ETV Bharat / state

ಪ್ರತ್ಯೇಕ ವಂಚನೆ ಪ್ರಕರಣ: ದೆಹಲಿ, ಕಾಶ್ಮೀರ ಮೂಲದ ಆರೋಪಿಗಳು ಸೆರೆ

author img

By

Published : Mar 20, 2023, 9:25 AM IST

ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ದೆಹಲಿ ಮೂಲದ ವ್ಯಕ್ತಿ ಮತ್ತು ನಕಲಿ ಆಧಾರ್​ ಕಾರ್ಡ್​ ಬಳಸುತ್ತಿದ್ದ ಕಾಶ್ಮೀರ ಮೂಲದ ವ್ಯಕ್ತಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.

two-arrested-in-separate-fraud-cases-in-karwar
ಎರಡು ಪ್ರತ್ಯೇಕ ವಂಚನೆ ಪ್ರಕರಣ: ದೆಹಲಿ, ಕಾಶ್ಮೀರ ಮೂಲದ ವ್ಯಕ್ತಿಗಳ ಬಂಧನ

ಕಾರವಾರ (ಉತ್ತರ ಕನ್ನಡ) : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರನ್ನು ವಂಚಿಸಿ ಅವರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ದೆಹಲಿ ಮೂಲದ ವ್ಯಕ್ತಿಯೋರ್ವನನ್ನು ಕಾರವಾರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸೈಯದ್​ ಜುನೈದ್ ಎಂದು ಗುರುತಿಸಲಾಗಿದೆ.

