ETV Bharat / state

ಕಾರವಾರದಲ್ಲಿ ಬಾಣಂತಿ ಸಾವು; ವೈದ್ಯರ ವಿರುದ್ಧ ಪ್ರತಿಭಟನೆ

author img

By

Published : Sep 5, 2020, 11:00 PM IST

ವೈದ್ಯರ ನಿರ್ಲಕ್ಷ್ಯದಿಂದಾಗಿ ಆರೋಗ್ಯವಾಗಿದ್ದ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಕಾರವಾರದಲ್ಲಿಂದು ಮೀನುಗಾರ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು.

Protest
ಪ್ರತಿಭಟನೆ

ಕಾರವಾರ: ಸಂತಾನಹರಣ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಬಾಣಂತಿ ಸಾವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಆರೋಗ್ಯವಾಗಿದ್ದ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಕಾರವಾರದಲ್ಲಿಂದು ಮೀನುಗಾರ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು. ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತ್ತುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 1ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸರ್ವೋದಯ ನಗರದ ನಿವಾಸಿ ಗೀತಾ ಬಾನಾವಳಿಕರ್ ಮೂರು ದಿನಗಳ ಬಳಿಕ ಸಂತಾನಹರಣ ಚಿಕಿತ್ಸೆಗೆ ದಾಖಲಾಗಿದ್ದಳು.‌ ಆದರೆ ಶಸ್ತ್ರ ಚಿಕಿತ್ಸೆ ವೇಳೆ ಗಂಭೀರಗೊಂಡಿದ್ದ ಬಾಣಂತಿ ಬಳಿಕ ಸಾವನ್ನಪ್ಪಿದ್ದಳು.

ವೈದ್ಯರ ವಿರುದ್ಧ ಪ್ರತಿಭಟನೆ

ಬಾಣಂತಿ ಸಾವಿನಿಂದ ಆಕ್ರೋಶಗೊಂಡ ಸ್ಥಳೀಯರು ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಗೀತಾಳ ಸಾವಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ಶಿವಾನಂದ ಕುಡ್ತಲ್ಕರ್ ಅವರ ನಿರ್ಲಕ್ಷ್ಯವೇ ಕಾರಣ. ಶಸ್ತ್ರ ಚಿಕಿತ್ಸೆ ವೇಳೆ ಅನಸ್ತೇಶಿಯಾ ಓವರ್ ಡೋಸ್ ಆಗಿದೆ. ಅರವಳಿಕೆ ತಜ್ಞರು ನೀಡಬೇಕಿದ್ದ ಚುಚ್ಚು ಮದ್ದನ್ನು ಇವರೇ ನೀಡಿದ್ದು, ಇದರಿಂದಲೇ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.

