ETV Bharat / sukhibhava

ಹೃದಯಾಘಾತದ ಸಾವಿಗೆ ವಿಶ್ವದ ರಾಜಧಾನಿ ಭಾರತ; ಕೋವಿಡ್ ನಂತರ ಹೆಚ್ಚಿದೆ ಹಾರ್ಟ್ ಅಟ್ಯಾಕ್ ಪ್ರಮಾಣ

author img

By

Published : Sep 29, 2022, 3:14 PM IST

ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚೀನಾಗೆ ಹೋಲಿಸಿದರೆ ನಾವು ಅವರಿಗಿಂತಲೂ ಕೊಂಚ ಮುಂದಿದ್ದೇವೆ.

India becoming capital of world for heart attack deaths
ಹೃದಯಾಘಾತದ ಸಾವಿಗೆ ವಿಶ್ವದ ರಾಜಧಾನಿ ಭಾರತ

ಬೆಂಗಳೂರು: ಹೃದಯಾಘಾತಕ್ಕೆ ತುತ್ತಾಗುವವರು ಹಾಗೂ ಮೃತಪಡುವವರ ಅಂಕಿ - ಅಂಶ ಗಮನಿಸಿದರೆ ಭಾರತ ದೇಶವು ಜಾಗತಿಕ ರಾಜಧಾನಿಯಾಗಿ ಗೋಚರಿಸುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಅನ್ಯ ದೇಶಗಳಲ್ಲಿ ವೈಯಕ್ತಿಕ ಆರೋಗ್ಯ ಕಾಳಜಿಗೆ ನೀಡುವ ಗಮನವನ್ನು ಭಾರತೀಯರು ನೀಡದೇ ಇರುವುದು ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಭವಿಷ್ಯ ರೂಪಿಸಿಕೊಳ್ಳುವ ಚಿಂತೆಯಲ್ಲಿ ವರ್ತಮಾನದ ಆರೋಗ್ಯವನ್ನು ಜನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತನ್ನು ವೈದ್ಯ ಲೋಕವೇ ಹೇಳುತ್ತಿದೆ. ಐಟಿ ಬಿಟಿ ಕ್ರಾಂತಿಯ ಬಳಿಕ ದೇಶದಲ್ಲಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಉತ್ತಮ ವೇತನ ಪಡೆಯುವ ಉದ್ಯೋಗ ಪಡೆಯುತ್ತಿದ್ದು, ತಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಯುವ ಸಮುದಾಯ ತಮ್ಮ ಜೀವನವನ್ನೇ ಪಣಕ್ಕಿಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಡಿಯಾಲಜಿಸ್ಟ್ ಡಾ.ಕೆ.ಎಸ್. ಕಿಶೋರ್

ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚೀನಾಗೆ ಹೋಲಿಸಿದರೆ ನಾವು ಅವರಿಗಿಂತಲೂ ಕೊಂಚ ಮುಂದಿದ್ದೇವೆ. ಆರೋಗ್ಯ ಕಾಳಜಿ ಕೊರತೆ ಹಾಗೂ ಬದಲಾದ ಆಹಾರ ಪದ್ಧತಿ ಮತ್ತು ನಿಯಮಿತವಾಗಿ ನಿದ್ರಿಸದಿರುವುದೇ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗಿದೆ.

ವ್ಯಕ್ತಿಯ ಸಾವಿಗೆ ಕಾರಣವಾಗಲ್ಲ, ಪ್ರಮುಖ ನಾಲ್ಕು ಜೀವನ ಶೈಲಿ ರೋಗಗಳಲ್ಲಿ ಮೊದಲ ಸ್ಥಾನದಲ್ಲಿ ಹೃದ್ರೋಗ ಇದೆ. ಭಾರತದಲ್ಲಿ ಶೇಕಡ 54ರಷ್ಟು ಮಂದಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಈ ಸಾವಿನಲ್ಲಿ ಹೃದಯ ರೋಗಿಗಳ ಪ್ರಮಾಣ ಶೇಕಡ 28, ದೇಶದಲ್ಲಿ ಸಾಯುವವರ ಪ್ರತಿ ಮೂರಲ್ಲಿ ಒಬ್ಬರು ಹೃದಯ ರೋಗಕ್ಕೆ ಸಂಬಂಧಪಟ್ಟಂತೆ ಸಾವನ್ನಪ್ಪುತ್ತಿದ್ದಾರೆ. ಈ ಕಾಯಿಲೆಯಿಂದ ಪ್ರತಿ ವರ್ಷ 1.70 ಕೋಟಿ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಅಂಕಿ ಅಂಶ ಎಂದು ವಿವರ ನೀಡುತ್ತದೆ.

