ETV Bharat / opinion

Explained: ಹಸೀನಾ ಮತ್ತು ಬಾಂಗ್ಲಾದೇಶದ ಸೇಂಟ್ ಮಾರ್ಟಿನ್ ದ್ವೀಪದ ಜಿಯೋಸ್ಟ್ರಾಟೆಜಿಕ್ ಪ್ರಾಮುಖ್ಯತೆ ಏನು? - HASINA AND ST MARTIN ISLAND

author img

By Aroonim Bhuyan

Published : Aug 12, 2024, 9:10 AM IST

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು, ತಮ್ಮನ್ನು ಈ ವಾರದ ಆರಂಭದಲ್ಲಿ ಅಧಿಕಾರದಿಂದ ಕೆಳಗಿಳಿಸಲು ಅಮೆರಿಕದ ಕುತಂತ್ರವೇ ಕಾರಣ ಎಂದು ಆರೋಪಿಸಿದ್ದಾರೆ. ಬಾಂಗ್ಲಾದೇಶದ ಸೇಂಟ್ ಮಾರ್ಟಿನ್ ದ್ವೀಪದಲ್ಲಿ ಸೇನಾ ನೆಲೆ ಪ್ರಾರಂಭಿಸಲು ಅವಕಾಶ ನೀಡಲು ನಿರಾಕರಿಸಿದ್ದಕ್ಕಾಗಿ ಅಮೆರಿಕ ಈ ರೀತಿ ಅಸಮಾಧಾನ ಹೊರಹಾಕಿದೆ ಎಂದು ಶೇಖ್ ಹಸೀನಾ ಅವರು ಅವಾಮಿ ಲೀಗ್‌ಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ. ಸೇಂಟ್ ಮಾರ್ಟಿನ್ ದ್ವೀಪದ ಕಾರ್ಯತಂತ್ರದ ಪ್ರಾಮುಖ್ಯತೆ ಏನು? ಈಟಿವಿ ಭಾರತದ ಅರೂನಿಮ್ ಭುಯಾನ್ ಈ ಕುರಿತ ಸಂಪೂರ್ಣ ವರದಿ ಪ್ರಸ್ತುತ ಪಡಿಸಿದ್ದಾರೆ.

Hasina And Martin Island SHEIKH HASINA  UNITED STATES  AWAMI LEAGUE
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (AP)

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಈ ವಾರದ ಆರಂಭದಲ್ಲಿ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ಅಮೆರಿಕವನ್ನು ದೂಷಿಸಿದ್ದಾರೆ. ವರದಿಗಳ ಪ್ರಕಾರ, ಬಾಂಗ್ಲಾದೇಶದ ಸೇಂಟ್ ಮಾರ್ಟಿನ್ ದ್ವೀಪವನ್ನು ಅಮೆರಿಕಕ್ಕೆ ಗುತ್ತಿಗೆಗೆ ನೀಡಲು ನಿರಾಕರಿಸಿದ ನಂತರ ತಮ್ಮನ್ನು ಅಧಿಕಾರದಿಂದ ಕೆಳಗಿಸಲು ವಾಷಿಂಗ್ಟನ್ ಸಂಚು ರೂಪಿಸಿದೆ ಎಂದು ಹಸೀನಾ ಆರೋಪಿಸಿದ್ದಾರೆ.

"ನಾನು ಸೇಂಟ್ ಮಾರ್ಟಿನ್ ಮತ್ತು ಬಂಗಾಳ ಕೊಲ್ಲಿಯನ್ನು ಅಮೆರಿಕಕ್ಕೆ ಬಿಟ್ಟಿದ್ದರೆ ಅಧಿಕಾರದಲ್ಲಿ ಉಳಿಯಬಹುದಿತ್ತು" ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ, ಕಳೆದ ಸೋಮವಾರ ಢಾಕಾದಿಂದ ಪಲಾಯನ ಮಾಡಿ ದೆಹಲಿಯ ಬಳಿ ವಾಸಿಸುತ್ತಿರುವ ಹಸೀನಾ ಅವರು ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಹಸೀನಾ ಅವರು ಅಮೆರಿಕವನ್ನು ಹೆಸರಿಸದೆ ಮಾಧ್ಯಮಗೋಷ್ಟಿಯಲ್ಲಿ ಸೇಂಟ್ ಮಾರ್ಟಿನ್ ದ್ವೀಪವನ್ನು ವಿದೇಶಿಯರಿಗೆ ಗುತ್ತಿಗೆ ನೀಡಿದರೆ ಅಧಿಕಾರದಲ್ಲಿ ಉಳಿಯಬಹುದು ಎಂದು ಹೇಳಿದ್ದರು. ಆದರೆ, ಅವರು ಅಧಿಕಾರದಲ್ಲಿ ಉಳಿಯಲು ಬಾಂಗ್ಲಾದೇಶದ ಪ್ರದೇಶವನ್ನು ಯಾರಿಗೂ ಗುತ್ತಿಗೆ ನೀಡಲಿಲ್ಲ.

ಢಾಕಾದಲ್ಲಿನ ಅಮೆರಿಕ ರಾಯಭಾರ ಕಚೇರಿಯ ವಕ್ತಾರ ಬ್ರಿಯಾನ್ ಷಿಲ್ಲರ್, ''ತಮ್ಮ ದೇಶ ಮತ್ತು ಬಾಂಗ್ಲಾದೇಶವು ಬಲವಾದ ಮತ್ತು ಸಹಕಾರಿ ಪಾಲುದಾರಿಕೆಗೆ ಬದ್ಧವಾಗಿದೆ" ಎಂದು ಹೇಳಿದ್ದಾರೆ. "ನಾವು ಬಾಂಗ್ಲಾದೇಶದ ಸಾರ್ವಭೌಮತ್ವವನ್ನು ಗೌರವಿಸುತ್ತೇವೆ ಮತ್ತು ಸೇಂಟ್ ಮಾರ್ಟಿನ್ ಸೇರಿದಂತೆ ದೇಶದ ಯಾವುದೇ ಭೂಪ್ರದೇಶವನ್ನು ಗುರಿಯಾಗಿಸಿಕೊಂಡಿಲ್ಲ " ಎಂದು ಸ್ಪಷ್ಟಪಡಿಸಿದ್ದಾರೆ.

