ETV Bharat / entertainment

'ಸರ್​ ನಮ್ಮನ್ನು ಕ್ಷಮಿಸಿ..': ಕ್ಷಮಾಪಣೆ ಜೊತೆ ನಿರ್ದೇಶಕ ಮಣಿಕಂದನ್ ರಾಷ್ಟ್ರಪ್ರಶಸ್ತಿ ಪದಕಗಳನ್ನು ಹಿಂತಿರುಗಿಸಿದ ಕಳ್ಳರು

ಕದ್ದೊಯ್ದ ವಸ್ತುಗಳಲ್ಲಿ ರಾಷ್ಟ್ರ ಪ್ರಶಸ್ತಿಯ ಬೆಳ್ಳಿಯ ಪದಕಗಳನ್ನಷ್ಟೇ ಕ್ಷಮಾಪಣಾ ಪತ್ರದೊಂದಿಗೆ ಮನೆಯ ಮುಂದಿಟ್ಟು ಕಳ್ಳರು ಪರಾರಿಯಾಗಿದ್ದಾರೆ.

author img

By ETV Bharat Karnataka Team

Published : Feb 13, 2024, 12:52 PM IST

Updated : Feb 13, 2024, 2:23 PM IST

Robbery at director Manikandan house: Thieves returned only National Award medals with apology letter
ನಿರ್ದೇಶಕ ಮಣಿಕಂದನ್​ ಮನೆಯಲ್ಲಿ ದರೋಡೆ: ಕ್ಷಮಾಪಣೆ ಪತ್ರದ ಜೊತೆ ರಾಷ್ಟ್ರಪ್ರಶಸ್ತಿ ಪದಕಗಳನ್ನಷ್ಟೇ ಹಿಂತಿರುಗಿಸಿದ ಕಳ್ಳರು

ಮಧುರೈ (ತಮಿಳುನಾಡು): ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಣಿಕಂದನ್​ ಅವರ ಮನೆಯಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಘಟನೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಕಳ್ಳರು ಕ್ಷಮಾಪಣಾ ಪತ್ರದ ಜೊತೆ ಕದ್ದೊಯ್ದಿದ್ದ ಎರಡು ರಾಷ್ಟ್ರಪ್ರಶಸ್ತಿ ಬೆಳ್ಳಿ ಪದಕಗಳನ್ನು ಹಿಂತಿರುಗಿಸಿದ್ದಾರೆ. "ಸರ್​ ನಮ್ಮನ್ನು ಕ್ಷಮಿಸಿ. ನಿಮ್ಮ ಶ್ರಮ ನಿಮ್ಮದು" ಎಂದು ತಮಿಳಿನಲ್ಲಿ ಕ್ಷಮಾಪಣಾ ಪತ್ರ ಬರೆದಿಟ್ಟು, ಕಳ್ಳರು ಪರಾರಿಯಾಗಿದ್ದಾರೆ. ರಾಷ್ಟ್ರಪ್ರಶಸ್ತಿಯ ಬೆಳ್ಳಿ ಪದಕಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ತಮಿಳು ಚಿತ್ರರಂಗದ 'ಕಾಕ ಮುಟ್ಟೈ' ಸಿನಿಮಾ ಖ್ಯಾತಿಯ ನಿರ್ದೇಶಕ ಮಣಿಕಂದನ್​ ಅವರ ಮಧುರೈ ಜಿಲ್ಲೆಯ ಉಸಿಲಂಪಟ್ಟಿಯಲ್ಲಿರುವ ಮನೆಯಲ್ಲಿ ಫೆಬ್ರವರಿ 8 ರಂದು ಕಳ್ಳತನ ನಡೆದಿತ್ತು. ಸಿನಿಮಾ ಸಂಬಂಧ ಕೆಲಸದ ನಿಮಿತ್ತ ಮಣಿಕಂದನ್​ ಅವರು ತಮ್ಮ ಕುಟುಂಬದೊಂದಿಗೆ ಕಳೆದ ಎರಡು ತಿಂಗಳುಗಳಿಂದ ಚೆನ್ನೈನಲ್ಲಿ ವಾಸಿಸುತ್ತಿದ್ದರು. ಬೀಗ ಜಡಿದ ಮನೆಯೊಳಗೆ ನುಗ್ಗಿದ್ದ ಕಳ್ಳರು, ಮನೆಯಲ್ಲಿದ್ದ 1 ಲಕ್ಷ ರೂಪಾಯಿ ನಗದು, ಐದು ಪೌಂಡ್​ ಚಿನ್ನಾಭರಣಗಳ ಜೊತೆಗೆ ಮಣಿಕಂದನ್​ ಅವರು ತಮ್ಮ ಸಿನಿಮಾಗಳಿಗಾಗಿ ಪಡೆದಿದ್ದ ರಾಷ್ಟ್ರೀಯ ಪ್ರಶಸ್ತಿಯ ಬೆಳ್ಳಿ ಪದಕಗಳನ್ನೂ ಕದ್ದು ಪರಾರಿಯಾಗಿದ್ದರು.

