ETV Bharat / state

ಸಿಸಿಟಿವಿಗೆ ಬಟ್ಟೆ ಕಟ್ಟಿ ಆಭರಣ ಅಂಗಡಿ ದೋಚಿದ ಖದೀಮರು! - ಆಭರಣ ಅಂಗಡಿಯಲ್ಲಿ ಕಳ್ಳತನ

ಕಾರವಾರ ನಗರದ ವೈಷ್ಣವಿ ಸ್ಟೋರ್ಸ್ ರಸ್ತೆಯಲ್ಲಿರುವ ಬಾಲಾಜಿ ಜ್ಯೂವೆಲರಿ ಶಾಪ್​ಗೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

theft
ಕಳ್ಳತನ
author img

By

Published : Dec 23, 2020, 7:32 PM IST

ಕಾರವಾರ: ಚಿನ್ನದ ಅಂಗಡಿ ಬಾಗಿಲು ಮುರಿದು ಲಕ್ಷಾಂತರ ರೂ. ಬೆಳ್ಳಿ ಆಭರಣ ದೋಚಿದ ಘಟನೆ ಕಾರವಾರದಲ್ಲಿ ನಡೆದಿದೆ.

ಜ್ಯೂವೆಲರಿ ಶಾಪ್​ನಲ್ಲಿ ಕಳ್ಳತನ

ನಗರದ ವೈಷ್ಣವಿ ಸ್ಟೋರ್ಸ್ ರಸ್ತೆಯಲ್ಲಿ ಬಾಲಾಜಿ ಜ್ಯೂವೆಲರಿ ಶಾಪ್​ಗೆ ನುಗ್ಗಿದ ಕಳ್ಳರು, ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದಾರೆ. ಕಬ್ಬಿಣದ ಸಲಾಕೆಯಿಂದ ಅಂಗಡಿ ಬಾಗಿಲು ಮುರಿದ ಕಳ್ಳರು, ಅಂಗಡಿಯಲ್ಲಿದ್ದ ಸಿಸಿಟಿವಿಗಳನ್ನು ತಿರುಗಿಸಿ ಅದಕ್ಕೆ ಬಟ್ಟೆ ಕಟ್ಟಿ ಬಳಿಕ ಅಂಗಡಿಯಲ್ಲಿದ್ದ ಬೆಳ್ಳಿ ಆಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ.

ತಡರಾತ್ರಿ 3 ಗಂಟೆ ಸುಮಾರಿಗೆ ಕಳ್ಳರು ಅಕ್ಕಪಕ್ಕದ ಏರಿಯಾದಲ್ಲಿ ತಿರುಗಾಡಿದ ಬಗ್ಗೆ ಕ್ಯಾಮರಾಗಳಲ್ಲಿ ಅಸ್ಪಷ್ಟವಾಗಿ ಸೆರೆಯಾಗಿದೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ಕಾರವಾರ: ಚಿನ್ನದ ಅಂಗಡಿ ಬಾಗಿಲು ಮುರಿದು ಲಕ್ಷಾಂತರ ರೂ. ಬೆಳ್ಳಿ ಆಭರಣ ದೋಚಿದ ಘಟನೆ ಕಾರವಾರದಲ್ಲಿ ನಡೆದಿದೆ.

ಜ್ಯೂವೆಲರಿ ಶಾಪ್​ನಲ್ಲಿ ಕಳ್ಳತನ

ನಗರದ ವೈಷ್ಣವಿ ಸ್ಟೋರ್ಸ್ ರಸ್ತೆಯಲ್ಲಿ ಬಾಲಾಜಿ ಜ್ಯೂವೆಲರಿ ಶಾಪ್​ಗೆ ನುಗ್ಗಿದ ಕಳ್ಳರು, ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದಾರೆ. ಕಬ್ಬಿಣದ ಸಲಾಕೆಯಿಂದ ಅಂಗಡಿ ಬಾಗಿಲು ಮುರಿದ ಕಳ್ಳರು, ಅಂಗಡಿಯಲ್ಲಿದ್ದ ಸಿಸಿಟಿವಿಗಳನ್ನು ತಿರುಗಿಸಿ ಅದಕ್ಕೆ ಬಟ್ಟೆ ಕಟ್ಟಿ ಬಳಿಕ ಅಂಗಡಿಯಲ್ಲಿದ್ದ ಬೆಳ್ಳಿ ಆಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ.

ತಡರಾತ್ರಿ 3 ಗಂಟೆ ಸುಮಾರಿಗೆ ಕಳ್ಳರು ಅಕ್ಕಪಕ್ಕದ ಏರಿಯಾದಲ್ಲಿ ತಿರುಗಾಡಿದ ಬಗ್ಗೆ ಕ್ಯಾಮರಾಗಳಲ್ಲಿ ಅಸ್ಪಷ್ಟವಾಗಿ ಸೆರೆಯಾಗಿದೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.