ETV Bharat / bharat

ಇಂದು ಇಂಜಿನಿಯರ್ಸ್​​​ ದಿನ! ಇವತ್ತೇ ಏಕೆ ಈ ಆಚರಣೆ?... ಇದಕ್ಕಿದೆ ಕನ್ನಡದ ನಂಟು! - honouring the legacy pioneer

author img

By ETV Bharat Karnataka Team

Published : Sep 15, 2024, 6:14 AM IST

1968 ರಲ್ಲಿ ಮೊದಲ ಬಾರಿಗೆ ಇಂಜಿನಿಯರ್ಸ್ ಡೇ ಆಚರಿಸಲಾಯಿತು. ಭಾರತೀಯ ಶಿಕ್ಷಣದಲ್ಲಿ ವಿಶೇಷವಾಗಿ ದೇಶಾದ್ಯಂತ ಎಂಜಿನಿಯರಿಂಗ್ ಸಮುದಾಯಗಳಿಂದ ಆಚರಿಸಲ್ಪಟ್ಟ ದಿನವಾಗಿದೆ.

honouring-the-legacy-of-a-pioneer-on-engineers-day
ಇಂದು ಇಂಜಿನಿಯರ್ ದಿನ! ಇವತ್ತೇ ಏಕೆ ಈ ಆಚರಣೆ?... ಇದಕ್ಕಿದೆ ಕನ್ನಡದ ನಂಟು! (ETV Bharat)

ಹೈದರಾಬಾದ್: ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಭಾರಿ ಮಹತ್ವ ಪಡೆದುಕೊಂಡಿದೆ. ದೇಶದ ಶ್ರೇಷ್ಠ ಇಂಜಿನಿಯರ್, ರಾಜ ನೀತಿಜ್ಞ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಗೌರವಿಸುವ ಸಲುವಾಗಿ ಸೆಪ್ಟೆಂಬರ್ 15 ಅನ್ನು 'ಎಂಜಿನಿಯರ್ ದಿನ' ಎಂದು ಆಚರಿಸಲಾಗುತ್ತಿದೆ.

1968 ರಲ್ಲಿ ಈ ದಿನದ ಆಚರಣೆ ಶುರು ಮಾಡಲಾಯಿತು. ಇದು ಭಾರತೀಯ ಶಿಕ್ಷಣದಲ್ಲಿ ವಿಶೇಷವಾಗಿ ದೇಶಾದ್ಯಂತ ಎಂಜಿನಿಯರಿಂಗ್ ಸಮುದಾಯಗಳಿಂದ ಆಚರಿಸಲ್ಪಟ್ಟ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ. ಸರ್​ ಎಂ ವಿಶ್ವೇಶ್ವರಯ್ಯನವರ ಸಾಧನೆಗಳನ್ನು ತಿಳಿಸುವುದಕ್ಕಾಗಿ ಆಚರಿಸಲಾಗುತ್ತದೆ. ಶ್ರೀಲಂಕಾ ಮತ್ತು ತಾಂಜಾನಿಯಾದಲ್ಲೂ ಸೆಪ್ಟೆಂಬರ್ 15 ರಂದು ಎಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತದೆ.

