ETV Bharat / state

ಸಾಮಾಜಿಕ ಅಂತರ ಮರೆತು ಒಂದೇ ಬಸ್​​ನಲ್ಲಿ 60ಕ್ಕೂ ಹೆಚ್ಚು ಮಂದಿ ಪ್ರಯಾಣ!

author img

By

Published : Jun 10, 2020, 4:36 PM IST

ಲಾಕ್​ಡೌನ್​ ಸಡಿಲಿಕೆಯಾದ ಹಿನ್ನೆಲೆ ಸಾರಿಗೆ ಸೇವೆ ಆರಂಭವಾಗಿದೆ. ಅದರಂತೆ ಬಸ್​​ನಲ್ಲಿ ಕಡಿಮೆ ಪ್ರಮಾಣದ ಪ್ರಯಾಣಿಕರನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಕರೆದೊಯ್ಯುವಂತೆ ಸರ್ಕಾರ ಸೂಚಿಸಿದೆ. ಆದರೆ ಸರ್ಕಾರಿ ಬಸ್​​​ನಲ್ಲಿ​​​ 60ಕ್ಕೂ ಹೆಚ್ಚು ಜನ ಪ್ರಯಾಣಿಸಿದ್ದು, ಲಾಕ್​ಡೌನ್​ ನಿಯಮವನ್ನು ಉಲ್ಲಂಘಿಸಿರುವ ಘಟನೆ ಮುದ್ದೇಬಿಹಾಳದಲ್ಲಿ ಬೆಳಕಿಗೆ ಬಂದಿದೆ.

People forget the social distance and traveled 60 people in one bus
ಸಾಮಾಜಿಕ ಅಂತರ ಮರೆತು ಒಂದೇ ಬಸ್​​ನಲ್ಲಿ 60 ಮಂದಿ ಪ್ರಯಾಣ

ಮುದ್ದೇಬಿಹಾಳ (ವಿಜಯಪುರ): ಸಾಮಾಜಿಕ ಅಂತರ ಕಾಪಾಡುವಂತೆ ಸರ್ಕಾರ ತಿಳಿ ಹೇಳುತ್ತಿದ್ದರೂ ಜನ ಮಾತ್ರ ಇದ್ಯಾವುದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಬಸ್​ಗಳಲ್ಲಿ ಗರಿಷ್ಠ 30 ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕೆಂಬ ನಿಯಮ ಇದೆ. ಆದರೆ ಈ ನಿಯಮ ಉಲ್ಲಂಘಿಸಿ 60ಕ್ಕೂ ಹೆಚ್ಚು ಜನ ಬಸ್‌ನಲ್ಲಿ ಪ್ರಯಾಣಿಸಿದ ಘಟನೆ ಬೆಳಕಿಗೆ ಬಂದಿದೆ.

ಸಾಮಾಜಿಕ ಅಂತರ ಮರೆತು ಒಂದೇ ಬಸ್​​ನಲ್ಲಿ 60ಕ್ಕೂ ಹೆಚ್ಚು ಮಂದಿ ಪ್ರಯಾಣ

ಮುದ್ದೇಬಿಹಾಳ ಸಾರಿಗೆ ಬಸ್ ಡಿಪೋದಿಂದ ವಿಜಯಪುರಕ್ಕೆ ಸಾಮಾಜಿಕ ಅಂತರ ಮರೆತು ಕೆಎಸ್‌ಆರ್‌ಟಿಸಿ ಬಸ್​​ನಲ್ಲಿ ಹೆಚ್ಚಿನ ಜನರು ತೆರಳಿದ್ದಾರೆ. ಇದೇ ಬಸ್​ನಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಮುದ್ದೇಬಿಹಾಳ ಸಾರಿಗೆ ಘಟಕದಿಂದ ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ, ಮನಗೂಳಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದ ಬಸ್​​ನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಮೂವರು ಇರುವ ಸೀಟ್‌ಗಳಲ್ಲಿ ಇಬ್ಬರು ಕೂರಬೇಕು ಎಂಬ ನಿಯಮ ಪಾಲನೆ ಆಗಿಲ್ಲ. ಅಲ್ಲದೇ ಬಸ್‌ನಲ್ಲಿ ನಿಂತು ಪ್ರಯಾಣಿಸಲು ಅವಕಾಶ ಇಲ್ಲದಿದ್ದರೂ 10 ಜನ ನಿಂತುಕೊಂಡೇ ಪ್ರಯಾಣಿಸಿದ್ದಾರೆ. ಬಸ್‌ನಲ್ಲಿ ನಿಗದಿಗಿಂತ ಹೆಚ್ಚಿನ ಜನರನ್ನು ಸಾಗಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುದ್ದೇಬಿಹಾಳ (ವಿಜಯಪುರ): ಸಾಮಾಜಿಕ ಅಂತರ ಕಾಪಾಡುವಂತೆ ಸರ್ಕಾರ ತಿಳಿ ಹೇಳುತ್ತಿದ್ದರೂ ಜನ ಮಾತ್ರ ಇದ್ಯಾವುದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಬಸ್​ಗಳಲ್ಲಿ ಗರಿಷ್ಠ 30 ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕೆಂಬ ನಿಯಮ ಇದೆ. ಆದರೆ ಈ ನಿಯಮ ಉಲ್ಲಂಘಿಸಿ 60ಕ್ಕೂ ಹೆಚ್ಚು ಜನ ಬಸ್‌ನಲ್ಲಿ ಪ್ರಯಾಣಿಸಿದ ಘಟನೆ ಬೆಳಕಿಗೆ ಬಂದಿದೆ.

ಸಾಮಾಜಿಕ ಅಂತರ ಮರೆತು ಒಂದೇ ಬಸ್​​ನಲ್ಲಿ 60ಕ್ಕೂ ಹೆಚ್ಚು ಮಂದಿ ಪ್ರಯಾಣ

ಮುದ್ದೇಬಿಹಾಳ ಸಾರಿಗೆ ಬಸ್ ಡಿಪೋದಿಂದ ವಿಜಯಪುರಕ್ಕೆ ಸಾಮಾಜಿಕ ಅಂತರ ಮರೆತು ಕೆಎಸ್‌ಆರ್‌ಟಿಸಿ ಬಸ್​​ನಲ್ಲಿ ಹೆಚ್ಚಿನ ಜನರು ತೆರಳಿದ್ದಾರೆ. ಇದೇ ಬಸ್​ನಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಮುದ್ದೇಬಿಹಾಳ ಸಾರಿಗೆ ಘಟಕದಿಂದ ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ, ಮನಗೂಳಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದ ಬಸ್​​ನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಮೂವರು ಇರುವ ಸೀಟ್‌ಗಳಲ್ಲಿ ಇಬ್ಬರು ಕೂರಬೇಕು ಎಂಬ ನಿಯಮ ಪಾಲನೆ ಆಗಿಲ್ಲ. ಅಲ್ಲದೇ ಬಸ್‌ನಲ್ಲಿ ನಿಂತು ಪ್ರಯಾಣಿಸಲು ಅವಕಾಶ ಇಲ್ಲದಿದ್ದರೂ 10 ಜನ ನಿಂತುಕೊಂಡೇ ಪ್ರಯಾಣಿಸಿದ್ದಾರೆ. ಬಸ್‌ನಲ್ಲಿ ನಿಗದಿಗಿಂತ ಹೆಚ್ಚಿನ ಜನರನ್ನು ಸಾಗಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.