ETV Bharat / bharat

'ರೇಸ್‌ಗೆ ಸಿದ್ಧ' : ಬೈಕ್‌ ಹಿಂಬದಿ ಬರಹವೇ ಮೊಬೈಲ್ ಕಳ್ಳರ ಪತ್ತೆಗೆ ನೀಡಿತ್ತು ಸುಳಿವು! - Cell Phone Thieves arrested

author img

By ETV Bharat Karnataka Team

Published : Jul 31, 2024, 5:39 PM IST

ಸಾಲ ಮಾಡಿ ತಂದೆ ಕೊಡಿಸಿದ್ದ ಬೈಕ್​ನ್ನು ಮೊಬೈಲ್ ಕಳ್ಳತನಕ್ಕೆ ಬಳಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹೈದರಾಬಾದ್​ ಪೊಲೀಸರು ಯಶಸ್ವಿಯಾಗಿದ್ದಾರೆ.

BIKE
ಬೈಕ್ (ETV Bharat)

ಹೈದರಾಬಾದ್ : ಬಹುತೇಕ ತಂದೆ-ತಾಯಂದಿರು ತಮ್ಮ ಮಕ್ಕಳು ಇಷ್ಟಪಟ್ಟಿದ್ದನ್ನು ಕೊಡಿಸುತ್ತಾರೆ. ಆದ್ರೆ ಕೆಲ ಮಕ್ಕಳು ಮಾತ್ರ ಅಪ್ಪ-ಅಮ್ಮನ ಮೇಲೆ ಗೌರವವಿಟ್ಟು ಅವ್ರು ಕೊಡಿಸಿದ ವಸ್ತುಗಳಿಂದ ಉತ್ತಮ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಪ್ರಕರಣ ಈ ಮಾತಿಗೆ ತದ್ವಿರುದ್ಧವಾಗಿದೆ. ಅಪ್ಪ ಕೊಡಿಸಿದ ಹೊಸ ಬೈಕ್​ಅನ್ನು ಮಗ ಕಳ್ಳತನ ಕೃತ್ಯಕ್ಕೆ ಬಳಸಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ಹೈದರಾಬಾದ್‌ನಲ್ಲಿ ಸೆಲ್ ಫೋನ್ ಕಳ್ಳತನದ ಸರಣಿ ಪ್ರಕರಣಗಳನ್ನು ಭೇದಿಸುವಲ್ಲಿ ಬೈಕ್‌ನಲ್ಲಿನ ಹಿಂಬರಹವೇ ಸಹಕಾರಿಯಾಗಿದೆ. ಕದ್ದ ವಾಹನದ ಮೇಲಿನ ವಿಶಿಷ್ಟ ಬರಹವು ಪೊಲೀಸರನ್ನು ನೇರವಾಗಿ ಆರೋಪಿಗಳ ಬಳಿಗೆ ಕರೆದೊಯ್ದಿದೆ.

ಈ ತಿಂಗಳ 24 ರಂದು ರಾಮಕೃಷ್ಣ ಎಂಬುವರು ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ 25ರ ಆಸ್ಪತ್ರೆಯ ಹೊರಗೆ ಕಾಯುತ್ತಿದ್ದಾಗ ಕೆಟಿಎಂ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಅವರ ಸೆಲ್ ಫೋನ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ನಂತರ ಈ ಕುರಿತಂತೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ತನಿಖೆಗೆ ಮುಂದಾದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ಬೈಕ್‌ನ ನಂಬರ್ ಪ್ಲೇಟ್ ಅಸ್ಪಷ್ಟವಾಗಿರುವುದು ಕಂಡುಬಂದಿದೆ. ಹೀಗಿದ್ರೂ ಪೊಲೀಸರು ಬೈಕ್​ನಲ್ಲಿ ಬರೆಯಲಾಗಿದ್ದ "ರೇಸ್ ಮಾಡಲು ಸಿದ್ಧವಾಗಿದೆ" ಎಂಬ ವಿಶಿಷ್ಟವಾದ ಉಲ್ಲೇಖವನ್ನು ಗಮನಿಸಿದ್ದಾರೆ.

