ETV Bharat / state

ತಾಳಿಕೋಟೆ ಗುಂಡಕನಾಳ ಗ್ರಾಮದಲ್ಲಿ ಜಿಲ್ಲಾ ಮಠಾಧೀಶರ ಒಕ್ಕೂಟದ 15 ನೇ ಸಭೆ

author img

By

Published : Aug 5, 2021, 6:22 PM IST

ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ 15 ನೇ ಸಭೆ ಇಂದು ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದ ಬೃಹನ್ಮಠದಲ್ಲಿ ನಡೆಯಿತು.

Vijaypur  district  pontiff union meeting
ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ಸಭೆ

ಮುದ್ದೇಬಿಹಾಳ: ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿರುವ ಬೃಹನ್ಮಠದಲ್ಲಿ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ಸಭೆ ಜರುಗಿತು. ಶ್ರೀ ಷಟಸ್ಥಲ ಬ್ರಹ್ಮ ಗುರುಲಿಂಗ ಶಿವಾಚಾರ್ಯರು ಈ ಸಭೆಯ ನೇತೃತ್ವ ವಹಿಸಿದ್ದರು.

ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ಸಭೆ

ಈ ವೇಳೆ ಮಾತನಾಡಿದ ಗುಂಡಕನಾಳ ಶ್ರೀ, ಕೋವಿಡ್ ಸಮಯದಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡಿದ ವಾರಿಯರ್ಸ್​ಗೆ ಅಭಿನಂದನೆ ತಿಳಿಸಿದರು. ಮೂರು ತಿಂಗಳಿಗೊಮ್ಮೆ ಜರುಗುವ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ 15 ನೇ ಸಭೆ ಇಂದು ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದ ಬೃಹನ್ಮಠದಲ್ಲಿ ನಡೆಯಿತು. ಈ ಸಭೆಯ ಮೂಲ ಉದ್ದೇಶ ಸೈನಿಕರಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸಲು ಕುರಿತು ಮತ್ತು ವಿಜಯಪುರ ಜಿಲ್ಲಾ ಸಂಪೂರ್ಣ ನೀರಾವರಿಯ ಕುರಿತು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಶ್ರೀಗಳು ತಿಳಿಸಿದರು.

ವಿಜಯಪುರ ಜಿಲ್ಲೆಯ ಉಕ್ಕಲಿ ವೀರ ಯೋಧ ದಿ. ಕಾಶೀರಾಯ ಬೊಮ್ಮನಳ್ಳಿ ಕುಟುಂಬಕ್ಕೆ ಸಾಂತ್ವನ ಹೇಳಲು ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದಿಂದ ತೆರಳುವುದಾಗಿ ಶ್ರೀಗಳು ಇದೇ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಷಟಸ್ಥಲ ಬ್ರಹ್ಮ ಮಹಾದೇವ ಶಿವಾಚಾರ್ಯರು ಬೃಹನ್ಮಠ, ಬಬಲೇಶ್ವರ, ಶ್ರೀ ಷಟಸ್ಥಲ ಬ್ರಹ್ಮ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಬೃಹನ್ಮಠ ಜಾಲಹಳ್ಳಿ, ಶ್ರೀ ಷಟಸ್ಥಲ ಬ್ರಹ್ಮ ಅಭಿನವ ಸಂಗನಬಸವ ಶಿವಾಚಾರ್ಯರು ಹಿರೇಮಠ ಮನಗೂಳಿ, ಶ್ರೀ ಷಟಸ್ಥಲ ಬ್ರಹ್ಮ ಗುರುಲಿಂಗಶಿವಾಚಾರ್ಯರು ಬೃಹನ್ಮಠ ಗುಂಕನಾಳ ಉಪಸ್ಥಿತರಿದ್ದರು.

ಮುದ್ದೇಬಿಹಾಳ: ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿರುವ ಬೃಹನ್ಮಠದಲ್ಲಿ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ಸಭೆ ಜರುಗಿತು. ಶ್ರೀ ಷಟಸ್ಥಲ ಬ್ರಹ್ಮ ಗುರುಲಿಂಗ ಶಿವಾಚಾರ್ಯರು ಈ ಸಭೆಯ ನೇತೃತ್ವ ವಹಿಸಿದ್ದರು.

ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ಸಭೆ

ಈ ವೇಳೆ ಮಾತನಾಡಿದ ಗುಂಡಕನಾಳ ಶ್ರೀ, ಕೋವಿಡ್ ಸಮಯದಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡಿದ ವಾರಿಯರ್ಸ್​ಗೆ ಅಭಿನಂದನೆ ತಿಳಿಸಿದರು. ಮೂರು ತಿಂಗಳಿಗೊಮ್ಮೆ ಜರುಗುವ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ 15 ನೇ ಸಭೆ ಇಂದು ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದ ಬೃಹನ್ಮಠದಲ್ಲಿ ನಡೆಯಿತು. ಈ ಸಭೆಯ ಮೂಲ ಉದ್ದೇಶ ಸೈನಿಕರಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸಲು ಕುರಿತು ಮತ್ತು ವಿಜಯಪುರ ಜಿಲ್ಲಾ ಸಂಪೂರ್ಣ ನೀರಾವರಿಯ ಕುರಿತು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಶ್ರೀಗಳು ತಿಳಿಸಿದರು.

ವಿಜಯಪುರ ಜಿಲ್ಲೆಯ ಉಕ್ಕಲಿ ವೀರ ಯೋಧ ದಿ. ಕಾಶೀರಾಯ ಬೊಮ್ಮನಳ್ಳಿ ಕುಟುಂಬಕ್ಕೆ ಸಾಂತ್ವನ ಹೇಳಲು ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದಿಂದ ತೆರಳುವುದಾಗಿ ಶ್ರೀಗಳು ಇದೇ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಷಟಸ್ಥಲ ಬ್ರಹ್ಮ ಮಹಾದೇವ ಶಿವಾಚಾರ್ಯರು ಬೃಹನ್ಮಠ, ಬಬಲೇಶ್ವರ, ಶ್ರೀ ಷಟಸ್ಥಲ ಬ್ರಹ್ಮ ಜಯಶಾಂತಲಿಂಗೇಶ್ವರ ಶಿವಾಚಾರ್ಯರು ಬೃಹನ್ಮಠ ಜಾಲಹಳ್ಳಿ, ಶ್ರೀ ಷಟಸ್ಥಲ ಬ್ರಹ್ಮ ಅಭಿನವ ಸಂಗನಬಸವ ಶಿವಾಚಾರ್ಯರು ಹಿರೇಮಠ ಮನಗೂಳಿ, ಶ್ರೀ ಷಟಸ್ಥಲ ಬ್ರಹ್ಮ ಗುರುಲಿಂಗಶಿವಾಚಾರ್ಯರು ಬೃಹನ್ಮಠ ಗುಂಕನಾಳ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.