ETV Bharat / health

ಭಾರತದಲ್ಲಿ ಪ್ರತಿ 9ರಲ್ಲಿ ಒಬ್ಬರಿಗೆ ತಡೆಗಟ್ಟಬಹುದಾದ ಕ್ಯಾನ್ಸರ್​ ಅಪಾಯ: ತಜ್ಞರು - risk of developing cancer

author img

By IANS

Published : Jul 30, 2024, 2:59 PM IST

2020ರಲ್ಲಿ ದೇಶದಲ್ಲಿ 1.4 ಮಿಲಿಯನ್​ ಪ್ರಕರಣಗಳು ಕಂಡು ಬಂದಿದ್ದು, ಇದು 2025ರ ಹೊತ್ತಿಗೆ 1.57 ಮಿಲಿಯನ್​ ಆಗಲಿದೆ

one out of nine Indians have a lifetime risk of developing cancer but most are preventable
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

ನವದೆಹಲಿ: ಭಾರತದಲ್ಲಿ ಕ್ಯಾನ್ಸರ್​ ಪ್ರಕರಣಗಳ ಹೊರೆ ಹೆಚ್ಚುತ್ತಿದ್ದು, 9 ರಲ್ಲಿ ಒಬ್ಬರು ಈ ಮಾರಣಾಂತಿಕ ರೋಗದ ಅಪಾಯದಲ್ಲಿದ್ದಾರೆ. ಈ ಕ್ಯಾನ್ಸರ್​ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಮೂಲಕ ತಡೆಗಟ್ಟಬಹುದಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಭಾರತದ ಮೇಲಿನ ಕ್ಯಾನ್ಸರ್​ ಹೊರೆ ಕುರಿತು ಅಪೋಲೋ ಆಸ್ಪತ್ರೆಯ ಹೆಲ್ತ್ ಆಫ್​ ನೇಷನ್​ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಭಾರತ ವಿಶ್ವದ ಕ್ಯಾನ್ಸರ್​ ರಾಜಧಾನಿಯಾಗುವ ಅಪಾಯದ ಕುರಿತು ಎಚ್ಚರಿಕೆ ನೀಡಿತ್ತು. ವಾರ್ಷಿಕ ಕ್ಯಾನ್ಸರ್​ ಪ್ರಕರಣಗಳು ಏರಿಕೆ ಕಾಣುತ್ತಿದ್ದು, 2020ರಲ್ಲಿ ದೇಶದಲ್ಲಿ 1.4 ಮಿಲಿಯನ್​ ಪ್ರಕರಣಗಳು ಕಂಡು ಬಂದಿದ್ದು, ಇದು 2025ರ ಹೊತ್ತಿಗೆ 1.57 ಮಿಲಿಯನ್​ ಆಗಲಿದೆ ಎಂದು ತಿಳಿಸಿತ್ತು.

ಸರ್ಕಾರ ತುರ್ತು ಮತ್ತು ಸಮಗ್ರ ಕ್ರಮಗಳ ಮೂಲಕ ಹೆಚ್ಚುತ್ತಿರುವ ಈ ಕ್ಯಾನ್ಸರ್​ ಪ್ರಕರಣಗಳ ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಬೇಕಿದೆ

ಕ್ಯಾನ್ಸರ್​ ತಡೆಗಟ್ಟುವಿಕೆ: ಭಾರತದಲ್ಲಿ ತಂಬಾಕು ಕ್ಯಾನ್ಸರ್ ಹೆಚ್ಚುತ್ತಿದೆ. ಆದರೆ ಈ ಕ್ಯಾನ್ಸರ್​ ಅನ್ನು ​​​ ತಡೆಗಟ್ಟಬಹುದಾಗಿದೆ. ಸುಮಾರು 267 ಮಿಲಿಯನ್​ ವಯಸ್ಕರರು ತಂಬಾಕು ಬಳಕೆ ಮಾಡುತ್ತಾರೆ. ಇದು ಬಾಯಿ, ಶ್ವಾಸಕೋಶ ಮತ್ತು ಇತರ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಅನಾರೋಗ್ಯಕರ ಆಹಾರ ಅಭ್ಯಾಸ ಮತ್ತು ಜಡ ಜೀವನಶೈಲಿಯು ಕೊಲೆಕ್ಟರಲ್​, ಸ್ತನ ಮತ್ತು ಪ್ಯಾನ್ಕ್ರಿಯಸ್ಟಿಕ್​ ಕ್ಯಾನ್ಸರ್​​ಗೆ ಕಾರಣವಾಗಬಹುದು ಎಂದು ಆರ್​ಜಿಸಿಐಆರ್​ಸಿಯ ವೈದ್ಯೆ ಅಗರ್ವಾಲ್​ ತಿಳಿಸಿದ್ದಾರೆ.

