ETV Bharat / sports

ಅಚ್ಚರಿ..! ನಿಮ್ಮ ಮಗ ರಾಜಕಾರಣಿಯಾಗಲಿಲ್ಲ; ಜಯ್​ ಐಸಿಸಿ ಅಧ್ಯಕ್ಷರಾದ ಬಳಿಕ ಅಮಿತ್ ಶಾಗೆ ಮಮತಾ ಅಭಿನಂದನೆ! - Mamata surprising tweet to shah

author img

By ETV Bharat Sports Team

Published : Aug 30, 2024, 7:28 AM IST

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸಿದ್ದಾರೆ. ಜಯ್ ಶಾ ನೂತನ ಐಸಿಸಿ ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ವಿಶೇಷ ಎಂದರೆ ಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಜಯ್​​ ಶಾ ಗೆ ಮಮತಾ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂಬಂಧ ಅವರು ಅಮಿತ್​ ಶಾ ಗೂ ಕಂಗ್ರಾಟ್ಸ್​​ ಹೇಳಿದ್ದಾರೆ. ಈ ಮೂಲಕ ಸಂಚಲನಕ್ಕೂ ಕಾರಣರಾಗಿದ್ದಾರೆ.

mamata-banerjee-cryptic-x-post-to-congratulate-amit-shah-for-jay-shah-icc-chairman-appointment
ನಿಮ್ಮ ಮಗ ರಾಜಕಾರಣಿಯಾಗಲಿಲ್ಲ; ಜಯ್​ ಐಸಿಸಿ ಅಧ್ಯಕ್ಷರಾದ ಬಳಿಕ ಅಮಿತ್ ಶಾಗೆ ಮಮತಾ ರಹಸ್ಯ ಅಭಿನಂದನೆ! (Collage: Mamata Banerjee, Jay Shah, and Amit Shah (IANS Photos))

ಹೈದರಾಬಾದ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಅಭಿನಂದಿಸಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ಆಯ್ಕೆ ಆಗಿರುವ ಜಯ್ ಶಾಗೆ ಗುಡ್​​ ಲಕ್​​​​​ ಹೇಳಿದ್ದಾರೆ, ಈ ಸಂಬಂಧ ಮಮತಾ ಬ್ಯಾನರ್ಜಿ ಎಕ್ಸ್​ ಹ್ಯಾಂಡಲ್​ನಲ್ಲಿ ಭಾರತದ ಗೃಹ ಸಚಿವ ಅಮಿತ್​ ಶಾಗೆ ರಹಸ್ಯ ಅಭಿನಂದನೆಯ ಪೋಸ್ಟ್​ ಮಾಡಿದ್ದಾರೆ. ಈ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ.

ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಮೂರನೇ ಅವಧಿಗೆ ನಿಲ್ಲದಿರಲು ನಿರ್ಧರಿಸಿದ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕಾರ್ಯದರ್ಶಿಯೂ ಆಗಿದ್ದ 35 ವರ್ಷದ ಜಯ್ ಶಾ ಅವರು ಏಕೈಕ ಅರ್ಜಿದಾರರಾಗಿ ಉಳಿದಿದ್ದರು. ಹೀಗಾಗಿ ಅವರು ಐಸಿಸಿ ಹೊಸ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಶರದ್ ಪವಾರ್, ಜಗಮೋಹನ್ ದಾಲ್ಮಿಯಾ, ಶಶಾಂಕ್ ಮನೋಹರ್ ಮತ್ತು ಎನ್. ಶ್ರೀನಿವಾಸನ್ ನಂತರ ಜಯ್ ಶಾ ಐಸಿಸಿ ಅಧ್ಯಕ್ಷರಾದ ಕಿರಿಯ ಮತ್ತು ಐದನೇ ಭಾರತೀಯ ವ್ಯಕ್ತಿಯಾಗಿದ್ದಾರೆ.

