ETV Bharat / state

ಗದ್ದೆಯಲ್ಲಿನ ನೀರು ಕುಡಿದು 22 ಕುರಿಗಳು ಸಾವು

author img

By

Published : May 8, 2020, 5:53 PM IST

ಬೆಳಗ್ಗೆ ಮೇಯಲು ಹೋದ 22 ಕುರಿಗಳು ಗದ್ದೆಯಲ್ಲಿದ್ದ ನೀರು ಕುಡಿದ ಬಳಿಕ ಸಾವನ್ನಪ್ಪಿರುವ ಘಟನೆ ಯಾದಗಿರಿಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೇಯಲು ಹೋದ 22 ಕುರಿಗಳು ಸಾವು
ಮೇಯಲು ಹೋದ 22 ಕುರಿಗಳು ಸಾವು

ಸುರಪುರ(ಯಾದಗಿರಿ): ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಹಯ್ಯಾಳಪ್ಪ ಯಾದವ್ ಎಂಬುವವರ 22 ಕುರಿಗಳು ಮೇಯಲು ಹೋದಾಗ ಅಲ್ಲೇ ಗದ್ದೆಯಲ್ಲಿದ್ದ ನೀರನ್ನು ಕುಡಿದು ಸಾವನ್ನಪ್ಪಿವೆ.

ಬೆಳಗ್ಗೆ ಗ್ರಾಮದ ಎಲ್ಲಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಭತ್ತದ ಗದ್ದೆಯಲ್ಲಿ ಕುರಿಗಳನ್ನು ಮೇಯಿಸಲು ಹೊಡೆದುಕೊಂಡು ಹೋಗಲಾಗಿತ್ತು. ಕುರಿಗಳನ್ನು ಮೇಯಿಸಿ ನಂತರ ಅಲ್ಲೇ ಭತ್ತದ ಗದ್ದೆಯಲ್ಲಿ ಇರುವ ನೀರು ಕುಡಿಸಿದ್ದು, ನೀರು ಕುಡಿದ ಕುರಿಗಳು ಎರಡು ಗಂಟೆಯ ನಂತರ ಒಂದೊಂದಾಗಿ ಅಲ್ಲಲ್ಲಿ ಬಿದ್ದು ಸಾವನ್ನಪ್ಪಿವೆ ಎಂದು ಕುರಿಗಳ ಮಾಲೀಕ ಹಯ್ಯಾಳಪ್ಪ ತಿಳಿಸಿದ್ದಾರೆ.

ಸುದ್ದಿ ತಿಳಿದು ಪಶುಸಂಗೋಪನಾ ಇಲಾಖೆಯ ಡಾ. ಸುರೇಶ ಅಚ್ಚಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಕುರಿಗಳ ಸಾವಿಗೆ ನಿಖರವಾದ ಕಾರಣ ಏನೆಂದು ತಿಳಿಯಲಿದೆ.

ಸುರಪುರ(ಯಾದಗಿರಿ): ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಹಯ್ಯಾಳಪ್ಪ ಯಾದವ್ ಎಂಬುವವರ 22 ಕುರಿಗಳು ಮೇಯಲು ಹೋದಾಗ ಅಲ್ಲೇ ಗದ್ದೆಯಲ್ಲಿದ್ದ ನೀರನ್ನು ಕುಡಿದು ಸಾವನ್ನಪ್ಪಿವೆ.

ಬೆಳಗ್ಗೆ ಗ್ರಾಮದ ಎಲ್ಲಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಭತ್ತದ ಗದ್ದೆಯಲ್ಲಿ ಕುರಿಗಳನ್ನು ಮೇಯಿಸಲು ಹೊಡೆದುಕೊಂಡು ಹೋಗಲಾಗಿತ್ತು. ಕುರಿಗಳನ್ನು ಮೇಯಿಸಿ ನಂತರ ಅಲ್ಲೇ ಭತ್ತದ ಗದ್ದೆಯಲ್ಲಿ ಇರುವ ನೀರು ಕುಡಿಸಿದ್ದು, ನೀರು ಕುಡಿದ ಕುರಿಗಳು ಎರಡು ಗಂಟೆಯ ನಂತರ ಒಂದೊಂದಾಗಿ ಅಲ್ಲಲ್ಲಿ ಬಿದ್ದು ಸಾವನ್ನಪ್ಪಿವೆ ಎಂದು ಕುರಿಗಳ ಮಾಲೀಕ ಹಯ್ಯಾಳಪ್ಪ ತಿಳಿಸಿದ್ದಾರೆ.

ಸುದ್ದಿ ತಿಳಿದು ಪಶುಸಂಗೋಪನಾ ಇಲಾಖೆಯ ಡಾ. ಸುರೇಶ ಅಚ್ಚಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ ಕುರಿಗಳ ಸಾವಿಗೆ ನಿಖರವಾದ ಕಾರಣ ಏನೆಂದು ತಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.