thumbnail

By

Published : Nov 25, 2019, 8:03 PM IST

ETV Bharat / Videos

ಹೋಟೆಲ್​​ನಲ್ಲಿ ಎನ್​ಸಿಪಿ+ಶಿವಸೇನೆ ಹಾಗೂ ಕೈ ಶಕ್ತಿ ಪ್ರದರ್ಶನ... ರಾಜ್ಯಪಾಲರ ನಿರ್ಧಾರಕ್ಕೆ ಸಡ್ಡು!

ಮುಂಬೈ: ಮಹಾರಾಷ್ಟ್ರದಲ್ಲಿ ದಿಢೀರ್​ ಆಗಿ ಸರ್ಕಾರ ರಚನೆ ಮಾಡಿರುವ ಬಿಜೆಪಿ ವಿರುದ್ಧ ಇದೀಗ ಎನ್​​ಸಿಪಿ+ಶಿವಸೇನೆ ಹಾಗೂ ಕಾಂಗ್ರೆಸ್​ ಮುಗಿಬಿದ್ದಿದ್ದು, ರಾಜ್ಯಪಾಲರು ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಇದೇ ವೇಳೆ ತಮ್ಮ ಬಳಿ 164 ಶಾಸಕರಿದ್ದು, ರಾಜ್ಯಪಾಲರು ಖುದ್ದಾಗಿ ಬಂದು ನೋಡಬಹುದು ಎಂದು ಶಿವಸೇನೆ ಮುಖಂಡ ಸಂಜಯ್​ ರಾವತ್​ ಹೇಳಿದ್ದಾರೆ. ಈ ಹಿನ್ನೆಲೆ ಶಕ್ತಿ ಪ್ರದರ್ಶನಕ್ಕಾಗಿ ಗ್ರ್ಯಾಂಡ್​ ಹಯಾತ್​ ಹೋಟೆಲ್​​ನಲ್ಲಿ ಸೇರಿದ್ದಾರೆ. ಶಿವಸೇನೆ ಮುಖಂಡ ಉದ್ಧವ್​ ಠಾಕ್ರೆ, ಎನ್​ಸಿಪಿಯ ಶರದ್​ ಪವಾರ್​, ಸುಪ್ರಿಯಾ ಸುಳೆ, ಕಾಂಗ್ರೆಸ್​​ನ ಹಿರಿಯ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಸೇರಿದಂತೆ ಅನೇಕರು ಈ ಹೋಟೆಲ್​​ನಲ್ಲಿ ಸೇರಿದ್ದು, ತಮ್ಮ ಶಕ್ತಿಪ್ರದರ್ಶನ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.