ವಿಜಯಪುರ: ವಿಜಯಪುರ ಲೋಕಸಭಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ನಿನ್ನೆ ಒಟ್ಟು 7 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಸಲ್ಲಿಕೆಯಾಗಿವೆ.
ಶ್ರೀನಾಥ ಪೂಜಾರಿ (2 ನಾಮಪತ್ರ- ಬಹುಜನ ಸಮಾಜ ಪಕ್ಷ), ಮರಗಣ್ಣ ಮಾಳಪ್ಪ ಹೊನ್ನೂರ (ಪಕ್ಷೇತರ), ಯಮನಪ್ಪ ವಿಠ್ಠಲ ಗುಣದಾಳ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ದಾದಾಸಾಹೇಬ ಸಿದ್ದಪ್ಪ ಬಾಗಾಯತ (ಪಕ್ಷೇತರ), ಡಾ. ಸುನೀತಾ ಚವ್ಹಾಣ (ಜನತಾ ದಳ ಜಾತ್ಯಾತೀತ- 2 ನಾಮಪತ್ರಗಳು), ರಾಮಪ್ಪ ಹರಿಜನ ಉರ್ಫ್ ಹೊಲೇರ (ಪಕ್ಷೇತರ) ಹಾಗೂ ರಮೇಶ ಹಳ್ಳಿ (ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ-ಎ.ಪಿ.ಐ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಿನ್ನೆ 9 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈವರೆಗೆ ಒಟ್ಟು 17 ಅಭ್ಯರ್ಥಿಗಳಿಂದ 28 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ವಿಜಯಪುರ ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.