ETV Bharat / bharat

ಎಬಿವಿಪಿ ರಾಜ್ಯ ಕಾರ್ಯದರ್ಶಿಯ ಕೂದಲು ಎಳೆದು ಬೀಳಿಸಿದ ತೆಲಂಗಾಣ ಮಹಿಳಾ ಕಾನ್ಸ್​ಟೇಬಲ್

author img

By ETV Bharat Karnataka Team

Published : Jan 25, 2024, 12:12 PM IST

Lady Cops dragging an ABVP woman leader: ಪ್ರತಿಭಟನಾನಿರತ ಎಬಿವಿಪಿ ರಾಜ್ಯ ಕಾರ್ಯದರ್ಶಿಯನ್ನು ತೆಲಂಗಾಣ ಮಹಿಳಾ ಕಾನ್ಸ್​ಟೇಬಲ್ ತಲೆಗೂದಲು​ ಎಳೆದು ಬೀಳಿಸಿರುವ ವಿಡಿಯೋ ವೈರಲ್​ ಆಗಿದ್ದು ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.

telangana
ಕೂದಲು ಎಳೆದು ಬೀಳಿಸಿದ ತೆಲಂಗಾಣ ಕಾನ್ಸ್​ಟೇಬಲ್

ರಂಗಾರೆಡ್ಡಿ(ತೆಲಂಗಾಣ): ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿದ್ದ ವೇಳೆ ಎಬಿವಿಪಿ ಮಹಿಳಾ ರಾಜ್ಯ ಕಾರ್ಯದರ್ಶಿಯನ್ನು ಮಹಿಳಾ ಕಾನ್ಸ್​ಟೇಬಲ್​​ ಕೂದಲು ಹಿಡಿದು ಎಳೆದು ಕೆಳಗೆ ಬೀಳಿಸಿರುವ ಘಟನೆಯ ವಿಡಿಯೋ ವೈರಲ್​ ಆಗುತ್ತಿದೆ.

ನಡೆದ್ದಾದರೂ ಏನು?: ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳ ಭೂಮಿಯನ್ನು ಹೈಕೋರ್ಟ್​​ ನಿರ್ಮಾಣಕ್ಕೆ ಮಂಜೂರು ಮಾಡಬಾರದು ಎಂದು ಆಗ್ರಹಿಸಿ ಕೆಲ ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಎಬಿವಿಪಿ ಮುಖಂಡರು ಬುಧವಾರ ಬೆಂಬಲ ಘೋಷಿಸಿದ್ದಲ್ಲದೇ ರಾಜೇಂದ್ರನಗರದ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಧರಣಿ ನಡೆಸಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಡಿಸಿಎಂ ವ್ಯಾನ್‌ನಲ್ಲಿ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಠಾಣೆಗೆ ಕರೆದೊಯ್ದರು.

ಈ ವೇಳೆ ಎಬಿವಿಪಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಝಾನ್ಸಿ ಅವರು ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿರುವಾಗ ಹಿಂದಿನಿಂದ ದ್ವಿಚಕ್ರದಲ್ಲಿ ಬಂದ ಇಬ್ಬರು ಮಹಿಳಾ ಕಾನ್ಸ್​​ಟೇಬಲ್ಸ್​​​ ಆಕೆಯ ಕೂದಲನ್ನು ಹಿಡಿದು ಎಳೆದಿದ್ದಾರೆ. ಪರಿಣಾಮ ಆಕೆ ರಸ್ತೆ ಮೇಲೆ ಬಿದ್ದಿದ್ದಾರೆ. ತಕ್ಷಣವೇ ಪೊಲೀಸ್​ ಸಿಬ್ಬಂದಿ ಗಾಡಿ ನಿಲ್ಲಿಸಿದರೂ ಆಕೆಯ ಕೂದಲನ್ನು ಮಾತ್ರ ಬಿಡದೇ ಹಿಡಿದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಇಬ್ಬರ ಮಹಿಳಾ ಪೊಲೀಸ್​ ಸಿಬ್ಬಂದಿಯ ದುರ್ವತೆನೆಯನ್ನು ಪ್ರತಿಪಕ್ಷಗಳು ಮತ್ತು ನೆಟ್ಟಿಗರು ಟೀಕಿಸುತ್ತಿದ್ದಾರೆ. ಮಹಿಳಾ ಪೊಲೀಸರ ವಿರುದ್ಧ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ಅವಿನಾಶ್ ಮಹಂತಿ ತಿಳಿಸಿದ್ದಾರೆ.