ಮಮತಾ ಎಕ್ಸ್​​ ಹ್ಯಾಂಡಲ್​ ಪೋಸ್ಟ್​​ನಲ್ಲೇನಿದೆ?: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ಕ್ರಿಪ್ಟಿಕ್ ಎಕ್ಸ್ ಪೋಸ್ಟ್, ರಾಜಕೀಯ ಪ್ರೇರಿತ ಚರ್ಚೆಗಳನ್ನು ಹುಟ್ಟುಹಾಕಿದೆ. "ಅಭಿನಂದನೆಗಳು, ಕೇಂದ್ರ ಗೃಹ ಸಚಿವರೇ!! ನಿಮ್ಮ ಮಗ ರಾಜಕಾರಣಿಯಾಗಲಿಲ್ಲ, ಆದರೆ ಐಸಿಸಿ ಅಧ್ಯಕ್ಷನಾಗಿದ್ದಾನೆ - ರಾಜಕಾರಣಿಗಳಿಗಿಂತ ಹೆಚ್ಚು ಮುಖ್ಯವಾದ ಪೋಸ್ಟ್!! ನಿಮ್ಮ ಮಗ ನಿಜವಾಗಿಯೂ ತುಂಬಾ ಶಕ್ತಿಶಾಲಿಯಾಗಿದ್ದಾನೆ ಮತ್ತು ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನಿಜಕ್ಕೂ ಉನ್ನತ ಸಾಧನೆ! ತಮ್ಮ X ಹ್ಯಾಂಡಲ್‌ನಲ್ಲಿ ಮಮತಾ ಬ್ಯಾನರ್ಜಿ ಈ ಪೋಸ್ಟ್​ ಮಾಡಿದ್ದಾರೆ.

ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯು ನವೆಂಬರ್ 30 ರಂದು ಕೊನೆಗೊಳ್ಳಲಿದ್ದು, ಡಿಸೆಂಬರ್ 1ರಿಂದ ಜಯ್ ಶಾ ಐಸಿಸಿಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆ ಆದ ಬಳಿಕ BCCI ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಜಯ್​ "T20 ಸ್ವಾಭಾವಿಕವಾಗಿ ರೋಮಾಂಚನಕಾರಿ ಸ್ವರೂಪವಾಗಿದ್ದರೂ, ಟೆಸ್ಟ್ ಕ್ರಿಕೆಟ್ ಉಳಿಯುವುದು ಅಷ್ಟೇ ಮುಖ್ಯವಾಗಿದೆ. ಇದು ನಮ್ಮ ಆಟದ ತಳಹದಿಯನ್ನು ರೂಪಿಸುವುದರಿಂದ ಪ್ರತಿಯೊಬ್ಬರಿಗೂ ಇದು ಆದ್ಯತೆಯಾಗಬೇಕಿದೆ "ಕ್ರಿಕೆಟಿಗರನ್ನು ದೀರ್ಘ ಸ್ವರೂಪದಲ್ಲಿ ಆಡುವಂತೆ ನಾವು ನೋಡಿಕೊಳ್ಳಬೇಕು ಮತ್ತು ನಮ್ಮ ಪ್ರಯತ್ನಗಳು ಈ ಗುರಿಯತ್ತ ಸಾಗುತ್ತವೆ ಎಂಬ ನಂಬಿಕೆಯಲ್ಲಿದ್ದೇವೆ ಎಂದು ಬಿಸಿಸಿಐ ತನ್ನ ಸಂದೇಶದಲ್ಲಿ ಹೇಳಿದೆ.

ಇದನ್ನು ಓದಿ:ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ಸ್ಥಾಪನೆಗೊಳ್ಳಲಿದೆ ಸಚಿನ್​ ತೆಂಡೂಲ್ಕರ್​ ಬಾಲ್ಯದ ಕೋಚ್​ ಪ್ರತಿಮೆ - Sachin Tendulkar Coach Statue

ಹೈದರಾಬಾದ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಅಭಿನಂದಿಸಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ಆಯ್ಕೆ ಆಗಿರುವ ಜಯ್ ಶಾಗೆ ಗುಡ್​​ ಲಕ್​​​​​ ಹೇಳಿದ್ದಾರೆ, ಈ ಸಂಬಂಧ ಮಮತಾ ಬ್ಯಾನರ್ಜಿ ಎಕ್ಸ್​ ಹ್ಯಾಂಡಲ್​ನಲ್ಲಿ ಭಾರತದ ಗೃಹ ಸಚಿವ ಅಮಿತ್​ ಶಾಗೆ ರಹಸ್ಯ ಅಭಿನಂದನೆಯ ಪೋಸ್ಟ್​ ಮಾಡಿದ್ದಾರೆ. ಈ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ.

ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಮೂರನೇ ಅವಧಿಗೆ ನಿಲ್ಲದಿರಲು ನಿರ್ಧರಿಸಿದ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕಾರ್ಯದರ್ಶಿಯೂ ಆಗಿದ್ದ 35 ವರ್ಷದ ಜಯ್ ಶಾ ಅವರು ಏಕೈಕ ಅರ್ಜಿದಾರರಾಗಿ ಉಳಿದಿದ್ದರು. ಹೀಗಾಗಿ ಅವರು ಐಸಿಸಿ ಹೊಸ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಶರದ್ ಪವಾರ್, ಜಗಮೋಹನ್ ದಾಲ್ಮಿಯಾ, ಶಶಾಂಕ್ ಮನೋಹರ್ ಮತ್ತು ಎನ್. ಶ್ರೀನಿವಾಸನ್ ನಂತರ ಜಯ್ ಶಾ ಐಸಿಸಿ ಅಧ್ಯಕ್ಷರಾದ ಕಿರಿಯ ಮತ್ತು ಐದನೇ ಭಾರತೀಯ ವ್ಯಕ್ತಿಯಾಗಿದ್ದಾರೆ.

