ಭಗತ್ ಸಿಂಗ್ ಪರಾವಲಂಬಿ ಜೀವಿಯೇ? ಹರಿಯಾಣ ನ್ಯಾಯ ಮತ್ತು ಕ್ರಾಂತಿಕಾರಿ ಭೂಮಿ: ರಾಕೇಶ್ ಟಿಕಾಯತ್ - ಹರಿಯಾಣ ಮಹಾಪಂಚಾಯತ್ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10561478-thumbnail-3x2-mng.jpg)
ಹರಿಯಾಣ: ಹೋರಾಟ ಮಾಡುವವರನ್ನು ಪಾರ್ಲಿಮೆಂಟ್ನಲ್ಲಿ ಪರಾವಲಂಬಿ ಜೀವಿಗಳೆಂದು ಕರೆದಿದ್ದಾರೆ. ಭಗತ್ ಸಿಂಗ್ ಕೂಡ ಹೋರಾಟ ಮಾಡಿದ್ದು, ಅವರೂ ಪರಾವಲಂಬಿ ಜೀವಿಯೇ? ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಪ್ರಶ್ನಿಸಿದ್ದಾರೆ. ಕುರುಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು, ಇದು ನ್ಯಾಯದ ಭೂಮಿ, ಕ್ರಾಂತಿಕಾರಿ ಭೂಮಿ. ನಾವು ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಯೂ ಕೂಡ ಹೋರಾಟದಲ್ಲಿ ಪಾಲ್ಗೊಳ್ಳುತ್ತದೆ. ರೈತರು ಮನೆ ಮನೆಯಲ್ಲಿಯೂ ಇರುತ್ತಾರೆ. ಕೃಷಿ ಜಮೀನಿನಲ್ಲೂ ಇರುತ್ತಾರೆ ಹಾಗೂ ಹೋರಾಟದಲ್ಲೂ ಇರುತ್ತಾರೆ ಎಂದರು.
Last Updated : Feb 9, 2021, 9:05 PM IST