ಸೇಂಟ್ ಮಾರ್ಟಿನ್ ದ್ವೀಪವು ನಿಖರವಾಗಿ ಎಲ್ಲಿದೆ; ಸೇಂಟ್ ಮಾರ್ಟಿನ್ ದ್ವೀಪವು ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ಮೂರು ಚದರ್​ ಕಿ.ಮೀ ವಿಸ್ತೀರ್ಣದ ಒಂದು ಸಣ್ಣ ದ್ವೀಪವಾಗಿದೆ. ಇದು ಕಾಕ್ಸ್ ಬಜಾರ್-ಟೆಕ್ನಾಫ್ ಪರ್ಯಾಯ ದ್ವೀಪದ ತುದಿಯಿಂದ ಸುಮಾರು ಒಂಬತ್ತು ಕಿ.ಮೀ ದಕ್ಷಿಣಕ್ಕೆ ಮತ್ತು ಬಾಂಗ್ಲಾದೇಶದ ದಕ್ಷಿಣದ ಭಾಗವನ್ನು ರೂಪಿಸುತ್ತದೆ. ಚೇರ್​​ ದ್ವೀಪ ಎಂದು ಕರೆಯಲ್ಪಡುವ ಎತ್ತರದ ಉಬ್ಬರವಿಳಿತದಲ್ಲಿ ಪ್ರತ್ಯೇಕವಾದ ಸಣ್ಣ ದ್ವೀಪವಿದೆ. ಇದು ಮ್ಯಾನ್ಮಾರ್‌ನ ವಾಯುವ್ಯ ಕರಾವಳಿಯ ಪಶ್ಚಿಮಕ್ಕೆ ಸುಮಾರು ಎಂಟು ಕಿ.ಮೀ, ನಾಫ್ ನದಿಯ ಮುಖಭಾಗದಲ್ಲಿದೆ. ಹಿಂದೆ, ದ್ವೀಪವು ಟೆಕ್ನಾಫ್ ಪರ್ಯಾಯ ದ್ವೀಪದ ವಿಸ್ತರಣೆಯಾಗಿತ್ತು. ಆದರೆ, ಈ ಪರ್ಯಾಯ ದ್ವೀಪದ ಒಂದು ಭಾಗವು ನಂತರ ಮುಳುಗಿತು. ಮತ್ತು ಹೀಗೆ ಮೇಲೆ ತಿಳಿಸಿದ ಪರ್ಯಾಯ ದ್ವೀಪದ ದಕ್ಷಿಣ ಭಾಗವು ದ್ವೀಪವಾಯಿತು ಮತ್ತು ಬಾಂಗ್ಲಾದೇಶದ ಮುಖ್ಯ ಭೂಭಾಗದಿಂದ ಸಂಪರ್ಕ ಕಡಿತಗೊಂಡಿತು.

ಅರೇಬಿಯನ್ ವ್ಯಾಪಾರಿಗಳು 18ನೇ ಶತಮಾನದಲ್ಲಿ ಮೊದಲು ದ್ವೀಪದಲ್ಲಿ ನೆಲೆಸಿದರು. ಮತ್ತು ಅದಕ್ಕೆ 'ಜಜಿರಾ' ಎಂದು ಹೆಸರಿಸಿದರು. ಬ್ರಿಟಿಷ್ ಆಕ್ರಮಣದ ಸಮಯದಲ್ಲಿ, ಈ ದ್ವೀಪಕ್ಕೆ ಅಂದಿನ ಚಿತ್ತಗಾಂಗ್‌ನ ಡೆಪ್ಯುಟಿ ಕಮಿಷನರ್ ಶ್ರೀ ಮಾರ್ಟಿನ್ ಅವರ ಹೆಸರನ್ನು ಸೇಂಟ್ ಮಾರ್ಟಿನ್ ದ್ವೀಪ ಎಂದು ಹೆಸರಿಸಲಾಯಿತು. ದ್ವೀಪದ ಸ್ಥಳೀಯ ಹೆಸರುಗಳು ನರಿಕೆಲ್ ಜಿಂಜಿರಾ ಅಂದರೆ 'ತೆಂಗಿನ ದ್ವೀಪ' ಮತ್ತು ದಾರುಚಿನಿ ದ್ವೀಪ ಎಂದರೆ 'ದಾಲ್ಚಿನ್ನಿ ದ್ವೀಪ'. ಇದು ಬಾಂಗ್ಲಾದೇಶದ ಏಕೈಕ ಹವಳ ದ್ವೀಪವಾಗಿದೆ.

ದ್ವೀಪದ ಬಹುತೇಕ 3,700 ನಿವಾಸಿಗಳು ಪ್ರಾಥಮಿಕವಾಗಿ ಮೀನುಗಾರಿಕೆಯನ್ನು ನಂಬಿಕೊಂಡು ವಾಸಿಸುತ್ತಿದ್ದಾರೆ. ಅಕ್ಕಿ ಮತ್ತು ತೆಂಗಿನಕಾಯಿ ಸೇರಿದಂತೆ ಇತರ ಮುಖ್ಯ ಬೆಳೆಗಳು ದ್ವೀಪದಲ್ಲಿ ತುಂಬಾ ಸಾಮಾನ್ಯವಾಗಿದ್ದು, ಪಾಚಿಗಳನ್ನು ಸಂಗ್ರಹಿಸಿ, ಒಣಗಿಸಿ ಮತ್ತು ಮ್ಯಾನ್ಮಾರ್‌ಗೆ ರಫ್ತು ಮಾಡಲಾಗುತ್ತದೆ. ಅಕ್ಟೋಬರ್ ಮತ್ತು ಏಪ್ರಿಲ್ ನಡುವೆ, ನೆರೆಯ ಪ್ರದೇಶಗಳ ಮೀನುಗಾರರು ತಾವು ಹಿಡಿದ ಮೀನುಗಳನ್ನು ದ್ವೀಪದ ತಾತ್ಕಾಲಿಕ ಸಗಟು ಮಾರುಕಟ್ಟೆಗೆ ತರುತ್ತಾರೆ. ಆದಾಗ್ಯೂ, ಚಿಕನ್, ಮಾಂಸ ಮತ್ತು ಇತರ ಆಹಾರಗಳ ಆಮದುಗಳು ಮುಖ್ಯ ಭೂಭಾಗ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ಬರುತ್ತವೆ. ಮಧ್ಯ ಮತ್ತು ದಕ್ಷಿಣವು ಮುಖ್ಯವಾಗಿ ಕೃಷಿಭೂಮಿ ಹೊಂದಿದೆ. ಮಳೆಗಾಲದಲ್ಲಿ, ಬಂಗಾಳಕೊಲ್ಲಿಯಲ್ಲಿನ ಅಪಾಯಕಾರಿ ಪರಿಸ್ಥಿತಿಗಳಿಂದಾಗಿ ನಿವಾಸಿಗಳು ಮುಖ್ಯಭೂಮಿಗೆ (ಟೆಕ್ನಾಫ್) ಹೋಗಲು ಅವಕಾಶವಿಲ್ಲ ಮತ್ತು ಅವರ ಜೀವನವು ಅಪಾಯಕಾರಿಯಾಗಿರುತ್ತದೆ.

ಸೇಂಟ್ ಮಾರ್ಟಿನ್ ದ್ವೀಪದ ಕಾರ್ಯತಂತ್ರದ ಪ್ರಾಮುಖ್ಯತೆ ಏನು; ಅದರ ಸಣ್ಣ ಗಾತ್ರದ ಹೊರತಾಗಿಯೂ, ಸೇಂಟ್ ಮಾರ್ಟಿನ್ ದ್ವೀಪವು ಅದರ ಭೌಗೋಳಿಕ ರಾಜಕೀಯ ಸ್ಥಳ, ಆರ್ಥಿಕ ಸಾಮರ್ಥ್ಯ ಮತ್ತು ಪರಿಸರ ಪ್ರಾಮುಖ್ಯತೆಯಿಂದಾಗಿ ಬಾಂಗ್ಲಾದೇಶಕ್ಕೆ ಮಹತ್ವದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ. ದ್ವೀಪವು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಕಡಲ ಗಡಿಗಳ ಬಳಿ ಆಯಕಟ್ಟಿನ ಸ್ಥಳವಾಗಿದೆ ಮತ್ತು ಇದು ವಿಶ್ವದ ಕೆಲವು ಜನನಿಬಿಡ ಸಮುದ್ರ ಮಾರ್ಗಗಳಿಗೆ ಹತ್ತಿರದಲ್ಲಿದೆ.