ಭಾರತೀಯರಲ್ಲಿ ಪ್ರತಿ ಮೂವರಲ್ಲಿ ಇಬ್ಬರಿಗೆ ಅಧಿಕಾರಕ್ಕೆ ತಡ ಸಮಸ್ಯೆ ಇರುತ್ತದೆ. 1 ಲಕ್ಷ ಮಂದಿಗೆ 272 ಮಂದಿ ಹೃದಯ ಸಮಸ್ಯೆಯಿಂದ ಬಳಲುತ್ತಿರುವುದು ಭಾರತದಲ್ಲಿ ಗಮನಕ್ಕೆ ಬರುತ್ತದೆ. ಇದೇ ಅಂಕಿ - ಅಂಶ ಜಾಗತಿಕವಾಗಿ ನೋಡಿದಾಗ 235 ಇದೆ.

ಹೃದಯಾಘಾತದ ಜಾಗತಿಕ ರಾಜಧಾನಿ ಆಗ್ತಿದೆಯಾ ಭಾರತ?: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​ನಲ್ಲಿರುವ ಸಾಗರ್ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ.ಕೆ.ಎಸ್. ಕಿಶೋರ್ ಪ್ರಕಾರ, ಭಾರತ ದೇಶ ಹೃದಯಘಾತದ ವಿಚಾರದಲ್ಲಿ ಜಾಗತಿಕ ರಾಜಧಾನಿಯಾಗಿ ಗೋಚರಿಸುತ್ತಿದೆ. ಹೃದಯಾಘಾತ ಯಾವುದೇ ಸಂದರ್ಭದಲ್ಲಿ ಬೇಕಾದರೂ ಎದುರಾಗಬಹುದು. ಏನಾಗುತ್ತಿದೆ ತಮ್ಮ ಶರೀರದಲ್ಲಿ ಎಂಬುದನ್ನು ಜನ ಅರ್ಥ ಮಾಡಿಕೊಂಡರೆ ಅರ್ಧದಷ್ಟು ಹೃದಯಘಾತ ತಡೆಯಬಹುದು.

ಸಮಯೋಚಿತವಾಗಿ ಜನರು ಹಾಗೂ ವೈದ್ಯರು ಕೈಗೊಳ್ಳುವ ನಿರ್ಧಾರ ಜೀವ ರಕ್ಷಣೆಗೆ ಸಹಕಾರಿ ಆಗುತ್ತದೆ. ಭಾರತೀಯರು ಸಕಾಲಕ್ಕೆ ತಪಾಸಣೆಗೆ ಒಳಗಾಗದೆ ಹೆಚ್ಚಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರಲ್ಲಿ ಹೃದಯ ಸಂಬಂಧಿ ಸಮಸ್ಯೆ ಹತ್ತು ವರ್ಷ ಮುನ್ನ ಕಾಡುತ್ತಿದೆ.

ಹತ್ತು ವರ್ಷಗಳ ಹಿಂದಿನ ಅಂಕಿ ಅಂಶ ಗಮನಿಸಿದರೆ ನೂರರಲ್ಲಿ ಎರಡರಿಂದ ಮೂರು ಮಂದಿ ಮಾತ್ರ 40 ವರ್ಷ ವಯೋಮಾನದ ಕೆಳಗಿನವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದರು. ಆದರೆ, ಈಗಿನ ಅಂಕಿ ಅಂಶ ಆತಂಕ ಮೂಡಿಸುತ್ತದೆ.

