ETV Bharat / state

ಪ್ರಧಾನಮಂತ್ರಿ ಕಾರ್ಯಾಲಯದ ಉಪ ಕಾರ್ಯದರ್ಶಿಯಾಗಿ ಕಾರವಾರದ ಕಾರ್ತಿಕ್ ನೇಮಕ

author img

By

Published : Apr 17, 2021, 9:00 PM IST

ಡಾ. ಕಾರ್ತಿಕ್ ಹೆಗಡೆ ಕಟ್ಟೆ ಅವರ‌ ಬ್ಲಾಕ್ ಚೈನ್ ಟೆಕ್ನಾಲಜಿ ಹಾಗೂ ಕ್ರಿಪ್ಟೊಕರೆನ್ಸಿ ನಿಯಂತ್ರಣದಲ್ಲಿ ಸಾಕಷ್ಟು ಪರಿಣಿತಿ ಪಡೆದಿದ್ದರು. ಅನಧಿಕೃತ ಹಣದ ಚಲಾವಣೆಯಿಂದಾಗಿ ದೇಶದ ಆರ್ಥಿಕತೆ ಮೇಲೆ ನಿರಂತರ ಪರಿಣಾಮ ಬೀರುವುದನ್ನು ಮನಗಂಡ ಅವರು ಇದರ ನಿಯಂತ್ರಣಕ್ಕೆ ನಿರಂತರ ಅಧ್ಯಯನ ನಡೆಸಿದ್ದರು.

karwar-karthik-appointed-deputy-secretary-to-the-prime-ministers-office
ಪ್ರಧಾನಮಂತ್ರಿ ಕಾರ್ಯಾಲಯದ ಉಪ ಕಾರ್ಯದರ್ಶಿಯಾಗಿ ಕಾರವಾರದ ಕಾರ್ತಿಕ್ ನೇಮಕ

ಕಾರವಾರ (ಉತ್ತರ ಕನ್ನಡ): ಬ್ಲಾಕ್ ಚೈನ್ ಟೆಕ್ನಾಲಜಿ ಮತ್ತು ಕ್ರಿಪ್ಟೊ ಕರೆನ್ಸಿ ನಿಯಂತ್ರಣದಲ್ಲಿ ಪರಿಣಿತಿ ಪಡೆದಿರುವ ಕರಾವಳಿ ನಗರಿ ಕಾರವಾರ‌ ಮೂಲದ ಡಾ. ಕಾರ್ತಿಕ್ ಹೆಗಡೆ ಕಟ್ಟೆ ಅತೀ ಕಿರಿಯ ವಯಸ್ಸಿನಲ್ಲಿಯೇ ಪ್ರಧಾನಮಂತ್ರಿ ಕಾರ್ಯಾಲಯದ ಉಪಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದು, ಇದು ಕುಟುಂಬಸ್ಥರ ಹರ್ಷಕ್ಕೆ ಕಾರಣವಾಗಿದೆ.

ಕಾರವಾರ ಜಿಲ್ಲಾಸ್ಪತ್ರೆಯ ಹೃದ್ರೋಗ ತಜ್ಞ ಡಾ. ವಿ.ಪಿ.ಹೆಗಡೆ ಕಟ್ಟೆ ಹಾಗೂ ಸರಸ್ವತಿ ದಂಪತಿ ಪುತ್ರನಾಗಿದ್ದು, ತಮ್ಮ 33ನೇ ವಯಸ್ಸಿನಲ್ಲಿಯೇ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಕಾರವಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದ ಅವರು, ಹುಬ್ಬಳ್ಳಿಯ ಕೆಎಂಸಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಚಿನ್ನದ ಪದಕದೊಂದಿಗೆ ಮುಗಿಸಿದ್ದರು.