ಬಂಗಾಳಕೊಲ್ಲಿಯ ಅಂತರಾಷ್ಟ್ರೀಯ ಸಮುದ್ರ ಮಾರ್ಗಗಳಿಗೆ ಈ ಸಾಮೀಪ್ಯವು ಪ್ರಾದೇಶಿಕ ಭೌಗೋಳಿಕ ರಾಜಕೀಯದಲ್ಲಿ ದ್ವೀಪಕ್ಕೆ ನಿರ್ಣಾಯಕ ಸ್ಥಾನವನ್ನು ನೀಡುತ್ತದೆ. ದ್ವೀಪದ ಮೇಲಿನ ನಿಯಂತ್ರಣವು ಬಾಂಗ್ಲಾದೇಶಕ್ಕೆ ಈ ನಿರ್ಣಾಯಕ ಸಮುದ್ರ ಮಾರ್ಗಗಳ ಮೇಲೆ ಪ್ರಭಾವ ಬೀರಲು ಅನುವು ಮಾಡಿಕೊಡುತ್ತದೆ. ಬಂಗಾಳಕೊಲ್ಲಿಯಲ್ಲಿ ಅದರ ಕಡಲ ಭದ್ರತೆ ಮತ್ತು ಕಾರ್ಯತಂತ್ರದ ಆಳವನ್ನು ಹೆಚ್ಚಿಸುತ್ತದೆ. ಸೇಂಟ್ ಮಾರ್ಟಿನ್ ದ್ವೀಪದ ಸ್ಥಳವು ಪ್ರಾದೇಶಿಕ ಕಡಲ ವಿವಾದಗಳ ಸಂದರ್ಭದಲ್ಲಿ ಕೇಂದ್ರಬಿಂದುವಾಗಿದೆ. ಈ ವರ್ಷದ ಜೂನ್‌ನಲ್ಲಿ, ಟೆಕ್ನಾಫ್‌ನಿಂದ ಸೇಂಟ್ ಮಾರ್ಟಿನ್‌ಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಾಂಗ್ಲಾದೇಶದ ಹಡಗುಗಳ ಮೇಲೆ ಮ್ಯಾನ್ಮಾರ್ ಸಶಸ್ತ್ರ ಪಡೆಗಳು ಗುಂಡು ಹಾರಿಸಿ, ಮುಖ್ಯ ಭೂಭಾಗ ಮತ್ತು ದ್ವೀಪದ ನಡುವಿನ ಸಾರಿಗೆಯನ್ನು ಸ್ಥಗಿತಗೊಳಿಸಿದವು.

"ಇದಾದ ಕೆಲವೇ ದಿನಗಳಲ್ಲಿ, ಸೇಂಟ್ ಮಾರ್ಟಿನ್ ಕರಾವಳಿಯಲ್ಲಿ ಮ್ಯಾನ್ಮಾರ್ ನೌಕಾಪಡೆಯ ಮೂರು ಹಡಗುಗಳು ದ್ವೀಪದ ನಿವಾಸಿಗಳನ್ನು ಹೆದರಿಸುತ್ತಿರುವುದು ಕಂಡುಬಂದಿದೆ" ಎಂದು ಬಾಂಗ್ಲಾದೇಶದ ಪ್ರಸಿದ್ಧ ಬರಹಗಾರ ಮತ್ತು ಮಾಜಿ ನಾಗರಿಕ ಸೇವಕ ಹಸ್ನತ್ ಅಬ್ದುಲ್ ಹೈ ಜೂನ್‌ನಲ್ಲಿ ಬಾಂಗ್ಲಾದೇಶದ ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. "ಮ್ಯಾನ್ಮಾರ್ ಪಡೆಗಳು ಅರಾಕನ್ ಬಂಡುಕೋರರನ್ನು ಗುರಿಯಾಗಿಸಿಕೊಂಡು ವಿವೇಚನಾರಹಿತ ಗುಂಡು ಹಾರಿಸಿದ ಕಾರಣ ಒಂಬತ್ತು ದಿನಗಳ ಕಾಲ ದ್ವೀಪವಾಸಿಗಳ ಆಹಾರ ಮತ್ತು ಔಷಧಿಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಯಿತು.

ಸೇಂಟ್ ಮಾರ್ಟಿನ್ ದ್ವೀಪವು ಬಂಗಾಳಕೊಲ್ಲಿಯಲ್ಲಿನ ಪ್ರಾದೇಶಿಕ ಮಿತಿಗಳ ಮೇಲೆ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಸ್ಪರ್ಧಾತ್ಮಕ ಹಕ್ಕುಗಳೊಂದಿಗೆ ಪ್ರಾಮುಖ್ಯತೆಯ ಹೊಸ ಸ್ಥಾನಮಾನವನ್ನು ಪಡೆದುಕೊಂಡಿದೆ. ಕೊಲ್ಲಿಯಲ್ಲಿ ತೈಲ ಮತ್ತು ಅನಿಲವನ್ನು ಕಂಡುಹಿಡಿಯುವ ಹಿನ್ನೆಲೆ ಕೊಲ್ಲಿಯಲ್ಲಿ ಮಾಲೀಕತ್ವ ಮತ್ತು ಸಾರ್ವಭೌಮತ್ವವನ್ನು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿತು" ಎಂದು ಲೇಖನದಲ್ಲಿ ತಿಳಿಸಿದ್ದರು. ಕಡಲ ಗಡಿಯ ವಿವಾದವನ್ನು ನಿರ್ಣಯಿಸಿದ ಯುಎನ್ ನ್ಯಾಯಾಲಯವು ಸೇಂಟ್ ಮಾರ್ಟಿನ್ ಅನ್ನು ಎರಡು ದೇಶಗಳ ನಡುವಿನ ಕಡಲ ಗಡಿಯನ್ನು ಡಿಲಿಮಿಟ್ ಮಾಡಲು ಆಧಾರವಾಗಿ ತೆಗೆದುಕೊಂಡಿತು.

