ETV Bharat / bharat

ಹೈದರಾಬಾದ್​-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ಘೋಷಣೆ - Hyderabad Bengaluru Corridor - HYDERABAD BENGALURU CORRIDOR

ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 12 ಪಥಗಳಿಗೆ ವಿಸ್ತರಣೆಯಾಗಲಿದೆ. ಇದರಿಂದ ಆಂಧ್ರ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ.

UNION BUDGET 2024  HYDERABAD BANGALORE CORRIDOR  DEVELOPMENT INDUSTRIAL CORRIDOR
ಹೈದರಾಬಾದ್​-ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಹಣಕಾಸು ನೆರವು (ETV Bharat)
author img

By ETV Bharat Karnataka Team

Published : Jul 23, 2024, 12:22 PM IST

ನವದೆಹಲಿ: ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ವಿಶೇಷ ಹಣಕಾಸು ನೆರವು ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ತಮ್ಮ ಬಜೆಟ್‌ ಭಾಷಣದಲ್ಲಿ ಘೋಷಿಸಿದ್ದಾರೆ. ಇದರಿಂದಾಗಿ ಆಂಧ್ರ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ದೊರೆಯಲಿದೆ.

ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳ ಮೂಲಕ ಹಾದು ಹೋಗುವ ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್​ಹೆಚ್-44) ಈಗಿನ ನಾಲ್ಕು ಪಥ​​ಗಳಿಂದ 12 ಪಥಗಳಿಗೆ ವಿಸ್ತರಣೆಯಾಗಲಿದೆ. ಎರಡು ಮೆಟ್ರೋ ನಗರಗಳ ನಡುವಿನ ವಾಹನ ದಟ್ಟಣೆ ಮತ್ತು ಭವಿಷ್ಯದ ದೃಷ್ಟಿಯಿಂದಾಗಿಯೂ ಈ ರಸ್ತೆಯನ್ನು 12 ಪಥಗಳಾಗಿ ವಿಸ್ತರಿಸಲು ಕೇಂದ್ರ ಸಿದ್ಧವಾಗಿದೆ. ಈ ಹೆದ್ದಾರಿಯಿಂದ ಆಂಧ್ರ ಮತ್ತು ತೆಲಂಗಾಣ ಜಿಲ್ಲೆಗಳಲ್ಲಿ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯ ನಿರೀಕ್ಷೆಯಿದೆ.

ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಒಟ್ಟು ವಿಸ್ತೀರ್ಣ 576 ಕಿ.ಮೀ. ಇದರಲ್ಲಿ ಆಂಧ್ರ ಪ್ರದೇಶದಲ್ಲಿ 260 ಕಿ.ಮೀ., ತೆಲಂಗಾಣದ 210 ಕಿ.ಮೀ ಮತ್ತು ಕರ್ನಾಟಕದಲ್ಲಿ 106 ಕಿ.ಮೀ. ಹಾದು ಹೋಗಲಿದೆ. ಈ ಹೆದ್ದಾರಿ ಕರ್ನೂಲ್, ಡಾನ್, ಗುತ್ತಿ, ಅನಂತಪುರ ಮತ್ತು ಪೆನುಕೊಂಡ ಮೂಲಕ ಹಾದು ಹೋಗುತ್ತದೆ.

ವಿಶಾಲ ರಸ್ತೆಗಳು, ವಿಮಾನ ನಿಲ್ದಾಣಗಳು ಮತ್ತು ಬಂದರು ಸಮೀಪ ಉದ್ಯಮ ಸ್ಥಾಪಿಸಲು ಕೈಗಾರಿಕೋದ್ಯಮಿಗಳು ಮುಂದಾಗುವುದು ಸಾಮಾನ್ಯ. ಇದರೊಂದಿಗೆ ಕಡಿಮೆ ಬೆಲೆಗೆ ಭೂಮಿ ಸಿಕ್ಕರೆ ಅಲ್ಲಿ ಕೈಗಾರಿಕೆಗಳು ಹೆಚ್ಚು ತಲೆಎತ್ತುತ್ತವೆ. ಈಗ ಹೈದರಾಬಾದ್-ಬೆಂಗಳೂರು ಹೆದ್ದಾರಿಯ ವಿಸ್ತರಣೆಯಲ್ಲೂ ಇದೇ ನಡೆಯಲಿದೆ. ಸಂಯುಕ್ತ ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳು ಈ ಎಲ್ಲಾ ಪ್ರಯೋಜನಗಳನ್ನು ಹೊಂದಲಿವೆ ಎಂದು ಕೈಗಾರಿಕೋದ್ಯಮಿಗಳ ನಿರೀಕ್ಷೆ.