ಯಾರಿವರು ಸರ್​ ಎಂ ವಿಶ್ವೇಶ್ವರಯ್ಯ ?: ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸೆಪ್ಟೆಂಬರ್ 15, 1861 ರಂದು ಕರ್ನಾಟಕದ ಮುದ್ದೇನಹಳ್ಳಿಯಲ್ಲಿ ಜನಿಸಿದರು. 15 ನೇ ವಯಸ್ಸಿನಲ್ಲಿ, ಅವರು ಸಂಸ್ಕೃತ ಪಂಡಿತರಾಗಿದ್ದ ತಮ್ಮ ತಂದೆಯನ್ನು ಕಳೆದುಕೊಂಡರು. ಚಿಕ್ಕಬಳ್ಳಾಪುರದಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಇವರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು. ಇಲ್ಲಿ ಹೈಸ್ಕೂಲ್​, ಕಾಲೇಜು ಶಿಕ್ಷಣ ಮುಗಿಸಿ ಇಂಜಿನಿಯರಿಂಗ್ ಕಲಿಯಲು ಪುಣೆಯ ಸೈನ್ಸ್ ಕಾಲೇಜಿಗೆ ಸೇರಿದರು. 1883 ರಲ್ಲಿ ನಡೆದ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿಯನ್ನು ತಂದರು. ತಮ್ಮ ಶಿಕ್ಷಣ ಪೂರ್ಣಗೊಳಿಸಿದ ನಂತರ, ಅವರು ಆಗಿನ ಬಾಂಬೆ ಸರ್ಕಾರದಿಂದ ನಾಸಿಕ್‌ನಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಯನ್ನು ಪಡೆದರು. ಎಂಜಿನಿಯರ್ ಆಗಿ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ತಮ್ಮ ಸಾಮರ್ಥ್ಯವನ್ನು ತೋರಿಸಿದರು.

ಅವರ ಈ ಯಶಸ್ಸಿನ ಬಳಿಕ ಅವರು ಸರ್ ಎಂವಿ ಎಂದೇ ಜನಪ್ರಿಯರಾದರು. ಇಂಜಿನಿಯರ್ಸ್ ಇಂಡಿಯಾ (IEI) ಪ್ರಕಾರ, ಅವರನ್ನು "ಭಾರತದಲ್ಲಿ ಆರ್ಥಿಕ ಯೋಜನೆಯ ಪುರೋಗಾಮಿ" ಎಂದೂ ಕರೆಯಲಾಯಿತು.

ಭಾರತೀಯ ಇಂಜಿನಿಯರಿಂಗ್ ಪಿತಾಮಹ: ಎಂ ವಿಶ್ವೇಶ್ವರಯ್ಯ ಅವರು 1912 ರಿಂದ 1918 ರವರೆಗೆ ಮೈಸೂರಿನ ದಿವಾನರಾಗಿದ್ದರು. ವಾಸ್ತವವಾಗಿ ಅವರು ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿಂದಿನ ಮೆದುಳಾಗಿದ್ದಾರೆ. ಹೈದರಾಬಾದ್ ನಗರದ ಪ್ರವಾಹ ಸಂರಕ್ಷಣಾ ವ್ಯವಸ್ಥೆಯ ಮುಖ್ಯ ವಿನ್ಯಾಸಕರಾಗಿಯೂ ಇವರು ಜನಪ್ರೀಯರು. ಮೈಸೂರಿನ ನಾಲ್ವಡಿ ಕೃಷ್ಣ ರಾಜ ಒಡೆಯರ್, ರಾಜ್ಯದ ಆರ್ಥಿಕ ಸ್ಥಿತಿ ಗಂಭೀರವಾಗಿದ್ದರೂ ಬರಗಾಲದ ಸಮಯದಲ್ಲಿ ಅಣೆಕಟ್ಟನ್ನು ನಿರ್ಮಿಸಿದರು. ಹೀಗಾಗಿ ಅವರ ಗೌರವಾರ್ಥವಾಗಿ ಅಣೆಕಟ್ಟಿಗೆ ಹೆಸರಿಸಲಾಯಿತು.