ವೀಕ್ಷಕರ ಪ್ರಕಾರ, ಬಾಂಗ್ಲಾದೇಶವು ಸೇಂಟ್ ಮಾರ್ಟಿನ್ ಮಾಲೀಕತ್ವದ ಕಾರಣದಿಂದಾಗಿ ಕೊಲ್ಲಿಯ 128,600 ನಾಟಿಕಲ್ ಮೈಲುಗಳಿಗಿಂತ ಹೆಚ್ಚಿನದನ್ನು ಪಡೆದುಕೊಂಡಿದೆ. ಇದು ಮ್ಯಾನ್ಮಾರ್ ಸೇಂಟ್ ಮಾರ್ಟಿನ್ ದ್ವೀಪವನ್ನು ಕಾಮಾಲೆಯ ಕಣ್ಣಿನಿಂದ ನೋಡುವಂತೆ ಮಾಡಿದ ಟಿಪ್ಪಿಂಗ್ ಪಾಯಿಂಟ್ ಆಗಿರಬಹುದು. 2018ರಲ್ಲಿ ಮ್ಯಾನ್ಮಾರ್‌ನ ಜನಸಂಖ್ಯೆಯ ಸಚಿವಾಲಯವು ತಮ್ಮ ವೆಬ್‌ಸೈಟ್‌ನಲ್ಲಿ ಸೇಂಟ್ ಮಾರ್ಟಿನ್ ಅನ್ನು ತಮ್ಮ ಪ್ರಾದೇಶಿಕ ಮಿತಿಯಲ್ಲಿ ತೋರಿಸುವ ನಕ್ಷೆಯನ್ನು ಹಾಕಿತು. ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ಪ್ರತಿಭಟನೆಯ ನಂತರ, ನಕ್ಷೆಯನ್ನು ತೆಗೆದುಹಾಕಲಾಯಿತು.

ಸೇಂಟ್ ಮಾರ್ಟಿನ್ ದ್ವೀಪದ ಬಗ್ಗೆ ಅಮೆರಿಕ ಏಕೆ ಆಸಕ್ತಿ ವಹಿಸಿದೆ; ಸೇಂಟ್ ಮಾರ್ಟಿನ್ ದ್ವೀಪವು ಬಂಗಾಳ ಕೊಲ್ಲಿಯಲ್ಲಿ ನೆಲೆಗೊಂಡಿದೆ. ಇದು ವಾಷಿಂಗ್ಟನ್‌ನ ವಿಶಾಲವಾದ ಇಂಡೋ-ಪೆಸಿಫಿಕ್ ಕಾರ್ಯತಂತ್ರದಲ್ಲಿ ನಿರ್ಣಾಯಕ ಪ್ರದೇಶವಾಗಿದೆ. ಇಂಡೋ-ಪೆಸಿಫಿಕ್ ಅಮೆರಿಕ ಕಾರ್ಯತಂತ್ರದ ನೀತಿಯ ಕೇಂದ್ರಬಿಂದುವಾಗಿದೆ. ವಿಶೇಷವಾಗಿ ಚೀನಾದ ಪ್ರಭಾವದ ಬೆಳವಣಿಗೆಯ ಸಂದರ್ಭದಲ್ಲಿ ಬಂಗಾಳಕೊಲ್ಲಿಯು ಹಿಂದೂ ಮಹಾಸಾಗರವನ್ನು ಆಗ್ನೇಯ ಏಷ್ಯಾದೊಂದಿಗೆ ಮತ್ತು ವಿಸ್ತರಣೆಯ ಮೂಲಕ ವಿಶಾಲವಾದ ಪೆಸಿಫಿಕ್ ಪ್ರದೇಶದೊಂದಿಗೆ ಸಂಪರ್ಕಿಸುವ ನಿರ್ಣಾಯಕ ಕಡಲ ವಲಯವಾಗಿ ಕಾರ್ಯನಿರ್ವಹಿಸುತ್ತದೆ.

ಜಪಾನ್‌ನ ಪೂರ್ವ ಕರಾವಳಿಯಿಂದ ವ್ಯಾಪಿಸಿರುವ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯವನ್ನು ಎದುರಿಸಲು ಮುಕ್ತ ಇಂಡೋ-ಪೆಸಿಫಿಕ್ ಅನ್ನು ಖಚಿತಪಡಿಸಿಕೊಳ್ಳಲು ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿರುವ ಚತುರ್ಭುಜ ಭದ್ರತಾ ಸಂವಾದವನ್ನು ಅಮೆರಿಕ ಸಾಮಾನ್ಯವಾಗಿ ಕ್ವಾಡ್ ಎಂದು ಕರೆಯಲಾಗುತ್ತದೆ. ಬಂಗಾಳ ಕೊಲ್ಲಿಯ ಮೂಲಕ ಹಾದುಹೋಗುವ ಪ್ರಮುಖ ಕಡಲ ಮಾರ್ಗಗಳಿಗೆ ದ್ವೀಪದ ಸಾಮೀಪ್ಯವು ಜಾಗತಿಕ ವ್ಯಾಪಾರಕ್ಕೆ ಪ್ರಮುಖವಾದ ಈ ಸಮುದ್ರ ಮಾರ್ಗಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇದು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ. ಬಾಂಗ್ಲಾದೇಶದ ಶೈಕ್ಷಣಿಕ ಮತ್ತು ಕಾರ್ಯಕರ್ತ ಶರಿನ್ ಶಾಜಹಾನ್ ನವೋಮಿ ಪ್ರಕಾರ, ವಾಯುನೆಲೆ ಸ್ಥಾಪಿಸಲು ಸೇಂಟ್ ಮಾರ್ಟಿನ್ ದ್ವೀಪವನ್ನು ಗುತ್ತಿಗೆಗೆ ತೆಗೆದುಕೊಳ್ಳಲು ಬಾಂಗ್ಲಾದೇಶಕ್ಕೆ ಅಮೆರಿಕ ದೀರ್ಘಕಾಲದಿಂದ ಪ್ರಸ್ತಾಪ ಮಾಡುತ್ತಿದೆ. ಪ್ರಸ್ತುತ ಹಸೀನಾ ನೀಡಿರುವ ಹೇಳಿಕೆಯಲ್ಲಿ ಹುರುಳಿದೆ" ಎಂದು ನವೋಮಿ ಈಟಿವಿ ಭಾರತಕ್ಕೆ ತಿಳಿಸಿದರು.

ವಾಸ್ತವವಾಗಿ, ಹಸೀನಾ ಅವರು ಈ ವರ್ಷದ ಜನವರಿಯಲ್ಲಿ ತಮ್ಮ ದೇಶದಲ್ಲಿ ನಡೆದ ಸಂಸತ್ತಿನ ಚುನಾವಣೆಯ ಪೂರ್ವದಲ್ಲಿ ಅಮೆರಿಕ ಹಸ್ತಕ್ಷೇಪವನ್ನು ಆರೋಪಿಸಿದ್ದರು. ಈ ವರ್ಷದ ಜನವರಿಯಲ್ಲಿ ನಡೆದ ಬಾಂಗ್ಲಾದೇಶದ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಂತರ ಸರ್ಕಾರವನ್ನು ಸ್ಥಾಪಿಸುವ ವಿರೋಧ ಪಕ್ಷಗಳ ಬೇಡಿಕೆಯನ್ನು ಒಪ್ಪಿಕೊಳ್ಳಲು ಅವರು ನಿರಂತರವಾಗಿ ನಿರಾಕರಿಸಿದರು. ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಇತರ ಪಾಶ್ಚಿಮಾತ್ಯ ಶಕ್ತಿಗಳು ವಿರೋಧದ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಮನವೊಲಿಸಿದರು. ಆಂತರಿಕ ವಿಷಯದಲ್ಲಿ ಹೊರಗಿನವರ ಹಸ್ತಕ್ಷೇಪ ಮಾಡುವುದನ್ನು ತಳ್ಳಿಹಾಕಿದರು. ಹಸೀನಾ ಅವರು ಭಾರತದಿಂದ ಅವಾಮಿ ಲೀಗ್‌ಗೆ ಮಾಡಿದ ಸಂದೇಶದಲ್ಲಿ ಅಮೆರಿಕ ವಿರುದ್ಧದ ಆರೋಪಗಳು ಭಾನುವಾರವಷ್ಟೇ ಬೆಳಕಿಗೆ ಬಂದಿವೆ. ಇದಕ್ಕೆ ವಾಷಿಂಗ್ಟನ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಹಸೀನಾ ಆಡಳಿತದ ಪತನ: ಭಾರತದ ಭದ್ರತೆ ಮೇಲೆ ಬೀರುವ ಪರಿಣಾಮಗಳೇನು?; ಇಲ್ಲಿದೆ ಫುಲ್​ ಡಿಟೇಲ್ಸ್​! - India Bangladesh next decisions

