ಕೊರೊನಾ ಬರ್ಲಿ.. ಹೋಗ್ಲಿ.. ನಾವ್ ಮಾತ್ರ ಹಿಂಗ ನೋಡ್ರಿ! - no social distance in dharwad
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6581107-988-6581107-1585453701730.jpg)
ಹುಬ್ಬಳ್ಳಿ: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಭಾರತದಲ್ಲಿ ತನ್ನ ಕಬಂಧಬಾಹುಗಳನ್ನ ಚಾಚುತ್ತಲೇ ಇದೆ. ಹೀಗಾಗಿ ಕೇಂದ್ರ ಸರ್ಕಾರ ಏಪ್ರಿಲ್ 14 ವರೆಗೆ ಜನತಾ ಕರ್ಫ್ಯೂವನ್ನು ಮುಂದುವರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಆದೇಶ ಹೊರಡಿಸಿವೆ. ಈ ಹಿನ್ನಲೆ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮಹಾನಗರ ಪಾಲಿಕೆ ಸೂಚನೆ ನೀಡಿದ್ದರೂ ಸಹ ಕೇಶ್ವಾಪುರ ಬಡಾವಣೆಯಲ್ಲಿ ಮಾತ್ರ ಈ ಆದೇಶವನ್ನು ಪಾಲಿಸುತ್ತಿಲ್ಲ. ತರಕಾರಿ ಹಾಗೂ ದಿನಸಿ ವಸ್ತುಗಳಿಗೆ ಜನ ಮುಗಿಬಿದ್ದು, ಒಟ್ಟೊಟ್ಟಾಗಿಯೇ ಖರೀದಿಸುವ ದೃಶ್ಯಗಳು ಕಂಡು ಬರುತ್ತಿವೆ.