ETV Bharat / bharat

'ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಕಡತಕ್ಕೆ ಸೀಮಿತ, ವಾಸ್ತವದಲ್ಲಿ ಜಾರಿಯೇ ಆಗಿಲ್ಲ': ಪ್ರಶಾಂತ್ ಕಿಶೋರ್

ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ವಾಸ್ತವದಲ್ಲಿ ಜಾರಿಯೇ ಆಗಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

author img

By ANI

Published : 3 hours ago

ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್ (IANS)

ಪಾಟ್ನಾ: ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಕೇವಲ ಸರ್ಕಾರಿ ಕಡತಗಳು ಮತ್ತು ಭಾಷಣಗಳಲ್ಲಿ ಅಸ್ತಿತ್ವದಲ್ಲಿದೆಯೇ ಹೊರತು ವಾಸ್ತವದಲ್ಲಿ ಎಲ್ಲಿಯೂ ಕಾನೂನಿನ ಅನುಷ್ಠಾನವೇ ಆಗಿಲ್ಲ ಎಂದು ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಬಿಹಾರದಲ್ಲಿ ಇಂದು ಕಳ್ಳಬಟ್ಟಿ ಸಾರಾಯಿ ದುರಂತದಲ್ಲಿ ಜನ ಸಾವಿಗೀಡಾಗಿರುವುದಕ್ಕೆ ಕಿಶೋರ್ ಇದೇ ಸಂದರ್ಭದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.

ಸಿವಾನ್ ಮತ್ತು ಸರನ್​ನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

"ಬಿಹಾರದಲ್ಲಿ ವಾಸ್ತವಿಕವಾಗಿ ಮದ್ಯ ನಿಷೇಧ ಜಾರಿಯೇ ಆಗಿಲ್ಲ ಎಂದು ಕಳೆದ ಮೂರು ವರ್ಷಗಳಿಂದ ಪ್ರತಿ ವೇದಿಕೆಯಲ್ಲೂ ಸಾರ್ವಜನಿಕವಾಗಿ ಹೇಳುತ್ತಿದ್ದೇನೆ. ಮದ್ಯ ನಿಷೇಧ ಕಾನೂನು ಸರ್ಕಾರಿ ದಾಖಲೆಗಳಲ್ಲಿ ಮತ್ತು ನಾಯಕರ ಭಾಷಣಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದೆ. ನಿನ್ನೆ ನಡೆದ ಘಟನೆ ದುರದೃಷ್ಟಕರ. ಒಂದೂವರೆ ವರ್ಷದ ಹಿಂದೆ ಹಿಂದೆ ಛಾಪ್ರಾದಲ್ಲಿ ನಕಲಿ ಸಾರಾಯಿ ಸೇವಿಸಿ 70ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಬಿಹಾರದಲ್ಲಿ ನಕಲಿ ಮದ್ಯದಿಂದ ಸಾವುಗಳು ಸಂಭವಿಸದ ಯಾವುದೇ ಜಿಲ್ಲೆ ಇಲ್ಲ. ಅನೇಕ ಘಟನೆಗಳು ಹೊರಜಗತ್ತಿಗೆ ಗೊತ್ತಾಗದೆ ಮುಚ್ಚಿ ಹೋಗುತ್ತವೆ. ಭ್ರಷ್ಟ ನಾಯಕರು ಮತ್ತು ಮಾಫಿಯಾಗಳು ಮಾತ್ರ ಇದರಿಂದ ಲಾಭ ಪಡೆಯುತ್ತಿದ್ದಾರೆ. ಇಷ್ಟೊಂದು ಸಾವುಗಳು ಸಂಭವಿಸಿದರೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಿಲ್ಲ. ಈ ಸರ್ಕಾರ ಅಷ್ಟೊಂದು ಸಂವೇದನಾರಹಿತವಾಗಿದೆ" ಎಂದು ಕಿಶೋರ್ ಹೇಳಿದರು.

ಕಳ್ಳಬಟ್ಟಿ ದುರಂತಕ್ಕೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಸರನ್ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಆಶಿಶ್, ಕೈಗಾರಿಕಾ ಸ್ಪಿರಿಟ್ ಬಳಸಿ ನಕಲಿ ಮದ್ಯ ತಯಾರಿಸಲಾಗಿದೆ ಎಂದು ತೋರುತ್ತದೆ. ಈ ಸ್ಪಿರಿಟ್ ಎಲ್ಲಿಂದ ಪೂರೈಕೆಯಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಎಎನ್ಐ ಜೊತೆ ಮಾತನಾಡಿದ ಆಶಿಶ್, "ನಕಲಿ ಮದ್ಯದಲ್ಲಿ ಕೈಗಾರಿಕಾ ಸ್ಪಿರಿಟ್ ಇತ್ತು ಎಂದು ಹೇಳಲಾಗಿದೆ. ಇದೆಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಎಸ್ಎಚ್ಒ ಮತ್ತು ಇತರ ಸಿಬ್ಬಂದಿಯನ್ನು ಪ್ರಶ್ನಿಸಲಾಗಿದೆ. ಅವರ ಪ್ರತಿಕ್ರಿಯೆಗಳು ತೃಪ್ತಿಕರವಾಗಿಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಸಹ ರಚಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 250 ಕಡೆಗಳಲ್ಲಿ ದಾಳಿ ನಡೆಸಿ 1,650 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ." ಎಂದರು.

