ETV Bharat / sports

"ಅಂದು ಟೀಕಿಸಿದವರಿಂದಲೇ ಇಂದು ಹೊಗಳಿಕೆ": ಒಂದೇ ರಾತ್ರಿಯಲ್ಲಿ ಹೀರೋ ಆದ ಯಶ್​ ದಯಾಳ್​ - Yash Dayal

author img

By ETV Bharat Karnataka Team

Published : May 20, 2024, 5:25 PM IST

Updated : May 20, 2024, 10:56 PM IST

ಆರ್​ಸಿಬಿ ತಂಡದ ಯಶ್​ ದಯಾಳ್​ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದೇ ವ್ಯರ್ಥ ಎನ್ನುವಂತೆ ಟೀಕಿಸಿದ್ದವರಿಗೆ ಖಡಕ್​ ಉತ್ತರ ನೀಡಿದ್ದಾರೆ. ಈ ಬಗ್ಗೆ ಅವರ ತಂದೆ ಹೇಳಿದ್ದಿಷ್ಟು..

ಯಶ್​ ದಯಾಳ್​
ಯಶ್​ ದಯಾಳ್​ (ETV Bharat)

ನವದೆಹಲಿ: ಐಪಿಎಲ್​ನಲ್ಲಿ ಈಚೆಗೆ ಬೌಲರ್​ಗಳಿಗೆ ಹೆಚ್ಚು ಮನ್ನಣೆ ಸಿಗುತ್ತಿಲ್ಲ. ಹೊಡಿಬಡಿ ಆಟದಲ್ಲಿ ಬ್ಯಾಟರ್​ಗಳೇ ರಾರಾಜಿಸುತ್ತಿದ್ದಾರೆ. ವಿಕೆಟ್​ ಪಡೆಯಲು ಎಂತಹ ಮಾರಕ ಬೌಲರ್​ ಕೂಡ ಪರದಾಡಬೇಕಿದೆ. ಕ್ರಿಕೆಟ್​ನ ನಿಯಮಗಳು ಬೌಲರ್​ಗಳಿಗೆ ಸಹಕಾರಿಯಾಗಿಲ್ಲ ಎಂಬ ಮಾತಿದೆ. ಇಂತೆಲ್ಲ ಲೋಪದ ನಡುವೆಯೂ ಯಶ್​ ದಯಾಳ್​ ಎಂಬ ಯುವ ಬೌಲರ್​ ಕ್ರಿಕೆಟ್​ನ ಕಣ್ಣು ಕುಕ್ಕಿಸಿದ್ದಾರೆ. ಒಂದೇ ರಾತ್ರಿಯಲ್ಲಿ ಕ್ರಿಕೆಟ್​ನ ಕಣ್ಮಣಿಯಾಗಿದ್ದಾರೆ.

ಅದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ. ಅಲ್ಲಿ ಎರಡು ಬದ್ಧವೈರಿಗಳಾದ ಸಿಎಸ್​ಕೆ ಮತ್ತು ಆರ್​ಸಿಬಿ ನಡುವೆ ಪಂದ್ಯ. ಪ್ಲೇಆಫ್​ಗೆ ಕ್ವಾಲಿಫೈ ಆಗಲು ಇತ್ತಂಡಗಳೂ ಮದಗಜಗಳಂತೆ ಹೋರಾಟ ನಡೆಸುತ್ತಿದ್ದವು. ಕೊನೆಯ ಓವರ್​ ಎಸೆಯಲು ಬಂದ ಯಶ್​ ದಯಾಳ್​, ಪಂದ್ಯವನ್ನು ಮಿಂಚಿನಂತೆ ಗೆಲ್ಲಿಸಿ ಆರ್​ಸಿಬಿಯ ಕೋಟ್ಯಂತರ ಅಭಿಮಾನಿಗಳಿಗೆ ದಯಾಳುವಾಗಿ ಕಂಗೊಳಿಸಿದರು.

ರೋಚಕ ಪಂದ್ಯ: ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​​ಗೆ ಅರ್ಹತೆ ಪಡೆಯಲು 6 ಎಸೆತಗಳಲ್ಲಿ 17 ರನ್ ಅಗತ್ಯವಿದ್ದಾಗ, ಬೌಲ್​ ಕೈಗೆತ್ತಿಕೊಂಡ ಯಶ್​ ದಯಾಳ್ ಸುತ್ತಲೂ ಕೂಗುತ್ತಿದ್ದ ಅಭಿಮಾನಿಗಳ ಆಸೆಗೆ ನೀರೆರೆಯುವ ಕೆಲಸ ಮಾಡಬೇಕಿತ್ತು. ಮೊದಲ ಎಸೆತದಲ್ಲೇ ಧೋನಿ ಭರ್ಜರಿ ಸಿಕ್ಸರ್​ ಬಾರಿಸಿದಾಗ ಎಲ್ಲರ ಎದೆ ಒಮ್ಮೆ ಧಸಕ್​ ಎಂದಿತು. 5 ಎಸೆತಗಳಲ್ಲಿ 12 ರನ್. ಇನ್ನೇನು ಪಂದ್ಯ ಕೈಬಿಟ್ಟಿತು. ಪ್ಲೇಆಫ್​ ಆಸೆ ನುಚ್ಚು ನೂರಾಯಿತು ಎಂದುಕೊಂಡಿದ್ದ ಅಭಿಮಾನಿಗಳಿಗೆ ಯಶ್​ ದಯಾಳ್​ ಕನಸಿನ ಗೆಲುವು ತಂದುಕೊಟ್ಟರು.