ಕಾರವಾರ ತಾಲೂಕಿನ ಹಳಗಾ, ಬೊಳಕಿದ್ದಾ ನಿವಾಸಿ ಕರುಣಾಕರ ತಳೇಕರ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಬಂದ Disney Cruise Line ಎಂಬ ಹೆಸರಿನ ಶಿಪ್‌ನಲ್ಲಿ ಉದ್ಯೋಗ ಇರುವ ಬಗೆಗಿನ ಜಾಹೀರಾತು ನೋಡಿ ಅದರಲ್ಲಿದ್ದ ಮೊಬೈಲ್ ನಂಬರಿಗೆ ಸಂಪರ್ಕಿಸಿದ್ದಾರೆ. ಆಗ ಸೈಯದ್​ ಆನ್​ಲೈನ್ ಮೂಲಕ ಸಂದರ್ಶನ ಮಾಡಿದ್ದಾನೆ. ಬಳಿಕ ಕರುಣಾಕರ್​ ಅವರನ್ನು ಶಿಪ್‌ನ ಸೀ-ಮೆನ್ ಹುದ್ದೆಗೆ ಆಯ್ಕೆ ಮಾಡಿ, ನಂತರದಲ್ಲಿ ಶಿಪ್‌ನಲ್ಲಿ ಉನ್ನತ ಹುದ್ದೆಯಾದ ಟಿಪ್ ಆಫೀಸರ್​​ ಹುದ್ದೆಗೆ ಮುಂಬಡ್ತಿ ನೀಡುವುದಾಗಿ ನಂಬಿಸಿ ಆಮಿಷವೊಡ್ಡಿದ್ದಾನೆ. ಅಷ್ಟೇ ಅಲ್ಲದೇ ಅದಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ಆನ್​ಲೈನ್ ಮೂಲಕ ನಡೆಸಿ ಇದಕ್ಕಾಗಿ ತಗುಲುವ ವೆಚ್ಚವನ್ನು ಹಂತ ಹಂತವಾಗಿ 75,19,138 ಜಮಾ ಮಾಡಿಸಿಕೊಂಡಿದ್ದಾನೆ. ನೌಕರಿ ನೀಡದೇ ಮೋಸ ಮಾಡಿದ ಬಗ್ಗೆ ಕರುಣಾಕರ ಸಿ.ಇ.ಎನ್ ಅಪರಾಧಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗಾಗಿ ಕಾರವಾರ ಜಿಲ್ಲಾ ಪೊಲೀಸ್​​ ಅಧೀಕ್ಷಕ ವಿಷ್ಣುವರ್ಧನ ಎನ್ ಹಾಗೂ ಹೆಚ್ಚುವರಿ ಪೊಲೀಸ್​​ ಅಧೀಕ್ಷಕ ಸಿ.ಟಿ.ಜಯಕುಮಾರ್​​ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್​​ ನಿರೀಕ್ಷಕ ಕೆ.ಎಂ.ಷರೀಫ್​​ ಇವರ ನೇತೃತ್ವದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್​​ ಠಾಣೆಯ ಅಧಿಕಾರಿ, ಸಿಬ್ಬಂದಿ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ: ಇಂತಹ ಯಾವುದೇ ಅಪರಿಚಿತ ಇಮೇಲ್, ಮೊಬೈಲ್ ಕರೆಗಳು, ವಾಟ್ಸಾಪ್ ಸಂದೇಶ, ಉದ್ಯೋಗದ ಫೇಸಬುಕ್ ಜಾಹೀರಾತು, ಬಹುಮಾನ ಬಂದಿದೆ ಎಂಬ ಸಂದೇಶ, ಲಕ್ಕಿ ಡ್ರಾನಲ್ಲಿ ವಿಜೇತರಾಗಿದ್ದಾರೆಂದು ಎಂಬೆಲ್ಲ ಸಂಗತಿಗಳನ್ನು ನಂಬಲು ಹೋಗಬೇಡಿ. ಕೆಲವರು ಇಂತಹ ಆಮಿಷಗಳ ಮೂಲಕ ಮೋಸ ಮಾಡುವುದರಿಂದ ಸಾರ್ವಜನಿಕರು ಎಚ್ಚರವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕಾಶ್ಮೀರಿ ಯುವಕ ಸೆರೆ: ಬೇರೊಬ್ಬರ ಆಧಾರ್ ಕಾಡ್‌ರ್ಗೆ ತನ್ನ ಭಾವಚಿತ್ರ ಅಂಟಿಸಿಕೊಂಡು ಇದರ ಆಧಾರದಲ್ಲಿ ಮೊಬೈಲ್ ಸಿಮ್ ಖರೀದಿಸುತ್ತಿದ್ದ ಜಮ್ಮು ಕಾಶ್ಮೀರದ ಯುವಕನನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಮ್ಮು ಕಾಶ್ಮೀರ ರಾಜ್ಯದ ಶ್ರೀನಗರದ ಲಾಲ್ ಬಜಾರಿನ ಮುಬಾಶೀ‌ ಯೂಸುಫ್ ಕೊಜ್ವಾಲ್‌ (38) ಬಂಧಿತ. ಈತನಿಂದ ನಕಲಿ ಆಧಾ‌ರ್​​ ಕಾರ್ಡ್, ಮೊಬೈಲ್ ಸಿಮ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಬೇರೆಯವರ ಆಧಾ‌ರ್​ ಕಾರ್ಡ್​ಗೆ ತನ್ನ ಚಿತ್ರ ಅಂಟಿಸಿಕೊಂಡು ಇದನ್ನೇ ಗುರುತಿನ ಚೀಟಿಯಾಗಿ ಬಳಸುತ್ತಿದ್ದ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತ ತನ್ನ ಮೊಬೈಲ್ ಕಾಣೆಯಾದ ಬಗ್ಗೆ ಶಿರವಾಡದ ರೈಲ್ವೆ ಪೊಲೀಸರಿಗೆ ದೂರು ಸಲ್ಲಿಸಿದಾಗ ಈತ ನಕಲಿ ದಾಖಲೆ ನೀಡಿ ಸಿಮ್ ಖರೀದಿಸುತ್ತಿರುವುದು ಗಮನಕ್ಕೆ ಬಂದಿತ್ತು ಎಂದು ಸಿಪಿಐ ಕುಸುಮಾಧರ್​ ತಿಳಿಸಿದ್ದಾರೆ.