National Award-winning director Manikandan's house theft; Thieves returned national award's silver medals with forgive letter
ನಿರ್ದೇಶಕ ಮಣಿಕಂದನ್​ ಮನೆಯಲ್ಲಿ ದರೋಡೆ: ಕ್ಷಮಾಪಣೆ ಪತ್ರದ ಜೊತೆ ರಾಷ್ಟ್ರಪ್ರಶಸ್ತಿ ಪದಕಗಳನ್ನಷ್ಟೇ ಹಿಂತಿರುಗಿಸಿದ ಕಳ್ಳರು

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಉಸಿಲಂಪಟ್ಟಿ ನಗರ ಠಾಣೆ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಆದರೆ,ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಳ್ಳರು ತಾವು ಕದ್ದೊಯ್ದಿದ್ದ ವಸ್ತುಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಯ ಪದಕಗಳನ್ನು ಮಾತ್ರ ಕ್ಷಮಾಪಣಾ ಪತ್ರದೊಂದಿಗೆ ವಾಪಸ್​ ನೀಡಿದ್ದಾರೆ. ಪದಕಗಳನ್ನು ಹಾಗೂ ಕ್ಷಮಾಪಣಾ ಪತ್ರವನ್ನು ಕ್ಯಾರಿ ಬ್ಯಾಗ್​ನಲ್ಲಿ ಕಟ್ಟಿ, ಮನೆಯ ಮುಂದಿನ ಗೇಟ್​ನಲ್ಲಿರಿಸಿ ಪರಾರಿಯಾಗಿದ್ದಾರೆ.

ತಮಿಳು ಚಿತ್ರರಂಗಕ್ಕೆ ಸಹಾಯಕ ಸಿನಿಮಾಟೋಗ್ರಾಫರ್​ ಆಗಿ ಪದಾರ್ಪಣೆ ಮಾಡಿದ್ದ ಮಣಿಕಂದನ್​ ಅವರು ನಂತರ ನಿರ್ದೇಶಕರಾದರು. ಕಾಕ ಮುಟ್ಟೈ, ಕುಟ್ರಮೆ ತಂದನೈ, ಆಂಡವನ್​ ಕಟ್ಟಲೈ, ಮತ್ತು ಕಡೈಸಿ ವಿವಸಾಯಿ ಮುಂತಾದ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಅವುಗಳಲ್ಲಿ ಕಾಕ ಮುಟ್ಟೈ ಹಾಗೂ ಕಡೈಸಿ ವಿವಸಾಯಿ ಸಿನಿಮಾಗಳು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ.

ಸದ್ಯ ಮಣಿಕಂದನ್​ ಅವರು ಡಿಸ್ನಿ + ಹಾಟ್​​ಸ್ಟಾರ್​ನಲ್ಲಿ ನಟ ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹೊಸ ವೆಬ್​ ಸಿರೀಸ್​ ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ. 'ಆಂಡವನ್​ ಕಟ್ಟಲೈ', 'ಕಡೈಸಿ ವಿವಸಾಯಿ' ಸಿನಿಮಾಗಳ ನಂತರ ವಿಜಯ್​ ಸೇತುಪತಿ ಹಾಗೂ ಮಣಿಕಂದನ್​ ಅವರ ಕಾಂಬಿನೇಷನ್​ನಲ್ಲಿ ಮೂರನೇ ಪ್ರಾಜೆಕ್ಟ್​ ಇದಾಗಿದೆ. ಈ ವೆಬ್​ ಸಿರೀಸ್​ಗೆ 7ಸಿ ನ ಎಂಟರ್​ಟೈನ್​ಮೆಂಟ್​ ಪ್ರೈವೇಟ್​ ಲಿಮಿಟೆಡ್​ನ ಪಿ. ಅರುಮುಗ ಕುಮಾರ್​ ಬಂಡವಾಳ ಹೂಡಿದ್ದಾರೆ. ರಾಜೇಶ್​ ಮುರುಗೇಶನ್​ ಅವರ ಸಂಗೀತ ಹಾಗೂ ಷಣ್ಮುಗ ಸುಂದರಂ ಅವರ ಛಾಯಾಗ್ರಹಣ ವೆಬ್​ ಸಿರೀಸ್​ಗಿದೆ.

