ETV Bharat / state

ವಿಜಯಪುರ.. ಸರಳವಾಗಿ ಸಿದ್ದೇಶ್ವರ ಜಾತ್ರೆ ಆಚರಣೆ: ಅಕ್ಕಿಯಲ್ಲಿ ಅರಳಿದ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳು

author img

By

Published : Jan 10, 2023, 5:59 PM IST

ಸರಳವಾಗಿ ಸಿದ್ದೇಶ್ವರ ದೇವರ ಜಾತ್ರೆ ಆಚರಣೆ - ಮಕರ ಸಂಕ್ರಾಂತಿಯಂದು ಆಚರಿಸಲಾಗುವ ಸಿದ್ದೇಶ್ವರ ಶ್ರೀ ಜಾತ್ರೆ - ಜನವರಿ 12ರಿಂದ 17ರವರೆಗೆ ಜಾತ್ರಾ ಮಹೋತ್ಸವ

siddeshwar-jatra-at-vijaypur
ಸರಳವಾಗಿ ಸಿದ್ದೇಶ್ವರ ಜಾತ್ರೆ ಆಚರಣೆ : ಅಕ್ಕಿಯಲ್ಲಿ ಅರಳಿದ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳು
ಸರಳವಾಗಿ ಸಿದ್ದೇಶ್ವರ ಜಾತ್ರೆ ಆಚರಣೆ : ಅಕ್ಕಿಯಲ್ಲಿ ಅರಳಿದ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳು

ವಿಜಯಪುರ : ಗುಮ್ಮಟನಗರಿಯ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವರ ಜಾತ್ರೆಯನ್ನು ಈ ವರ್ಷ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯಂದು ಆಚರಿಸಲಾಗುತ್ತಿರುವ ಸಿದ್ದೇಶ್ವರ ಶ್ರೀ ಜಾತ್ರೆಯನ್ನು ಈ ಬಾರಿ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುವುದು ಎಂದರು.

ಸರಳವಾಗಿ ಸಿದ್ದೇಶ್ವರ ದೇವರ ಜಾತ್ರೆ : ಯಾವುದೇ ಮನೋರಂಜನೆ ಕಾರ್ಯಕ್ರಮ, ಆಡಂಬರದ ಕಾರ್ಯಕ್ರಮ, ಸುಡು ಮದ್ದು ಸೇರಿದಂತೆ ಪ್ರತಿ ವರ್ಷ ನಡೆಸುವ ಕಾರ್ಯಕ್ರಮ ಈ ಬಾರಿ ಇಲ್ಲ. ಕೇವಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು. ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆ ಹೊರತು ಪಡಿಸಿ ಬೇರೆ ಯಾವುದೇ ಮನೋರಂಜನೆ ಕಾರ್ಯಕ್ರಮಗಳು ನಡೆಯುವುದಿಲ್ಲ. ಕೇವಲ ಭಜನೆ, ಭಕ್ತಿಗೀತೆಗಳ ನಮನ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.

ಜನವರಿ 12ರಿಂದ 17ರವರೆಗೆ ಜಾತ್ರಾ ಮಹೋತ್ಸವ : ಜಾತ್ರಾ ಮಹೋತ್ಸವ ಜ. 12 ರಿಂದ ಜ. 17ರವರೆಗೆ ನಡೆಯಲಿದೆ. ದೇವಸ್ಥಾನ ಆವರಣದಲ್ಲಿರುವ ಗೋವುಗಳಿಗೆ ಪೂಜೆ ನೆರವೇರಿಸುವ ಮೂಲಕ‌ ಆರಂಭಗೊಳ್ಳಲಿದೆ. ನಂತರ ನಂದಿ ಧ್ವಜಗಳಿಗೆ ಸಂಪ್ರದಾಯ ಪೂಜೆ ನಡೆಯಲಿದೆ. ಜ.13ರಂದು ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಕುರಿತು ನುಡಿನಮನ, ಭಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

