ETV Bharat / international

ಕುವೈತ್​ ಅಗ್ನಿ ದುರಂತ: ಕೇರಳದ 14 ಜನರ ಗುರುತು ಪತ್ತೆ, ಮೃತದೇಹ ಸ್ವದೇಶಕ್ಕೆ ತರಲು ಸಿದ್ಧತೆ - kuwait fire accident

author img

By ETV Bharat Karnataka Team

Published : Jun 13, 2024, 12:10 PM IST

ಕುವೈತ್​ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದವರ ಪೈಕಿ 14 ಜನ ನೆರೆಯ ಕೇರಳ ರಾಜ್ಯಕ್ಕೆ ಸೇರಿದವರಾಗಿದ್ದು, ಎಲ್ಲರ ಗುರುತು ಪತ್ತೆ ಹಚ್ಚಲಾಗಿದೆ.

ಮೃತ ಕೇರಳಿಗರು
ಮೃತ ಕೇರಳಿಗರು (ETV Bharat)

ಕುವೈತ್​: ಕುವೈತ್​ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಭಾರತೀಯರ ಪೈಕಿ 14 ಜನ ಕೇರಳ ರಾಜ್ಯಕ್ಕೆ ಸೇರಿದವರು ಎಂದು ಗುರುತಿಸಲಾಗಿದ್ದು, ಎಲ್ಲರ ಮೃತ ದೇಹಗಳನ್ನು ವಾಯಪಡೆಯ ವಿಮಾನದ ಮೂಲಕ ಭಾರತಕ್ಕೆ ತರಲಾಗುತ್ತದೆ ಎಂದು ವರದಿಯಾಗಿದೆ.

ಎಲ್ಲಾ 14 ಜನರ ಗುರುತು ಪತ್ತೆ ಹಚ್ಚಲಾಗಿದ್ದು, ಶಮೀರ್​ ಉಮರುದ್ದೀನ್​ (30) - ಕೊಲ್ಲಂ, ಕೆ.ರಂಜಿತ್​ (34) - ಕಾಸರಗೋಡು, ಕೆಲು ಪೊನ್​ಮಲೆರಿ (58) - ಕಾಸರಗೋಡು, ಸ್ಟೇಫಿನ್​ ಅಬ್ರಹಂ ಸಬು (29) - ಕೊಟ್ಟಾಯಂ, ಆಕಾಶ್​ ಸಾಯಿಸಿಧರನ್​ ನಾಯರ್​ (31) - ಪತ್ತನಂತಿಟ್ಟ, ಸಜ್ಜನ್​ ಜಾರ್ಜ್​ (29) - ಕೊಲ್ಲಂ, ಸಜು ವರ್ಘೆಸೆ (56) - ಪತ್ತನಂತಿಟ್ಟು, ಪಿ.ವಿ ಮುರಳಿಧರನ್​ (68) - ಪತ್ತನಂತಿಟ್ಟ, ಲುಕು (48) - ಕೊಲ್ಲಂ, ಥಾಮಸ್​ ಒಮ್ಮೆನ್​ (37) - ಪತ್ತನಂತಿಟ್ಟ, ವಿಶ್ವ ಕೃಷ್ಣ ಕಣ್ಣೂರು, ನೂಹ (40) - ಮಲಪ್ಪುರಂ, ಬಹುಲೆಯನ್​ (36) - ತ್ರಿಶೂರ್​, ಶ್ರೀಹರಿ ಪ್ರದೀಪ್​ (27) - ಕೊಟ್ಟಾಯಂ ಮೃತರು.

ಬುಧವಾರ (ಜೂ. 12) ದಕ್ಷಿಣ ಕುವೈತ್​ನ ಮಂಗಾಫ್​ ನಗರದಲ್ಲಿ ಕಾರ್ಮಿಕರು ವಾಸವಿದ್ದ ಬೃಹತ್​ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಈವರೆಗೆ 49 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದು 40 ಜನ ಸಾವನ್ನಪ್ಪಿದ್ದಾರೆ. ಇನ್ನೂ 50ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗ್ಗೆ ಹೊತ್ತು ಬೃಹತ್​ ಕಟ್ಟಡದ ಅಡುಗೆಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿತ್ತು. ಘಟನೆ ವೇಳೆ ಕಟ್ಟಡದಲ್ಲಿ 160 ಜನರು ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

ಪರಿಹಾರ ಘೋಷಣೆ: ಈ ದುರ್ಘಟನೆಗೆ ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದು ಪಿಎಂ ವಿಶೇಷ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

ಮೃತದೇಹ ಭಾರತಕ್ಕೆ ತರಲು ಮಾತುಕತೆ: ಮೃತದೇಹ ಭಾರತಕ್ಕೆ ತರಲು ವಿದೇಶಾಂಗ ಸಚಿವ ಎಸ್​ .ಜೈಶಂಕರ್​ ಕುವೈತ್​ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು, ಶೀಘ್ರವೇ ಪಾರ್ಥಿವ ಶರೀರಗಳನ್ನು ಸ್ವದೇಶಕ್ಕೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.