ಇದನ್ನೂ ಓದಿ: 'ಫೋಟೋ' ಜೊತೆಗೆ ಪ್ರಕಾಶ್ ರಾಜ್: ಲಾಕ್​ಡೌನ್ ಸಂಕಷ್ಟದ ಕಥೆ ಪ್ರಸೆಂಟ್ ಮಾಡ್ತಿದ್ದಾರೆ ಬಹುಭಾಷಾ ನಟ

ಮಧುರೈ (ತಮಿಳುನಾಡು): ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಣಿಕಂದನ್​ ಅವರ ಮನೆಯಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಘಟನೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಕಳ್ಳರು ಕ್ಷಮಾಪಣಾ ಪತ್ರದ ಜೊತೆ ಕದ್ದೊಯ್ದಿದ್ದ ಎರಡು ರಾಷ್ಟ್ರಪ್ರಶಸ್ತಿ ಬೆಳ್ಳಿ ಪದಕಗಳನ್ನು ಹಿಂತಿರುಗಿಸಿದ್ದಾರೆ. "ಸರ್​ ನಮ್ಮನ್ನು ಕ್ಷಮಿಸಿ. ನಿಮ್ಮ ಶ್ರಮ ನಿಮ್ಮದು" ಎಂದು ತಮಿಳಿನಲ್ಲಿ ಕ್ಷಮಾಪಣಾ ಪತ್ರ ಬರೆದಿಟ್ಟು, ಕಳ್ಳರು ಪರಾರಿಯಾಗಿದ್ದಾರೆ. ರಾಷ್ಟ್ರಪ್ರಶಸ್ತಿಯ ಬೆಳ್ಳಿ ಪದಕಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ತಮಿಳು ಚಿತ್ರರಂಗದ 'ಕಾಕ ಮುಟ್ಟೈ' ಸಿನಿಮಾ ಖ್ಯಾತಿಯ ನಿರ್ದೇಶಕ ಮಣಿಕಂದನ್​ ಅವರ ಮಧುರೈ ಜಿಲ್ಲೆಯ ಉಸಿಲಂಪಟ್ಟಿಯಲ್ಲಿರುವ ಮನೆಯಲ್ಲಿ ಫೆಬ್ರವರಿ 8 ರಂದು ಕಳ್ಳತನ ನಡೆದಿತ್ತು. ಸಿನಿಮಾ ಸಂಬಂಧ ಕೆಲಸದ ನಿಮಿತ್ತ ಮಣಿಕಂದನ್​ ಅವರು ತಮ್ಮ ಕುಟುಂಬದೊಂದಿಗೆ ಕಳೆದ ಎರಡು ತಿಂಗಳುಗಳಿಂದ ಚೆನ್ನೈನಲ್ಲಿ ವಾಸಿಸುತ್ತಿದ್ದರು. ಬೀಗ ಜಡಿದ ಮನೆಯೊಳಗೆ ನುಗ್ಗಿದ್ದ ಕಳ್ಳರು, ಮನೆಯಲ್ಲಿದ್ದ 1 ಲಕ್ಷ ರೂಪಾಯಿ ನಗದು, ಐದು ಪೌಂಡ್​ ಚಿನ್ನಾಭರಣಗಳ ಜೊತೆಗೆ ಮಣಿಕಂದನ್​ ಅವರು ತಮ್ಮ ಸಿನಿಮಾಗಳಿಗಾಗಿ ಪಡೆದಿದ್ದ ರಾಷ್ಟ್ರೀಯ ಪ್ರಶಸ್ತಿಯ ಬೆಳ್ಳಿ ಪದಕಗಳನ್ನೂ ಕದ್ದು ಪರಾರಿಯಾಗಿದ್ದರು.