ಕಾರವಾರದ ವ್ಯಕ್ತಿ ಅಮೆರಿಕದಲ್ಲಿ ಸಾವು: ಕಾರವಾರ ಮೂಲದ ವ್ಯಕ್ತಿಯೋರ್ವರು ಅಮೆರಿಕದಲ್ಲಿ ಮೃತಪಟ್ಟಿದ್ದು, ವ್ಯಕ್ತಿಯ ಮೃತದೇಹವನ್ನು ತರಲು ಕುಟುಂಬದ ಸದಸ್ಯರು ಕೇಂದ್ರ ಸಚಿವರ ಮೊರೆ ಹೋಗಿದ್ದಾರೆ. ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದ ಕಾರವಾರ ಸದಾಶಿವಗಡದ ಫರ್ನಾಂಡಿಸ್ ಜೋಸೆಫ್ ಮೇಟ್ಸ್ (46) ಮಾ.14ರಂದು ಮೃತಪಟ್ಟಿದ್ದರು.

ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ಪರ್ಶೋತ್ತಮ್​​ ರುಪಾಲಾ ಅವರು ಬೆಳಂಬಾರದ ಬಂದರು ಸ್ಥಳ ವೀಕ್ಷಣೆಗೆಂದು ಆಗಮಿಸಿದ್ದ ವೇಳೆ ಭೇಟಿಯಾದ ಮೃತರ ಪತ್ನಿ ಹಾಗೂ ಆಕೆಯ ಸಹೋದರಿ ರೆನಿಟಾ ಡಿಸಿಲ್ವಾ, ಮೃತರ ಶವವನ್ನು ಭಾರತಕ್ಕೆ ತರಲು ಸಹಾಯ ಕೋರಿದ್ದರು. ಕೇಂದ್ರ ವಿದೇಶಾಂಗ ಸಚಿವರಿಗೂ ಪತ್ರ ಬರೆದಿದ್ದು, ಮೀನುಗಾರಿಕೆಯ ಸಚಿವರು ಮುತುವರ್ಜಿ ವಹಿಸಿ ಸಹಾಯ ಮಾಡಬೇಕಾಗಿ ವಿನಂತಿಸಿದರು. ಮನವಿ ಸ್ವೀಕರಿಸಿದ ಸಚಿವರು, ಅಗತ್ಯ ನೆರವು ನೀಡುವುದಾಗಿ ಭರವಸೆಯಿತ್ತರು ಹಾಗೂ ತಕ್ಷಣ ಕೇಂದ್ರ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ನಿಷೇಧಿತ ಪಿಎಫ್ಐ ಮುಖಂಡರ‌ ಬಂಧನ ಪ್ರಕರಣ: 10,196 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಕಾರವಾರ (ಉತ್ತರ ಕನ್ನಡ) : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರನ್ನು ವಂಚಿಸಿ ಅವರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ದೆಹಲಿ ಮೂಲದ ವ್ಯಕ್ತಿಯೋರ್ವನನ್ನು ಕಾರವಾರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸೈಯದ್​ ಜುನೈದ್ ಎಂದು ಗುರುತಿಸಲಾಗಿದೆ.