  • ಹೈದರಾಬಾದ್-ಬೆಂಗಳೂರು ಹೆದ್ದಾರಿ ವಿಸ್ತರಣೆಯಿಂದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳು ಕೈಗಾರಿಕಾ ಕೇಂದ್ರಗಳಾಗಲಿವೆ.
  • ಕೇಂದ್ರ ಸರ್ಕಾರದ ಸಂಸ್ಥೆಗಳಾದ ಕಸ್ಟಮ್ಸ್, ಇಂಡೈರೆಕ್ಟ್​ ಟ್ಯಾಕ್ಸಸ್​, ಮಾದಕ ವಸ್ತುಗಳ ರಾಷ್ಟ್ರೀಯ ಅಕಾಡೆಮಿ (NASIN) ಅನ್ನು ಈಗಾಗಲೇ ಅನಂತಪುರ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಬಿಹೆಚ್ಇಎಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
  • ಈ ಹಿಂದೆ ಚಂದ್ರಬಾಬು ಅವರ ಪ್ರಯತ್ನದಿಂದ ಪೆನುಕೊಂಡದಲ್ಲಿ ಕಿಯಾ ಉದ್ಯಮ ಸ್ಥಾಪನೆಯಾಗಿ ಆಂಧ್ರಪ್ರದೇಶದ ಸ್ವರೂಪವೇ ಬದಲಾಯಿತು. ಪೆನುಕೊಂಡದಿಂದ ಪಾಲಸಮುದ್ರಕ್ಕೆ ಸುಮಾರು 30 ಕಿ.ಮೀ. 18 ಸಂಬಂಧಿತ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ.
  • ಎಲೆಕ್ಟ್ರಿಕ್ ಬಸ್‌ಗಳು ಮತ್ತು ವಿಮಾನದ ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳಿಗೆ ಈ ಪ್ರದೇಶದಲ್ಲಿ ಭೂಮಿಯನ್ನು ಹಂಚಿಕೆ ಮಾಡಲಾಗಿದೆ.
  • 12 ಪಥಗಳಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕೈಗಾರಿಕೆಗಳು ಬರಲು ಅವಕಾಶ ಕಲ್ಪಿಸಲಿದೆ.
  • ಈ ಹೆದ್ದಾರಿಯ ಸುತ್ತಲಿನ ಸರ್ಕಾರಿ ಜಮೀನುಗಳನ್ನು ಗುರುತಿಸಿ ಅವುಗಳಲ್ಲಿ ಎಪಿಐಐಸಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಿದರೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳೂ ಸಹ ಈ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತವೆ.

ಇದನ್ನೂ ಓದಿ: ಲೈವ್ ಮೋದಿ 3.0 ಸರ್ಕಾರದ ಮೊದಲ ಬಜೆಟ್‌: 3 ಕೋಟಿ ಮನೆ ನಿರ್ಮಾಣ, ಮಹಿಳೆಯರಿಗೆ 3 ಸಾವಿರ ಕೋಟಿ ಅನುದಾನ - Union Budget 2024

ನವದೆಹಲಿ: ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ ವಿಶೇಷ ಹಣಕಾಸು ನೆರವು ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ತಮ್ಮ ಬಜೆಟ್‌ ಭಾಷಣದಲ್ಲಿ ಘೋಷಿಸಿದ್ದಾರೆ. ಇದರಿಂದಾಗಿ ಆಂಧ್ರ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ದೊರೆಯಲಿದೆ.

ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳ ಮೂಲಕ ಹಾದು ಹೋಗುವ ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್​ಹೆಚ್-44) ಈಗಿನ ನಾಲ್ಕು ಪಥ​​ಗಳಿಂದ 12 ಪಥಗಳಿಗೆ ವಿಸ್ತರಣೆಯಾಗಲಿದೆ. ಎರಡು ಮೆಟ್ರೋ ನಗರಗಳ ನಡುವಿನ ವಾಹನ ದಟ್ಟಣೆ ಮತ್ತು ಭವಿಷ್ಯದ ದೃಷ್ಟಿಯಿಂದಾಗಿಯೂ ಈ ರಸ್ತೆಯನ್ನು 12 ಪಥಗಳಾಗಿ ವಿಸ್ತರಿಸಲು ಕೇಂದ್ರ ಸಿದ್ಧವಾಗಿದೆ. ಈ ಹೆದ್ದಾರಿಯಿಂದ ಆಂಧ್ರ ಮತ್ತು ತೆಲಂಗಾಣ ಜಿಲ್ಲೆಗಳಲ್ಲಿ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯ ನಿರೀಕ್ಷೆಯಿದೆ.

ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಒಟ್ಟು ವಿಸ್ತೀರ್ಣ 576 ಕಿ.ಮೀ. ಇದರಲ್ಲಿ ಆಂಧ್ರ ಪ್ರದೇಶದಲ್ಲಿ 260 ಕಿ.ಮೀ., ತೆಲಂಗಾಣದ 210 ಕಿ.ಮೀ ಮತ್ತು ಕರ್ನಾಟಕದಲ್ಲಿ 106 ಕಿ.ಮೀ. ಹಾದು ಹೋಗಲಿದೆ. ಈ ಹೆದ್ದಾರಿ ಕರ್ನೂಲ್, ಡಾನ್, ಗುತ್ತಿ, ಅನಂತಪುರ ಮತ್ತು ಪೆನುಕೊಂಡ ಮೂಲಕ ಹಾದು ಹೋಗುತ್ತದೆ.