ಪ್ರವಾಹದ ಗೇಟ್​​​ಗೆ ಪೇಟೆಂಟ್​: ಎಂ ವಿಶ್ವೇಶ್ವರಯ್ಯನವರು ಬ್ಲಾಕ್​​ ವ್ಯವಸ್ಥೆಯನ್ನು ರೂಪಿಸಿದವರು. ನೀರು ತುಂಬಿ ಹರಿಯುವುದನ್ನು ಮುಚ್ಚುವ ಸ್ವಯಂಚಾಲಿತ ಬಾಗಿಲುಗಳನ್ನು ಕಂಡುಹಿಡಿದ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ. ಸರ್ ವಿಶ್ವೇಶ್ವರಯ್ಯ, 1903 ರಲ್ಲಿ ಪುಣೆಯ ಖಡಕ್​ವಾಸ್ಲಾ ಜಲಾಶಯದಲ್ಲಿ ಮೊದಲ ಬಾರಿಗೆ ಸ್ಥಾಪಿಸಲಾದ ಪ್ರವಾಹ ಗೇಟ್‌ಗಳನ್ನು ವಿನ್ಯಾಸಗೊಳಿಸಿ, ಅದಕ್ಕೆ ಪೇಟೆಂಟ್ ಪಡೆದುಕೊಂಡಿದ್ದರು.

ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಇವರನ್ನು ಭಾರತದ ಮೊದಲ ಎಂಜಿನಿಯರ್ ಎಂದು ಕರೆಯಲಾಗುತ್ತಿದೆ. ಆಧುನಿಕ ಭಾರತದ ಅಣೆಕಟ್ಟುಗಳು, ಜಲಾಶಯಗಳು ಮತ್ತು ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವಲ್ಲಿ ಸರ್​ ಎಂವಿ ಅವರ ಪಾತ್ರ ಪ್ರಮುಖವಾಗಿದೆ. ಈ ಮೂಲಕ ವಿಶ್ವೇಶ್ವರಯ್ಯ ಅವರು ಭಾರತದ ಶ್ರೇಷ್ಠ ರಾಷ್ಟ್ರ ನಿರ್ಮಾಣಕಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

ಪ್ರಶಸ್ತಿಗಳು ಮತ್ತು ಸಾಧನೆಗಳು: ಸಮಾಜಕ್ಕೆ ಅವರು ಅಸಾಧಾರಣ ಕೊಡುಗೆ ನೀಡಿದ್ದಾರೆ. ಅವರ ಶ್ರೇಷ್ಠ ಸಾಧನೆಗಳನ್ನು ಗುರುತಿಸಿ ಭಾರತ ಸರ್ಕಾರವು 1955 ರಲ್ಲಿ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಷ್ಟೇ ಅಲ್ಲ ಸರ್​ ಎಂವಿ ಅವರು ಕಿಂಗ್ ಜಾರ್ಜ್ V ಅವರಿಂದ ಬ್ರಿಟಿಷ್ ನೈಟ್‌ಹುಡ್ ಗೌರವಕ್ಕೂ ಭಾಜನರಾಗಿದ್ದಾರೆ. ಈ ಮೂಲಕ "ಸರ್" ಎಂಬ ಬಿರುದನ್ನು ಪಡೆದರು. 2018 ರಲ್ಲಿ ಗೂಗಲ್ ತನ್ನ ಡೂಡಲ್​ ಮೂಲಕ ಸರ್​ ಎಂವಿ ಅವರ ಜನ್ಮದಿನದ ಗೌರವ ಸಲ್ಲಿಕೆ ಮಾಡಿತ್ತು

ರೋಲ್ ಮಾಡೆಲ್: ವಿಶ್ವೇಶ್ವರಯ್ಯ ಕೇವಲ ಇಂಜಿನಿಯರ್ ಮತ್ತು ಶಿಕ್ಷಣತಜ್ಞರಷ್ಟೇ ಅಲ್ಲ ಅವರೊಬ್ಬ ಶ್ರಮಶೀಲ ವ್ಯಕ್ತಿ . ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಟಾಟಾ ಐರನ್ ಮತ್ತು ಸ್ಟೀಲ್ ಆಡಳಿತ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಕೆಲವು ಪುಸ್ತಕಗಳನ್ನು ಸಹ ಬರೆದಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಸರ್​ ಎಂವಿ 100 ವರ್ಷಗಳಿಗೆ ಹೆಚ್ಚು ಕಾಲ ಬದುಕಿ, ತುಂಬು ಜೀವನ ಕಳೆದರು. ಇವರು 1962 ರಲ್ಲಿ ನಿಧನರಾದರು.

