ETV Bharat / state

ರಾಮನಗರದಲ್ಲಿ ಬಾಂಬ್ ಪತ್ತೆ ಪ್ರಕರಣ: ಎನ್ಐಎ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲವೆಂದ್ರು ಎಂ. ಬಿ. ಪಾಟೀಲ್​​

author img

By

Published : Jun 27, 2019, 2:41 PM IST

ರಾಮನಗರದಲ್ಲಿ ಬಾಂಬ್ ಪತ್ತೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಎಂ.ಬಿ. ಪಾಟೀಲ್​​ ಅವರು ಎನ್ಐಎ ತನಿಖೆ ವ್ಯಾಪ್ತಿಗೆ ಬರುವ ಕಾರಣ ನಮ್ಮ ಪೊಲೀಸ್ ಇಲಾಖೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಎ‌ನ್ಐಎ ಅಧಿಕಾರಿಗಳು ಕೇಳಿದ ಸಹಕಾರ ನೀಡೋದು ಮಾತ್ರ ನಮ್ಮ ಕೆಲಸ ಎಂದು ಸ್ಪಷ್ಟಪಡಿಸಿದ್ದಾರೆ.

ಎಂ. ಬಿ. ಪಾಟೀಲ್​​

ವಿಜಯಪುರ: ರಾಮನಗರದಲ್ಲಿ ಬಾಂಬ್​ ಪತ್ತೆಯಾಗಿರುವ ​ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆ ನಡೆಸುತ್ತಿದೆ. ಇದರಲ್ಲಿ ನಮ್ಮ ಪೊಲೀಸ್ ಇಲಾಖೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲವೆಂದು ಗೃಹ ಸಚಿವ ಎಂ.ಬಿ. ಪಾಟೀಲ್​​ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ‌ನ್ಐಎ ಅಧಿಕಾರಿಗಳು ಕೇಳಿದ ಸಹಕಾರ ನೀಡೋದು ಮಾತ್ರ ನಮ್ಮ ಕೆಲಸ. ಎನ್ಐಎ ಅವರು ಕೇಳಿದಂತೆ ಅವರಿಗೆ ಕಚೇರಿ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನ ವಿಚಾರವಾಗಿ, ನಿನ್ನೆ ಸಿಐಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಮಾಡಲಾಗಿದೆ ಎಂದರು.

ಜಿಂದಾಲ್​​​ಗೆ ಭೂಮಿ ಹಂಚಿಕೆ:

ಇನ್ನು ಜಿಂದಾಲ್​ಗೆ ಭೂಮಿ ಪರಭಾರೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ಅದಕ್ಕೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರಿಗೆ ಮರಳಿದ ಮೇಲೆ ಮೊದಲ ಸಭೆ ನಡೆಸುತ್ತೇನೆ. ಸಚಿವ ಸಂಪುಟ ಉಪಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಇನ್ನು ನಿನ್ನೆಯ ಸಿಎಂ‌ ಗ್ರಾಮವಾಸ್ತವ್ಯ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ. ಬಿಜೆಪಿ ಶಾಸಕ ಶಿವನಗೌಡ ನಾಯಕ ಮತ್ತು ಬಿಜೆಪಿಯವರಿಗೆ ಈ ಗ್ರಾಮ ವಾಸ್ತವ್ಯದ ಬಗ್ಗೆ ಅಸೂಯೆ ಇದೆ. ಹಾಗಾಗಿ ಅವರ ಕುಮ್ಮಕ್ಕಿನಿಂದ ಈ ರೀತಿ ನಡೆದಿದೆ ಎಂದು ಸಚಿವ ಎಂ ಬಿ ಪಾಟೀಲ್​ ಆರೋಪಿಸಿದ್ರು.

