ETV Bharat / state

ಶಿರಸಿ: ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಸ್ಪೀಕರ್​  ಕಾಗೇರಿ

author img

By

Published : Nov 15, 2022, 7:25 PM IST

ಶಿರಸಿಯಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಕುಳವೆ ಪಂಚಾಯತ್​ನಲ್ಲಿ ಹಮ್ಮಿಕೊಳ್ಳಲಾಗಿದ್ದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.

Various development works are inaugurated
ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಕಾಗೇರಿ

ಶಿರಸಿ(ಉತ್ತರ ಕನ್ನಡ): ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು. ಕಸದ ವಾಹನವನ್ನು ಚಲಾಯಿಸಿದ್ದು, ಅವರ ರಾಜಕೀಯ ಜೀವನದಲ್ಲಿ ವಿಶೇಷ ಎನಿಸಿಕೊಂಡಿತು.

ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಕಾಗೇರಿ

ಬಳಿಕ ಕುಳವೆ ಪಂಚಾಯತ್​ನಲ್ಲಿ ಹಮ್ಮಿಕೊಳ್ಳಲಾಗಿದ್ದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಉಗ್ರೇಮನೆ ದೇವಾಲಯಕ್ಕೆ ಕಾಗೇರಿ ಸ್ವತಃ ಬೈಕ್ ಚಲಾಯಿಸಿಕೊಂಡು ತೆರಳಿ ದೇವರ ಆಶೀರ್ವಾದ ಪಡೆದುಕೊಂಡರು.

ಪಂಚಾಯತ್ ಘನ ತ್ಯಾಜ್ಯ ವಾಹನ ಉದ್ಘಾಟನೆಯ ವೇಳೆ ಕಸದ ವಾಹನವನ್ನು ಸುಮಾರು 100 ಮೀಟರ್ ಚಲಾಯಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಸಭಾಧ್ಯಕ್ಷರಿಗೆ ಸಾಥ್ ನೀಡಿದರು.

ಇದನ್ನೂ ಓದಿ: ರಾಣೆಬೆನ್ನೂರಿನಲ್ಲಿ ಮುಗಿಯದ ಹೆದ್ದಾರಿ ಸೇತುವೆ ಕಾಮಗಾರಿ; ಹೆಚ್ಚಿದ ರಸ್ತೆ ಅಪಘಾತ

ಶಿರಸಿ(ಉತ್ತರ ಕನ್ನಡ): ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು. ಕಸದ ವಾಹನವನ್ನು ಚಲಾಯಿಸಿದ್ದು, ಅವರ ರಾಜಕೀಯ ಜೀವನದಲ್ಲಿ ವಿಶೇಷ ಎನಿಸಿಕೊಂಡಿತು.

ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಕಾಗೇರಿ

ಬಳಿಕ ಕುಳವೆ ಪಂಚಾಯತ್​ನಲ್ಲಿ ಹಮ್ಮಿಕೊಳ್ಳಲಾಗಿದ್ದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಉಗ್ರೇಮನೆ ದೇವಾಲಯಕ್ಕೆ ಕಾಗೇರಿ ಸ್ವತಃ ಬೈಕ್ ಚಲಾಯಿಸಿಕೊಂಡು ತೆರಳಿ ದೇವರ ಆಶೀರ್ವಾದ ಪಡೆದುಕೊಂಡರು.

ಪಂಚಾಯತ್ ಘನ ತ್ಯಾಜ್ಯ ವಾಹನ ಉದ್ಘಾಟನೆಯ ವೇಳೆ ಕಸದ ವಾಹನವನ್ನು ಸುಮಾರು 100 ಮೀಟರ್ ಚಲಾಯಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಸಭಾಧ್ಯಕ್ಷರಿಗೆ ಸಾಥ್ ನೀಡಿದರು.

ಇದನ್ನೂ ಓದಿ: ರಾಣೆಬೆನ್ನೂರಿನಲ್ಲಿ ಮುಗಿಯದ ಹೆದ್ದಾರಿ ಸೇತುವೆ ಕಾಮಗಾರಿ; ಹೆಚ್ಚಿದ ರಸ್ತೆ ಅಪಘಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.