ಇದನ್ನು ಓದಿ: 'ಎಲ್​ವಿಪಿಇಐ ಸಂಸ್ಥೆಯ ಅಪ್ಲಿಕೇಶನ್‌ನಿಂದ ನಿಮ್ಮ ಕಣ್ಣುಗಳನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ: ನೇತ್ರ ದೋಷ ಪತ್ತೆ ಮಾಡುತ್ತೆ ಈ ಆ್ಯಪ್​' - App For Eye

ಹೈದರಾಬಾದ್: ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಭಾರಿ ಮಹತ್ವ ಪಡೆದುಕೊಂಡಿದೆ. ದೇಶದ ಶ್ರೇಷ್ಠ ಇಂಜಿನಿಯರ್, ರಾಜ ನೀತಿಜ್ಞ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಗೌರವಿಸುವ ಸಲುವಾಗಿ ಸೆಪ್ಟೆಂಬರ್ 15 ಅನ್ನು 'ಎಂಜಿನಿಯರ್ ದಿನ' ಎಂದು ಆಚರಿಸಲಾಗುತ್ತಿದೆ.

1968 ರಲ್ಲಿ ಈ ದಿನದ ಆಚರಣೆ ಶುರು ಮಾಡಲಾಯಿತು. ಇದು ಭಾರತೀಯ ಶಿಕ್ಷಣದಲ್ಲಿ ವಿಶೇಷವಾಗಿ ದೇಶಾದ್ಯಂತ ಎಂಜಿನಿಯರಿಂಗ್ ಸಮುದಾಯಗಳಿಂದ ಆಚರಿಸಲ್ಪಟ್ಟ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ. ಸರ್​ ಎಂ ವಿಶ್ವೇಶ್ವರಯ್ಯನವರ ಸಾಧನೆಗಳನ್ನು ತಿಳಿಸುವುದಕ್ಕಾಗಿ ಆಚರಿಸಲಾಗುತ್ತದೆ. ಶ್ರೀಲಂಕಾ ಮತ್ತು ತಾಂಜಾನಿಯಾದಲ್ಲೂ ಸೆಪ್ಟೆಂಬರ್ 15 ರಂದು ಎಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತದೆ.

ಯಾರಿವರು ಸರ್​ ಎಂ ವಿಶ್ವೇಶ್ವರಯ್ಯ ?: ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸೆಪ್ಟೆಂಬರ್ 15, 1861 ರಂದು ಕರ್ನಾಟಕದ ಮುದ್ದೇನಹಳ್ಳಿಯಲ್ಲಿ ಜನಿಸಿದರು. 15 ನೇ ವಯಸ್ಸಿನಲ್ಲಿ, ಅವರು ಸಂಸ್ಕೃತ ಪಂಡಿತರಾಗಿದ್ದ ತಮ್ಮ ತಂದೆಯನ್ನು ಕಳೆದುಕೊಂಡರು. ಚಿಕ್ಕಬಳ್ಳಾಪುರದಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಇವರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು. ಇಲ್ಲಿ ಹೈಸ್ಕೂಲ್​, ಕಾಲೇಜು ಶಿಕ್ಷಣ ಮುಗಿಸಿ ಇಂಜಿನಿಯರಿಂಗ್ ಕಲಿಯಲು ಪುಣೆಯ ಸೈನ್ಸ್ ಕಾಲೇಜಿಗೆ ಸೇರಿದರು. 1883 ರಲ್ಲಿ ನಡೆದ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿಯನ್ನು ತಂದರು. ತಮ್ಮ ಶಿಕ್ಷಣ ಪೂರ್ಣಗೊಳಿಸಿದ ನಂತರ, ಅವರು ಆಗಿನ ಬಾಂಬೆ ಸರ್ಕಾರದಿಂದ ನಾಸಿಕ್‌ನಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಯನ್ನು ಪಡೆದರು. ಎಂಜಿನಿಯರ್ ಆಗಿ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ತಮ್ಮ ಸಾಮರ್ಥ್ಯವನ್ನು ತೋರಿಸಿದರು.