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಈ ವಾರದ ಆರಂಭದಲ್ಲಿ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ಅಮೆರಿಕವನ್ನು ದೂಷಿಸಿದ್ದಾರೆ. ವರದಿಗಳ ಪ್ರಕಾರ, ಬಾಂಗ್ಲಾದೇಶದ ಸೇಂಟ್ ಮಾರ್ಟಿನ್ ದ್ವೀಪವನ್ನು ಅಮೆರಿಕಕ್ಕೆ ಗುತ್ತಿಗೆಗೆ ನೀಡಲು ನಿರಾಕರಿಸಿದ ನಂತರ ತಮ್ಮನ್ನು ಅಧಿಕಾರದಿಂದ ಕೆಳಗಿಸಲು ವಾಷಿಂಗ್ಟನ್ ಸಂಚು ರೂಪಿಸಿದೆ ಎಂದು ಹಸೀನಾ ಆರೋಪಿಸಿದ್ದಾರೆ.

"ನಾನು ಸೇಂಟ್ ಮಾರ್ಟಿನ್ ಮತ್ತು ಬಂಗಾಳ ಕೊಲ್ಲಿಯನ್ನು ಅಮೆರಿಕಕ್ಕೆ ಬಿಟ್ಟಿದ್ದರೆ ಅಧಿಕಾರದಲ್ಲಿ ಉಳಿಯಬಹುದಿತ್ತು" ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ, ಕಳೆದ ಸೋಮವಾರ ಢಾಕಾದಿಂದ ಪಲಾಯನ ಮಾಡಿ ದೆಹಲಿಯ ಬಳಿ ವಾಸಿಸುತ್ತಿರುವ ಹಸೀನಾ ಅವರು ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಹಸೀನಾ ಅವರು ಅಮೆರಿಕವನ್ನು ಹೆಸರಿಸದೆ ಮಾಧ್ಯಮಗೋಷ್ಟಿಯಲ್ಲಿ ಸೇಂಟ್ ಮಾರ್ಟಿನ್ ದ್ವೀಪವನ್ನು ವಿದೇಶಿಯರಿಗೆ ಗುತ್ತಿಗೆ ನೀಡಿದರೆ ಅಧಿಕಾರದಲ್ಲಿ ಉಳಿಯಬಹುದು ಎಂದು ಹೇಳಿದ್ದರು. ಆದರೆ, ಅವರು ಅಧಿಕಾರದಲ್ಲಿ ಉಳಿಯಲು ಬಾಂಗ್ಲಾದೇಶದ ಪ್ರದೇಶವನ್ನು ಯಾರಿಗೂ ಗುತ್ತಿಗೆ ನೀಡಲಿಲ್ಲ.

ಢಾಕಾದಲ್ಲಿನ ಅಮೆರಿಕ ರಾಯಭಾರ ಕಚೇರಿಯ ವಕ್ತಾರ ಬ್ರಿಯಾನ್ ಷಿಲ್ಲರ್, ''ತಮ್ಮ ದೇಶ ಮತ್ತು ಬಾಂಗ್ಲಾದೇಶವು ಬಲವಾದ ಮತ್ತು ಸಹಕಾರಿ ಪಾಲುದಾರಿಕೆಗೆ ಬದ್ಧವಾಗಿದೆ" ಎಂದು ಹೇಳಿದ್ದಾರೆ. "ನಾವು ಬಾಂಗ್ಲಾದೇಶದ ಸಾರ್ವಭೌಮತ್ವವನ್ನು ಗೌರವಿಸುತ್ತೇವೆ ಮತ್ತು ಸೇಂಟ್ ಮಾರ್ಟಿನ್ ಸೇರಿದಂತೆ ದೇಶದ ಯಾವುದೇ ಭೂಪ್ರದೇಶವನ್ನು ಗುರಿಯಾಗಿಸಿಕೊಂಡಿಲ್ಲ " ಎಂದು ಸ್ಪಷ್ಟಪಡಿಸಿದ್ದಾರೆ.

ಸೇಂಟ್ ಮಾರ್ಟಿನ್ ದ್ವೀಪವು ನಿಖರವಾಗಿ ಎಲ್ಲಿದೆ; ಸೇಂಟ್ ಮಾರ್ಟಿನ್ ದ್ವೀಪವು ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ಮೂರು ಚದರ್​ ಕಿ.ಮೀ ವಿಸ್ತೀರ್ಣದ ಒಂದು ಸಣ್ಣ ದ್ವೀಪವಾಗಿದೆ. ಇದು ಕಾಕ್ಸ್ ಬಜಾರ್-ಟೆಕ್ನಾಫ್ ಪರ್ಯಾಯ ದ್ವೀಪದ ತುದಿಯಿಂದ ಸುಮಾರು ಒಂಬತ್ತು ಕಿ.ಮೀ ದಕ್ಷಿಣಕ್ಕೆ ಮತ್ತು ಬಾಂಗ್ಲಾದೇಶದ ದಕ್ಷಿಣದ ಭಾಗವನ್ನು ರೂಪಿಸುತ್ತದೆ. ಚೇರ್​​ ದ್ವೀಪ ಎಂದು ಕರೆಯಲ್ಪಡುವ ಎತ್ತರದ ಉಬ್ಬರವಿಳಿತದಲ್ಲಿ ಪ್ರತ್ಯೇಕವಾದ ಸಣ್ಣ ದ್ವೀಪವಿದೆ. ಇದು ಮ್ಯಾನ್ಮಾರ್‌ನ ವಾಯುವ್ಯ ಕರಾವಳಿಯ ಪಶ್ಚಿಮಕ್ಕೆ ಸುಮಾರು ಎಂಟು ಕಿ.ಮೀ, ನಾಫ್ ನದಿಯ ಮುಖಭಾಗದಲ್ಲಿದೆ. ಹಿಂದೆ, ದ್ವೀಪವು ಟೆಕ್ನಾಫ್ ಪರ್ಯಾಯ ದ್ವೀಪದ ವಿಸ್ತರಣೆಯಾಗಿತ್ತು. ಆದರೆ, ಈ ಪರ್ಯಾಯ ದ್ವೀಪದ ಒಂದು ಭಾಗವು ನಂತರ ಮುಳುಗಿತು. ಮತ್ತು ಹೀಗೆ ಮೇಲೆ ತಿಳಿಸಿದ ಪರ್ಯಾಯ ದ್ವೀಪದ ದಕ್ಷಿಣ ಭಾಗವು ದ್ವೀಪವಾಯಿತು ಮತ್ತು ಬಾಂಗ್ಲಾದೇಶದ ಮುಖ್ಯ ಭೂಭಾಗದಿಂದ ಸಂಪರ್ಕ ಕಡಿತಗೊಂಡಿತು.