ಬಿಆರ್​ಎಸ್ ಎಂಎಲ್​ಸಿ ಕವಿತಾ ಖಂಡನೆ: ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ತೆಲಂಗಾಣ ಪೊಲೀಸರು ತೆಗೆದುಕೊಂಡಿರುವ ಕ್ರಮ ಅಮಾನವೀಯ. ಈ ಘಟನೆ ಅತ್ಯಂತ ಕಳವಳಕಾರಿಯಾಗಿದೆ. ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗುವುದು ಮತ್ತು ಅವರ ಮೇಲೆ ದುರ್ವತನೆ ತೋರುವುದು ಸ್ವೀಕಾರಾರ್ಹವಲ್ಲ. ಈ ದುರಹಂಕಾರದ ವರ್ತನೆಗೆ ತೆಲಂಗಾಣ ಪೊಲೀಸರು ಕ್ಷಮೆಯಾಚಿಸಬೇಕು. ಮಾನವ ಹಕ್ಕುಗಳ ಆಯೋಗವು ಸಂಬಂಧಪಟ್ಟವರ ವಿರುದ್ಧ ಶೀಘ್ರ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು, ಈ ಘಟನೆಗೆ ಸಿಪಿಎಂ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಜೂಲಕಾಂತಿ ರಂಗಾರೆಡ್ಡಿ ಮಾತನಾಡಿ, ಹೈಕೋರ್ಟ್ ನಿರ್ಮಾಣಕ್ಕೆ ಬೇರೆಡೆ ಜಾಗ ಮಂಜೂರು ಮಾಡಬೇಕು ಎಂದಿದ್ದಾರೆ. ಅಲ್ಲದೆ ಬುಧವಾರ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲವನ್ನು ಅವರು ಘೋಷಿಸಿದ್ದರು.

ಇದನ್ನೂ ಓದಿ: ತೆಲಂಗಾಣ ಸರ್ಕಾರಿ ಅಧಿಕಾರಿ ಬಳಿ ₹100 ಕೋಟಿ ಮೌಲ್ಯದ ಆಸ್ತಿ! ಎಸಿಬಿ ದಾಳಿಯಲ್ಲಿ ಬಹಿರಂಗ

ರಂಗಾರೆಡ್ಡಿ(ತೆಲಂಗಾಣ): ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿದ್ದ ವೇಳೆ ಎಬಿವಿಪಿ ಮಹಿಳಾ ರಾಜ್ಯ ಕಾರ್ಯದರ್ಶಿಯನ್ನು ಮಹಿಳಾ ಕಾನ್ಸ್​ಟೇಬಲ್​​ ಕೂದಲು ಹಿಡಿದು ಎಳೆದು ಕೆಳಗೆ ಬೀಳಿಸಿರುವ ಘಟನೆಯ ವಿಡಿಯೋ ವೈರಲ್​ ಆಗುತ್ತಿದೆ.

ನಡೆದ್ದಾದರೂ ಏನು?: ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳ ಭೂಮಿಯನ್ನು ಹೈಕೋರ್ಟ್​​ ನಿರ್ಮಾಣಕ್ಕೆ ಮಂಜೂರು ಮಾಡಬಾರದು ಎಂದು ಆಗ್ರಹಿಸಿ ಕೆಲ ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಎಬಿವಿಪಿ ಮುಖಂಡರು ಬುಧವಾರ ಬೆಂಬಲ ಘೋಷಿಸಿದ್ದಲ್ಲದೇ ರಾಜೇಂದ್ರನಗರದ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಧರಣಿ ನಡೆಸಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಡಿಸಿಎಂ ವ್ಯಾನ್‌ನಲ್ಲಿ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಠಾಣೆಗೆ ಕರೆದೊಯ್ದರು.

