ಯಾದಗಿರಿ: ನೂತನ ವರ್ಷದ ಆರಂಭಕ್ಕೂ ಮುನ್ನವೇ ನಗರದಲ್ಲಿ ವಿನೂತನವಾಗಿ ಹೊಸ ವರ್ಷದ ಸಂಭ್ರಮ ಆಚರಿಸಲಾಯಿತು.
ನಗರದ ಜಿಲ್ಲಾ ಟೋಕರಿ ಕಬ್ಬಲಿಗ ಸಮಾಜದ ಕಚೇರಿಯಲ್ಲಿ ಟೋಕರಿ ಕಬ್ಬಲಿಗ ಸಮಾಜದ ಮುಖಂಡ ಉಮೇಶ ಮುದ್ನಾಳ ಅವರು ರೈತಪರ ಕಾಳಜಿ ವಹಿಸಿ ಕೇಕ್ ಕತ್ತರಿಸುವ ಬದಲು ಕಲ್ಲಂಗಡಿ ಕತ್ತರಿಸಿ ಹೊಸ ವರ್ಷದ ಸಂಭ್ರಮವನ್ನು ಆಚರಿಸಿದರು. ಕಲ್ಲಂಗಡಿ ಹಣ್ಣು ಕತ್ತರಿಸಿ ಪರಸ್ಪರ ಸೇವನೆ ಮಾಡಿದರು.
ಈ ವೇಳೆ ಪ್ರತಿಯೊಬ್ಬರು ಮದ್ಯ ಸೇವನೆ ಹಾಗೂ ಕೇಕ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳದೆ ರೈತರಿಗೆ ಉತ್ತೇಜನ ನೀಡಲು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡಿ, ಅದನ್ನು ತಿನ್ನುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.