ETV Bharat / state

ಏತ ನೀರಾವರಿ ಕಾಲುವೆ ನಿರ್ಮಾಣಕ್ಕೆ ಭೂಮಿ ನೀಡಿದ್ದ ರೈತರಿಗೆ ಸಂಕಷ್ಟ: ಪರಿಹಾರಕ್ಕಾಗಿ ಪರದಾಟ

author img

By

Published : Jan 7, 2020, 8:29 PM IST

ವಿಜಯಪುರದಲ್ಲಿ ಮುಳುವಾಡ ಏತ ನೀರಾವರಿ ಕಾಲುವೆ ನಿರ್ಮಾಣಕ್ಕಾಗಿ ಸರ್ಕಾರ ರೈತರಿಂದ ಭೂಸ್ವಾಧೀನ ಪಡಿಸಿಕೊಂಡು ಪರಿಹಾರ ಮಾತ್ರ ನೀಡಿಲ್ಲವೆಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.

ಪರಿಹಾರಕ್ಕಾಗಿ ಪರದಾಟ
ಪರಿಹಾರಕ್ಕಾಗಿ ಪರದಾಟ

ವಿಜಯಪುರ: ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಲುವೆ ( ಮೇಲ್ಸೇತುವೆ ಕಿಲಾಲ್) ನಿರ್ಮಾಣಕ್ಕೆ ಭೂಮಿ‌‌ ನೀಡಿದ್ದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ‌ ನಡೆಸಲಾಯಿತು.

ಏತ ನೀರಾವರಿ ಕಾಲುವೆ ನಿರ್ಮಾಣಕ್ಕೆ ಭೂಮಿ ನೀಡಿದ್ದ ರೈತರಿಗಿಲ್ಲ ಪರಿಹಾರ

ಮುಳುವಾಡ ಏತ ನೀರಾವರಿ ಕಾಲುವೆ ನಿರ್ಮಾಣಕ್ಕೆ‌ 2017 ಅಕ್ಟೋಬರ್ 17 ರಂದು ಕನ್ನೂರ ಗ್ರಾಮದ 200 ಕ್ಕೂ ಅಧಿಕ ರೈತರ ಭೂಮಿಯನ್ನು ಸ್ವಾಧೀನ‌ ಮಾಡಿಕೊಳ್ಳಲಾಗಿದೆ. ಕನ್ನೂರ ಗ್ರಾಮದ ರೈತರ ಜಮೀನು, ಮನೆ, ಮರಗಳನ್ನು ಕಾಲುವೆ ನಿರ್ಮಾಣಕ್ಕಾಗಿ ತೆರವುಗೊಳಿಸಲಾಗಿದೆ. ಭೂಮಿ, ಮನೆ‌ ಕಳೆದುಕೊಂಡು ಎರಡು ವರ್ಷ ಕಳೆದರೂ ರೈತರಿಗೆ ಯಾವುದೇ ಪರಿಹಾರ ಹಣ ನೀಡಿಲ್ಲವೆಂದು ಆರೋಪಿಸಿ ರೈತರು ಪ್ರತಿಭಟನೆ‌ ನಡೆಸಿದರು.‌‌

ಕನ್ನೂರ ಗ್ರಾಮಕ್ಕೆ ಅಧಿಕಾರಿಗಳು ಬಂದು ರೈತರ ಸಹಿ ಮಾಡಿಸಿಕೊಂಡು ಹೋಗುತ್ತಾರೆ. ಆದರೆ, ನಿವೇಶನ ಕಳದುಕೊಂಡ‌ ರೈತರಿಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ.‌ ಸರ್ಕಾರ ಪರಿಹಾರ ನೀಡುವ ಕುರಿತು ಯಾವುದೇ ನೊಟೀಸ್​​ ಜಾರಿ ಮಾಡದಿರೋದು ರೈತರ ಕೆಂಗಣ್ಣಿಗೆ ಗುರಿಯಾಗಿದೆ‌.

ಭೂಮಿ ಕಳೆದುಕೊಂಡ ರೈತರಿಗೆ 6.1 ನೋಟಿಸ್ ನೀಡುತ್ತೇವೆ ಎಂದು ಸುಳ್ಳು ಹೇಳಿಕೊಂಡು ಅಧಿಕಾರಿಗಳು‌ ಬರುತ್ತಿದ್ದಾರೆ. ‌ಕಾಲುವೆ ನಿರ್ಮಾಣಕ್ಕೆ ರೈತರ ವಾಣಿಜ್ಯ ಬೆಳೆಗಳು ಹಾಳಾಗಿವೆ. ಕೆಲ ರೈತರಿಗೆ ಪರಿಹಾರ ನೀಡುವುದಾಗಿ ನೋಟಿಸ್ ಬಂದಿವೆ. ಇನ್ನೂ ಕೆಲವರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.

