ETV Bharat / state

ವಿಜಯಪುರದ ಎನ್​ಟಿಪಿಸಿ ಘಟಕದಲ್ಲಿ ಅಗ್ನಿ ಅವಘಡ: ತಪ್ಪಿದ ಭಾರಿ ಅನಾಹುತ

author img

By

Published : Jun 10, 2022, 12:32 PM IST

ಕಲ್ಲಿದ್ದಲು ಸಾಗಣೆ ಯಂತ್ರ ಚಾಲನೆಯಲ್ಲಿರುವಾಗ ಬೇರಿಂಗ್ ತಿರುಗುತ್ತಾ ಶಾಖೋತ್ಪನ್ನ ಗೊಂಡು ರಬ್ಬರ್ ಬೆಲ್ಟ್ ಗೆ ತಾಕಿ ಬೆಂಕಿ ಹೊತ್ತಿಕೊಂಡ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಕೂಡಗಿ ಎನ್‌‌ಟಿಪಿಸಿ ಸ್ಥಾವರದಲ್ಲಿ ನಡೆದಿದೆ.

ಎನ್​ಟಿಪಿಸಿ ಘಟಕದಲ್ಲಿ ಅಗ್ನಿ ಅವಘಡ
ಎನ್​ಟಿಪಿಸಿ ಘಟಕದಲ್ಲಿ ಅಗ್ನಿ ಅವಘಡ

ವಿಜಯಪುರ: ಇಂದು ಬೆಳಗ್ಗೆ ಜಿಲ್ಲೆಯ ನಿಡಗುಂದಿ ಪಟ್ಟಣದ ಕೂಡಗಿ ವಿದ್ಯುತ್ (ಎನ್‌‌ಟಿಪಿಸಿ) ಉಷ್ಣ ವಿದ್ಯುತ್ ಸ್ಥಾವರದ ಟಿಪಿ-2 ಕಲ್ಲಿದ್ದಲು ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕಲ್ಲಿದ್ದಲು ಸಾಗಾಣಿಕೆ ಯಂತ್ರ ಚಾಲನೆಯಲ್ಲಿರುವಾಗ ಬೇರಿಂಗ್ ತಿರುಗುತ್ತಾ ಶಾಖೋತ್ಪನ್ನಗೊಂಡು ರಬ್ಬರ್ ಬೆಲ್ಟ್​ಗೆ ತಾಕಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಎನ್​ಟಿಪಿಸಿ ಮೂಲಗಳು ತಿಳಿಸಿವೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಕೂಡಗಿ ಎನ್‌ಟಿಪಿಸಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯಪುರ: ಇಂದು ಬೆಳಗ್ಗೆ ಜಿಲ್ಲೆಯ ನಿಡಗುಂದಿ ಪಟ್ಟಣದ ಕೂಡಗಿ ವಿದ್ಯುತ್ (ಎನ್‌‌ಟಿಪಿಸಿ) ಉಷ್ಣ ವಿದ್ಯುತ್ ಸ್ಥಾವರದ ಟಿಪಿ-2 ಕಲ್ಲಿದ್ದಲು ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕಲ್ಲಿದ್ದಲು ಸಾಗಾಣಿಕೆ ಯಂತ್ರ ಚಾಲನೆಯಲ್ಲಿರುವಾಗ ಬೇರಿಂಗ್ ತಿರುಗುತ್ತಾ ಶಾಖೋತ್ಪನ್ನಗೊಂಡು ರಬ್ಬರ್ ಬೆಲ್ಟ್​ಗೆ ತಾಕಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಎನ್​ಟಿಪಿಸಿ ಮೂಲಗಳು ತಿಳಿಸಿವೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಕೂಡಗಿ ಎನ್‌ಟಿಪಿಸಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಎನ್​ಟಿಪಿಸಿ ಘಟಕದಲ್ಲಿ ಅಗ್ನಿ ಅವಘಡ

ಇದನ್ನೂ ಓದಿ: 51 ಟ್ರ್ಯಾಕ್ಟರ್​ಗಳಲ್ಲಿ ಅತ್ತೆ ಮನೆಗೆ ದಿಬ್ಬಣ ಬಂದ ರೈತನ ಮಗ... ಅಳಿಯ ಬಂದ ದಾರಿ ಬಿಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.