ನಂತರ ನಂದಿ ಧ್ವಜಗಳ ಉತ್ಸವದ ಜೊತೆ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ನೇರವೇರಲಿದೆ. ಜ.14ರಂದು ಸಂಕ್ರಮಣ ಭೋಗಿ, ವಚನ ಸಂಗೀತ, ಗೊಂದಳಿ ಹಾಡುಗಳ ಕಾರ್ಯಕ್ರಮ ನಡೆಯಲಿವೆ. ಜ.15ರಂದು ಸಂಕ್ರಮಣ ಆಚರಣೆ ಇದ್ದು, ಅಂದು ಸಾಂಪ್ರದಾಯಿಕ ನಂದಿ ಧ್ವಜಗಳ ಮೆರವಣಿಗೆ, ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು. ಜ.16ರಂದು ಜಾತ್ರಾ ಮಹೋತ್ಸವದಲ್ಲಿ ನಂದಿ ಮೆರವಣಿಗೆ ನಡೆಯಲಿದೆ. ಜ.17ರಂದು ಭಾರ ಎತ್ತುವ ಸ್ಪರ್ಧೆ, ಕುಸ್ತಿ ಸ್ಪರ್ಧೆಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದರು.

ವ್ಯಾಪಾರಕ್ಕೆ ಅವಕಾಶವಿಲ್ಲ: ಪ್ರತಿ ವರ್ಷದಂತೆ ಜಾತ್ರೆಯಲ್ಲಿ ವಿವಿಧ ವ್ಯಾಪಾರ, ಮನೋರಂಜನೆ ಕಾರ್ಯಕ್ರಮ ನಡೆಯುತ್ತಿದ್ದವು. ಈ ಬಾರಿ ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದ ವ್ಯಾಪಾರ ವಹಿವಾಟು, ದನಗಳ ಜಾತ್ರೆ ರದ್ದು ಪಡಿಸಲಾಗಿದೆ ಎಂದು ತಿಳಿಸಿದರು.

ಅಕ್ಕಿಯಲ್ಲಿ ಅರಳಿದ ಸಿದ್ದೇಶ್ವರ ಶ್ರೀಗಳು : ಇಲ್ಲಿನ ಜ್ಞಾನಯೋಗಾಶ್ರಮದ ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳ ಸವಿ ನೆನಪಿಗಾಗಿ ವಿಶೇಷ ಕಾರ್ಯಗಳು ವಿಜಯಪುರದಲ್ಲಿ ನಡೆಯುತ್ತಿದೆ. ಸಿದ್ಧೇಶ್ವರ ಶ್ರೀಗಳ ನೆನಪಿಗಾಗಿ ಇಬ್ಬರು ಕಲಾವಿದರು ಅಕ್ಕಿಯಲ್ಲಿ ಸಿದ್ಧೇಶ್ವರ ಶ್ರೀಗಳ ಕಲಾಕೃತಿಯನ್ನು ಬಿಡಿಸಿದ್ದಾರೆ. ನಗರದ ಮಹಾದೇವಪ್ಪ ದೇವಸ್ಥಾನದಲ್ಲಿ ಕಲಾವಿದರಾದ ತುಕಾರಾಂ ಬೇನೂರ್ ಹಾಗೂ ವಿಜಯ ಗುಜರಿ ಎಂಬವರು ಶ್ರೀಗಳ ಕಲಾಕೃತಿಯನ್ನು ಬಿಡಿಸಿದ್ದಾರೆ. ಶ್ರೀಗಳ ಕಲಾಕೃತಿಗೆ ಸುಮಾರು 50 ಕೆಜಿ ಅಕ್ಕಿಯನ್ನು ಬಳಸಲಾಗಿದೆ. ಶ್ರೀಗಳು ಜ್ಞಾನಯೋಗಿ, ಅನ್ನ ದಾಸೋಹ ಆಗಿದ್ದರು. ಅವರ ಸವಿ ನೆನಪಿಗಾಗಿ ಅಕ್ಕಿಯಲ್ಲಿ ಕಲಾಕೃತಿಯನ್ನು ಬಿಡಿಸಿದ್ದೇವೆ ಎಂದು ಕಲಾವಿದರು ಹೇಳಿದ್ದಾರೆ.

ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದಿದ್ದ ಶ್ರೀಗಳು : ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವಿಜಯಪುರದ ನಡೆದಾಡುವ ದೇವರು ಎಂದು ಪ್ರಸಿದ್ಧಿ ಪಡೆದಿದ್ದರು. ಅವರು ಮಾಡಿರುವ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತಂದಿದ್ದು, ಅಂತಿಮವಾಗಿ ಶಾಂತಿಯುತ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗಿತ್ತು. ತಮಗೆ ಸಂದ ಪ್ರಶಸ್ತಿ ಪುರಸ್ಕಾರಗಳನ್ನು ಅತಿ ವಿನಯದಿಂದ ತಿರಸ್ಕರಿಸಿದ್ದ ಶ್ರೀಗಳನ್ನು ಗುಣಗಾನ ಮಾಡಲು ಪದಗಳು ಸಾಲದು. ಇವರ ಬೋಧನೆಗಳು ಅನಕ್ಷರಸ್ಥರಿಂದಲೂ ಚೆನ್ನಾಗಿ ಅರ್ಥೈಸಿಕೊಳ್ಳಬಹುದಾಗಿತ್ತು.

