ETV Bharat / state

ಆಲಮಟ್ಟಿಯಲ್ಲಿ ಇಂದು ನೀರಾವರಿ ಸಲಹಾ ಸಮಿತಿ ಸಭೆ... ತೀವ್ರ ಕುತೂಹಲ

ಜಿಲ್ಲೆಯ ನಾರಾಯಣಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕಾಲುವೆ ಮೂಲಕ  ಬೆಳೆಗೆ ಪೂರ್ಣಾವಧಿವರೆಗೂ ನೀರು ಹರಿಸಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಇಂದು ಆಲಮಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹತ್ವದ ನೀರಾವರಿ ಸಲಹಾ ಸಮಿತಿಯಿಂದ ಸಭೆ ನಡೆಯಲಿದೆ.

author img

By

Published : Nov 16, 2019, 11:54 PM IST

Updated : Nov 17, 2019, 12:26 AM IST

Yadgiri

ಯಾದಗಿರಿ : ಜಿಲ್ಲೆಯ ನಾರಾಯಣಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕಾಲುವೆ ಮೂಲಕ ಬೆಳೆಗೆ ಪೂರ್ಣಾವಧಿವರೆಗೂ ನೀರು ಹರಿಸಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಇಂದು ಆಲಮಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹತ್ವದ ನೀರಾವರಿ ಸಲಹಾ ಸಮಿತಿಯಿಂದ ಸಭೆ ನಡೆಯಲಿದೆ.

ನಾಳೆ ನೀರಾವರಿ ಸಲಹಾ ಸಮಿತಿಯಿಂದ ಸಭೆ

ಉಪ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ರಾಯಚೂರು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಎಲ್ಲ ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಲಾಶಯ ತುಂಬಿದ್ದರಿಂದ ಹಿಂಗಾರು ಬೆಳೆಗೆ ಸಂಪೂರ್ಣ ನೀರು ಹರಿಸಬೇಕು. ವಾರಬಂದಿ ನೀತಿಯನ್ನ ಕೈ ಬಿಟ್ಟು ಏ.30 ರವರೆಗೆ ನೀರು ಹರಿಸಬೇಕು ಎಂದು ಜಿಲ್ಲೆಯ ರೈತರು ಒತ್ತಾಯಿಸಿದ್ದಾರೆ.

ಈಗಾಗಲೇ ಮೂಂಗಾರು ಫಸಲು ತೆಗೆದುಕೊಂಡಿರುವ ರೈತರು, ಹಿಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಶೇಂಗಾ, ಕಡ್ಲೆ, ಜೋಳ ಬಿತ್ತನೆ ಮಾಡಿದ್ದು, ನೀರಿನ ಲಭ್ಯತೆ ನೋಡಿ ಭತ್ತ ನಾಟಿ ಮಾಡಲು ಅನ್ನದಾತರು ಸಿದ್ಧತೆ ನಡೆಸುತ್ತಿದ್ದಾರೆ. ಈ ಭಾರಿ ಮಳೆ ಉತ್ತಮವಾಗಿದ್ದರಿಂದ ಜಲಾಶಯ, ಹಳ್ಳ, ಕೊಳ್ಳಗಳು ತುಂಬಿದ್ದು, ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.

ಇನ್ನೂ ನಾಳೆ ನಡೆಯುವ ಸಭೆಯಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಭಾಗವಹಿಸಲಿದ್ದು, ಜಿಲ್ಲೆಯ ರೈತರ ಹಿಂಗಾರು ಬೆಳೆಗೆ ಸಂಪೂರ್ಣವಾಗಿ ಕಾಲುವೆಯಿಂದ ನೀರು ಹರಿಸುವ ಬಗ್ಗೆ ಭರವಸೆ ಕೊಟ್ಟಿದ್ದಾರೆ.

ಯಾದಗಿರಿ : ಜಿಲ್ಲೆಯ ನಾರಾಯಣಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕಾಲುವೆ ಮೂಲಕ ಬೆಳೆಗೆ ಪೂರ್ಣಾವಧಿವರೆಗೂ ನೀರು ಹರಿಸಬೇಕೆಂದು ರೈತರು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಇಂದು ಆಲಮಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹತ್ವದ ನೀರಾವರಿ ಸಲಹಾ ಸಮಿತಿಯಿಂದ ಸಭೆ ನಡೆಯಲಿದೆ.