ಪ್ರಧಾನಮಂತ್ರಿ ಕಾರ್ಯಾಲಯದ ಉಪ ಕಾರ್ಯದರ್ಶಿಯಾಗಿ ಕಾರವಾರದ ಕಾರ್ತಿಕ್ ನೇಮಕ

ಇನ್ನು ಡಾ. ಕಾರ್ತಿಕ್ ಹೆಗಡೆ ಕಟ್ಟೆ ಅವರ‌ ಬ್ಲಾಕ್ ಚೈನ್ ಟೆಕ್ನಾಲಜಿ ಹಾಗೂ ಕ್ರಿಪ್ಟೊಕರೆನ್ಸಿ ನಿಯಂತ್ರಣದಲ್ಲಿ ಸಾಕಷ್ಟು ಪರಿಣಿತಿ ಪಡೆದಿದ್ದರು. ಅನಧಿಕೃತ ಹಣದ ಚಲಾವಣೆಯಿಂದಾಗಿ ದೇಶದ ಆರ್ಥಿಕತೆ ಮೇಲೆ ನಿರಂತರ ಪರಿಣಾಮ ಬೀರುವುದನ್ನು ಮನಗಂಡ ಅವರು, ಇದರ ನಿಯಂತ್ರಣಕ್ಕೆ ನಿರಂತರ ಅಧ್ಯಯನ ನಡೆಸಿದ್ದರು. ಅದರಂತೆ ಕೆ.ವೈ. ಪ್ರೋಟೊಕಾಲ್ ಹಾಗೂ ಕೆ.ವೈ. ಇಂಡೆಕ್ಸ್ ಎಂಬ ವಿಧಾನಗಳನ್ನು ರೂಪಿಸಿದ್ದರು.

10 ಪುಸ್ತಕ ಪ್ರಕಟಿಸಿದ ಕಾರ್ತಿಕ್

ಇದನ್ನು ಅನುಸರಿಸಿ ಹಲವು ದೇಶಗಳು ಈಗಾಗಲೇ ಅನಧಿಕೃತ ಹಣ ಚಲಾವಣೆ ಮೇಲೆ ನಿಯಂತ್ರಣ ಸಾಧಿಸುತ್ತಿವೆ. ಅಲ್ಲದೇ, ಈ ಕುರಿತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 48 ವೈಜ್ಞಾನಿಕ ಪ್ರಬಂಧಗಳನ್ನು ಸಹ ಡಾ. ಕಾರ್ತಿಕ್ ಪ್ರಕಟಿಸಿದ್ದಾರೆ. ಬ್ಲಾಕ್‌ ಚೈನ್ ಕುರಿತಂತೆ 10 ಪುಸ್ತಕಗಳನ್ನು ಮತ್ತು ಒಂದು ವೈಜ್ಞಾನಿಕ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ಬ್ಲಾಕ್ ಚೈನ್ ಟೆಕ್ನಾಲಜಿ ನಿಯಂತ್ರಣದಲ್ಲಿನ ಪರಿಣತಿಗಾಗಿ ಅವರನ್ನು ವಿಶೇಷವಾಗಿ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಕರೆಸಿಕೊಳ್ಳಲಾಗಿತ್ತು.

ಬಳಿಕ ಅವರ ಶ್ರಮ ಮತ್ತು ಪ್ರತಿಭೆಯ ಆಧಾರದಲ್ಲಿ ಪದೋನ್ನತಿ ಪಡೆದಿದ್ದು, ಪ್ರಸ್ತುತ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಉಪಕಾರ್ಯದರ್ಶಿಯಾಗಿರುವ ಮಗನ ಸಾಧನೆಗೆ ಹೆಮ್ಮೆ ಇದೆ ಎನ್ನುತ್ತಾರೆ ತಂದೆ ವಿ.ಪಿ.ಹೆಗಡೆ ಕಟ್ಟೆ.

ಕಾರವಾರ (ಉತ್ತರ ಕನ್ನಡ): ಬ್ಲಾಕ್ ಚೈನ್ ಟೆಕ್ನಾಲಜಿ ಮತ್ತು ಕ್ರಿಪ್ಟೊ ಕರೆನ್ಸಿ ನಿಯಂತ್ರಣದಲ್ಲಿ ಪರಿಣಿತಿ ಪಡೆದಿರುವ ಕರಾವಳಿ ನಗರಿ ಕಾರವಾರ‌ ಮೂಲದ ಡಾ. ಕಾರ್ತಿಕ್ ಹೆಗಡೆ ಕಟ್ಟೆ ಅತೀ ಕಿರಿಯ ವಯಸ್ಸಿನಲ್ಲಿಯೇ ಪ್ರಧಾನಮಂತ್ರಿ ಕಾರ್ಯಾಲಯದ ಉಪಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದು, ಇದು ಕುಟುಂಬಸ್ಥರ ಹರ್ಷಕ್ಕೆ ಕಾರಣವಾಗಿದೆ.