ಕಳ್ಳರನ್ನು ಪತ್ತೆ ಹಚ್ಚಲು ನಿರ್ಧರಿಸಿದ ಜುಬಿಲಿ ಹಿಲ್ಸ್ ಪೊಲೀಸರು ಕೆಟಿಎಂ ಶೋರೂಂನೊಂದಿಗೆ ಸೇರಿ ಆ ಪ್ರದೇಶದಲ್ಲಿನ ಎಲ್ಲಾ ಕೆಟಿಎಂ ಬೈಕ್‌ಗಳ ದಾಖಲೆಗಳನ್ನು ಶೋಧಿಸಿದ್ದಾರೆ. ಇಷ್ಟೊಂದು ಮಾಹಿತಿ ನಡುವೆಯೂ ಬೈಕ್​ನ ಹಿಂದೆ ಬರೆದಿದ್ದ ಬರಹವು ಅವರಿಗೆ ಆರೋಪಿಯನ್ನು ಹಿಡಿಯಲು ಸುಲಭವಾಗಿದೆ.

"ರೆಡಿ ಟು ರೇಸ್" ಎಂಬ ಪದವು ಅವರ ಹುಡುಕಾಟವನ್ನು ಸರಳಗೊಳಿಸಲು ಮತ್ತು ಅವರನ್ನು ಬೇಗಂಪೇಟೆಯ 19 ವರ್ಷದ ವಿದ್ಯಾರ್ಥಿ ಮತ್ತು ಅವನ ಅಪ್ರಾಪ್ತ ಸಹಚರನ ಬಳಿಗೆ ಕರೆದೊಯ್ದಿದೆ.

ತನಿಖೆಯಲ್ಲಿ ಬಹಿರಂಗವಾಯ್ತು ಹಿನ್ನೆಲೆ : ವಿದ್ಯಾರ್ಥಿಯ ತಂದೆ ಟಿಫಿನ್ ಮಾರಾಟಗಾರರು. ತನ್ನ ಮಗನಿಗಾಗಿ ಸಾಲ ಪಡೆದು ಮಿನುಗುವ ಕೆಟಿಎಂ ಬೈಕ್​ ಮತ್ತು ಐಫೋನ್ ಖರೀದಿಸಿದ್ದರು. ಹೀಗಿದ್ದರೂ ಅವರ ಮಗ ಮತ್ತು ಅವನ ಸ್ನೇಹಿತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು. ತಮಗೆ ಕೊಡಿಸಿದ ಬೈಕ್​ನ್ನು ಇವರು ಮೊಬೈಲ್ ಕಳ್ಳತನಕ್ಕೆ ಬಳಸಿಕೊಂಡಿದ್ದರು.

ಆದರೆ ಇವರು ಬೈಕ್​ನ ಹಿಂದೆ 'ರೆಡಿ ಟು ರೇಸ್​' ಎಂಬ ಸ್ಲೋಗನ್ ಬರೆದುಕೊಂಡಿದ್ದರಿಂದ ಇವರ ಕೃತ್ಯ ಕೊನೆಗಾಣಿಸುವುದಕ್ಕೆ ಪೊಲೀಸರಿಗೆ ಸಹಾಯಕವಾಗಿದೆ. ಬೈಕ್​ನ ಹಿಂಬದಿ ಬರಹವು ಕೃತ್ಯಕ್ಕೆ ನಿರ್ಣಾಯಕ ಸುಳಿವಾಗಿ ಪರಿಣಮಿಸಿತು. ಅದು ಪೊಲೀಸರನ್ನು ನೇರವಾಗಿ ಆರೋಪಿಗಳ ಬಳಿಗೆ ಕರೆದೊಯ್ಯಿತು. ನಂತರ ಕಳ್ಳರನ್ನ ಪೊಲೀಸರು ತ್ವರಿತವಾಗಿ ಬಂಧಿಸಿದ್ದಾರೆ.