ಇದನ್ನೂ ಓದಿ : ವಿಜಯಪುರ: ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರದ ಕಟ್ಟೆ ತೆರವು

ಸರಳವಾಗಿ ಸಿದ್ದೇಶ್ವರ ಜಾತ್ರೆ ಆಚರಣೆ : ಅಕ್ಕಿಯಲ್ಲಿ ಅರಳಿದ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳು

ವಿಜಯಪುರ : ಗುಮ್ಮಟನಗರಿಯ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವರ ಜಾತ್ರೆಯನ್ನು ಈ ವರ್ಷ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದರು. ನಗರದಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯಂದು ಆಚರಿಸಲಾಗುತ್ತಿರುವ ಸಿದ್ದೇಶ್ವರ ಶ್ರೀ ಜಾತ್ರೆಯನ್ನು ಈ ಬಾರಿ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುವುದು ಎಂದರು.

ಸರಳವಾಗಿ ಸಿದ್ದೇಶ್ವರ ದೇವರ ಜಾತ್ರೆ : ಯಾವುದೇ ಮನೋರಂಜನೆ ಕಾರ್ಯಕ್ರಮ, ಆಡಂಬರದ ಕಾರ್ಯಕ್ರಮ, ಸುಡು ಮದ್ದು ಸೇರಿದಂತೆ ಪ್ರತಿ ವರ್ಷ ನಡೆಸುವ ಕಾರ್ಯಕ್ರಮ ಈ ಬಾರಿ ಇಲ್ಲ. ಕೇವಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು. ಕುಸ್ತಿ ಮತ್ತು ಭಾರ ಎತ್ತುವ ಸ್ಪರ್ಧೆ ಹೊರತು ಪಡಿಸಿ ಬೇರೆ ಯಾವುದೇ ಮನೋರಂಜನೆ ಕಾರ್ಯಕ್ರಮಗಳು ನಡೆಯುವುದಿಲ್ಲ. ಕೇವಲ ಭಜನೆ, ಭಕ್ತಿಗೀತೆಗಳ ನಮನ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.

ಜನವರಿ 12ರಿಂದ 17ರವರೆಗೆ ಜಾತ್ರಾ ಮಹೋತ್ಸವ : ಜಾತ್ರಾ ಮಹೋತ್ಸವ ಜ. 12 ರಿಂದ ಜ. 17ರವರೆಗೆ ನಡೆಯಲಿದೆ. ದೇವಸ್ಥಾನ ಆವರಣದಲ್ಲಿರುವ ಗೋವುಗಳಿಗೆ ಪೂಜೆ ನೆರವೇರಿಸುವ ಮೂಲಕ‌ ಆರಂಭಗೊಳ್ಳಲಿದೆ. ನಂತರ ನಂದಿ ಧ್ವಜಗಳಿಗೆ ಸಂಪ್ರದಾಯ ಪೂಜೆ ನಡೆಯಲಿದೆ. ಜ.13ರಂದು ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಕುರಿತು ನುಡಿನಮನ, ಭಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

ನಂತರ ನಂದಿ ಧ್ವಜಗಳ ಉತ್ಸವದ ಜೊತೆ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ನೇರವೇರಲಿದೆ. ಜ.14ರಂದು ಸಂಕ್ರಮಣ ಭೋಗಿ, ವಚನ ಸಂಗೀತ, ಗೊಂದಳಿ ಹಾಡುಗಳ ಕಾರ್ಯಕ್ರಮ ನಡೆಯಲಿವೆ. ಜ.15ರಂದು ಸಂಕ್ರಮಣ ಆಚರಣೆ ಇದ್ದು, ಅಂದು ಸಾಂಪ್ರದಾಯಿಕ ನಂದಿ ಧ್ವಜಗಳ ಮೆರವಣಿಗೆ, ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು. ಜ.16ರಂದು ಜಾತ್ರಾ ಮಹೋತ್ಸವದಲ್ಲಿ ನಂದಿ ಮೆರವಣಿಗೆ ನಡೆಯಲಿದೆ. ಜ.17ರಂದು ಭಾರ ಎತ್ತುವ ಸ್ಪರ್ಧೆ, ಕುಸ್ತಿ ಸ್ಪರ್ಧೆಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದರು.

