ETV Bharat / state

ಕುಡಿಯಲು ಹಣ ಕೊಡಲಿಲ್ಲವೆಂದು ಮನೆಯಿಂದ ಹೋದಾತ ಶವವಾಗಿ ಪತ್ತೆ - ವ್ಯಕ್ತಿಯೊಬ್ಬ ಶವವಾಗಿ ಪತ್ತೆ

ಕುಡಿಯಲು ಹಣ ಕೇಳಿ ಕೊಡದೆ ಇದ್ದಾಗ ನಿನ್ನೆ ಮನೆ ಬಿಟ್ಟು ನಬೀರ್ ತೆರಳಿದ್ದನು. ಆದ್ರೆ ಇದೀಗ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ..

vijayapur
ಶವ
author img

By

Published : Dec 20, 2020, 7:58 PM IST

ವಿಜಯಪುರ : ಕುಡಿಯಲು ಹಣ ನೀಡಲಿಲ್ಲ ಎಂದು ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ಅಬಕಾರಿ ಕಚೇರಿ ಬಳಿ ನಡೆದಿದೆ.

ನಗರದ ಚಪ್ಪರಬಂದ್ ಕಾಲೋನಿಯ ನಿವಾಸಿ ನಬೀರ್ ರಸೂಲ್ ನರಸಂಗಿ (28) ಶವವಾಗಿ ಪತ್ತೆಯಾದ ವ್ಯಕ್ತಿಯಾಗಿದ್ದಾನೆ. ನಗರದ ಅಬಕಾರಿ ಕಚೇರಿ ಸಮೀಪದಲ್ಲಿ ನಬೀರ್ ಶವ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಹಣದ ವಿಚಾರ: ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಕೊನೆ!

ಕುಡಿಯಲು ಹಣ ಕೇಳಿ ಕೊಡದೆ ಇದ್ದಾಗ ನಿನ್ನೆ ಮನೆ ಬಿಟ್ಟು ನಬೀರ್ ತೆರಳಿದ್ದನು. ಈಗ ಶವವಾಗಿ ಪತ್ತೆಯಾಗಿದ್ದಾನೆ. ನಿನ್ನೆ ಗೆಳೆಯರ ಜೊತೆಗೆ ತೆರಳಿದ್ದ ಎನ್ನಲಾಗಿದೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ : ಕುಡಿಯಲು ಹಣ ನೀಡಲಿಲ್ಲ ಎಂದು ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ಅಬಕಾರಿ ಕಚೇರಿ ಬಳಿ ನಡೆದಿದೆ.

ನಗರದ ಚಪ್ಪರಬಂದ್ ಕಾಲೋನಿಯ ನಿವಾಸಿ ನಬೀರ್ ರಸೂಲ್ ನರಸಂಗಿ (28) ಶವವಾಗಿ ಪತ್ತೆಯಾದ ವ್ಯಕ್ತಿಯಾಗಿದ್ದಾನೆ. ನಗರದ ಅಬಕಾರಿ ಕಚೇರಿ ಸಮೀಪದಲ್ಲಿ ನಬೀರ್ ಶವ ಪತ್ತೆಯಾಗಿದೆ. ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಶವ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಹಣದ ವಿಚಾರ: ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಕೊನೆ!

ಕುಡಿಯಲು ಹಣ ಕೇಳಿ ಕೊಡದೆ ಇದ್ದಾಗ ನಿನ್ನೆ ಮನೆ ಬಿಟ್ಟು ನಬೀರ್ ತೆರಳಿದ್ದನು. ಈಗ ಶವವಾಗಿ ಪತ್ತೆಯಾಗಿದ್ದಾನೆ. ನಿನ್ನೆ ಗೆಳೆಯರ ಜೊತೆಗೆ ತೆರಳಿದ್ದ ಎನ್ನಲಾಗಿದೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.