ಇನ್ನುಳಿದ ಐದು ಎಸೆತಗಳಲ್ಲಿ ಧೋನಿ ವಿಕೆಟ್​ ಸಹಿತ ಬಿಟ್ಟುಕೊಟ್ಟಿದ್ದು ಕೇವಲ 1 ರನ್​ ಮಾತ್ರ. ಇದರಿಂದ ತಂಡ 10 ರನ್​ಗಳಿಂದ ಮಣಿಸಿ ರಾಜಾರೋಷವಾಗಿ ಟಾಪ್​ ನಾಲ್ಕರಲ್ಲಿ ಸ್ಥಾನ ಪಡೆಯಿತು. ಇದೆಲ್ಲವನ್ನೂ ಸಾಧಿಸಿ ತೋರಿಸಿದ್ದು, ಕಳೆದ ಬಾರಿಯ ಆವೃತ್ತಿಯಲ್ಲಿ ಆಘಾತಕ್ಕೆ ಸಿಲುಕಿ ಟೂರ್ನಿಯಿಂದಲೇ ಹೊರಬಿದ್ದಿದ್ದ ಯಶ್​ ದಯಾಳ್​.

ಆರ್​ಸಿಬಿ ಎಂದೂ ಮರೆಯದ ಗೆಲುವು ತಂದುಕೊಟ್ಟಿರುವ ಯಶ್​​ ದಯಾಳ್​​ಗೆ ಈಗ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ. ಆದರೆ, ಈ ಆಟಗಾರ ತಂಡಕ್ಕೆ ಆಯ್ಕೆಯಾದಾಗ ಅದೆಷ್ಟೋ ಜನರು ಹೀನಾಮಾನವಾಗಿ ಜರಿದಿದ್ದರು. ಇವರಿಗೆ ಕೊಟ್ಟ 5 ಕೋಟಿ ರೂಪಾಯಿ ಆರ್​ಸಿಬಿ ಹಾಳು ಮಾಡಿಕೊಂಡಿತು ಎಂದು ಛೇಡಿಸಿದ್ದರು.

ಟೀಕಿಸಿದವರಿಂದಲೇ ಪ್ರಶಂಸೆ: ಪಂದ್ಯದ ಬಳಿಕ ಯಶ್ ದಯಾಳ್ ಅವರ ತಂದೆ ಮಾತನಾಡಿ, 'ಆರ್‌ಸಿಬಿ ಮ್ಯಾನೇಜ್​ಮೆಂಟ್​ ಯಶ್​ರನ್ನು 5 ಕೋಟಿಗೆ ಖರೀದಿಸಿದಾಗ 'ಹಣವನ್ನು ಚರಂಡಿಗೆ ಎಸೆದಿದೆ' ಎಂದು ಟೀಕಿಸಿದ್ದರು. ಆ ಸಮಯದಲ್ಲಿ ಎಲ್ಲರೂ ಯಶ್​ರನ್ನು ತಿರಸ್ಕರಿಸಿದ್ದರು. ಈಗ ಅದೇ ಜನರು ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ ಎಂದರು.

2023 ರ ಐಪಿಎಲ್​ ಆವೃತ್ತಿಯಲ್ಲಿ ಯಶ್​ ದಯಾಳ್​, ಕೊನೆಯ ಓವರ್​ನಲ್ಲಿ ರಿಂಕು ಸಿಂಗ್​ ಅವರಿಂದ ಸತತ ಐದು ಸಿಕ್ಸರ್​ ಬಾರಿಸಿಕೊಂಡು ಆಘಾತ ಅನುಭವಿಸಿದ್ದರು. ಇದು ಅವರ ಕ್ರಿಕೆಟ್​ ಬದುಕಿಗೆ ಮಾರಕವಾಗಿತ್ತು. ಆದರೆ, ಈ ಬಾರಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡು ಶಹಬ್ಬಾಸ್​ ಎನ್ನಿಸಿಕೊಂಡಿದ್ದಾರೆ. ಇದು ಆತನ ಜೀವಮಾನದಲ್ಲಿ ಎಂದಿಗೂ ಮರೆಯದ ಪಂದ್ಯವಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: 'ದೇವರ ಪ್ಲಾನ್ ಬೇಬಿ'​: ಯಶ್​ ದಯಾಳ್ ಅದ್ಭುತ ಬೌಲಿಂಗ್​ಗೆ ರಿಂಕು ಸಿಂಗ್ ಸೆಲ್ಯೂಟ್​ - Rinku Singh Post on Yash Dayal