ಇದನ್ನೂ ಓದಿ : ಮೊಬೈಲ್​ ಟಾರ್ಚ್ ಆನ್ ಮಾಡುವ ಭರದಲ್ಲಿ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸ್ ಅತಿಥಿಯಾದ ಕಳ್ಳ - thief called emergency services

ಹೈದರಾಬಾದ್ : ಬಹುತೇಕ ತಂದೆ-ತಾಯಂದಿರು ತಮ್ಮ ಮಕ್ಕಳು ಇಷ್ಟಪಟ್ಟಿದ್ದನ್ನು ಕೊಡಿಸುತ್ತಾರೆ. ಆದ್ರೆ ಕೆಲ ಮಕ್ಕಳು ಮಾತ್ರ ಅಪ್ಪ-ಅಮ್ಮನ ಮೇಲೆ ಗೌರವವಿಟ್ಟು ಅವ್ರು ಕೊಡಿಸಿದ ವಸ್ತುಗಳಿಂದ ಉತ್ತಮ ಹವ್ಯಾಸ ಬೆಳೆಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಪ್ರಕರಣ ಈ ಮಾತಿಗೆ ತದ್ವಿರುದ್ಧವಾಗಿದೆ. ಅಪ್ಪ ಕೊಡಿಸಿದ ಹೊಸ ಬೈಕ್​ಅನ್ನು ಮಗ ಕಳ್ಳತನ ಕೃತ್ಯಕ್ಕೆ ಬಳಸಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ಹೈದರಾಬಾದ್‌ನಲ್ಲಿ ಸೆಲ್ ಫೋನ್ ಕಳ್ಳತನದ ಸರಣಿ ಪ್ರಕರಣಗಳನ್ನು ಭೇದಿಸುವಲ್ಲಿ ಬೈಕ್‌ನಲ್ಲಿನ ಹಿಂಬರಹವೇ ಸಹಕಾರಿಯಾಗಿದೆ. ಕದ್ದ ವಾಹನದ ಮೇಲಿನ ವಿಶಿಷ್ಟ ಬರಹವು ಪೊಲೀಸರನ್ನು ನೇರವಾಗಿ ಆರೋಪಿಗಳ ಬಳಿಗೆ ಕರೆದೊಯ್ದಿದೆ.

ಈ ತಿಂಗಳ 24 ರಂದು ರಾಮಕೃಷ್ಣ ಎಂಬುವರು ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ 25ರ ಆಸ್ಪತ್ರೆಯ ಹೊರಗೆ ಕಾಯುತ್ತಿದ್ದಾಗ ಕೆಟಿಎಂ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಅವರ ಸೆಲ್ ಫೋನ್ ಅನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ನಂತರ ಈ ಕುರಿತಂತೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ತನಿಖೆಗೆ ಮುಂದಾದ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ಬೈಕ್‌ನ ನಂಬರ್ ಪ್ಲೇಟ್ ಅಸ್ಪಷ್ಟವಾಗಿರುವುದು ಕಂಡುಬಂದಿದೆ. ಹೀಗಿದ್ರೂ ಪೊಲೀಸರು ಬೈಕ್​ನಲ್ಲಿ ಬರೆಯಲಾಗಿದ್ದ "ರೇಸ್ ಮಾಡಲು ಸಿದ್ಧವಾಗಿದೆ" ಎಂಬ ವಿಶಿಷ್ಟವಾದ ಉಲ್ಲೇಖವನ್ನು ಗಮನಿಸಿದ್ದಾರೆ.

