ETV Bharat / state

ಯಾದಗಿರಿ ಹಾಸ್ಟೆಲ್​ನಲ್ಲಿ ಚಪಾತಿಗಾಗಿ ಗಲಾಟೆ: ವಿದ್ಯಾರ್ಥಿ ಸಹೋದರನ ಕೊಲೆಯಲ್ಲಿ ಅಂತ್ಯ

author img

By

Published : Feb 23, 2020, 5:54 AM IST

ಯಾದಗಿರಿ ತಾಲೂಕಿನ ಗುರುಮಠಕಲ್ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ಚಪಾತಿ ತಿನ್ನುವ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಜಗಳ ಆರಂಭವಾಗಿದ್ದು, ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.

ಯುವಕನ ಕೊಲೆ
Two people murder a youth

ಯಾದಗಿರಿ: ಹಾಸ್ಟಲ್​ನಲ್ಲಿ ಚಪಾತಿ ತಿನ್ನುವ ವಿಚಾರಕ್ಕೆ ಆರಂಭವಾದ ಗಲಾಟೆಯು ವಿದ್ಯಾರ್ಥಿ ಸಹೋದರನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಗುರುಮಠಕಲ್ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ.

ಗುರುಮಠಕಲ್​ ವಸತಿ ನಿಲಯಯೊಂದರ ಚಪಾತಿ ತಿನ್ನುವ ಸಂಬಂಧ ನಡೆದ ಹತ್ಯೆ

ಬೋರಬಂಡ ತಾಂಡದ ನಿವಾಸಿ ಮೋಹನ್​ ಎಂಬುವವರು ಕೊಲೆಯಾದ ಯುವಕ. ಈತ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಆಗಿದ್ದಾನೆ. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಚಾಕುವಿನಿಮದ ಹಿರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಗೆ ನಡೆಸಲಾಗುತ್ತಿದೆ.

ಘಟನೆ ವಿವರ:

ಕೊಲೆಯಾದ ಮೋಹನ್​ ತಮ್ಮ ರಾಜು, ಸರ್ಕಾರಿ ಪದವಿಪೂರ್ವ ಬಾಲಕರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ನಿಲಯದ ವಿದ್ಯಾರ್ಥಿ. ಕಳೆದ ರಾತ್ರಿ ರಾಜು ಮತ್ತು ಹಾಸ್ಟೆಲ್​ನ ಕೆಲ ವಿದ್ಯಾರ್ಥಿಗಳ ನಡುವೆ ಚಪಾತಿ ತಿನ್ನುವ ವಿಚಾರದಲ್ಲಿ ಜಗಳ ಆಗಿದೆಯಂತೆ.

ಇದೇ ವಿಷಯವಾಗಿ ಮೋಹನ್​ ಹಾಸ್ಟೆಲ್​ಗೆ ಹೋಗಿ ಜಗಳ ಮಾಡಿದ್ದಾನೆ. ಮೋಹನ್​ ಜೊತೆ ಜಗಳವಾಡಿದ ವಿದ್ಯಾರ್ಥಿಗಳು ತಮ್ಮ ಹೊರಗಿನ ಸ್ನೇಹಿತರಿಗೆ ತಿಳಿಸಿದ್ದಾರೆ. ಇವರು ಮಧ್ಯಾಹ್ನ ಮೋಹನ್​ನ್ನು ಕರೆದು ನಿನ್ನೆಯ ವಿಚಾರವಾಗಿ ಜಗಳ ಮಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಗಲಾಡ ಮಾಡಿದವರೇ ಚಾಕುನಿಂದ ಹಿರಿದು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

ಯಾದಗಿರಿ: ಹಾಸ್ಟಲ್​ನಲ್ಲಿ ಚಪಾತಿ ತಿನ್ನುವ ವಿಚಾರಕ್ಕೆ ಆರಂಭವಾದ ಗಲಾಟೆಯು ವಿದ್ಯಾರ್ಥಿ ಸಹೋದರನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಗುರುಮಠಕಲ್ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ.

ಗುರುಮಠಕಲ್​ ವಸತಿ ನಿಲಯಯೊಂದರ ಚಪಾತಿ ತಿನ್ನುವ ಸಂಬಂಧ ನಡೆದ ಹತ್ಯೆ

ಬೋರಬಂಡ ತಾಂಡದ ನಿವಾಸಿ ಮೋಹನ್​ ಎಂಬುವವರು ಕೊಲೆಯಾದ ಯುವಕ. ಈತ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಆಗಿದ್ದಾನೆ. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಚಾಕುವಿನಿಮದ ಹಿರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಗೆ ನಡೆಸಲಾಗುತ್ತಿದೆ.

ಘಟನೆ ವಿವರ:

ಕೊಲೆಯಾದ ಮೋಹನ್​ ತಮ್ಮ ರಾಜು, ಸರ್ಕಾರಿ ಪದವಿಪೂರ್ವ ಬಾಲಕರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ನಿಲಯದ ವಿದ್ಯಾರ್ಥಿ. ಕಳೆದ ರಾತ್ರಿ ರಾಜು ಮತ್ತು ಹಾಸ್ಟೆಲ್​ನ ಕೆಲ ವಿದ್ಯಾರ್ಥಿಗಳ ನಡುವೆ ಚಪಾತಿ ತಿನ್ನುವ ವಿಚಾರದಲ್ಲಿ ಜಗಳ ಆಗಿದೆಯಂತೆ.

ಇದೇ ವಿಷಯವಾಗಿ ಮೋಹನ್​ ಹಾಸ್ಟೆಲ್​ಗೆ ಹೋಗಿ ಜಗಳ ಮಾಡಿದ್ದಾನೆ. ಮೋಹನ್​ ಜೊತೆ ಜಗಳವಾಡಿದ ವಿದ್ಯಾರ್ಥಿಗಳು ತಮ್ಮ ಹೊರಗಿನ ಸ್ನೇಹಿತರಿಗೆ ತಿಳಿಸಿದ್ದಾರೆ. ಇವರು ಮಧ್ಯಾಹ್ನ ಮೋಹನ್​ನ್ನು ಕರೆದು ನಿನ್ನೆಯ ವಿಚಾರವಾಗಿ ಜಗಳ ಮಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಗಲಾಡ ಮಾಡಿದವರೇ ಚಾಕುನಿಂದ ಹಿರಿದು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.