ಸದ್ಯ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಪ್ರಧಾನಿ ಮೋದಿಯವರ ನಿರ್ದೇಶನದ ಮೇರೆಗೆ ಕುವೈತ್‌ಗೆ ಪ್ರಯಾಣಿಸಿದ್ದು, ಮೃತರನ್ನು ಸ್ವದೇಶಕ್ಕೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಜತೆಗೆ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ನೆರವಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಕುವೈತ್​ ಅಗ್ನಿ ದುರಂತ: ಮೃತಪಟ್ಟ ಭಾರತೀಯರ ಮೃತದೇಹಗಳ ಹಸ್ತಾಂತರಕ್ಕೆ ಜೈಶಂಕರ್​​​​​​​​​​​​​​​​​​ ಪ್ರಯತ್ನ ಆರಂಭ, ಪರಿಹಾರ ಘೋಷಿಸಿದ ಪ್ರಧಾನಿ - Kuwait fire accident

ಕುವೈತ್​: ಕುವೈತ್​ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಭಾರತೀಯರ ಪೈಕಿ 14 ಜನ ಕೇರಳ ರಾಜ್ಯಕ್ಕೆ ಸೇರಿದವರು ಎಂದು ಗುರುತಿಸಲಾಗಿದ್ದು, ಎಲ್ಲರ ಮೃತ ದೇಹಗಳನ್ನು ವಾಯಪಡೆಯ ವಿಮಾನದ ಮೂಲಕ ಭಾರತಕ್ಕೆ ತರಲಾಗುತ್ತದೆ ಎಂದು ವರದಿಯಾಗಿದೆ.

ಎಲ್ಲಾ 14 ಜನರ ಗುರುತು ಪತ್ತೆ ಹಚ್ಚಲಾಗಿದ್ದು, ಶಮೀರ್​ ಉಮರುದ್ದೀನ್​ (30) - ಕೊಲ್ಲಂ, ಕೆ.ರಂಜಿತ್​ (34) - ಕಾಸರಗೋಡು, ಕೆಲು ಪೊನ್​ಮಲೆರಿ (58) - ಕಾಸರಗೋಡು, ಸ್ಟೇಫಿನ್​ ಅಬ್ರಹಂ ಸಬು (29) - ಕೊಟ್ಟಾಯಂ, ಆಕಾಶ್​ ಸಾಯಿಸಿಧರನ್​ ನಾಯರ್​ (31) - ಪತ್ತನಂತಿಟ್ಟ, ಸಜ್ಜನ್​ ಜಾರ್ಜ್​ (29) - ಕೊಲ್ಲಂ, ಸಜು ವರ್ಘೆಸೆ (56) - ಪತ್ತನಂತಿಟ್ಟು, ಪಿ.ವಿ ಮುರಳಿಧರನ್​ (68) - ಪತ್ತನಂತಿಟ್ಟ, ಲುಕು (48) - ಕೊಲ್ಲಂ, ಥಾಮಸ್​ ಒಮ್ಮೆನ್​ (37) - ಪತ್ತನಂತಿಟ್ಟ, ವಿಶ್ವ ಕೃಷ್ಣ ಕಣ್ಣೂರು, ನೂಹ (40) - ಮಲಪ್ಪುರಂ, ಬಹುಲೆಯನ್​ (36) - ತ್ರಿಶೂರ್​, ಶ್ರೀಹರಿ ಪ್ರದೀಪ್​ (27) - ಕೊಟ್ಟಾಯಂ ಮೃತರು.

ಬುಧವಾರ (ಜೂ. 12) ದಕ್ಷಿಣ ಕುವೈತ್​ನ ಮಂಗಾಫ್​ ನಗರದಲ್ಲಿ ಕಾರ್ಮಿಕರು ವಾಸವಿದ್ದ ಬೃಹತ್​ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಈವರೆಗೆ 49 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದು 40 ಜನ ಸಾವನ್ನಪ್ಪಿದ್ದಾರೆ. ಇನ್ನೂ 50ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗ್ಗೆ ಹೊತ್ತು ಬೃಹತ್​ ಕಟ್ಟಡದ ಅಡುಗೆಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿತ್ತು. ಘಟನೆ ವೇಳೆ ಕಟ್ಟಡದಲ್ಲಿ 160 ಜನರು ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

ಪರಿಹಾರ ಘೋಷಣೆ: ಈ ದುರ್ಘಟನೆಗೆ ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದು ಪಿಎಂ ವಿಶೇಷ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

ಮೃತದೇಹ ಭಾರತಕ್ಕೆ ತರಲು ಮಾತುಕತೆ: ಮೃತದೇಹ ಭಾರತಕ್ಕೆ ತರಲು ವಿದೇಶಾಂಗ ಸಚಿವ ಎಸ್​ .ಜೈಶಂಕರ್​ ಕುವೈತ್​ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು, ಶೀಘ್ರವೇ ಪಾರ್ಥಿವ ಶರೀರಗಳನ್ನು ಸ್ವದೇಶಕ್ಕೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.

ಸದ್ಯ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಪ್ರಧಾನಿ ಮೋದಿಯವರ ನಿರ್ದೇಶನದ ಮೇರೆಗೆ ಕುವೈತ್‌ಗೆ ಪ್ರಯಾಣಿಸಿದ್ದು, ಮೃತರನ್ನು ಸ್ವದೇಶಕ್ಕೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಜತೆಗೆ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ನೆರವಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಕುವೈತ್​ ಅಗ್ನಿ ದುರಂತ: ಮೃತಪಟ್ಟ ಭಾರತೀಯರ ಮೃತದೇಹಗಳ ಹಸ್ತಾಂತರಕ್ಕೆ ಜೈಶಂಕರ್​​​​​​​​​​​​​​​​​​ ಪ್ರಯತ್ನ ಆರಂಭ, ಪರಿಹಾರ ಘೋಷಿಸಿದ ಪ್ರಧಾನಿ - Kuwait fire accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.