ಜೀವಿತಾವಧಿ ಹೆಚ್ಚಳ ಮತ್ತು ವಯಸ್ಸಾದ ಜನಸಂಖ್ಯೆ ಕೂಡ ಕ್ಯಾನ್ಸರ್​ ದರ ಹೆಚ್ಚಳಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಯಸ್ಸಾದವರಲ್ಲಿ ಅನೇಕ ರೀತಿಯ ಕ್ಯಾನ್ಸರ್​ಗಳು ಕಂಡು ಬರುತ್ತಿವೆ. ಎಚ್​ಪಿವಿ ಮತ್ತು ಹೆಪಟೈಟಿಸ್​ ಬಿ ಮತ್ತು ಸಿ ವೈರಸ್​ಗಳು ಕೂಡ ಗರ್ಭಕಂಠ ಮತ್ತು ಯಕೃತ್​ ಕ್ಯಾನ್ಸರ್​​ಗೆ ಕಾರಣವಾಗಬಹುದು.

ಎಚ್​ಪಿವಿ ಮತ್ತು ಹೆಪಟೈಟಿಸ್​ ಬಿ ಲಸಿಕೆಗಳ ಮೂಲಕ ಈ ಕ್ಯಾನ್ಸರ್ ಸಂಬಂಧಿತ​ ಸೋಂಕುಗಳನ್ನು ತಡೆಯಬಹುದು. ಕ್ಯಾನ್ಸರ್​ ಚಿಕಿತ್ಸಾ ತಂತ್ರಜ್ಞಾನ ಮತ್ತು ಚಿಕಿತ್ಸಾ ಆರೈಕೆಗಳು ಕೂಡ ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಮುಖ್ಯವಾಗಿದೆ.

ಸಂಘಟಿತ ಪ್ರಯತ್ನ: ಕೇಂದ್ರ ಸರ್ಕಾರ ಕೂಡ ಬಜೆಟ್​ನಲ್ಲಿ ಅಗತ್ಯ ಕ್ಯಾನ್ಸರ್​ ಔಷಧಗಳ ಮೇಲಿನ ಸೀಮಾ ಸುಂಕವನ್ನು ಇಳಿಸಿದೆ. ಇದು ಹೊಸ ಚಿಕಿತ್ಸೆಗಳು ಮತ್ತಷ್ಟು ಅಗ್ಗ ಮತ್ತು ಲಭ್ಯವಾಗುವಂತೆ ಮಾಡುವಲ್ಲಿ ಸಹಾಯಕವಾಗಿದೆ. ಆದಾಗ್ಯೂ, ಆರೋಗ್ಯ ಯೋಜನೆ ಮತ್ತು ಮೂಲಸೌಕರ್ಯ ಸುಧಾರಣೆ ಮತ್ತಷ್ಟು ವಿಸ್ತರಿಸಬೇಕಿದೆ ಎಂದು ಪುಣ್ಯಶ್ಲೋಕ್​ ಅಹಿಲ್ಯಾಬಾಯಿ ಹೊಲ್ಕರ್​ನ ಹೆಡ್​ ಅಂಡ್​ ನೆಕ್​ ಕ್ಯಾನ್ಸರ್​ ಇನ್ಸಿಟಿಟ್ಯೂಟ್​ ​ ಆಫ್​ ಇಂಡಿಯಾದ ನಿರ್ದೇಶಕ ಡಾ ಪ್ರಥಮೇಶ್​ ಪೈ ತಿಳಿಸಿದ್ದಾರೆ.