National Award-winning director Manikandan's house theft; Thieves returned national award's silver medals with forgive letter
ನಿರ್ದೇಶಕ ಮಣಿಕಂದನ್​ ಮನೆಯಲ್ಲಿ ದರೋಡೆ: ಕ್ಷಮಾಪಣೆ ಪತ್ರದ ಜೊತೆ ರಾಷ್ಟ್ರಪ್ರಶಸ್ತಿ ಪದಕಗಳನ್ನಷ್ಟೇ ಹಿಂತಿರುಗಿಸಿದ ಕಳ್ಳರು

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಉಸಿಲಂಪಟ್ಟಿ ನಗರ ಠಾಣೆ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಆದರೆ,ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಳ್ಳರು ತಾವು ಕದ್ದೊಯ್ದಿದ್ದ ವಸ್ತುಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಯ ಪದಕಗಳನ್ನು ಮಾತ್ರ ಕ್ಷಮಾಪಣಾ ಪತ್ರದೊಂದಿಗೆ ವಾಪಸ್​ ನೀಡಿದ್ದಾರೆ. ಪದಕಗಳನ್ನು ಹಾಗೂ ಕ್ಷಮಾಪಣಾ ಪತ್ರವನ್ನು ಕ್ಯಾರಿ ಬ್ಯಾಗ್​ನಲ್ಲಿ ಕಟ್ಟಿ, ಮನೆಯ ಮುಂದಿನ ಗೇಟ್​ನಲ್ಲಿರಿಸಿ ಪರಾರಿಯಾಗಿದ್ದಾರೆ.

ತಮಿಳು ಚಿತ್ರರಂಗಕ್ಕೆ ಸಹಾಯಕ ಸಿನಿಮಾಟೋಗ್ರಾಫರ್​ ಆಗಿ ಪದಾರ್ಪಣೆ ಮಾಡಿದ್ದ ಮಣಿಕಂದನ್​ ಅವರು ನಂತರ ನಿರ್ದೇಶಕರಾದರು. ಕಾಕ ಮುಟ್ಟೈ, ಕುಟ್ರಮೆ ತಂದನೈ, ಆಂಡವನ್​ ಕಟ್ಟಲೈ, ಮತ್ತು ಕಡೈಸಿ ವಿವಸಾಯಿ ಮುಂತಾದ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಅವುಗಳಲ್ಲಿ ಕಾಕ ಮುಟ್ಟೈ ಹಾಗೂ ಕಡೈಸಿ ವಿವಸಾಯಿ ಸಿನಿಮಾಗಳು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ.

ಸದ್ಯ ಮಣಿಕಂದನ್​ ಅವರು ಡಿಸ್ನಿ + ಹಾಟ್​​ಸ್ಟಾರ್​ನಲ್ಲಿ ನಟ ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹೊಸ ವೆಬ್​ ಸಿರೀಸ್​ ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ. 'ಆಂಡವನ್​ ಕಟ್ಟಲೈ', 'ಕಡೈಸಿ ವಿವಸಾಯಿ' ಸಿನಿಮಾಗಳ ನಂತರ ವಿಜಯ್​ ಸೇತುಪತಿ ಹಾಗೂ ಮಣಿಕಂದನ್​ ಅವರ ಕಾಂಬಿನೇಷನ್​ನಲ್ಲಿ ಮೂರನೇ ಪ್ರಾಜೆಕ್ಟ್​ ಇದಾಗಿದೆ. ಈ ವೆಬ್​ ಸಿರೀಸ್​ಗೆ 7ಸಿ ನ ಎಂಟರ್​ಟೈನ್​ಮೆಂಟ್​ ಪ್ರೈವೇಟ್​ ಲಿಮಿಟೆಡ್​ನ ಪಿ. ಅರುಮುಗ ಕುಮಾರ್​ ಬಂಡವಾಳ ಹೂಡಿದ್ದಾರೆ. ರಾಜೇಶ್​ ಮುರುಗೇಶನ್​ ಅವರ ಸಂಗೀತ ಹಾಗೂ ಷಣ್ಮುಗ ಸುಂದರಂ ಅವರ ಛಾಯಾಗ್ರಹಣ ವೆಬ್​ ಸಿರೀಸ್​ಗಿದೆ.

ಇದನ್ನೂ ಓದಿ: 'ಫೋಟೋ' ಜೊತೆಗೆ ಪ್ರಕಾಶ್ ರಾಜ್: ಲಾಕ್​ಡೌನ್ ಸಂಕಷ್ಟದ ಕಥೆ ಪ್ರಸೆಂಟ್ ಮಾಡ್ತಿದ್ದಾರೆ ಬಹುಭಾಷಾ ನಟ

Last Updated : Feb 13, 2024, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.