ಯುವಕರೇ ಜಾಸ್ತಿ: ನೂರಕ್ಕೆ 35 ರಿಂದ 40 ಮಂದಿ ಯುವಕರೇ ಹೃದಯಘಾತಕ್ಕೆ ತುತ್ತಾಗುತ್ತಿದ್ದಾರೆ. ಹೃದಯಾಘಾತಕ್ಕೆ ತುತ್ತಾಗುವ ಯುವಕರು ಇಂಥದ್ದೇ ಕ್ಷೇತ್ರದವರು ಅಂತ ಗುರುತಿಸಲು ಸಾಧ್ಯವಿಲ್ಲ. ಒತ್ತಡಕ್ಕೆ ಒಳಗಾಗುವ ಪ್ರತಿಯೊಂದು ಕ್ಷೇತ್ರದವರು ಹೃದಾಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ದಿನಕ್ಕೆ 15 ರಿಂದ 18 ಗಂಟೆ ಕಾರ್ಯನಿರ್ವಹಿಸುವವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕಾಗುತ್ತದೆ.

ಅಮೆರಿಕ ಹಾಗೂ ಇತರೆ ರಾಷ್ಟ್ರಗಳ ಕಂಪನಿಗಳಿಗಾಗಿ ಕಾರ್ಯನಿರ್ವಹಿಸುವ ಭಾರತೀಯರು ರಾತ್ರಿ ಇಡೀ ನಿದ್ದೆ ಗೆಟ್ಟು ಕೆಲಸ ಮಾಡುತ್ತಾರೆ. ದಿನದಲ್ಲಿ ಒಂದೆರಡು ಗಂಟೆ ಸಹ ನಿದ್ರಿಸಲು ಸಾಕಷ್ಟು ಮಂದಿಗೆ ಸಮಯ ಅವಕಾಶ ಸಿಗುವುದಿಲ್ಲ. ಅಲ್ಲದೆ ಶರೀರಕ್ಕೆ ಯಾವುದೇ ವ್ಯಾಯಾಮ ಸಹ ಸಿಗುವುದಿಲ್ಲ. ನಿದ್ರಾಹೀನತೆಯಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದಿದ್ದಾರೆ.

ಕೋವಿಡ್ ಸಹ ಕಾರಣ: ಹೃದಯಾಘಾತಕ್ಕೆ ಕೋವಿಡ್ ಸಹ ಕಾರಣ ಎನ್ನಬಹುದು. ಕೋವಿಡ್​ಗೆ ತುತ್ತಾದವರು ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಿಸುತ್ತಾರೆ. ಇದರಿಂದ ಕೋವಿಡ್ ನಂತರದ ಕಾಳಜಿ ಸಹ ಅತಿ ಮುಖ್ಯ. ಎರಡನೇ ಅಲೆ ನಂತರದ ದಿನಗಳಲ್ಲಿ ಸಾಕಷ್ಟು ಹೃದ್ರೋಗ ಸಮಸ್ಯೆ ಕಾಡಿದೆ. ಕೋವಿಡ್ ಬಂದು ಗುಣಮುಖರಾದ ಆರು ತಿಂಗಳ ನಂತರವೂ ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾದವರು ಇದ್ದಾರೆ.

ಕೋವಿಡ್ ತುತ್ತಾದ ತಕ್ಷಣವೇ ಹೃದಯಘಾತಕ್ಕೆ ಒಳಗಾದವರು ಇದ್ದಾರೆ ಹಾಗೂ ಚೇತರಿಸಿಕೊಂಡ ಕೆಲ ದಿನಗಳ ನಂತರ ಹೃದಯಘಾತಕ್ಕೆ ತುತ್ತಾಗಿ ಚಿಕಿತ್ಸೆಗೆ ಬಂದವರು ಇದ್ದಾರೆ. ಕೋವಿಡ್​ನಿಂದಾಗಿಯೇ ಹೃದಯಾಘಾತ ಆಗುತ್ತಿದೆ ಎಂದು ಹೇಳಲಾಗದು, ಆದರೆ ಹೃದಯಾಘಾತದಲ್ಲಿ ಕೋವಿಡ್​ನ ಕೊಡುಗೆ ಸಹ ಸಾಕಷ್ಟಿದೆ ಎಂದು ಡಾ.ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸೆ.29 ವಿಶ್ವ ಹೃದಯ ದಿನ: ಕಾರ್ಡಿಯಾಕ್ ಅರೆಸ್ಟ್ ಅಪಾಯ.. ಇರಲಿ ಎಚ್ಚರ