ಕಾರವಾರ ತಾಲೂಕಿನ ಹಳಗಾ, ಬೊಳಕಿದ್ದಾ ನಿವಾಸಿ ಕರುಣಾಕರ ತಳೇಕರ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಬಂದ Disney Cruise Line ಎಂಬ ಹೆಸರಿನ ಶಿಪ್‌ನಲ್ಲಿ ಉದ್ಯೋಗ ಇರುವ ಬಗೆಗಿನ ಜಾಹೀರಾತು ನೋಡಿ ಅದರಲ್ಲಿದ್ದ ಮೊಬೈಲ್ ನಂಬರಿಗೆ ಸಂಪರ್ಕಿಸಿದ್ದಾರೆ. ಆಗ ಸೈಯದ್​ ಆನ್​ಲೈನ್ ಮೂಲಕ ಸಂದರ್ಶನ ಮಾಡಿದ್ದಾನೆ. ಬಳಿಕ ಕರುಣಾಕರ್​ ಅವರನ್ನು ಶಿಪ್‌ನ ಸೀ-ಮೆನ್ ಹುದ್ದೆಗೆ ಆಯ್ಕೆ ಮಾಡಿ, ನಂತರದಲ್ಲಿ ಶಿಪ್‌ನಲ್ಲಿ ಉನ್ನತ ಹುದ್ದೆಯಾದ ಟಿಪ್ ಆಫೀಸರ್​​ ಹುದ್ದೆಗೆ ಮುಂಬಡ್ತಿ ನೀಡುವುದಾಗಿ ನಂಬಿಸಿ ಆಮಿಷವೊಡ್ಡಿದ್ದಾನೆ. ಅಷ್ಟೇ ಅಲ್ಲದೇ ಅದಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ಆನ್​ಲೈನ್ ಮೂಲಕ ನಡೆಸಿ ಇದಕ್ಕಾಗಿ ತಗುಲುವ ವೆಚ್ಚವನ್ನು ಹಂತ ಹಂತವಾಗಿ 75,19,138 ಜಮಾ ಮಾಡಿಸಿಕೊಂಡಿದ್ದಾನೆ. ನೌಕರಿ ನೀಡದೇ ಮೋಸ ಮಾಡಿದ ಬಗ್ಗೆ ಕರುಣಾಕರ ಸಿ.ಇ.ಎನ್ ಅಪರಾಧಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗಾಗಿ ಕಾರವಾರ ಜಿಲ್ಲಾ ಪೊಲೀಸ್​​ ಅಧೀಕ್ಷಕ ವಿಷ್ಣುವರ್ಧನ ಎನ್ ಹಾಗೂ ಹೆಚ್ಚುವರಿ ಪೊಲೀಸ್​​ ಅಧೀಕ್ಷಕ ಸಿ.ಟಿ.ಜಯಕುಮಾರ್​​ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್​​ ನಿರೀಕ್ಷಕ ಕೆ.ಎಂ.ಷರೀಫ್​​ ಇವರ ನೇತೃತ್ವದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್​​ ಠಾಣೆಯ ಅಧಿಕಾರಿ, ಸಿಬ್ಬಂದಿ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸಾರ್ವಜನಿಕರಿಗೆ ಎಚ್ಚರಿಕೆ: ಇಂತಹ ಯಾವುದೇ ಅಪರಿಚಿತ ಇಮೇಲ್, ಮೊಬೈಲ್ ಕರೆಗಳು, ವಾಟ್ಸಾಪ್ ಸಂದೇಶ, ಉದ್ಯೋಗದ ಫೇಸಬುಕ್ ಜಾಹೀರಾತು, ಬಹುಮಾನ ಬಂದಿದೆ ಎಂಬ ಸಂದೇಶ, ಲಕ್ಕಿ ಡ್ರಾನಲ್ಲಿ ವಿಜೇತರಾಗಿದ್ದಾರೆಂದು ಎಂಬೆಲ್ಲ ಸಂಗತಿಗಳನ್ನು ನಂಬಲು ಹೋಗಬೇಡಿ. ಕೆಲವರು ಇಂತಹ ಆಮಿಷಗಳ ಮೂಲಕ ಮೋಸ ಮಾಡುವುದರಿಂದ ಸಾರ್ವಜನಿಕರು ಎಚ್ಚರವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಕಾಶ್ಮೀರಿ ಯುವಕ ಸೆರೆ: ಬೇರೊಬ್ಬರ ಆಧಾರ್ ಕಾಡ್‌ರ್ಗೆ ತನ್ನ ಭಾವಚಿತ್ರ ಅಂಟಿಸಿಕೊಂಡು ಇದರ ಆಧಾರದಲ್ಲಿ ಮೊಬೈಲ್ ಸಿಮ್ ಖರೀದಿಸುತ್ತಿದ್ದ ಜಮ್ಮು ಕಾಶ್ಮೀರದ ಯುವಕನನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಮ್ಮು ಕಾಶ್ಮೀರ ರಾಜ್ಯದ ಶ್ರೀನಗರದ ಲಾಲ್ ಬಜಾರಿನ ಮುಬಾಶೀ‌ ಯೂಸುಫ್ ಕೊಜ್ವಾಲ್‌ (38) ಬಂಧಿತ. ಈತನಿಂದ ನಕಲಿ ಆಧಾ‌ರ್​​ ಕಾರ್ಡ್, ಮೊಬೈಲ್ ಸಿಮ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಬೇರೆಯವರ ಆಧಾ‌ರ್​ ಕಾರ್ಡ್​ಗೆ ತನ್ನ ಚಿತ್ರ ಅಂಟಿಸಿಕೊಂಡು ಇದನ್ನೇ ಗುರುತಿನ ಚೀಟಿಯಾಗಿ ಬಳಸುತ್ತಿದ್ದ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತ ತನ್ನ ಮೊಬೈಲ್ ಕಾಣೆಯಾದ ಬಗ್ಗೆ ಶಿರವಾಡದ ರೈಲ್ವೆ ಪೊಲೀಸರಿಗೆ ದೂರು ಸಲ್ಲಿಸಿದಾಗ ಈತ ನಕಲಿ ದಾಖಲೆ ನೀಡಿ ಸಿಮ್ ಖರೀದಿಸುತ್ತಿರುವುದು ಗಮನಕ್ಕೆ ಬಂದಿತ್ತು ಎಂದು ಸಿಪಿಐ ಕುಸುಮಾಧರ್​ ತಿಳಿಸಿದ್ದಾರೆ.