ಕಳ್ಳರನ್ನು ಪತ್ತೆ ಹಚ್ಚಲು ನಿರ್ಧರಿಸಿದ ಜುಬಿಲಿ ಹಿಲ್ಸ್ ಪೊಲೀಸರು ಕೆಟಿಎಂ ಶೋರೂಂನೊಂದಿಗೆ ಸೇರಿ ಆ ಪ್ರದೇಶದಲ್ಲಿನ ಎಲ್ಲಾ ಕೆಟಿಎಂ ಬೈಕ್‌ಗಳ ದಾಖಲೆಗಳನ್ನು ಶೋಧಿಸಿದ್ದಾರೆ. ಇಷ್ಟೊಂದು ಮಾಹಿತಿ ನಡುವೆಯೂ ಬೈಕ್​ನ ಹಿಂದೆ ಬರೆದಿದ್ದ ಬರಹವು ಅವರಿಗೆ ಆರೋಪಿಯನ್ನು ಹಿಡಿಯಲು ಸುಲಭವಾಗಿದೆ.

"ರೆಡಿ ಟು ರೇಸ್" ಎಂಬ ಪದವು ಅವರ ಹುಡುಕಾಟವನ್ನು ಸರಳಗೊಳಿಸಲು ಮತ್ತು ಅವರನ್ನು ಬೇಗಂಪೇಟೆಯ 19 ವರ್ಷದ ವಿದ್ಯಾರ್ಥಿ ಮತ್ತು ಅವನ ಅಪ್ರಾಪ್ತ ಸಹಚರನ ಬಳಿಗೆ ಕರೆದೊಯ್ದಿದೆ.

ತನಿಖೆಯಲ್ಲಿ ಬಹಿರಂಗವಾಯ್ತು ಹಿನ್ನೆಲೆ : ವಿದ್ಯಾರ್ಥಿಯ ತಂದೆ ಟಿಫಿನ್ ಮಾರಾಟಗಾರರು. ತನ್ನ ಮಗನಿಗಾಗಿ ಸಾಲ ಪಡೆದು ಮಿನುಗುವ ಕೆಟಿಎಂ ಬೈಕ್​ ಮತ್ತು ಐಫೋನ್ ಖರೀದಿಸಿದ್ದರು. ಹೀಗಿದ್ದರೂ ಅವರ ಮಗ ಮತ್ತು ಅವನ ಸ್ನೇಹಿತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು. ತಮಗೆ ಕೊಡಿಸಿದ ಬೈಕ್​ನ್ನು ಇವರು ಮೊಬೈಲ್ ಕಳ್ಳತನಕ್ಕೆ ಬಳಸಿಕೊಂಡಿದ್ದರು.

ಆದರೆ ಇವರು ಬೈಕ್​ನ ಹಿಂದೆ 'ರೆಡಿ ಟು ರೇಸ್​' ಎಂಬ ಸ್ಲೋಗನ್ ಬರೆದುಕೊಂಡಿದ್ದರಿಂದ ಇವರ ಕೃತ್ಯ ಕೊನೆಗಾಣಿಸುವುದಕ್ಕೆ ಪೊಲೀಸರಿಗೆ ಸಹಾಯಕವಾಗಿದೆ. ಬೈಕ್​ನ ಹಿಂಬದಿ ಬರಹವು ಕೃತ್ಯಕ್ಕೆ ನಿರ್ಣಾಯಕ ಸುಳಿವಾಗಿ ಪರಿಣಮಿಸಿತು. ಅದು ಪೊಲೀಸರನ್ನು ನೇರವಾಗಿ ಆರೋಪಿಗಳ ಬಳಿಗೆ ಕರೆದೊಯ್ಯಿತು. ನಂತರ ಕಳ್ಳರನ್ನ ಪೊಲೀಸರು ತ್ವರಿತವಾಗಿ ಬಂಧಿಸಿದ್ದಾರೆ.

ಇದನ್ನೂ ಓದಿ : ಮೊಬೈಲ್​ ಟಾರ್ಚ್ ಆನ್ ಮಾಡುವ ಭರದಲ್ಲಿ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸ್ ಅತಿಥಿಯಾದ ಕಳ್ಳ - thief called emergency services

ETV Bharat Logo

Copyright © 2024 Ushodaya Enterprises Pvt. Ltd., All Rights Reserved.