ಬೆಂಗಳೂರು: ಹೃದಯಾಘಾತಕ್ಕೆ ತುತ್ತಾಗುವವರು ಹಾಗೂ ಮೃತಪಡುವವರ ಅಂಕಿ - ಅಂಶ ಗಮನಿಸಿದರೆ ಭಾರತ ದೇಶವು ಜಾಗತಿಕ ರಾಜಧಾನಿಯಾಗಿ ಗೋಚರಿಸುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಅನ್ಯ ದೇಶಗಳಲ್ಲಿ ವೈಯಕ್ತಿಕ ಆರೋಗ್ಯ ಕಾಳಜಿಗೆ ನೀಡುವ ಗಮನವನ್ನು ಭಾರತೀಯರು ನೀಡದೇ ಇರುವುದು ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಭವಿಷ್ಯ ರೂಪಿಸಿಕೊಳ್ಳುವ ಚಿಂತೆಯಲ್ಲಿ ವರ್ತಮಾನದ ಆರೋಗ್ಯವನ್ನು ಜನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತನ್ನು ವೈದ್ಯ ಲೋಕವೇ ಹೇಳುತ್ತಿದೆ. ಐಟಿ ಬಿಟಿ ಕ್ರಾಂತಿಯ ಬಳಿಕ ದೇಶದಲ್ಲಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಉತ್ತಮ ವೇತನ ಪಡೆಯುವ ಉದ್ಯೋಗ ಪಡೆಯುತ್ತಿದ್ದು, ತಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಯುವ ಸಮುದಾಯ ತಮ್ಮ ಜೀವನವನ್ನೇ ಪಣಕ್ಕಿಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾರ್ಡಿಯಾಲಜಿಸ್ಟ್ ಡಾ.ಕೆ.ಎಸ್. ಕಿಶೋರ್

ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚೀನಾಗೆ ಹೋಲಿಸಿದರೆ ನಾವು ಅವರಿಗಿಂತಲೂ ಕೊಂಚ ಮುಂದಿದ್ದೇವೆ. ಆರೋಗ್ಯ ಕಾಳಜಿ ಕೊರತೆ ಹಾಗೂ ಬದಲಾದ ಆಹಾರ ಪದ್ಧತಿ ಮತ್ತು ನಿಯಮಿತವಾಗಿ ನಿದ್ರಿಸದಿರುವುದೇ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗಿದೆ.

ವ್ಯಕ್ತಿಯ ಸಾವಿಗೆ ಕಾರಣವಾಗಲ್ಲ, ಪ್ರಮುಖ ನಾಲ್ಕು ಜೀವನ ಶೈಲಿ ರೋಗಗಳಲ್ಲಿ ಮೊದಲ ಸ್ಥಾನದಲ್ಲಿ ಹೃದ್ರೋಗ ಇದೆ. ಭಾರತದಲ್ಲಿ ಶೇಕಡ 54ರಷ್ಟು ಮಂದಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಈ ಸಾವಿನಲ್ಲಿ ಹೃದಯ ರೋಗಿಗಳ ಪ್ರಮಾಣ ಶೇಕಡ 28, ದೇಶದಲ್ಲಿ ಸಾಯುವವರ ಪ್ರತಿ ಮೂರಲ್ಲಿ ಒಬ್ಬರು ಹೃದಯ ರೋಗಕ್ಕೆ ಸಂಬಂಧಪಟ್ಟಂತೆ ಸಾವನ್ನಪ್ಪುತ್ತಿದ್ದಾರೆ. ಈ ಕಾಯಿಲೆಯಿಂದ ಪ್ರತಿ ವರ್ಷ 1.70 ಕೋಟಿ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಅಂಕಿ ಅಂಶ ಎಂದು ವಿವರ ನೀಡುತ್ತದೆ.