ವಿಜಯಪುರ: ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಲುವೆ ( ಮೇಲ್ಸೇತುವೆ ಕಿಲಾಲ್) ನಿರ್ಮಾಣಕ್ಕೆ ಭೂಮಿ‌‌ ನೀಡಿದ್ದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ‌ ನಡೆಸಲಾಯಿತು.

ಏತ ನೀರಾವರಿ ಕಾಲುವೆ ನಿರ್ಮಾಣಕ್ಕೆ ಭೂಮಿ ನೀಡಿದ್ದ ರೈತರಿಗಿಲ್ಲ ಪರಿಹಾರ

ಮುಳುವಾಡ ಏತ ನೀರಾವರಿ ಕಾಲುವೆ ನಿರ್ಮಾಣಕ್ಕೆ‌ 2017 ಅಕ್ಟೋಬರ್ 17 ರಂದು ಕನ್ನೂರ ಗ್ರಾಮದ 200 ಕ್ಕೂ ಅಧಿಕ ರೈತರ ಭೂಮಿಯನ್ನು ಸ್ವಾಧೀನ‌ ಮಾಡಿಕೊಳ್ಳಲಾಗಿದೆ. ಕನ್ನೂರ ಗ್ರಾಮದ ರೈತರ ಜಮೀನು, ಮನೆ, ಮರಗಳನ್ನು ಕಾಲುವೆ ನಿರ್ಮಾಣಕ್ಕಾಗಿ ತೆರವುಗೊಳಿಸಲಾಗಿದೆ. ಭೂಮಿ, ಮನೆ‌ ಕಳೆದುಕೊಂಡು ಎರಡು ವರ್ಷ ಕಳೆದರೂ ರೈತರಿಗೆ ಯಾವುದೇ ಪರಿಹಾರ ಹಣ ನೀಡಿಲ್ಲವೆಂದು ಆರೋಪಿಸಿ ರೈತರು ಪ್ರತಿಭಟನೆ‌ ನಡೆಸಿದರು.‌‌

ಕನ್ನೂರ ಗ್ರಾಮಕ್ಕೆ ಅಧಿಕಾರಿಗಳು ಬಂದು ರೈತರ ಸಹಿ ಮಾಡಿಸಿಕೊಂಡು ಹೋಗುತ್ತಾರೆ. ಆದರೆ, ನಿವೇಶನ ಕಳದುಕೊಂಡ‌ ರೈತರಿಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ.‌ ಸರ್ಕಾರ ಪರಿಹಾರ ನೀಡುವ ಕುರಿತು ಯಾವುದೇ ನೊಟೀಸ್​​ ಜಾರಿ ಮಾಡದಿರೋದು ರೈತರ ಕೆಂಗಣ್ಣಿಗೆ ಗುರಿಯಾಗಿದೆ‌.

ಭೂಮಿ ಕಳೆದುಕೊಂಡ ರೈತರಿಗೆ 6.1 ನೋಟಿಸ್ ನೀಡುತ್ತೇವೆ ಎಂದು ಸುಳ್ಳು ಹೇಳಿಕೊಂಡು ಅಧಿಕಾರಿಗಳು‌ ಬರುತ್ತಿದ್ದಾರೆ. ‌ಕಾಲುವೆ ನಿರ್ಮಾಣಕ್ಕೆ ರೈತರ ವಾಣಿಜ್ಯ ಬೆಳೆಗಳು ಹಾಳಾಗಿವೆ. ಕೆಲ ರೈತರಿಗೆ ಪರಿಹಾರ ನೀಡುವುದಾಗಿ ನೋಟಿಸ್ ಬಂದಿವೆ. ಇನ್ನೂ ಕೆಲವರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.

Intro:ವಿಜಯಪುರ : ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಲುವೆ ( ಮೇಲ್ಸೇತುವೆ ಕಿಲಾಲ್) ನಿರ್ಮಾಣ ಭೂಮಿ‌‌ ನೀಡಿದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ‌ ನಡೆಸಿದರು.