ಅರೇಬಿಯನ್ ವ್ಯಾಪಾರಿಗಳು 18ನೇ ಶತಮಾನದಲ್ಲಿ ಮೊದಲು ದ್ವೀಪದಲ್ಲಿ ನೆಲೆಸಿದರು. ಮತ್ತು ಅದಕ್ಕೆ 'ಜಜಿರಾ' ಎಂದು ಹೆಸರಿಸಿದರು. ಬ್ರಿಟಿಷ್ ಆಕ್ರಮಣದ ಸಮಯದಲ್ಲಿ, ಈ ದ್ವೀಪಕ್ಕೆ ಅಂದಿನ ಚಿತ್ತಗಾಂಗ್‌ನ ಡೆಪ್ಯುಟಿ ಕಮಿಷನರ್ ಶ್ರೀ ಮಾರ್ಟಿನ್ ಅವರ ಹೆಸರನ್ನು ಸೇಂಟ್ ಮಾರ್ಟಿನ್ ದ್ವೀಪ ಎಂದು ಹೆಸರಿಸಲಾಯಿತು. ದ್ವೀಪದ ಸ್ಥಳೀಯ ಹೆಸರುಗಳು ನರಿಕೆಲ್ ಜಿಂಜಿರಾ ಅಂದರೆ 'ತೆಂಗಿನ ದ್ವೀಪ' ಮತ್ತು ದಾರುಚಿನಿ ದ್ವೀಪ ಎಂದರೆ 'ದಾಲ್ಚಿನ್ನಿ ದ್ವೀಪ'. ಇದು ಬಾಂಗ್ಲಾದೇಶದ ಏಕೈಕ ಹವಳ ದ್ವೀಪವಾಗಿದೆ.

ದ್ವೀಪದ ಬಹುತೇಕ 3,700 ನಿವಾಸಿಗಳು ಪ್ರಾಥಮಿಕವಾಗಿ ಮೀನುಗಾರಿಕೆಯನ್ನು ನಂಬಿಕೊಂಡು ವಾಸಿಸುತ್ತಿದ್ದಾರೆ. ಅಕ್ಕಿ ಮತ್ತು ತೆಂಗಿನಕಾಯಿ ಸೇರಿದಂತೆ ಇತರ ಮುಖ್ಯ ಬೆಳೆಗಳು ದ್ವೀಪದಲ್ಲಿ ತುಂಬಾ ಸಾಮಾನ್ಯವಾಗಿದ್ದು, ಪಾಚಿಗಳನ್ನು ಸಂಗ್ರಹಿಸಿ, ಒಣಗಿಸಿ ಮತ್ತು ಮ್ಯಾನ್ಮಾರ್‌ಗೆ ರಫ್ತು ಮಾಡಲಾಗುತ್ತದೆ. ಅಕ್ಟೋಬರ್ ಮತ್ತು ಏಪ್ರಿಲ್ ನಡುವೆ, ನೆರೆಯ ಪ್ರದೇಶಗಳ ಮೀನುಗಾರರು ತಾವು ಹಿಡಿದ ಮೀನುಗಳನ್ನು ದ್ವೀಪದ ತಾತ್ಕಾಲಿಕ ಸಗಟು ಮಾರುಕಟ್ಟೆಗೆ ತರುತ್ತಾರೆ. ಆದಾಗ್ಯೂ, ಚಿಕನ್, ಮಾಂಸ ಮತ್ತು ಇತರ ಆಹಾರಗಳ ಆಮದುಗಳು ಮುಖ್ಯ ಭೂಭಾಗ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ಬರುತ್ತವೆ. ಮಧ್ಯ ಮತ್ತು ದಕ್ಷಿಣವು ಮುಖ್ಯವಾಗಿ ಕೃಷಿಭೂಮಿ ಹೊಂದಿದೆ. ಮಳೆಗಾಲದಲ್ಲಿ, ಬಂಗಾಳಕೊಲ್ಲಿಯಲ್ಲಿನ ಅಪಾಯಕಾರಿ ಪರಿಸ್ಥಿತಿಗಳಿಂದಾಗಿ ನಿವಾಸಿಗಳು ಮುಖ್ಯಭೂಮಿಗೆ (ಟೆಕ್ನಾಫ್) ಹೋಗಲು ಅವಕಾಶವಿಲ್ಲ ಮತ್ತು ಅವರ ಜೀವನವು ಅಪಾಯಕಾರಿಯಾಗಿರುತ್ತದೆ.

ಸೇಂಟ್ ಮಾರ್ಟಿನ್ ದ್ವೀಪದ ಕಾರ್ಯತಂತ್ರದ ಪ್ರಾಮುಖ್ಯತೆ ಏನು; ಅದರ ಸಣ್ಣ ಗಾತ್ರದ ಹೊರತಾಗಿಯೂ, ಸೇಂಟ್ ಮಾರ್ಟಿನ್ ದ್ವೀಪವು ಅದರ ಭೌಗೋಳಿಕ ರಾಜಕೀಯ ಸ್ಥಳ, ಆರ್ಥಿಕ ಸಾಮರ್ಥ್ಯ ಮತ್ತು ಪರಿಸರ ಪ್ರಾಮುಖ್ಯತೆಯಿಂದಾಗಿ ಬಾಂಗ್ಲಾದೇಶಕ್ಕೆ ಮಹತ್ವದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ. ದ್ವೀಪವು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಕಡಲ ಗಡಿಗಳ ಬಳಿ ಆಯಕಟ್ಟಿನ ಸ್ಥಳವಾಗಿದೆ ಮತ್ತು ಇದು ವಿಶ್ವದ ಕೆಲವು ಜನನಿಬಿಡ ಸಮುದ್ರ ಮಾರ್ಗಗಳಿಗೆ ಹತ್ತಿರದಲ್ಲಿದೆ.