ಭಾರತೀಯರಲ್ಲಿ ಪ್ರತಿ ಮೂವರಲ್ಲಿ ಇಬ್ಬರಿಗೆ ಅಧಿಕಾರಕ್ಕೆ ತಡ ಸಮಸ್ಯೆ ಇರುತ್ತದೆ. 1 ಲಕ್ಷ ಮಂದಿಗೆ 272 ಮಂದಿ ಹೃದಯ ಸಮಸ್ಯೆಯಿಂದ ಬಳಲುತ್ತಿರುವುದು ಭಾರತದಲ್ಲಿ ಗಮನಕ್ಕೆ ಬರುತ್ತದೆ. ಇದೇ ಅಂಕಿ - ಅಂಶ ಜಾಗತಿಕವಾಗಿ ನೋಡಿದಾಗ 235 ಇದೆ.

ಹೃದಯಾಘಾತದ ಜಾಗತಿಕ ರಾಜಧಾನಿ ಆಗ್ತಿದೆಯಾ ಭಾರತ?: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​ನಲ್ಲಿರುವ ಸಾಗರ್ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ.ಕೆ.ಎಸ್. ಕಿಶೋರ್ ಪ್ರಕಾರ, ಭಾರತ ದೇಶ ಹೃದಯಘಾತದ ವಿಚಾರದಲ್ಲಿ ಜಾಗತಿಕ ರಾಜಧಾನಿಯಾಗಿ ಗೋಚರಿಸುತ್ತಿದೆ. ಹೃದಯಾಘಾತ ಯಾವುದೇ ಸಂದರ್ಭದಲ್ಲಿ ಬೇಕಾದರೂ ಎದುರಾಗಬಹುದು. ಏನಾಗುತ್ತಿದೆ ತಮ್ಮ ಶರೀರದಲ್ಲಿ ಎಂಬುದನ್ನು ಜನ ಅರ್ಥ ಮಾಡಿಕೊಂಡರೆ ಅರ್ಧದಷ್ಟು ಹೃದಯಘಾತ ತಡೆಯಬಹುದು.

ಸಮಯೋಚಿತವಾಗಿ ಜನರು ಹಾಗೂ ವೈದ್ಯರು ಕೈಗೊಳ್ಳುವ ನಿರ್ಧಾರ ಜೀವ ರಕ್ಷಣೆಗೆ ಸಹಕಾರಿ ಆಗುತ್ತದೆ. ಭಾರತೀಯರು ಸಕಾಲಕ್ಕೆ ತಪಾಸಣೆಗೆ ಒಳಗಾಗದೆ ಹೆಚ್ಚಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರಲ್ಲಿ ಹೃದಯ ಸಂಬಂಧಿ ಸಮಸ್ಯೆ ಹತ್ತು ವರ್ಷ ಮುನ್ನ ಕಾಡುತ್ತಿದೆ.

ಹತ್ತು ವರ್ಷಗಳ ಹಿಂದಿನ ಅಂಕಿ ಅಂಶ ಗಮನಿಸಿದರೆ ನೂರರಲ್ಲಿ ಎರಡರಿಂದ ಮೂರು ಮಂದಿ ಮಾತ್ರ 40 ವರ್ಷ ವಯೋಮಾನದ ಕೆಳಗಿನವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದರು. ಆದರೆ, ಈಗಿನ ಅಂಕಿ ಅಂಶ ಆತಂಕ ಮೂಡಿಸುತ್ತದೆ.