ಅವರ ಈ ಯಶಸ್ಸಿನ ಬಳಿಕ ಅವರು ಸರ್ ಎಂವಿ ಎಂದೇ ಜನಪ್ರಿಯರಾದರು. ಇಂಜಿನಿಯರ್ಸ್ ಇಂಡಿಯಾ (IEI) ಪ್ರಕಾರ, ಅವರನ್ನು "ಭಾರತದಲ್ಲಿ ಆರ್ಥಿಕ ಯೋಜನೆಯ ಪುರೋಗಾಮಿ" ಎಂದೂ ಕರೆಯಲಾಯಿತು.

ಭಾರತೀಯ ಇಂಜಿನಿಯರಿಂಗ್ ಪಿತಾಮಹ: ಎಂ ವಿಶ್ವೇಶ್ವರಯ್ಯ ಅವರು 1912 ರಿಂದ 1918 ರವರೆಗೆ ಮೈಸೂರಿನ ದಿವಾನರಾಗಿದ್ದರು. ವಾಸ್ತವವಾಗಿ ಅವರು ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿಂದಿನ ಮೆದುಳಾಗಿದ್ದಾರೆ. ಹೈದರಾಬಾದ್ ನಗರದ ಪ್ರವಾಹ ಸಂರಕ್ಷಣಾ ವ್ಯವಸ್ಥೆಯ ಮುಖ್ಯ ವಿನ್ಯಾಸಕರಾಗಿಯೂ ಇವರು ಜನಪ್ರೀಯರು. ಮೈಸೂರಿನ ನಾಲ್ವಡಿ ಕೃಷ್ಣ ರಾಜ ಒಡೆಯರ್, ರಾಜ್ಯದ ಆರ್ಥಿಕ ಸ್ಥಿತಿ ಗಂಭೀರವಾಗಿದ್ದರೂ ಬರಗಾಲದ ಸಮಯದಲ್ಲಿ ಅಣೆಕಟ್ಟನ್ನು ನಿರ್ಮಿಸಿದರು. ಹೀಗಾಗಿ ಅವರ ಗೌರವಾರ್ಥವಾಗಿ ಅಣೆಕಟ್ಟಿಗೆ ಹೆಸರಿಸಲಾಯಿತು.

ಪ್ರವಾಹದ ಗೇಟ್​​​ಗೆ ಪೇಟೆಂಟ್​: ಎಂ ವಿಶ್ವೇಶ್ವರಯ್ಯನವರು ಬ್ಲಾಕ್​​ ವ್ಯವಸ್ಥೆಯನ್ನು ರೂಪಿಸಿದವರು. ನೀರು ತುಂಬಿ ಹರಿಯುವುದನ್ನು ಮುಚ್ಚುವ ಸ್ವಯಂಚಾಲಿತ ಬಾಗಿಲುಗಳನ್ನು ಕಂಡುಹಿಡಿದ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ. ಸರ್ ವಿಶ್ವೇಶ್ವರಯ್ಯ, 1903 ರಲ್ಲಿ ಪುಣೆಯ ಖಡಕ್​ವಾಸ್ಲಾ ಜಲಾಶಯದಲ್ಲಿ ಮೊದಲ ಬಾರಿಗೆ ಸ್ಥಾಪಿಸಲಾದ ಪ್ರವಾಹ ಗೇಟ್‌ಗಳನ್ನು ವಿನ್ಯಾಸಗೊಳಿಸಿ, ಅದಕ್ಕೆ ಪೇಟೆಂಟ್ ಪಡೆದುಕೊಂಡಿದ್ದರು.

ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಇವರನ್ನು ಭಾರತದ ಮೊದಲ ಎಂಜಿನಿಯರ್ ಎಂದು ಕರೆಯಲಾಗುತ್ತಿದೆ. ಆಧುನಿಕ ಭಾರತದ ಅಣೆಕಟ್ಟುಗಳು, ಜಲಾಶಯಗಳು ಮತ್ತು ಜಲವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವಲ್ಲಿ ಸರ್​ ಎಂವಿ ಅವರ ಪಾತ್ರ ಪ್ರಮುಖವಾಗಿದೆ. ಈ ಮೂಲಕ ವಿಶ್ವೇಶ್ವರಯ್ಯ ಅವರು ಭಾರತದ ಶ್ರೇಷ್ಠ ರಾಷ್ಟ್ರ ನಿರ್ಮಾಣಕಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

ಪ್ರಶಸ್ತಿಗಳು ಮತ್ತು ಸಾಧನೆಗಳು: ಸಮಾಜಕ್ಕೆ ಅವರು ಅಸಾಧಾರಣ ಕೊಡುಗೆ ನೀಡಿದ್ದಾರೆ. ಅವರ ಶ್ರೇಷ್ಠ ಸಾಧನೆಗಳನ್ನು ಗುರುತಿಸಿ ಭಾರತ ಸರ್ಕಾರವು 1955 ರಲ್ಲಿ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಷ್ಟೇ ಅಲ್ಲ ಸರ್​ ಎಂವಿ ಅವರು ಕಿಂಗ್ ಜಾರ್ಜ್ V ಅವರಿಂದ ಬ್ರಿಟಿಷ್ ನೈಟ್‌ಹುಡ್ ಗೌರವಕ್ಕೂ ಭಾಜನರಾಗಿದ್ದಾರೆ. ಈ ಮೂಲಕ "ಸರ್" ಎಂಬ ಬಿರುದನ್ನು ಪಡೆದರು. 2018 ರಲ್ಲಿ ಗೂಗಲ್ ತನ್ನ ಡೂಡಲ್​ ಮೂಲಕ ಸರ್​ ಎಂವಿ ಅವರ ಜನ್ಮದಿನದ ಗೌರವ ಸಲ್ಲಿಕೆ ಮಾಡಿತ್ತು

ರೋಲ್ ಮಾಡೆಲ್: ವಿಶ್ವೇಶ್ವರಯ್ಯ ಕೇವಲ ಇಂಜಿನಿಯರ್ ಮತ್ತು ಶಿಕ್ಷಣತಜ್ಞರಷ್ಟೇ ಅಲ್ಲ ಅವರೊಬ್ಬ ಶ್ರಮಶೀಲ ವ್ಯಕ್ತಿ . ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಟಾಟಾ ಐರನ್ ಮತ್ತು ಸ್ಟೀಲ್ ಆಡಳಿತ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಕೆಲವು ಪುಸ್ತಕಗಳನ್ನು ಸಹ ಬರೆದಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಸರ್​ ಎಂವಿ 100 ವರ್ಷಗಳಿಗೆ ಹೆಚ್ಚು ಕಾಲ ಬದುಕಿ, ತುಂಬು ಜೀವನ ಕಳೆದರು. ಇವರು 1962 ರಲ್ಲಿ ನಿಧನರಾದರು.

ಇದನ್ನು ಓದಿ: 'ಎಲ್​ವಿಪಿಇಐ ಸಂಸ್ಥೆಯ ಅಪ್ಲಿಕೇಶನ್‌ನಿಂದ ನಿಮ್ಮ ಕಣ್ಣುಗಳನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ: ನೇತ್ರ ದೋಷ ಪತ್ತೆ ಮಾಡುತ್ತೆ ಈ ಆ್ಯಪ್​' - App For Eye

ETV Bharat Logo

Copyright © 2024 Ushodaya Enterprises Pvt. Ltd., All Rights Reserved.