ಬಂಗಾಳಕೊಲ್ಲಿಯ ಅಂತರಾಷ್ಟ್ರೀಯ ಸಮುದ್ರ ಮಾರ್ಗಗಳಿಗೆ ಈ ಸಾಮೀಪ್ಯವು ಪ್ರಾದೇಶಿಕ ಭೌಗೋಳಿಕ ರಾಜಕೀಯದಲ್ಲಿ ದ್ವೀಪಕ್ಕೆ ನಿರ್ಣಾಯಕ ಸ್ಥಾನವನ್ನು ನೀಡುತ್ತದೆ. ದ್ವೀಪದ ಮೇಲಿನ ನಿಯಂತ್ರಣವು ಬಾಂಗ್ಲಾದೇಶಕ್ಕೆ ಈ ನಿರ್ಣಾಯಕ ಸಮುದ್ರ ಮಾರ್ಗಗಳ ಮೇಲೆ ಪ್ರಭಾವ ಬೀರಲು ಅನುವು ಮಾಡಿಕೊಡುತ್ತದೆ. ಬಂಗಾಳಕೊಲ್ಲಿಯಲ್ಲಿ ಅದರ ಕಡಲ ಭದ್ರತೆ ಮತ್ತು ಕಾರ್ಯತಂತ್ರದ ಆಳವನ್ನು ಹೆಚ್ಚಿಸುತ್ತದೆ. ಸೇಂಟ್ ಮಾರ್ಟಿನ್ ದ್ವೀಪದ ಸ್ಥಳವು ಪ್ರಾದೇಶಿಕ ಕಡಲ ವಿವಾದಗಳ ಸಂದರ್ಭದಲ್ಲಿ ಕೇಂದ್ರಬಿಂದುವಾಗಿದೆ. ಈ ವರ್ಷದ ಜೂನ್‌ನಲ್ಲಿ, ಟೆಕ್ನಾಫ್‌ನಿಂದ ಸೇಂಟ್ ಮಾರ್ಟಿನ್‌ಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಾಂಗ್ಲಾದೇಶದ ಹಡಗುಗಳ ಮೇಲೆ ಮ್ಯಾನ್ಮಾರ್ ಸಶಸ್ತ್ರ ಪಡೆಗಳು ಗುಂಡು ಹಾರಿಸಿ, ಮುಖ್ಯ ಭೂಭಾಗ ಮತ್ತು ದ್ವೀಪದ ನಡುವಿನ ಸಾರಿಗೆಯನ್ನು ಸ್ಥಗಿತಗೊಳಿಸಿದವು.

"ಇದಾದ ಕೆಲವೇ ದಿನಗಳಲ್ಲಿ, ಸೇಂಟ್ ಮಾರ್ಟಿನ್ ಕರಾವಳಿಯಲ್ಲಿ ಮ್ಯಾನ್ಮಾರ್ ನೌಕಾಪಡೆಯ ಮೂರು ಹಡಗುಗಳು ದ್ವೀಪದ ನಿವಾಸಿಗಳನ್ನು ಹೆದರಿಸುತ್ತಿರುವುದು ಕಂಡುಬಂದಿದೆ" ಎಂದು ಬಾಂಗ್ಲಾದೇಶದ ಪ್ರಸಿದ್ಧ ಬರಹಗಾರ ಮತ್ತು ಮಾಜಿ ನಾಗರಿಕ ಸೇವಕ ಹಸ್ನತ್ ಅಬ್ದುಲ್ ಹೈ ಜೂನ್‌ನಲ್ಲಿ ಬಾಂಗ್ಲಾದೇಶದ ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. "ಮ್ಯಾನ್ಮಾರ್ ಪಡೆಗಳು ಅರಾಕನ್ ಬಂಡುಕೋರರನ್ನು ಗುರಿಯಾಗಿಸಿಕೊಂಡು ವಿವೇಚನಾರಹಿತ ಗುಂಡು ಹಾರಿಸಿದ ಕಾರಣ ಒಂಬತ್ತು ದಿನಗಳ ಕಾಲ ದ್ವೀಪವಾಸಿಗಳ ಆಹಾರ ಮತ್ತು ಔಷಧಿಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಯಿತು.

ಸೇಂಟ್ ಮಾರ್ಟಿನ್ ದ್ವೀಪವು ಬಂಗಾಳಕೊಲ್ಲಿಯಲ್ಲಿನ ಪ್ರಾದೇಶಿಕ ಮಿತಿಗಳ ಮೇಲೆ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಸ್ಪರ್ಧಾತ್ಮಕ ಹಕ್ಕುಗಳೊಂದಿಗೆ ಪ್ರಾಮುಖ್ಯತೆಯ ಹೊಸ ಸ್ಥಾನಮಾನವನ್ನು ಪಡೆದುಕೊಂಡಿದೆ. ಕೊಲ್ಲಿಯಲ್ಲಿ ತೈಲ ಮತ್ತು ಅನಿಲವನ್ನು ಕಂಡುಹಿಡಿಯುವ ಹಿನ್ನೆಲೆ ಕೊಲ್ಲಿಯಲ್ಲಿ ಮಾಲೀಕತ್ವ ಮತ್ತು ಸಾರ್ವಭೌಮತ್ವವನ್ನು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿತು" ಎಂದು ಲೇಖನದಲ್ಲಿ ತಿಳಿಸಿದ್ದರು. ಕಡಲ ಗಡಿಯ ವಿವಾದವನ್ನು ನಿರ್ಣಯಿಸಿದ ಯುಎನ್ ನ್ಯಾಯಾಲಯವು ಸೇಂಟ್ ಮಾರ್ಟಿನ್ ಅನ್ನು ಎರಡು ದೇಶಗಳ ನಡುವಿನ ಕಡಲ ಗಡಿಯನ್ನು ಡಿಲಿಮಿಟ್ ಮಾಡಲು ಆಧಾರವಾಗಿ ತೆಗೆದುಕೊಂಡಿತು.

ವೀಕ್ಷಕರ ಪ್ರಕಾರ, ಬಾಂಗ್ಲಾದೇಶವು ಸೇಂಟ್ ಮಾರ್ಟಿನ್ ಮಾಲೀಕತ್ವದ ಕಾರಣದಿಂದಾಗಿ ಕೊಲ್ಲಿಯ 128,600 ನಾಟಿಕಲ್ ಮೈಲುಗಳಿಗಿಂತ ಹೆಚ್ಚಿನದನ್ನು ಪಡೆದುಕೊಂಡಿದೆ. ಇದು ಮ್ಯಾನ್ಮಾರ್ ಸೇಂಟ್ ಮಾರ್ಟಿನ್ ದ್ವೀಪವನ್ನು ಕಾಮಾಲೆಯ ಕಣ್ಣಿನಿಂದ ನೋಡುವಂತೆ ಮಾಡಿದ ಟಿಪ್ಪಿಂಗ್ ಪಾಯಿಂಟ್ ಆಗಿರಬಹುದು. 2018ರಲ್ಲಿ ಮ್ಯಾನ್ಮಾರ್‌ನ ಜನಸಂಖ್ಯೆಯ ಸಚಿವಾಲಯವು ತಮ್ಮ ವೆಬ್‌ಸೈಟ್‌ನಲ್ಲಿ ಸೇಂಟ್ ಮಾರ್ಟಿನ್ ಅನ್ನು ತಮ್ಮ ಪ್ರಾದೇಶಿಕ ಮಿತಿಯಲ್ಲಿ ತೋರಿಸುವ ನಕ್ಷೆಯನ್ನು ಹಾಕಿತು. ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ಪ್ರತಿಭಟನೆಯ ನಂತರ, ನಕ್ಷೆಯನ್ನು ತೆಗೆದುಹಾಕಲಾಯಿತು.