ಕಾರವಾರದ ವ್ಯಕ್ತಿ ಅಮೆರಿಕದಲ್ಲಿ ಸಾವು: ಕಾರವಾರ ಮೂಲದ ವ್ಯಕ್ತಿಯೋರ್ವರು ಅಮೆರಿಕದಲ್ಲಿ ಮೃತಪಟ್ಟಿದ್ದು, ವ್ಯಕ್ತಿಯ ಮೃತದೇಹವನ್ನು ತರಲು ಕುಟುಂಬದ ಸದಸ್ಯರು ಕೇಂದ್ರ ಸಚಿವರ ಮೊರೆ ಹೋಗಿದ್ದಾರೆ. ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದ ಕಾರವಾರ ಸದಾಶಿವಗಡದ ಫರ್ನಾಂಡಿಸ್ ಜೋಸೆಫ್ ಮೇಟ್ಸ್ (46) ಮಾ.14ರಂದು ಮೃತಪಟ್ಟಿದ್ದರು.

ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ಪರ್ಶೋತ್ತಮ್​​ ರುಪಾಲಾ ಅವರು ಬೆಳಂಬಾರದ ಬಂದರು ಸ್ಥಳ ವೀಕ್ಷಣೆಗೆಂದು ಆಗಮಿಸಿದ್ದ ವೇಳೆ ಭೇಟಿಯಾದ ಮೃತರ ಪತ್ನಿ ಹಾಗೂ ಆಕೆಯ ಸಹೋದರಿ ರೆನಿಟಾ ಡಿಸಿಲ್ವಾ, ಮೃತರ ಶವವನ್ನು ಭಾರತಕ್ಕೆ ತರಲು ಸಹಾಯ ಕೋರಿದ್ದರು. ಕೇಂದ್ರ ವಿದೇಶಾಂಗ ಸಚಿವರಿಗೂ ಪತ್ರ ಬರೆದಿದ್ದು, ಮೀನುಗಾರಿಕೆಯ ಸಚಿವರು ಮುತುವರ್ಜಿ ವಹಿಸಿ ಸಹಾಯ ಮಾಡಬೇಕಾಗಿ ವಿನಂತಿಸಿದರು. ಮನವಿ ಸ್ವೀಕರಿಸಿದ ಸಚಿವರು, ಅಗತ್ಯ ನೆರವು ನೀಡುವುದಾಗಿ ಭರವಸೆಯಿತ್ತರು ಹಾಗೂ ತಕ್ಷಣ ಕೇಂದ್ರ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ನಿಷೇಧಿತ ಪಿಎಫ್ಐ ಮುಖಂಡರ‌ ಬಂಧನ ಪ್ರಕರಣ: 10,196 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.