ಕಾರವಾರ ಜಿಲ್ಲಾಸ್ಪತ್ರೆಯ ಹೃದ್ರೋಗ ತಜ್ಞ ಡಾ. ವಿ.ಪಿ.ಹೆಗಡೆ ಕಟ್ಟೆ ಹಾಗೂ ಸರಸ್ವತಿ ದಂಪತಿ ಪುತ್ರನಾಗಿದ್ದು, ತಮ್ಮ 33ನೇ ವಯಸ್ಸಿನಲ್ಲಿಯೇ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಕಾರವಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದ ಅವರು, ಹುಬ್ಬಳ್ಳಿಯ ಕೆಎಂಸಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಚಿನ್ನದ ಪದಕದೊಂದಿಗೆ ಮುಗಿಸಿದ್ದರು.

ಪ್ರಧಾನಮಂತ್ರಿ ಕಾರ್ಯಾಲಯದ ಉಪ ಕಾರ್ಯದರ್ಶಿಯಾಗಿ ಕಾರವಾರದ ಕಾರ್ತಿಕ್ ನೇಮಕ

ಇನ್ನು ಡಾ. ಕಾರ್ತಿಕ್ ಹೆಗಡೆ ಕಟ್ಟೆ ಅವರ‌ ಬ್ಲಾಕ್ ಚೈನ್ ಟೆಕ್ನಾಲಜಿ ಹಾಗೂ ಕ್ರಿಪ್ಟೊಕರೆನ್ಸಿ ನಿಯಂತ್ರಣದಲ್ಲಿ ಸಾಕಷ್ಟು ಪರಿಣಿತಿ ಪಡೆದಿದ್ದರು. ಅನಧಿಕೃತ ಹಣದ ಚಲಾವಣೆಯಿಂದಾಗಿ ದೇಶದ ಆರ್ಥಿಕತೆ ಮೇಲೆ ನಿರಂತರ ಪರಿಣಾಮ ಬೀರುವುದನ್ನು ಮನಗಂಡ ಅವರು, ಇದರ ನಿಯಂತ್ರಣಕ್ಕೆ ನಿರಂತರ ಅಧ್ಯಯನ ನಡೆಸಿದ್ದರು. ಅದರಂತೆ ಕೆ.ವೈ. ಪ್ರೋಟೊಕಾಲ್ ಹಾಗೂ ಕೆ.ವೈ. ಇಂಡೆಕ್ಸ್ ಎಂಬ ವಿಧಾನಗಳನ್ನು ರೂಪಿಸಿದ್ದರು.

10 ಪುಸ್ತಕ ಪ್ರಕಟಿಸಿದ ಕಾರ್ತಿಕ್

ಇದನ್ನು ಅನುಸರಿಸಿ ಹಲವು ದೇಶಗಳು ಈಗಾಗಲೇ ಅನಧಿಕೃತ ಹಣ ಚಲಾವಣೆ ಮೇಲೆ ನಿಯಂತ್ರಣ ಸಾಧಿಸುತ್ತಿವೆ. ಅಲ್ಲದೇ, ಈ ಕುರಿತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 48 ವೈಜ್ಞಾನಿಕ ಪ್ರಬಂಧಗಳನ್ನು ಸಹ ಡಾ. ಕಾರ್ತಿಕ್ ಪ್ರಕಟಿಸಿದ್ದಾರೆ. ಬ್ಲಾಕ್‌ ಚೈನ್ ಕುರಿತಂತೆ 10 ಪುಸ್ತಕಗಳನ್ನು ಮತ್ತು ಒಂದು ವೈಜ್ಞಾನಿಕ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ಬ್ಲಾಕ್ ಚೈನ್ ಟೆಕ್ನಾಲಜಿ ನಿಯಂತ್ರಣದಲ್ಲಿನ ಪರಿಣತಿಗಾಗಿ ಅವರನ್ನು ವಿಶೇಷವಾಗಿ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಕರೆಸಿಕೊಳ್ಳಲಾಗಿತ್ತು.

ಬಳಿಕ ಅವರ ಶ್ರಮ ಮತ್ತು ಪ್ರತಿಭೆಯ ಆಧಾರದಲ್ಲಿ ಪದೋನ್ನತಿ ಪಡೆದಿದ್ದು, ಪ್ರಸ್ತುತ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಉಪಕಾರ್ಯದರ್ಶಿಯಾಗಿರುವ ಮಗನ ಸಾಧನೆಗೆ ಹೆಮ್ಮೆ ಇದೆ ಎನ್ನುತ್ತಾರೆ ತಂದೆ ವಿ.ಪಿ.ಹೆಗಡೆ ಕಟ್ಟೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.