ಹೆರಿಗೆ ತಜ್ಞ ಹಾಗೂ ಕ್ರೀಮ್ಸ್ ವೈದ್ಯಕೀಯ ಆಧೀಕ್ಷಕರಾಗಿರುವ ಡಾ.ಶಿವಾನಂದ ಕುಡ್ತರಕರ್ ಹಿಂದಿನಿಂದಲೂ ಹೆರಿಗೆಗೆ ಬರುವ ಬಡ ಮಹಿಳೆಯರಿಗೆ ಕಾಡುತ್ತಿದ್ದು, ಬಡ ಮಹಿಳೆಯರಿಂದ ಹಣ ಸುಲಿಯುತ್ತಾರೆ. ಆದರೆ ಯಾರೊಬ್ಬರು ದೂರು ದಾಖಲಿಸಿದ ಕಾರಣ ಅವರ ಅನಾಚಾರ ಬೆಳಕಿಗೆ ಬರುತ್ತಿಲ್ಲ. ಕೂಡಲೇ ಜನರಿಗೆ ಕಂಟಕರಾಗಿರುವ ಇವರನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಎರಡು ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗಿದ್ದು, ಕುಟುಂಬ ಕೂಡ ಬಡತನದಲ್ಲಿದೆ. ಕೂಡಲೇ ಸರ್ಕಾರ ಬಡ ಮಹಿಳೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾರವಾರದ ಕ್ರಿಮ್ಸ್ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಶಿವಾನಂದ ಕುಡ್ತರಕರ್‌ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಇಲ್ಲವೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರಿಗೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾರವಾರ: ಸಂತಾನಹರಣ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಬಾಣಂತಿ ಸಾವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಆರೋಗ್ಯವಾಗಿದ್ದ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಕಾರವಾರದಲ್ಲಿಂದು ಮೀನುಗಾರ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು. ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತ್ತುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 1ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸರ್ವೋದಯ ನಗರದ ನಿವಾಸಿ ಗೀತಾ ಬಾನಾವಳಿಕರ್ ಮೂರು ದಿನಗಳ ಬಳಿಕ ಸಂತಾನಹರಣ ಚಿಕಿತ್ಸೆಗೆ ದಾಖಲಾಗಿದ್ದಳು.‌ ಆದರೆ ಶಸ್ತ್ರ ಚಿಕಿತ್ಸೆ ವೇಳೆ ಗಂಭೀರಗೊಂಡಿದ್ದ ಬಾಣಂತಿ ಬಳಿಕ ಸಾವನ್ನಪ್ಪಿದ್ದಳು.

ವೈದ್ಯರ ವಿರುದ್ಧ ಪ್ರತಿಭಟನೆ

ಬಾಣಂತಿ ಸಾವಿನಿಂದ ಆಕ್ರೋಶಗೊಂಡ ಸ್ಥಳೀಯರು ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಗೀತಾಳ ಸಾವಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ಶಿವಾನಂದ ಕುಡ್ತಲ್ಕರ್ ಅವರ ನಿರ್ಲಕ್ಷ್ಯವೇ ಕಾರಣ. ಶಸ್ತ್ರ ಚಿಕಿತ್ಸೆ ವೇಳೆ ಅನಸ್ತೇಶಿಯಾ ಓವರ್ ಡೋಸ್ ಆಗಿದೆ. ಅರವಳಿಕೆ ತಜ್ಞರು ನೀಡಬೇಕಿದ್ದ ಚುಚ್ಚು ಮದ್ದನ್ನು ಇವರೇ ನೀಡಿದ್ದು, ಇದರಿಂದಲೇ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ.

ಹೆರಿಗೆ ತಜ್ಞ ಹಾಗೂ ಕ್ರೀಮ್ಸ್ ವೈದ್ಯಕೀಯ ಆಧೀಕ್ಷಕರಾಗಿರುವ ಡಾ.ಶಿವಾನಂದ ಕುಡ್ತರಕರ್ ಹಿಂದಿನಿಂದಲೂ ಹೆರಿಗೆಗೆ ಬರುವ ಬಡ ಮಹಿಳೆಯರಿಗೆ ಕಾಡುತ್ತಿದ್ದು, ಬಡ ಮಹಿಳೆಯರಿಂದ ಹಣ ಸುಲಿಯುತ್ತಾರೆ. ಆದರೆ ಯಾರೊಬ್ಬರು ದೂರು ದಾಖಲಿಸಿದ ಕಾರಣ ಅವರ ಅನಾಚಾರ ಬೆಳಕಿಗೆ ಬರುತ್ತಿಲ್ಲ. ಕೂಡಲೇ ಜನರಿಗೆ ಕಂಟಕರಾಗಿರುವ ಇವರನ್ನು ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಎರಡು ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗಿದ್ದು, ಕುಟುಂಬ ಕೂಡ ಬಡತನದಲ್ಲಿದೆ. ಕೂಡಲೇ ಸರ್ಕಾರ ಬಡ ಮಹಿಳೆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾರವಾರದ ಕ್ರಿಮ್ಸ್ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಶಿವಾನಂದ ಕುಡ್ತರಕರ್‌ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಇಲ್ಲವೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರಿಗೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.