Body:ವಿಜಯಪುರ ತಾಲೂಕಿನ ಕನ್ನೂರ ಗ್ರಾಮದ 200 ಕ್ಕೂ ಅಧಿಕ ರೈತರ ಮುಳುವಾಡ ಏತ ನೀರಾವರಿ ಕಾಲುವೆ ನಿರ್ಮಾಣಕ್ಕೆ‌ 2017 ಅಕ್ಟೋಬರ್ 17 ರಂದು ಕಾಲುವೆ ನಿರ್ಮಾಣಕ್ಕೆ ಭೂ ಸ್ವಾದಿನ‌ ಮಾಡಿಕೊಳ್ಳಲಾಗಿದೆ. ಕನ್ನೂರ ಗ್ರಾಮದ ರೈತರ ಜಮೀನು, ಮನೆ, ಮರಗಳನ್ನು ಕಾಲುವೆ ನಿರ್ಮಾಣಕ್ಕಾಗಿ ತೆರವುಗೊಳಿಸಲಾಗಿದ್ದು, ಭೂಮಿ, ಮನೆ‌ ಕಳೆದುಕೊಂಡ‌ ಎರಡು ವರ್ಷ ಕಳೆದರು ರೈತರಿಗೆ ಯಾವುದೇ ಪರಿಹಾರ ಹಣ ರೈತರಿಗೆ ನೀಡದ ಕಾರಣ ರೈತರು ಪ್ರತಿಭಟನೆ‌ ನಡೆಸಿದರು.‌‌ಕನ್ನೂರ ಗ್ರಾಮದ‌ 250 ಕ್ಕೂ ಅಧಿಕ ರೈತರು ಭೂಮಿಯನ್ನು‌ ಕಳೆದುಕೊಂಡಿದ್ದಾರೆ. ಕನ್ನೂರ ಗ್ರಾಮಕ್ಕೆ ಅಧಿಕಾರಗಳು ಬಂದು ರೈತರ ಸಹಿ ಮಾಡಿಕೊಂಡು ಹೋಗ್ತಾರೆ ಆದ್ರೆ ನಿವೇಶನ ಕಳದುಕೊಂಡ‌ ರೈತರಿಗೆ ಪರಿಹಾರ ಮಾತ್ರ ಮರಿಚಿಕೆಯಾಗಿದೆ.‌ ಸರ್ಕಾರ ಪರಿಹಾರ ನೀಡುವ ಕುರಿತು ಯಾವುದೆ ನೋಟಿಸ್ ಜಾರಿ ಮಾಡದಿರೋದು ರೈತರ ಕೆಂಗಣ್ಣಿಗೆ ಗುರಿಯಾಗಿದೆ‌.



Conclusion:
ಭೂಮಿ ಕಳೆದುಕೊಂಡ ರೈತರಿಗೆ 6.1 ನೋಟಿಸ್ ನೀಡುತ್ತೆವೆ ಎಂದು ಸುಳ್ಳು ಹೇಳಿಕೊಂಡು ಅಧಿಕಾರಿಗಳು‌ ಬರ್ತಿದ್ದಾರೆ. ‌ಕಾಲುವೆ ನಿರ್ಮಾಣಕ್ಕೆ ರೈತರ ವಾಣಿಜ್ಯ ಬೆಳೆಗಳು ಹಾಳಾಗಿವೆ. ಕನ್ನೂರ ಗ್ರಾಮದ ಕೆಲ ರೈತರಿಗೆ ಪರಿಹಾರ ನೀಡುವುದಾಗಿ ನೋಟಿಸ್ ಬಂದಿವೆ ಇನ್ನೂ ಕೆಲವರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬುದು ರೈತರ ಆರೋಪವಾಗಿದೆ. ಇನ್ನೂ ಕನ್ನೂರ ಗ್ರಾಮದ ಹಾಯ್ದ ಮುಳವಾಡ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿದ್ದು, ಸಿದ್ದಾಪುರ, ಅರಕೇರಿ ಸೇರಿದಂತೆ‌‌ ಹಲವು ಗ್ರಾಮದ ರೈತರು ಭೂಮಿಯನ್ನು ಕಳೆದುಕೊಂಡಿದ್ದಾರೆ ನಿಜವಾದ ಪಲಾನುಭವಿಗಳಿಗೆ ಪರಿಹಾರ ಅಧಿಕಾರಿಗಳು ನೀಡುತ್ತಿಲ್ಲ‌ ಎಂದು ಆರೋಪಿಸುತ್ತಿದ್ದಾರೆ..

ಬೈಟ್01: ಮರುಗೇಪ್ಪ ( ರೈತ)

ಬೈಟ್02: ಸಿದ್ದರಾಮ ( ಭೂಮಿ‌ ಕಳೆದುಕೊಂಡ ರೈತ) ( ಕಪ್ಪು ಕನ್ನಡಕ‌ ಧರಿಸಿದವರು)


ಶಿವಾನಂದ ‌ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.