ನಾಳೆ ನೀರಾವರಿ ಸಲಹಾ ಸಮಿತಿಯಿಂದ ಸಭೆ

ಉಪ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ರಾಯಚೂರು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಎಲ್ಲ ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಲಾಶಯ ತುಂಬಿದ್ದರಿಂದ ಹಿಂಗಾರು ಬೆಳೆಗೆ ಸಂಪೂರ್ಣ ನೀರು ಹರಿಸಬೇಕು. ವಾರಬಂದಿ ನೀತಿಯನ್ನ ಕೈ ಬಿಟ್ಟು ಏ.30 ರವರೆಗೆ ನೀರು ಹರಿಸಬೇಕು ಎಂದು ಜಿಲ್ಲೆಯ ರೈತರು ಒತ್ತಾಯಿಸಿದ್ದಾರೆ.

ಈಗಾಗಲೇ ಮೂಂಗಾರು ಫಸಲು ತೆಗೆದುಕೊಂಡಿರುವ ರೈತರು, ಹಿಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಶೇಂಗಾ, ಕಡ್ಲೆ, ಜೋಳ ಬಿತ್ತನೆ ಮಾಡಿದ್ದು, ನೀರಿನ ಲಭ್ಯತೆ ನೋಡಿ ಭತ್ತ ನಾಟಿ ಮಾಡಲು ಅನ್ನದಾತರು ಸಿದ್ಧತೆ ನಡೆಸುತ್ತಿದ್ದಾರೆ. ಈ ಭಾರಿ ಮಳೆ ಉತ್ತಮವಾಗಿದ್ದರಿಂದ ಜಲಾಶಯ, ಹಳ್ಳ, ಕೊಳ್ಳಗಳು ತುಂಬಿದ್ದು, ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.

ಇನ್ನೂ ನಾಳೆ ನಡೆಯುವ ಸಭೆಯಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಭಾಗವಹಿಸಲಿದ್ದು, ಜಿಲ್ಲೆಯ ರೈತರ ಹಿಂಗಾರು ಬೆಳೆಗೆ ಸಂಪೂರ್ಣವಾಗಿ ಕಾಲುವೆಯಿಂದ ನೀರು ಹರಿಸುವ ಬಗ್ಗೆ ಭರವಸೆ ಕೊಟ್ಟಿದ್ದಾರೆ.

Intro:ಉತ್ತರ ಕರ್ನಾಟ ಭಾಗದಲ್ಲಿ ಪ್ರವಾಹ ಉಕ್ಕಿ ಹರಿದು ಅನಾಹುತ ಸೃಷ್ಟಿಸಿದ್ದು ಇನ್ನೂ ಮಾಸಿಲ್ಲ. ಮಹಾರಾಷ್ಟ್ರದ ಮಹಾ ಮಳೆಗೆ ಕರ್ನಾಟಕದ ಉತ್ತರ ಜಿಲ್ಲೆಗಳು ತತ್ತರಿಸಿ ಹೋಗಿವೆ. ಆದ್ರೇ ಜಿಲ್ಲೆಯ ಕೃಷ್ಣಾ ಹಾಗೂ ಭೀಮಾನದಿ ಸಂಪೂರ್ಣ ಭರ್ತಿಯಾಗಿದ್ದು ಖುಷಿ ವಿಚಾರ, ಜಲಾಶಯ ಭರ್ತಿಯಾಗಿದ್ರು ಹಿಂಗಾರು ಬೆಳಿಗೆ ಸರ್ಕಾರ ನೀರು ಹರಿಸುತ್ತಾ ಇಲ್ವಾ ..? ಎನ್ನುವ ಆತಂಕ ಯಾದಗಿರಿ ಜಿಲ್ಲೆಯ ರೈತರಲ್ಲಿ ಮೂಡಿದೆ.. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲದೆ ನೋಡಿ...!

