸಲಾಗಿದೆ.

ಆರೋಪಿ ಮುತ್ತು ಬಳಿ ಐದು ಸಾವಿರ ರೂ ಹಣ ಪಡೆದಿದುಕೊಂಡಿದ್ದ ವಿಜಯ್, ಹಣ ಹಿಂದಿರುಗಿಸಿರಲಿಲ್ಲ. ಇತ್ತೀಚಿಗೆ ಏರಿಯಾದಲ್ಲಿ ಅಣ್ಣಮ್ಮ ದೇವಿ ಕೂರಿಸುವಾಗ ಎಲ್ಲರ ಎದುರೇ ಐದು ಸಾವಿರ ರೂ. ವಾಪಸ್ ಕೊಡುವಂತೆ ಮುತ್ತು, ವಿಜಯ್ ಕುಮಾರ್​ಗೆ ಕೇಳಿದ್ದ.

ಸಾರ್ವಜನಿಕವಾಗಿ ಹಣ ಕೇಳಿದ್ದನ್ನು ಅವಮಾನವೆಂದು ಭಾವಿಸಿದ್ದ ವಿಜಯ್, ಮುತ್ತು ಜೊತೆ ಜಗಳ ಮಾಡಿಕೊಂಡಿದ್ದ. ಆ ನಂತರ ಇಬ್ಬರ ನಡುವೆ ಸಂಧಾನದ ಕುರಿತು ಚರ್ಚೆಯಾಗಿತ್ತು. ಹೀಗಾಗಿ ಆಗಸ್ಟ್ 21 ರಂದು ರಾತ್ರಿ ಆರೋಪಿಗಳು ವಿಜಯ್ ಮನೆ ಬಳಿ ಬಂದಿದ್ದರು. ಈ ವೇಳೆ ಮತ್ತೆ ಗಲಾಟೆಯಾಗಿ ವಿಜಯ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಟೈಯರ್ ಸ್ಫೋಟಗೊಂಡು ಲಾರಿಗೆ ಕಾರು ಡಿಕ್ಕಿ: ಅಜ್ಜ, ಮಗ, ಮೊಮ್ಮಗ ಸಾವು - Car Accident in Hubli

ಬೆಂಗಳೂರು: ರೌಡಿಶೀಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ 9 ಮಂದಿ ಆರೋಪಿಗಳನ್ನು ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 21 ರಂದು ರಾತ್ರಿ ವಿಜಯ್ ಕುಮಾರ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದ ಆರೋಪದಡಿ ಮುತ್ತು, ನಂದ, ಕಿರಣ್, ಶಿವ, ಮಾರುತಿ, ಸುನೀಲ್, ಶರತ್, ರಿತು ಹಾಗೂ ಮೂರ್ತಿ ಎಂಬುವರನ್ನು ಬಂಧಿಸಲಾಗಿದೆ.

ಆರೋಪಿ ಮುತ್ತು ಬಳಿ ಐದು ಸಾವಿರ ರೂ ಹಣ ಪಡೆದಿದುಕೊಂಡಿದ್ದ ವಿಜಯ್, ಹಣ ಹಿಂದಿರುಗಿಸಿರಲಿಲ್ಲ. ಇತ್ತೀಚಿಗೆ ಏರಿಯಾದಲ್ಲಿ ಅಣ್ಣಮ್ಮ ದೇವಿ ಕೂರಿಸುವಾಗ ಎಲ್ಲರ ಎದುರೇ ಐದು ಸಾವಿರ ರೂ. ವಾಪಸ್ ಕೊಡುವಂತೆ ಮುತ್ತು, ವಿಜಯ್ ಕುಮಾರ್​ಗೆ ಕೇಳಿದ್ದ.

ಸಾರ್ವಜನಿಕವಾಗಿ ಹಣ ಕೇಳಿದ್ದನ್ನು ಅವಮಾನವೆಂದು ಭಾವಿಸಿದ್ದ ವಿಜಯ್, ಮುತ್ತು ಜೊತೆ ಜಗಳ ಮಾಡಿಕೊಂಡಿದ್ದ. ಆ ನಂತರ ಇಬ್ಬರ ನಡುವೆ ಸಂಧಾನದ ಕುರಿತು ಚರ್ಚೆಯಾಗಿತ್ತು. ಹೀಗಾಗಿ ಆಗಸ್ಟ್ 21 ರಂದು ರಾತ್ರಿ ಆರೋಪಿಗಳು ವಿಜಯ್ ಮನೆ ಬಳಿ ಬಂದಿದ್ದರು. ಈ ವೇಳೆ ಮತ್ತೆ ಗಲಾಟೆಯಾಗಿ ವಿಜಯ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಟೈಯರ್ ಸ್ಫೋಟಗೊಂಡು ಲಾರಿಗೆ ಕಾರು ಡಿಕ್ಕಿ: ಅಜ್ಜ, ಮಗ, ಮೊಮ್ಮಗ ಸಾವು - Car Accident in Hubli

ETV Bharat Logo

Copyright © 2025 Ushodaya Enterprises Pvt. Ltd., All Rights Reserved.