ವಿಶಾಲ ರಸ್ತೆಗಳು, ವಿಮಾನ ನಿಲ್ದಾಣಗಳು ಮತ್ತು ಬಂದರು ಸಮೀಪ ಉದ್ಯಮ ಸ್ಥಾಪಿಸಲು ಕೈಗಾರಿಕೋದ್ಯಮಿಗಳು ಮುಂದಾಗುವುದು ಸಾಮಾನ್ಯ. ಇದರೊಂದಿಗೆ ಕಡಿಮೆ ಬೆಲೆಗೆ ಭೂಮಿ ಸಿಕ್ಕರೆ ಅಲ್ಲಿ ಕೈಗಾರಿಕೆಗಳು ಹೆಚ್ಚು ತಲೆಎತ್ತುತ್ತವೆ. ಈಗ ಹೈದರಾಬಾದ್-ಬೆಂಗಳೂರು ಹೆದ್ದಾರಿಯ ವಿಸ್ತರಣೆಯಲ್ಲೂ ಇದೇ ನಡೆಯಲಿದೆ. ಸಂಯುಕ್ತ ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳು ಈ ಎಲ್ಲಾ ಪ್ರಯೋಜನಗಳನ್ನು ಹೊಂದಲಿವೆ ಎಂದು ಕೈಗಾರಿಕೋದ್ಯಮಿಗಳ ನಿರೀಕ್ಷೆ.

  • ಹೈದರಾಬಾದ್-ಬೆಂಗಳೂರು ಹೆದ್ದಾರಿ ವಿಸ್ತರಣೆಯಿಂದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳು ಕೈಗಾರಿಕಾ ಕೇಂದ್ರಗಳಾಗಲಿವೆ.
  • ಕೇಂದ್ರ ಸರ್ಕಾರದ ಸಂಸ್ಥೆಗಳಾದ ಕಸ್ಟಮ್ಸ್, ಇಂಡೈರೆಕ್ಟ್​ ಟ್ಯಾಕ್ಸಸ್​, ಮಾದಕ ವಸ್ತುಗಳ ರಾಷ್ಟ್ರೀಯ ಅಕಾಡೆಮಿ (NASIN) ಅನ್ನು ಈಗಾಗಲೇ ಅನಂತಪುರ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಬಿಹೆಚ್ಇಎಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
  • ಈ ಹಿಂದೆ ಚಂದ್ರಬಾಬು ಅವರ ಪ್ರಯತ್ನದಿಂದ ಪೆನುಕೊಂಡದಲ್ಲಿ ಕಿಯಾ ಉದ್ಯಮ ಸ್ಥಾಪನೆಯಾಗಿ ಆಂಧ್ರಪ್ರದೇಶದ ಸ್ವರೂಪವೇ ಬದಲಾಯಿತು. ಪೆನುಕೊಂಡದಿಂದ ಪಾಲಸಮುದ್ರಕ್ಕೆ ಸುಮಾರು 30 ಕಿ.ಮೀ. 18 ಸಂಬಂಧಿತ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ.
  • ಎಲೆಕ್ಟ್ರಿಕ್ ಬಸ್‌ಗಳು ಮತ್ತು ವಿಮಾನದ ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳಿಗೆ ಈ ಪ್ರದೇಶದಲ್ಲಿ ಭೂಮಿಯನ್ನು ಹಂಚಿಕೆ ಮಾಡಲಾಗಿದೆ.
  • 12 ಪಥಗಳಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕೈಗಾರಿಕೆಗಳು ಬರಲು ಅವಕಾಶ ಕಲ್ಪಿಸಲಿದೆ.
  • ಈ ಹೆದ್ದಾರಿಯ ಸುತ್ತಲಿನ ಸರ್ಕಾರಿ ಜಮೀನುಗಳನ್ನು ಗುರುತಿಸಿ ಅವುಗಳಲ್ಲಿ ಎಪಿಐಐಸಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಿದರೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳೂ ಸಹ ಈ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತವೆ.

ಇದನ್ನೂ ಓದಿ: ಲೈವ್ ಮೋದಿ 3.0 ಸರ್ಕಾರದ ಮೊದಲ ಬಜೆಟ್‌: 3 ಕೋಟಿ ಮನೆ ನಿರ್ಮಾಣ, ಮಹಿಳೆಯರಿಗೆ 3 ಸಾವಿರ ಕೋಟಿ ಅನುದಾನ - Union Budget 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.