Body:ಯಾದಗಿರಿಯ ನಾರಾಯಣಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ರೈತರ ಬೆಳೆಗೆ ಕಾಲುವೆ ಮುಖಾಂತರ ಸಂಪೂರ್ಣ ಪೂರ್ಣಾವಧಿ ವರೇಗು ನೀರು ಹರಿಸಬೇಕು ಅನ್ನೋದು ಜಿಲ್ಲೆಯ ರೈತರ ಬೇಡಿಕೆ ಆಗಿದೆ. ಈ ಕುರಿತು ನಾಳೆ ಆಲಿಮಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹತ್ವದ ನೀರಾವರಿ ಸಲಹಾ ಸಮಿತಿಯಿಂದ ಸಭೆ ನಡೆಯಲಿದ್ದು ಸಭೆಯಲ್ಲಿ ಯಾದಗಿರಿ ಜಿಲ್ಲೆಗೆ ವಾರಾಬಂದಿ ನೀತಿಯನ್ನ ಕೈ ಬಿಟ್ಟು ಏಪ್ರಿಲ್ 30 ರ ವರೆಗೆ ನೀರು ಹರಿಸಬೇಕು ಅಂತ ಜಿಲ್ಲೆಯ ರೈತರು ಒತ್ತಾಯಿಸಿದ್ದರೆ.. ಉಪ ಉಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹ ಸಮೀತಿ ನಡೆಯಲಿದೆ. ರಾಯಚೂರು, ಯಾರಗಿರಿ ಹಾಗೂ ಬಿಜಾಪುರ ಜಿಲ್ಲೆಯ ಎಲ್ಲಾ ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಲಾಶಯ ತುಂಬಿದರಿಂದ ಹಿಂಗಾರು ಬೆಳೆಗೆ ಸಂಪೂರ್ಣ ನೀರು ಹರಿಸಬೇಕು ಎನ್ನುವುದು ಸ್ಥಳೀಯ ರೈತರ ಆಗ್ರಹವಾಗಿದೆ..

ಬೈಟ್-01:- ಹಣುಮಂತ ದೋರೆ, ರೈತ.

ಈಗಾಗ್ಲೇ ಮೂಂಗಾರು ಫಸಲು ತೆಗೆದುಕೊಂಡ ರೈತರು, ಹಿಂಗಾರು ಬೆಳೆಗಳು ಬಿತ್ತನೆ ಮಾಡಿದ್ದಾರೆ. ಶೇಂಗಾ, ಕಡ್ಲೆ, ಜೋಳಾ ಬಿತ್ತನೆ ಮಾಡಿದ್ದಾರೆ, ನೀರಿನ ಲಭ್ಯತೆ ನೋಡಿ ಭತ್ತ ನಾಟಿ ಮಾಡಲು ಅನ್ನದಾತರು ಸಿದ್ದತೆ ನಡೆಸುತ್ತಿದ್ದಾರೆ. ಈ ಭಾರಿ ಮಳೆ ಉತ್ತಮವಾಗಿದ್ದರಿಂದ ಜಲಾಶಯ ಹಳ್ಳ ಕೊಳ್ಳಗಳು ತುಂಬಿಕೊಂಡಿದ್ದು ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ನಾಳೆ ನಡೆಯುವ ಸಭೆಯಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಭಾಗವಹಿಸಲಿದ್ದು, ಯಾದಗಿರಿ ಜಿಲ್ಲೆಯ ರೈತರ ಹಿಂಗಾರು ಬೆಳೆಗೆ ಸಂಪೂರ್ಣವಾಗಿ ಕಾಲುವೆಯಿಂದ ನೀರು ಹರಿಸುವ ಬಗ್ಗೆ ಭರವಸೆ ಕೊಟ್ಟಿದ್ದಾರೆ.

ಬೈಟ್: 02 ರಾಜಾ ಅಮರೇಶ್ವರ ನಾಯಕ, ರಾಯಚೂರು ಸಂಸದರು.

Conclusion:ಕಳೆದ ಮೂರ್ನಾಲ್ಕು ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿ ರೈತರು ಒಂದೆ ಫಸಲು ತೆಗೆದುಕೊಳ್ಳಲು ಸೀಮಿತವಾಗಿದ್ರು. ಈ ಭಾರೀ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ಹಿಂಗಾರು ಬೆಳೆ ಬೆಳೆಯಲು ರೈತರು ಉತ್ಸಕರಾಗಿದ್ದಾರೆ. ಜಲಾಶಯ ಕೂಡ ಭರ್ತಿಯಾಗಿದ್ದು , ಸರ್ಕಾರ ಹಿಂಗಾರು ಬೆಳೆಗೆ ಸಂಪೂರ್ಣ ನೀರು ಹರಿಸಬೇಕು ಎನ್ನುವುದು ಜಿಲ್ಲೆಯ ರೈತರ ಒತ್ತಾಸೆಯಾಗಿದೆ...

ಈಟಿವಿ ಭಾರತ ಯಾದಗಿರಿ
Last Updated : Nov 17, 2019, 12:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.