ನವದೆಹಲಿ: ಐಪಿಎಲ್​ನಲ್ಲಿ ಈಚೆಗೆ ಬೌಲರ್​ಗಳಿಗೆ ಹೆಚ್ಚು ಮನ್ನಣೆ ಸಿಗುತ್ತಿಲ್ಲ. ಹೊಡಿಬಡಿ ಆಟದಲ್ಲಿ ಬ್ಯಾಟರ್​ಗಳೇ ರಾರಾಜಿಸುತ್ತಿದ್ದಾರೆ. ವಿಕೆಟ್​ ಪಡೆಯಲು ಎಂತಹ ಮಾರಕ ಬೌಲರ್​ ಕೂಡ ಪರದಾಡಬೇಕಿದೆ. ಕ್ರಿಕೆಟ್​ನ ನಿಯಮಗಳು ಬೌಲರ್​ಗಳಿಗೆ ಸಹಕಾರಿಯಾಗಿಲ್ಲ ಎಂಬ ಮಾತಿದೆ. ಇಂತೆಲ್ಲ ಲೋಪದ ನಡುವೆಯೂ ಯಶ್​ ದಯಾಳ್​ ಎಂಬ ಯುವ ಬೌಲರ್​ ಕ್ರಿಕೆಟ್​ನ ಕಣ್ಣು ಕುಕ್ಕಿಸಿದ್ದಾರೆ. ಒಂದೇ ರಾತ್ರಿಯಲ್ಲಿ ಕ್ರಿಕೆಟ್​ನ ಕಣ್ಮಣಿಯಾಗಿದ್ದಾರೆ.

ಅದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ. ಅಲ್ಲಿ ಎರಡು ಬದ್ಧವೈರಿಗಳಾದ ಸಿಎಸ್​ಕೆ ಮತ್ತು ಆರ್​ಸಿಬಿ ನಡುವೆ ಪಂದ್ಯ. ಪ್ಲೇಆಫ್​ಗೆ ಕ್ವಾಲಿಫೈ ಆಗಲು ಇತ್ತಂಡಗಳೂ ಮದಗಜಗಳಂತೆ ಹೋರಾಟ ನಡೆಸುತ್ತಿದ್ದವು. ಕೊನೆಯ ಓವರ್​ ಎಸೆಯಲು ಬಂದ ಯಶ್​ ದಯಾಳ್​, ಪಂದ್ಯವನ್ನು ಮಿಂಚಿನಂತೆ ಗೆಲ್ಲಿಸಿ ಆರ್​ಸಿಬಿಯ ಕೋಟ್ಯಂತರ ಅಭಿಮಾನಿಗಳಿಗೆ ದಯಾಳುವಾಗಿ ಕಂಗೊಳಿಸಿದರು.

ರೋಚಕ ಪಂದ್ಯ: ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಆಫ್​​ಗೆ ಅರ್ಹತೆ ಪಡೆಯಲು 6 ಎಸೆತಗಳಲ್ಲಿ 17 ರನ್ ಅಗತ್ಯವಿದ್ದಾಗ, ಬೌಲ್​ ಕೈಗೆತ್ತಿಕೊಂಡ ಯಶ್​ ದಯಾಳ್ ಸುತ್ತಲೂ ಕೂಗುತ್ತಿದ್ದ ಅಭಿಮಾನಿಗಳ ಆಸೆಗೆ ನೀರೆರೆಯುವ ಕೆಲಸ ಮಾಡಬೇಕಿತ್ತು. ಮೊದಲ ಎಸೆತದಲ್ಲೇ ಧೋನಿ ಭರ್ಜರಿ ಸಿಕ್ಸರ್​ ಬಾರಿಸಿದಾಗ ಎಲ್ಲರ ಎದೆ ಒಮ್ಮೆ ಧಸಕ್​ ಎಂದಿತು. 5 ಎಸೆತಗಳಲ್ಲಿ 12 ರನ್. ಇನ್ನೇನು ಪಂದ್ಯ ಕೈಬಿಟ್ಟಿತು. ಪ್ಲೇಆಫ್​ ಆಸೆ ನುಚ್ಚು ನೂರಾಯಿತು ಎಂದುಕೊಂಡಿದ್ದ ಅಭಿಮಾನಿಗಳಿಗೆ ಯಶ್​ ದಯಾಳ್​ ಕನಸಿನ ಗೆಲುವು ತಂದುಕೊಟ್ಟರು.