ಔರಾದ್ಕರ್​ ವರದಿ ಜಾರಿ:

ಶೀಘ್ರದಲ್ಲೇ ಪೊಲೀಸರಿಗೆ ಸಿಹಿ ಸುದ್ದಿ ನೀಡ್ತೇವಿ ಎಂದ ಸಚಿವ ಪಾಟೀಲ್​​ ಅವರು, ಔರಾದ್ಕರ್​ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಕೆಲವೇ ದಿನಗಳಲ್ಲಿ ಔರಾದ್ಕರ್​ ವರದಿ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದ್ರು.

ವಿಜಯಪುರ: ರಾಮನಗರದಲ್ಲಿ ಬಾಂಬ್​ ಪತ್ತೆಯಾಗಿರುವ ​ಪ್ರಕರಣದ ತನಿಖೆಯನ್ನು ಎನ್ಐಎ ತನಿಖೆ ನಡೆಸುತ್ತಿದೆ. ಇದರಲ್ಲಿ ನಮ್ಮ ಪೊಲೀಸ್ ಇಲಾಖೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲವೆಂದು ಗೃಹ ಸಚಿವ ಎಂ.ಬಿ. ಪಾಟೀಲ್​​ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ‌ನ್ಐಎ ಅಧಿಕಾರಿಗಳು ಕೇಳಿದ ಸಹಕಾರ ನೀಡೋದು ಮಾತ್ರ ನಮ್ಮ ಕೆಲಸ. ಎನ್ಐಎ ಅವರು ಕೇಳಿದಂತೆ ಅವರಿಗೆ ಕಚೇರಿ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನ ವಿಚಾರವಾಗಿ, ನಿನ್ನೆ ಸಿಐಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಮಾಡಲಾಗಿದೆ ಎಂದರು.

ಜಿಂದಾಲ್​​​ಗೆ ಭೂಮಿ ಹಂಚಿಕೆ:

ಇನ್ನು ಜಿಂದಾಲ್​ಗೆ ಭೂಮಿ ಪರಭಾರೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ಅದಕ್ಕೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರಿಗೆ ಮರಳಿದ ಮೇಲೆ ಮೊದಲ ಸಭೆ ನಡೆಸುತ್ತೇನೆ. ಸಚಿವ ಸಂಪುಟ ಉಪಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಇನ್ನು ನಿನ್ನೆಯ ಸಿಎಂ‌ ಗ್ರಾಮವಾಸ್ತವ್ಯ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ. ಬಿಜೆಪಿ ಶಾಸಕ ಶಿವನಗೌಡ ನಾಯಕ ಮತ್ತು ಬಿಜೆಪಿಯವರಿಗೆ ಈ ಗ್ರಾಮ ವಾಸ್ತವ್ಯದ ಬಗ್ಗೆ ಅಸೂಯೆ ಇದೆ. ಹಾಗಾಗಿ ಅವರ ಕುಮ್ಮಕ್ಕಿನಿಂದ ಈ ರೀತಿ ನಡೆದಿದೆ ಎಂದು ಸಚಿವ ಎಂ ಬಿ ಪಾಟೀಲ್​ ಆರೋಪಿಸಿದ್ರು.

ಔರಾದ್ಕರ್​ ವರದಿ ಜಾರಿ:

ಶೀಘ್ರದಲ್ಲೇ ಪೊಲೀಸರಿಗೆ ಸಿಹಿ ಸುದ್ದಿ ನೀಡ್ತೇವಿ ಎಂದ ಸಚಿವ ಪಾಟೀಲ್​​ ಅವರು, ಔರಾದ್ಕರ್​ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಕೆಲವೇ ದಿನಗಳಲ್ಲಿ ಔರಾದ್ಕರ್​ ವರದಿ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದ್ರು.