ಈ ಬಿಕ್ಕಟ್ಟು ನಿವಾರಿಸುವಲ್ಲಿ ಸಾರ್ವಜನಿಕ ಅರಿವು, ಸಂಘಟಿತ ಪತ್ತೆ ಕಾರ್ಯ ಮತ್ತು ಕ್ಯಾನ್ಸರ್​ ಸಂಶೋಧನೆಗೆ ನಿಧಿ ಹೆಚ್ಚಳಗಳಿಗೆ ಒತ್ತು ನೀಡಬೇಕಿದೆ. ಆರಂಭಿಕ ಹಂತದಲ್ಲಿ ಪತ್ತೆ ಮತ್ತು ತಡೆಗಟ್ಟುವಿಕೆ ನಿರ್ಣಾಯಕವಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ನಾವು ಕ್ಯಾನ್ಸರ್​ ಹೊರೆ ಕಡಿಮೆ ಮಾಡಬೇಕಿದ್ದು, ರೋಗಿಗಳ ಸುಧಾರಣೆ ನಡೆಸಬೇಕಿದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮೂರು ಪ್ರಮುಖ ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ಸ್ ಸುಂಕ ತೆಗೆದುಹಾಕಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತದಲ್ಲಿ ಕ್ಯಾನ್ಸರ್​ ಪ್ರಕರಣಗಳ ಹೊರೆ ಹೆಚ್ಚುತ್ತಿದ್ದು, 9 ರಲ್ಲಿ ಒಬ್ಬರು ಈ ಮಾರಣಾಂತಿಕ ರೋಗದ ಅಪಾಯದಲ್ಲಿದ್ದಾರೆ. ಈ ಕ್ಯಾನ್ಸರ್​ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವ ಮೂಲಕ ತಡೆಗಟ್ಟಬಹುದಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಭಾರತದ ಮೇಲಿನ ಕ್ಯಾನ್ಸರ್​ ಹೊರೆ ಕುರಿತು ಅಪೋಲೋ ಆಸ್ಪತ್ರೆಯ ಹೆಲ್ತ್ ಆಫ್​ ನೇಷನ್​ ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಭಾರತ ವಿಶ್ವದ ಕ್ಯಾನ್ಸರ್​ ರಾಜಧಾನಿಯಾಗುವ ಅಪಾಯದ ಕುರಿತು ಎಚ್ಚರಿಕೆ ನೀಡಿತ್ತು. ವಾರ್ಷಿಕ ಕ್ಯಾನ್ಸರ್​ ಪ್ರಕರಣಗಳು ಏರಿಕೆ ಕಾಣುತ್ತಿದ್ದು, 2020ರಲ್ಲಿ ದೇಶದಲ್ಲಿ 1.4 ಮಿಲಿಯನ್​ ಪ್ರಕರಣಗಳು ಕಂಡು ಬಂದಿದ್ದು, ಇದು 2025ರ ಹೊತ್ತಿಗೆ 1.57 ಮಿಲಿಯನ್​ ಆಗಲಿದೆ ಎಂದು ತಿಳಿಸಿತ್ತು.

ಸರ್ಕಾರ ತುರ್ತು ಮತ್ತು ಸಮಗ್ರ ಕ್ರಮಗಳ ಮೂಲಕ ಹೆಚ್ಚುತ್ತಿರುವ ಈ ಕ್ಯಾನ್ಸರ್​ ಪ್ರಕರಣಗಳ ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಬೇಕಿದೆ

ಕ್ಯಾನ್ಸರ್​ ತಡೆಗಟ್ಟುವಿಕೆ: ಭಾರತದಲ್ಲಿ ತಂಬಾಕು ಕ್ಯಾನ್ಸರ್ ಹೆಚ್ಚುತ್ತಿದೆ. ಆದರೆ ಈ ಕ್ಯಾನ್ಸರ್​ ಅನ್ನು ​​​ ತಡೆಗಟ್ಟಬಹುದಾಗಿದೆ. ಸುಮಾರು 267 ಮಿಲಿಯನ್​ ವಯಸ್ಕರರು ತಂಬಾಕು ಬಳಕೆ ಮಾಡುತ್ತಾರೆ. ಇದು ಬಾಯಿ, ಶ್ವಾಸಕೋಶ ಮತ್ತು ಇತರ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಅನಾರೋಗ್ಯಕರ ಆಹಾರ ಅಭ್ಯಾಸ ಮತ್ತು ಜಡ ಜೀವನಶೈಲಿಯು ಕೊಲೆಕ್ಟರಲ್​, ಸ್ತನ ಮತ್ತು ಪ್ಯಾನ್ಕ್ರಿಯಸ್ಟಿಕ್​ ಕ್ಯಾನ್ಸರ್​​ಗೆ ಕಾರಣವಾಗಬಹುದು ಎಂದು ಆರ್​ಜಿಸಿಐಆರ್​ಸಿಯ ವೈದ್ಯೆ ಅಗರ್ವಾಲ್​ ತಿಳಿಸಿದ್ದಾರೆ.