ಈ ವೇಳೆ ಎಬಿವಿಪಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಝಾನ್ಸಿ ಅವರು ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಿರುವಾಗ ಹಿಂದಿನಿಂದ ದ್ವಿಚಕ್ರದಲ್ಲಿ ಬಂದ ಇಬ್ಬರು ಮಹಿಳಾ ಕಾನ್ಸ್​​ಟೇಬಲ್ಸ್​​​ ಆಕೆಯ ಕೂದಲನ್ನು ಹಿಡಿದು ಎಳೆದಿದ್ದಾರೆ. ಪರಿಣಾಮ ಆಕೆ ರಸ್ತೆ ಮೇಲೆ ಬಿದ್ದಿದ್ದಾರೆ. ತಕ್ಷಣವೇ ಪೊಲೀಸ್​ ಸಿಬ್ಬಂದಿ ಗಾಡಿ ನಿಲ್ಲಿಸಿದರೂ ಆಕೆಯ ಕೂದಲನ್ನು ಮಾತ್ರ ಬಿಡದೇ ಹಿಡಿದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಇಬ್ಬರ ಮಹಿಳಾ ಪೊಲೀಸ್​ ಸಿಬ್ಬಂದಿಯ ದುರ್ವತೆನೆಯನ್ನು ಪ್ರತಿಪಕ್ಷಗಳು ಮತ್ತು ನೆಟ್ಟಿಗರು ಟೀಕಿಸುತ್ತಿದ್ದಾರೆ. ಮಹಿಳಾ ಪೊಲೀಸರ ವಿರುದ್ಧ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ಅವಿನಾಶ್ ಮಹಂತಿ ತಿಳಿಸಿದ್ದಾರೆ.

ಬಿಆರ್​ಎಸ್ ಎಂಎಲ್​ಸಿ ಕವಿತಾ ಖಂಡನೆ: ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ತೆಲಂಗಾಣ ಪೊಲೀಸರು ತೆಗೆದುಕೊಂಡಿರುವ ಕ್ರಮ ಅಮಾನವೀಯ. ಈ ಘಟನೆ ಅತ್ಯಂತ ಕಳವಳಕಾರಿಯಾಗಿದೆ. ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗುವುದು ಮತ್ತು ಅವರ ಮೇಲೆ ದುರ್ವತನೆ ತೋರುವುದು ಸ್ವೀಕಾರಾರ್ಹವಲ್ಲ. ಈ ದುರಹಂಕಾರದ ವರ್ತನೆಗೆ ತೆಲಂಗಾಣ ಪೊಲೀಸರು ಕ್ಷಮೆಯಾಚಿಸಬೇಕು. ಮಾನವ ಹಕ್ಕುಗಳ ಆಯೋಗವು ಸಂಬಂಧಪಟ್ಟವರ ವಿರುದ್ಧ ಶೀಘ್ರ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು, ಈ ಘಟನೆಗೆ ಸಿಪಿಎಂ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಜೂಲಕಾಂತಿ ರಂಗಾರೆಡ್ಡಿ ಮಾತನಾಡಿ, ಹೈಕೋರ್ಟ್ ನಿರ್ಮಾಣಕ್ಕೆ ಬೇರೆಡೆ ಜಾಗ ಮಂಜೂರು ಮಾಡಬೇಕು ಎಂದಿದ್ದಾರೆ. ಅಲ್ಲದೆ ಬುಧವಾರ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲವನ್ನು ಅವರು ಘೋಷಿಸಿದ್ದರು.

ಇದನ್ನೂ ಓದಿ: ತೆಲಂಗಾಣ ಸರ್ಕಾರಿ ಅಧಿಕಾರಿ ಬಳಿ ₹100 ಕೋಟಿ ಮೌಲ್ಯದ ಆಸ್ತಿ! ಎಸಿಬಿ ದಾಳಿಯಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.