Intro:ವಿಜಯಪುರ Body:ವಿಜಯಪುರ:
ರಾಮನಗರದಲ್ಲಿ ಬಾಂಬ್ ಪತ್ತೆ ಪ್ರಕರಣ ಎನ್ ಐ ಎ ತನಿಖೆ ವ್ಯಾಪ್ತಿಗೆ ಬರುವ ಕಾರಣ ನಮ್ಮ ಪೊಲೀಸ್ ಇಲಾಖೆ ಯಾವುದೇ ಹಸ್ತಕ್ಷೇಪ ಮಾಡುವದಿಲ್ಲ ಎಂದು ಗೃಹಸಚಿವ ಎಂ.ಬಿ.ಪಾಟೀಲ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಎ‌ನ್ ಐ ಎ ಅಧಿಕಾರಿ ಕೇಳಿದ ಸಹಕಾರ ನೀಡೋದು ಮಾತ್ರ ನಮ್ಮ ಕೆಲಸ.
ಎನ್ ಐ ಎ ಅವರು ಕೇಳಿದಂತೆ ಅವರಿಗೆ ಕಚೇರಿ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ.
ತನಿಖೆ ವೇಳೆ ಅವರು ಕೇಳಿದ ಸೌಲಭ್ಯ ನೀಡುವುದು ಮಾತ್ರ ನಮ್ಮ ಕೆಲಸ ಎಂದರು.
ರಾಜ್ಯದಲ್ಲಿ ಶಂಕಿತ ಉಗ್ರರ ಬಂಧನ ವಿಚಾರವಾಗಿ,
ನಿನ್ನೆ ಸಿಐಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ.
ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಮಾಡಲಾಗಿದೆ ಎಂದರು.
ಜಿಂದಾಲ್ ಗೆ ಭೂಮಿ ಹಂಚಿಕೆ ಪ್ರಕರಣ:
ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ. ಅದಕ್ಕೆ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಈ ಬಗ್ಗೆ ಬೆಂಗಳೂರಿಗೆ ಮರಳಿದ ಮೇಲೆ ಮೊದಲ ಸಭೆ ನಡೆಸುತ್ತೇನೆ ಎಂದರು.
ಸಚಿವ ಸಂಪುಟ ಉಪಸಮಿತಿ ಸದಸ್ಯರೊಂದಿಗೆ ಚರ್ಚಿಸಿ ತನಿಖೆ, ಮಾಹಿತಿ ಸಂಗ್ರಹದ ಬಗ್ಗೆ ಚರ್ಚಿಸಿ ನಿರ್ಣಯಿಸುತ್ತೇನೆ ಎಂದರು.
ನಿನ್ನೆ ಸಿಎಂ‌ ಕಾರ್ಯಕ್ರಮಕ್ಜೆ ಪ್ರತಿಭಟನೆ ಬಿಸಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ,
ಇದರ ಹಿಂದೆ ರಾಜಕೀಯ ಇದೆ.
ಬಿಜೆಪಿ ಶಾಸಕ ಶಿವನಗೌಡ ನಾಯಕ, ಬಿಜೆಪಿಯಿಂದ ಈ ಗ್ರಾಮ ವಾಸ್ತವ್ಯದ ಬಗ್ಗೆ ಅಸೂಯೆ ಇದೆ. ಅವರ ಕುಮಕ್ಕಿನಿಂದ ಈ ರೀತಿ ನಡೆದಿದೆ ಎಂದರು.
ಸಿಎಂ ಗ್ರಾಮ ವಾಸ್ತವ್ಯದ ವೇಳೆ ಈ ರೀತಿ ಮಾಡೋದು ಸರಿಯಲ್ಲ ಎಂದರು. ಹೈಕೋರ್ಟ್ ಅಸಮಾಧಾನ‌:
ಈ ವಿಷಯ ಗಮನಕ್ಕೆ ಬಂದಿದೆ.
ನ್ಯಾಯಾಲಯದ ಟಿಪ್ಪಣಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಔರಾದ್ಕರ ವರದಿ ಜಾರಿ:
ಶೀಘ್ರದಲ್ಲೇ ಪೊಲೀಸರಿಗೆ ಸಿಹಿ ಸುದ್ದಿ ನೀಡ್ತೇವಿ ಎಂದ ಸಚಿವ ಪಾಟೀಲ,
ಔರಾದ್ಕರ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ.
ಕೆಲವೇ ದಿನಗಳಲ್ಲಿ ಔರಾದ್ಕರ ವರದಿ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.Conclusion:ವಿಜಯಪುರ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.