ಇದನ್ನೂ ಓದಿ: ಪಾಕ್ ಪರ ಘೋಷಣೆ ಪ್ರಕರಣ: 21 ಬಾರಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವಂತೆ ಆರೋಪಿಗೆ ಹೈಕೋರ್ಟ್ ಆದೇಶ

ಪಾಟ್ನಾ: ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಕೇವಲ ಸರ್ಕಾರಿ ಕಡತಗಳು ಮತ್ತು ಭಾಷಣಗಳಲ್ಲಿ ಅಸ್ತಿತ್ವದಲ್ಲಿದೆಯೇ ಹೊರತು ವಾಸ್ತವದಲ್ಲಿ ಎಲ್ಲಿಯೂ ಕಾನೂನಿನ ಅನುಷ್ಠಾನವೇ ಆಗಿಲ್ಲ ಎಂದು ಜನ್ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಬಿಹಾರದಲ್ಲಿ ಇಂದು ಕಳ್ಳಬಟ್ಟಿ ಸಾರಾಯಿ ದುರಂತದಲ್ಲಿ ಜನ ಸಾವಿಗೀಡಾಗಿರುವುದಕ್ಕೆ ಕಿಶೋರ್ ಇದೇ ಸಂದರ್ಭದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.

ಸಿವಾನ್ ಮತ್ತು ಸರನ್​ನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ನಕಲಿ ಮದ್ಯ ಸೇವನೆಯಿಂದ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

"ಬಿಹಾರದಲ್ಲಿ ವಾಸ್ತವಿಕವಾಗಿ ಮದ್ಯ ನಿಷೇಧ ಜಾರಿಯೇ ಆಗಿಲ್ಲ ಎಂದು ಕಳೆದ ಮೂರು ವರ್ಷಗಳಿಂದ ಪ್ರತಿ ವೇದಿಕೆಯಲ್ಲೂ ಸಾರ್ವಜನಿಕವಾಗಿ ಹೇಳುತ್ತಿದ್ದೇನೆ. ಮದ್ಯ ನಿಷೇಧ ಕಾನೂನು ಸರ್ಕಾರಿ ದಾಖಲೆಗಳಲ್ಲಿ ಮತ್ತು ನಾಯಕರ ಭಾಷಣಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದೆ. ನಿನ್ನೆ ನಡೆದ ಘಟನೆ ದುರದೃಷ್ಟಕರ. ಒಂದೂವರೆ ವರ್ಷದ ಹಿಂದೆ ಹಿಂದೆ ಛಾಪ್ರಾದಲ್ಲಿ ನಕಲಿ ಸಾರಾಯಿ ಸೇವಿಸಿ 70ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಬಿಹಾರದಲ್ಲಿ ನಕಲಿ ಮದ್ಯದಿಂದ ಸಾವುಗಳು ಸಂಭವಿಸದ ಯಾವುದೇ ಜಿಲ್ಲೆ ಇಲ್ಲ. ಅನೇಕ ಘಟನೆಗಳು ಹೊರಜಗತ್ತಿಗೆ ಗೊತ್ತಾಗದೆ ಮುಚ್ಚಿ ಹೋಗುತ್ತವೆ. ಭ್ರಷ್ಟ ನಾಯಕರು ಮತ್ತು ಮಾಫಿಯಾಗಳು ಮಾತ್ರ ಇದರಿಂದ ಲಾಭ ಪಡೆಯುತ್ತಿದ್ದಾರೆ. ಇಷ್ಟೊಂದು ಸಾವುಗಳು ಸಂಭವಿಸಿದರೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಿಲ್ಲ. ಈ ಸರ್ಕಾರ ಅಷ್ಟೊಂದು ಸಂವೇದನಾರಹಿತವಾಗಿದೆ" ಎಂದು ಕಿಶೋರ್ ಹೇಳಿದರು.

ಕಳ್ಳಬಟ್ಟಿ ದುರಂತಕ್ಕೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಸರನ್ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಆಶಿಶ್, ಕೈಗಾರಿಕಾ ಸ್ಪಿರಿಟ್ ಬಳಸಿ ನಕಲಿ ಮದ್ಯ ತಯಾರಿಸಲಾಗಿದೆ ಎಂದು ತೋರುತ್ತದೆ. ಈ ಸ್ಪಿರಿಟ್ ಎಲ್ಲಿಂದ ಪೂರೈಕೆಯಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಎಎನ್ಐ ಜೊತೆ ಮಾತನಾಡಿದ ಆಶಿಶ್, "ನಕಲಿ ಮದ್ಯದಲ್ಲಿ ಕೈಗಾರಿಕಾ ಸ್ಪಿರಿಟ್ ಇತ್ತು ಎಂದು ಹೇಳಲಾಗಿದೆ. ಇದೆಲ್ಲಿಂದ ಬಂತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಎಸ್ಎಚ್ಒ ಮತ್ತು ಇತರ ಸಿಬ್ಬಂದಿಯನ್ನು ಪ್ರಶ್ನಿಸಲಾಗಿದೆ. ಅವರ ಪ್ರತಿಕ್ರಿಯೆಗಳು ತೃಪ್ತಿಕರವಾಗಿಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಸಹ ರಚಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 250 ಕಡೆಗಳಲ್ಲಿ ದಾಳಿ ನಡೆಸಿ 1,650 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ." ಎಂದರು.

ಇದನ್ನೂ ಓದಿ: ಪಾಕ್ ಪರ ಘೋಷಣೆ ಪ್ರಕರಣ: 21 ಬಾರಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವಂತೆ ಆರೋಪಿಗೆ ಹೈಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.