ವ್ಯಾಪಾರಕ್ಕೆ ಅವಕಾಶವಿಲ್ಲ: ಪ್ರತಿ ವರ್ಷದಂತೆ ಜಾತ್ರೆಯಲ್ಲಿ ವಿವಿಧ ವ್ಯಾಪಾರ, ಮನೋರಂಜನೆ ಕಾರ್ಯಕ್ರಮ ನಡೆಯುತ್ತಿದ್ದವು. ಈ ಬಾರಿ ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದ ವ್ಯಾಪಾರ ವಹಿವಾಟು, ದನಗಳ ಜಾತ್ರೆ ರದ್ದು ಪಡಿಸಲಾಗಿದೆ ಎಂದು ತಿಳಿಸಿದರು.

ಅಕ್ಕಿಯಲ್ಲಿ ಅರಳಿದ ಸಿದ್ದೇಶ್ವರ ಶ್ರೀಗಳು : ಇಲ್ಲಿನ ಜ್ಞಾನಯೋಗಾಶ್ರಮದ ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳ ಸವಿ ನೆನಪಿಗಾಗಿ ವಿಶೇಷ ಕಾರ್ಯಗಳು ವಿಜಯಪುರದಲ್ಲಿ ನಡೆಯುತ್ತಿದೆ. ಸಿದ್ಧೇಶ್ವರ ಶ್ರೀಗಳ ನೆನಪಿಗಾಗಿ ಇಬ್ಬರು ಕಲಾವಿದರು ಅಕ್ಕಿಯಲ್ಲಿ ಸಿದ್ಧೇಶ್ವರ ಶ್ರೀಗಳ ಕಲಾಕೃತಿಯನ್ನು ಬಿಡಿಸಿದ್ದಾರೆ. ನಗರದ ಮಹಾದೇವಪ್ಪ ದೇವಸ್ಥಾನದಲ್ಲಿ ಕಲಾವಿದರಾದ ತುಕಾರಾಂ ಬೇನೂರ್ ಹಾಗೂ ವಿಜಯ ಗುಜರಿ ಎಂಬವರು ಶ್ರೀಗಳ ಕಲಾಕೃತಿಯನ್ನು ಬಿಡಿಸಿದ್ದಾರೆ. ಶ್ರೀಗಳ ಕಲಾಕೃತಿಗೆ ಸುಮಾರು 50 ಕೆಜಿ ಅಕ್ಕಿಯನ್ನು ಬಳಸಲಾಗಿದೆ. ಶ್ರೀಗಳು ಜ್ಞಾನಯೋಗಿ, ಅನ್ನ ದಾಸೋಹ ಆಗಿದ್ದರು. ಅವರ ಸವಿ ನೆನಪಿಗಾಗಿ ಅಕ್ಕಿಯಲ್ಲಿ ಕಲಾಕೃತಿಯನ್ನು ಬಿಡಿಸಿದ್ದೇವೆ ಎಂದು ಕಲಾವಿದರು ಹೇಳಿದ್ದಾರೆ.

ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದಿದ್ದ ಶ್ರೀಗಳು : ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ವಿಜಯಪುರದ ನಡೆದಾಡುವ ದೇವರು ಎಂದು ಪ್ರಸಿದ್ಧಿ ಪಡೆದಿದ್ದರು. ಅವರು ಮಾಡಿರುವ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತಂದಿದ್ದು, ಅಂತಿಮವಾಗಿ ಶಾಂತಿಯುತ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗಿತ್ತು. ತಮಗೆ ಸಂದ ಪ್ರಶಸ್ತಿ ಪುರಸ್ಕಾರಗಳನ್ನು ಅತಿ ವಿನಯದಿಂದ ತಿರಸ್ಕರಿಸಿದ್ದ ಶ್ರೀಗಳನ್ನು ಗುಣಗಾನ ಮಾಡಲು ಪದಗಳು ಸಾಲದು. ಇವರ ಬೋಧನೆಗಳು ಅನಕ್ಷರಸ್ಥರಿಂದಲೂ ಚೆನ್ನಾಗಿ ಅರ್ಥೈಸಿಕೊಳ್ಳಬಹುದಾಗಿತ್ತು.

ಇದನ್ನೂ ಓದಿ : ವಿಜಯಪುರ: ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರದ ಕಟ್ಟೆ ತೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.