ಇನ್ನುಳಿದ ಐದು ಎಸೆತಗಳಲ್ಲಿ ಧೋನಿ ವಿಕೆಟ್​ ಸಹಿತ ಬಿಟ್ಟುಕೊಟ್ಟಿದ್ದು ಕೇವಲ 1 ರನ್​ ಮಾತ್ರ. ಇದರಿಂದ ತಂಡ 10 ರನ್​ಗಳಿಂದ ಮಣಿಸಿ ರಾಜಾರೋಷವಾಗಿ ಟಾಪ್​ ನಾಲ್ಕರಲ್ಲಿ ಸ್ಥಾನ ಪಡೆಯಿತು. ಇದೆಲ್ಲವನ್ನೂ ಸಾಧಿಸಿ ತೋರಿಸಿದ್ದು, ಕಳೆದ ಬಾರಿಯ ಆವೃತ್ತಿಯಲ್ಲಿ ಆಘಾತಕ್ಕೆ ಸಿಲುಕಿ ಟೂರ್ನಿಯಿಂದಲೇ ಹೊರಬಿದ್ದಿದ್ದ ಯಶ್​ ದಯಾಳ್​.

ಆರ್​ಸಿಬಿ ಎಂದೂ ಮರೆಯದ ಗೆಲುವು ತಂದುಕೊಟ್ಟಿರುವ ಯಶ್​​ ದಯಾಳ್​​ಗೆ ಈಗ ಅಭಿನಂದನೆಗಳ ಸುರಿಮಳೆಯೇ ಹರಿದುಬರುತ್ತಿದೆ. ಆದರೆ, ಈ ಆಟಗಾರ ತಂಡಕ್ಕೆ ಆಯ್ಕೆಯಾದಾಗ ಅದೆಷ್ಟೋ ಜನರು ಹೀನಾಮಾನವಾಗಿ ಜರಿದಿದ್ದರು. ಇವರಿಗೆ ಕೊಟ್ಟ 5 ಕೋಟಿ ರೂಪಾಯಿ ಆರ್​ಸಿಬಿ ಹಾಳು ಮಾಡಿಕೊಂಡಿತು ಎಂದು ಛೇಡಿಸಿದ್ದರು.

ಟೀಕಿಸಿದವರಿಂದಲೇ ಪ್ರಶಂಸೆ: ಪಂದ್ಯದ ಬಳಿಕ ಯಶ್ ದಯಾಳ್ ಅವರ ತಂದೆ ಮಾತನಾಡಿ, 'ಆರ್‌ಸಿಬಿ ಮ್ಯಾನೇಜ್​ಮೆಂಟ್​ ಯಶ್​ರನ್ನು 5 ಕೋಟಿಗೆ ಖರೀದಿಸಿದಾಗ 'ಹಣವನ್ನು ಚರಂಡಿಗೆ ಎಸೆದಿದೆ' ಎಂದು ಟೀಕಿಸಿದ್ದರು. ಆ ಸಮಯದಲ್ಲಿ ಎಲ್ಲರೂ ಯಶ್​ರನ್ನು ತಿರಸ್ಕರಿಸಿದ್ದರು. ಈಗ ಅದೇ ಜನರು ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ ಎಂದರು.

2023 ರ ಐಪಿಎಲ್​ ಆವೃತ್ತಿಯಲ್ಲಿ ಯಶ್​ ದಯಾಳ್​, ಕೊನೆಯ ಓವರ್​ನಲ್ಲಿ ರಿಂಕು ಸಿಂಗ್​ ಅವರಿಂದ ಸತತ ಐದು ಸಿಕ್ಸರ್​ ಬಾರಿಸಿಕೊಂಡು ಆಘಾತ ಅನುಭವಿಸಿದ್ದರು. ಇದು ಅವರ ಕ್ರಿಕೆಟ್​ ಬದುಕಿಗೆ ಮಾರಕವಾಗಿತ್ತು. ಆದರೆ, ಈ ಬಾರಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡು ಶಹಬ್ಬಾಸ್​ ಎನ್ನಿಸಿಕೊಂಡಿದ್ದಾರೆ. ಇದು ಆತನ ಜೀವಮಾನದಲ್ಲಿ ಎಂದಿಗೂ ಮರೆಯದ ಪಂದ್ಯವಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: 'ದೇವರ ಪ್ಲಾನ್ ಬೇಬಿ'​: ಯಶ್​ ದಯಾಳ್ ಅದ್ಭುತ ಬೌಲಿಂಗ್​ಗೆ ರಿಂಕು ಸಿಂಗ್ ಸೆಲ್ಯೂಟ್​ - Rinku Singh Post on Yash Dayal

Last Updated : May 20, 2024, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.