ಮಮತಾ ಎಕ್ಸ್​​ ಹ್ಯಾಂಡಲ್​ ಪೋಸ್ಟ್​​ನಲ್ಲೇನಿದೆ?: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ಕ್ರಿಪ್ಟಿಕ್ ಎಕ್ಸ್ ಪೋಸ್ಟ್, ರಾಜಕೀಯ ಪ್ರೇರಿತ ಚರ್ಚೆಗಳನ್ನು ಹುಟ್ಟುಹಾಕಿದೆ. "ಅಭಿನಂದನೆಗಳು, ಕೇಂದ್ರ ಗೃಹ ಸಚಿವರೇ!! ನಿಮ್ಮ ಮಗ ರಾಜಕಾರಣಿಯಾಗಲಿಲ್ಲ, ಆದರೆ ಐಸಿಸಿ ಅಧ್ಯಕ್ಷನಾಗಿದ್ದಾನೆ - ರಾಜಕಾರಣಿಗಳಿಗಿಂತ ಹೆಚ್ಚು ಮುಖ್ಯವಾದ ಪೋಸ್ಟ್!! ನಿಮ್ಮ ಮಗ ನಿಜವಾಗಿಯೂ ತುಂಬಾ ಶಕ್ತಿಶಾಲಿಯಾಗಿದ್ದಾನೆ ಮತ್ತು ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನಿಜಕ್ಕೂ ಉನ್ನತ ಸಾಧನೆ! ತಮ್ಮ X ಹ್ಯಾಂಡಲ್‌ನಲ್ಲಿ ಮಮತಾ ಬ್ಯಾನರ್ಜಿ ಈ ಪೋಸ್ಟ್​ ಮಾಡಿದ್ದಾರೆ.

ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯು ನವೆಂಬರ್ 30 ರಂದು ಕೊನೆಗೊಳ್ಳಲಿದ್ದು, ಡಿಸೆಂಬರ್ 1ರಿಂದ ಜಯ್ ಶಾ ಐಸಿಸಿಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆ ಆದ ಬಳಿಕ BCCI ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಜಯ್​ "T20 ಸ್ವಾಭಾವಿಕವಾಗಿ ರೋಮಾಂಚನಕಾರಿ ಸ್ವರೂಪವಾಗಿದ್ದರೂ, ಟೆಸ್ಟ್ ಕ್ರಿಕೆಟ್ ಉಳಿಯುವುದು ಅಷ್ಟೇ ಮುಖ್ಯವಾಗಿದೆ. ಇದು ನಮ್ಮ ಆಟದ ತಳಹದಿಯನ್ನು ರೂಪಿಸುವುದರಿಂದ ಪ್ರತಿಯೊಬ್ಬರಿಗೂ ಇದು ಆದ್ಯತೆಯಾಗಬೇಕಿದೆ "ಕ್ರಿಕೆಟಿಗರನ್ನು ದೀರ್ಘ ಸ್ವರೂಪದಲ್ಲಿ ಆಡುವಂತೆ ನಾವು ನೋಡಿಕೊಳ್ಳಬೇಕು ಮತ್ತು ನಮ್ಮ ಪ್ರಯತ್ನಗಳು ಈ ಗುರಿಯತ್ತ ಸಾಗುತ್ತವೆ ಎಂಬ ನಂಬಿಕೆಯಲ್ಲಿದ್ದೇವೆ ಎಂದು ಬಿಸಿಸಿಐ ತನ್ನ ಸಂದೇಶದಲ್ಲಿ ಹೇಳಿದೆ.

ಇದನ್ನು ಓದಿ:ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ಸ್ಥಾಪನೆಗೊಳ್ಳಲಿದೆ ಸಚಿನ್​ ತೆಂಡೂಲ್ಕರ್​ ಬಾಲ್ಯದ ಕೋಚ್​ ಪ್ರತಿಮೆ - Sachin Tendulkar Coach Statue

ETV Bharat Logo

Copyright © 2024 Ushodaya Enterprises Pvt. Ltd., All Rights Reserved.