ಸೇಂಟ್ ಮಾರ್ಟಿನ್ ದ್ವೀಪದ ಬಗ್ಗೆ ಅಮೆರಿಕ ಏಕೆ ಆಸಕ್ತಿ ವಹಿಸಿದೆ; ಸೇಂಟ್ ಮಾರ್ಟಿನ್ ದ್ವೀಪವು ಬಂಗಾಳ ಕೊಲ್ಲಿಯಲ್ಲಿ ನೆಲೆಗೊಂಡಿದೆ. ಇದು ವಾಷಿಂಗ್ಟನ್‌ನ ವಿಶಾಲವಾದ ಇಂಡೋ-ಪೆಸಿಫಿಕ್ ಕಾರ್ಯತಂತ್ರದಲ್ಲಿ ನಿರ್ಣಾಯಕ ಪ್ರದೇಶವಾಗಿದೆ. ಇಂಡೋ-ಪೆಸಿಫಿಕ್ ಅಮೆರಿಕ ಕಾರ್ಯತಂತ್ರದ ನೀತಿಯ ಕೇಂದ್ರಬಿಂದುವಾಗಿದೆ. ವಿಶೇಷವಾಗಿ ಚೀನಾದ ಪ್ರಭಾವದ ಬೆಳವಣಿಗೆಯ ಸಂದರ್ಭದಲ್ಲಿ ಬಂಗಾಳಕೊಲ್ಲಿಯು ಹಿಂದೂ ಮಹಾಸಾಗರವನ್ನು ಆಗ್ನೇಯ ಏಷ್ಯಾದೊಂದಿಗೆ ಮತ್ತು ವಿಸ್ತರಣೆಯ ಮೂಲಕ ವಿಶಾಲವಾದ ಪೆಸಿಫಿಕ್ ಪ್ರದೇಶದೊಂದಿಗೆ ಸಂಪರ್ಕಿಸುವ ನಿರ್ಣಾಯಕ ಕಡಲ ವಲಯವಾಗಿ ಕಾರ್ಯನಿರ್ವಹಿಸುತ್ತದೆ.

ಜಪಾನ್‌ನ ಪೂರ್ವ ಕರಾವಳಿಯಿಂದ ವ್ಯಾಪಿಸಿರುವ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯವನ್ನು ಎದುರಿಸಲು ಮುಕ್ತ ಇಂಡೋ-ಪೆಸಿಫಿಕ್ ಅನ್ನು ಖಚಿತಪಡಿಸಿಕೊಳ್ಳಲು ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿರುವ ಚತುರ್ಭುಜ ಭದ್ರತಾ ಸಂವಾದವನ್ನು ಅಮೆರಿಕ ಸಾಮಾನ್ಯವಾಗಿ ಕ್ವಾಡ್ ಎಂದು ಕರೆಯಲಾಗುತ್ತದೆ. ಬಂಗಾಳ ಕೊಲ್ಲಿಯ ಮೂಲಕ ಹಾದುಹೋಗುವ ಪ್ರಮುಖ ಕಡಲ ಮಾರ್ಗಗಳಿಗೆ ದ್ವೀಪದ ಸಾಮೀಪ್ಯವು ಜಾಗತಿಕ ವ್ಯಾಪಾರಕ್ಕೆ ಪ್ರಮುಖವಾದ ಈ ಸಮುದ್ರ ಮಾರ್ಗಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇದು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ. ಬಾಂಗ್ಲಾದೇಶದ ಶೈಕ್ಷಣಿಕ ಮತ್ತು ಕಾರ್ಯಕರ್ತ ಶರಿನ್ ಶಾಜಹಾನ್ ನವೋಮಿ ಪ್ರಕಾರ, ವಾಯುನೆಲೆ ಸ್ಥಾಪಿಸಲು ಸೇಂಟ್ ಮಾರ್ಟಿನ್ ದ್ವೀಪವನ್ನು ಗುತ್ತಿಗೆಗೆ ತೆಗೆದುಕೊಳ್ಳಲು ಬಾಂಗ್ಲಾದೇಶಕ್ಕೆ ಅಮೆರಿಕ ದೀರ್ಘಕಾಲದಿಂದ ಪ್ರಸ್ತಾಪ ಮಾಡುತ್ತಿದೆ. ಪ್ರಸ್ತುತ ಹಸೀನಾ ನೀಡಿರುವ ಹೇಳಿಕೆಯಲ್ಲಿ ಹುರುಳಿದೆ" ಎಂದು ನವೋಮಿ ಈಟಿವಿ ಭಾರತಕ್ಕೆ ತಿಳಿಸಿದರು.

ವಾಸ್ತವವಾಗಿ, ಹಸೀನಾ ಅವರು ಈ ವರ್ಷದ ಜನವರಿಯಲ್ಲಿ ತಮ್ಮ ದೇಶದಲ್ಲಿ ನಡೆದ ಸಂಸತ್ತಿನ ಚುನಾವಣೆಯ ಪೂರ್ವದಲ್ಲಿ ಅಮೆರಿಕ ಹಸ್ತಕ್ಷೇಪವನ್ನು ಆರೋಪಿಸಿದ್ದರು. ಈ ವರ್ಷದ ಜನವರಿಯಲ್ಲಿ ನಡೆದ ಬಾಂಗ್ಲಾದೇಶದ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಂತರ ಸರ್ಕಾರವನ್ನು ಸ್ಥಾಪಿಸುವ ವಿರೋಧ ಪಕ್ಷಗಳ ಬೇಡಿಕೆಯನ್ನು ಒಪ್ಪಿಕೊಳ್ಳಲು ಅವರು ನಿರಂತರವಾಗಿ ನಿರಾಕರಿಸಿದರು. ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಇತರ ಪಾಶ್ಚಿಮಾತ್ಯ ಶಕ್ತಿಗಳು ವಿರೋಧದ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಮನವೊಲಿಸಿದರು. ಆಂತರಿಕ ವಿಷಯದಲ್ಲಿ ಹೊರಗಿನವರ ಹಸ್ತಕ್ಷೇಪ ಮಾಡುವುದನ್ನು ತಳ್ಳಿಹಾಕಿದರು. ಹಸೀನಾ ಅವರು ಭಾರತದಿಂದ ಅವಾಮಿ ಲೀಗ್‌ಗೆ ಮಾಡಿದ ಸಂದೇಶದಲ್ಲಿ ಅಮೆರಿಕ ವಿರುದ್ಧದ ಆರೋಪಗಳು ಭಾನುವಾರವಷ್ಟೇ ಬೆಳಕಿಗೆ ಬಂದಿವೆ. ಇದಕ್ಕೆ ವಾಷಿಂಗ್ಟನ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಹಸೀನಾ ಆಡಳಿತದ ಪತನ: ಭಾರತದ ಭದ್ರತೆ ಮೇಲೆ ಬೀರುವ ಪರಿಣಾಮಗಳೇನು?; ಇಲ್ಲಿದೆ ಫುಲ್​ ಡಿಟೇಲ್ಸ್​! - India Bangladesh next decisions

ETV Bharat Logo

Copyright © 2024 Ushodaya Enterprises Pvt. Ltd., All Rights Reserved.