ಯುವಕರೇ ಜಾಸ್ತಿ: ನೂರಕ್ಕೆ 35 ರಿಂದ 40 ಮಂದಿ ಯುವಕರೇ ಹೃದಯಘಾತಕ್ಕೆ ತುತ್ತಾಗುತ್ತಿದ್ದಾರೆ. ಹೃದಯಾಘಾತಕ್ಕೆ ತುತ್ತಾಗುವ ಯುವಕರು ಇಂಥದ್ದೇ ಕ್ಷೇತ್ರದವರು ಅಂತ ಗುರುತಿಸಲು ಸಾಧ್ಯವಿಲ್ಲ. ಒತ್ತಡಕ್ಕೆ ಒಳಗಾಗುವ ಪ್ರತಿಯೊಂದು ಕ್ಷೇತ್ರದವರು ಹೃದಾಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ದಿನಕ್ಕೆ 15 ರಿಂದ 18 ಗಂಟೆ ಕಾರ್ಯನಿರ್ವಹಿಸುವವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕಾಗುತ್ತದೆ.

ಅಮೆರಿಕ ಹಾಗೂ ಇತರೆ ರಾಷ್ಟ್ರಗಳ ಕಂಪನಿಗಳಿಗಾಗಿ ಕಾರ್ಯನಿರ್ವಹಿಸುವ ಭಾರತೀಯರು ರಾತ್ರಿ ಇಡೀ ನಿದ್ದೆ ಗೆಟ್ಟು ಕೆಲಸ ಮಾಡುತ್ತಾರೆ. ದಿನದಲ್ಲಿ ಒಂದೆರಡು ಗಂಟೆ ಸಹ ನಿದ್ರಿಸಲು ಸಾಕಷ್ಟು ಮಂದಿಗೆ ಸಮಯ ಅವಕಾಶ ಸಿಗುವುದಿಲ್ಲ. ಅಲ್ಲದೆ ಶರೀರಕ್ಕೆ ಯಾವುದೇ ವ್ಯಾಯಾಮ ಸಹ ಸಿಗುವುದಿಲ್ಲ. ನಿದ್ರಾಹೀನತೆಯಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದಿದ್ದಾರೆ.

ಕೋವಿಡ್ ಸಹ ಕಾರಣ: ಹೃದಯಾಘಾತಕ್ಕೆ ಕೋವಿಡ್ ಸಹ ಕಾರಣ ಎನ್ನಬಹುದು. ಕೋವಿಡ್​ಗೆ ತುತ್ತಾದವರು ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಿಸುತ್ತಾರೆ. ಇದರಿಂದ ಕೋವಿಡ್ ನಂತರದ ಕಾಳಜಿ ಸಹ ಅತಿ ಮುಖ್ಯ. ಎರಡನೇ ಅಲೆ ನಂತರದ ದಿನಗಳಲ್ಲಿ ಸಾಕಷ್ಟು ಹೃದ್ರೋಗ ಸಮಸ್ಯೆ ಕಾಡಿದೆ. ಕೋವಿಡ್ ಬಂದು ಗುಣಮುಖರಾದ ಆರು ತಿಂಗಳ ನಂತರವೂ ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾದವರು ಇದ್ದಾರೆ.

ಕೋವಿಡ್ ತುತ್ತಾದ ತಕ್ಷಣವೇ ಹೃದಯಘಾತಕ್ಕೆ ಒಳಗಾದವರು ಇದ್ದಾರೆ ಹಾಗೂ ಚೇತರಿಸಿಕೊಂಡ ಕೆಲ ದಿನಗಳ ನಂತರ ಹೃದಯಘಾತಕ್ಕೆ ತುತ್ತಾಗಿ ಚಿಕಿತ್ಸೆಗೆ ಬಂದವರು ಇದ್ದಾರೆ. ಕೋವಿಡ್​ನಿಂದಾಗಿಯೇ ಹೃದಯಾಘಾತ ಆಗುತ್ತಿದೆ ಎಂದು ಹೇಳಲಾಗದು, ಆದರೆ ಹೃದಯಾಘಾತದಲ್ಲಿ ಕೋವಿಡ್​ನ ಕೊಡುಗೆ ಸಹ ಸಾಕಷ್ಟಿದೆ ಎಂದು ಡಾ.ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸೆ.29 ವಿಶ್ವ ಹೃದಯ ದಿನ: ಕಾರ್ಡಿಯಾಕ್ ಅರೆಸ್ಟ್ ಅಪಾಯ.. ಇರಲಿ ಎಚ್ಚರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.