ಜೀವಿತಾವಧಿ ಹೆಚ್ಚಳ ಮತ್ತು ವಯಸ್ಸಾದ ಜನಸಂಖ್ಯೆ ಕೂಡ ಕ್ಯಾನ್ಸರ್​ ದರ ಹೆಚ್ಚಳಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಯಸ್ಸಾದವರಲ್ಲಿ ಅನೇಕ ರೀತಿಯ ಕ್ಯಾನ್ಸರ್​ಗಳು ಕಂಡು ಬರುತ್ತಿವೆ. ಎಚ್​ಪಿವಿ ಮತ್ತು ಹೆಪಟೈಟಿಸ್​ ಬಿ ಮತ್ತು ಸಿ ವೈರಸ್​ಗಳು ಕೂಡ ಗರ್ಭಕಂಠ ಮತ್ತು ಯಕೃತ್​ ಕ್ಯಾನ್ಸರ್​​ಗೆ ಕಾರಣವಾಗಬಹುದು.

ಎಚ್​ಪಿವಿ ಮತ್ತು ಹೆಪಟೈಟಿಸ್​ ಬಿ ಲಸಿಕೆಗಳ ಮೂಲಕ ಈ ಕ್ಯಾನ್ಸರ್ ಸಂಬಂಧಿತ​ ಸೋಂಕುಗಳನ್ನು ತಡೆಯಬಹುದು. ಕ್ಯಾನ್ಸರ್​ ಚಿಕಿತ್ಸಾ ತಂತ್ರಜ್ಞಾನ ಮತ್ತು ಚಿಕಿತ್ಸಾ ಆರೈಕೆಗಳು ಕೂಡ ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಮುಖ್ಯವಾಗಿದೆ.

ಸಂಘಟಿತ ಪ್ರಯತ್ನ: ಕೇಂದ್ರ ಸರ್ಕಾರ ಕೂಡ ಬಜೆಟ್​ನಲ್ಲಿ ಅಗತ್ಯ ಕ್ಯಾನ್ಸರ್​ ಔಷಧಗಳ ಮೇಲಿನ ಸೀಮಾ ಸುಂಕವನ್ನು ಇಳಿಸಿದೆ. ಇದು ಹೊಸ ಚಿಕಿತ್ಸೆಗಳು ಮತ್ತಷ್ಟು ಅಗ್ಗ ಮತ್ತು ಲಭ್ಯವಾಗುವಂತೆ ಮಾಡುವಲ್ಲಿ ಸಹಾಯಕವಾಗಿದೆ. ಆದಾಗ್ಯೂ, ಆರೋಗ್ಯ ಯೋಜನೆ ಮತ್ತು ಮೂಲಸೌಕರ್ಯ ಸುಧಾರಣೆ ಮತ್ತಷ್ಟು ವಿಸ್ತರಿಸಬೇಕಿದೆ ಎಂದು ಪುಣ್ಯಶ್ಲೋಕ್​ ಅಹಿಲ್ಯಾಬಾಯಿ ಹೊಲ್ಕರ್​ನ ಹೆಡ್​ ಅಂಡ್​ ನೆಕ್​ ಕ್ಯಾನ್ಸರ್​ ಇನ್ಸಿಟಿಟ್ಯೂಟ್​ ​ ಆಫ್​ ಇಂಡಿಯಾದ ನಿರ್ದೇಶಕ ಡಾ ಪ್ರಥಮೇಶ್​ ಪೈ ತಿಳಿಸಿದ್ದಾರೆ.

ಈ ಬಿಕ್ಕಟ್ಟು ನಿವಾರಿಸುವಲ್ಲಿ ಸಾರ್ವಜನಿಕ ಅರಿವು, ಸಂಘಟಿತ ಪತ್ತೆ ಕಾರ್ಯ ಮತ್ತು ಕ್ಯಾನ್ಸರ್​ ಸಂಶೋಧನೆಗೆ ನಿಧಿ ಹೆಚ್ಚಳಗಳಿಗೆ ಒತ್ತು ನೀಡಬೇಕಿದೆ. ಆರಂಭಿಕ ಹಂತದಲ್ಲಿ ಪತ್ತೆ ಮತ್ತು ತಡೆಗಟ್ಟುವಿಕೆ ನಿರ್ಣಾಯಕವಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ನಾವು ಕ್ಯಾನ್ಸರ್​ ಹೊರೆ ಕಡಿಮೆ ಮಾಡಬೇಕಿದ್ದು, ರೋಗಿಗಳ ಸುಧಾರಣೆ ನಡೆಸಬೇಕಿದೆ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮೂರು ಪ್ರಮುಖ ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ಸ್ ಸುಂಕ ತೆಗೆದುಹಾಕಿದ ಕೇಂದ್ರ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.