ETV Bharat / state

138 ಚಕ್ರದ ಬೃಹತ್ ವಾಹನ ಸಂಚಾರ; ಅಂಕೋಲಾ ಬಳಿ ಬಿರುಕು ಬಿಟ್ಟ ಸೇತುವೆ

author img

By

Published : May 21, 2023, 7:18 PM IST

ಅಂಕೋಲಾ ಸಮೀಪದ ಹಟ್ಟಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ವಾಹನವೊಂದು ಸಂಚರಿಸಿದ ಪರಿಣಾಮ ಸೇತುವೆ ಫಿಲ್ಲರ್ ಬೇರಿಂಗ್​ ಕಟ್ಟಾಗಿ ಕುಸಿದಿದ್ದು, ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಸೇತುವೆಯಲ್ಲಿ ಬಿರುಕು
ಸೇತುವೆಯಲ್ಲಿ ಬಿರುಕು
ಬೃಹತ್ ವಾಹನ ಸಂಚಾರದಿಂದ ಸೇತುವೆಯ ಬಿರುಕು ಬಿಟ್ಟಿದೆ

ಕಾರವಾರ : ನವೀಕರಿಸಿದ ಹಳೆ ಸೇತುವೆಯ ಭೀಮ್ ಬಿರುಕು ಬಿಟ್ಟ ಪರಿಣಾಮ ಸಂಚಾರ ಸ್ಥಗಿತಗೊಂಡ ಘಟನೆ ಅಂಕೋಲಾ ಸಮೀಪದ ಹಟ್ಟಿಕೇರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಕಾರವಾರ ಅಂಕೋಲಾ ನಡುವಿನ ಹಟ್ಟಿಕೇರಿ ಬಳಿಯ ಹಳ್ಳಕ್ಕೆ 40 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯನ್ನು ಕಳೆದ ಮೂರು ತಿಂಗಳ ಹಿಂದೆ ಖಾಸಗಿ ಕಂಪನಿಯೊಂದು ದುರಸ್ತಿಗೊಳಿಸಿ ಡಾಂಬರೀಕರಣದ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಇಂದು ಬೃಹತ್ ವಾಹನವೊಂದು ಸಂಚರಿಸಿದ ಪರಿಣಾಮ‌ ಸೇತುವೆ ಪಿಲ್ಲರ್ ಬೇರಿಂಗ್ ಕಟ್ಟಾಗಿ ಕುಸಿದಿದ್ದು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಮಹಾರಾಷ್ಟ್ರದ ಕೊಲ್ಲಾಪುರದಿಂದ ಗೋವಾಗೆ ಪ್ರಯಾಣ ಬೆಳೆಸಿದ್ದ ಮೂರು ಬಾರಿ ವಾಹನಗಳು ವಿದ್ಯುತ್‌ ಪರಿವರ್ತಕವನ್ನು ಹೊತ್ತು ಸಾಗುತ್ತಿದ್ದವು. ಹೈಡ್ರಾಲಿಕ್ ತಂತ್ರಜ್ಞಾನ ಹೊಂದಿರುವ ಈ ಬಾರಿ ವಾಹನ 138 ಚಕ್ರಗಳೊಂದಿಗೆ ಒಟ್ಟು 228 ಟನ್ ಭಾರ ಹೊಂದಿದೆ ಎಂದು ತಿಳಿದು ಬಂದಿದೆ. ಅಧಿಕ ಭಾರ ಹೊತ್ತೊಯ್ಯುತ್ತಿದ್ದ ಮೂರು ವಾಹನಗಳ ಪೈಕಿ ಮೊದಲ ವಾಹನ ಸೇತುವೆ ದಾಟಿದಾಗ ಈ ಅವಘಡ ಸಂಭವಿಸಿದೆ. ಉಳಿದೆರಡು ವಾಹನವನ್ನು ಸಂಚಾರ ಮಾಡದಂತೆ ತಡೆಯಲಾಗಿತ್ತು.

ವಾಹನ ಸಂಚಾರ ಸಂಪೂರ್ಣ ಸ್ಥಗಿತ : ಸೇತುವೆ ಮೇಲೆ ವಾಹನ ಸಂಚಾರ ಇರುವಾಗಲೇ ಸೇತುವೆ ಪಿಲ್ಲರ್ ಕುಸಿತ ಕಂಡಿದ್ದು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಸದ್ಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಮಾಡಲಾಗಿದೆ. ಹಳೆ ಸೇತುವೆ ಬಳಿಯೇ ಹೊಸ ಸೇತುವೆ ನಿರ್ಮಾಣ ಮಾಡಿದ್ದು, ಸದ್ಯ ಅದರ ಮೇಲೆ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಳೆಯ ಸೇತುವೆ ಮೇಲೆ ಸಂಚಾರ ಮಾಡದಂತೆ ರಸ್ತೆ ಮೇಲೆ ಮಣ್ಣಿನ ರಾಶಿ ಹಾಕಿ ಸಂಚಾರಕ್ಕೆ ತಡೆ ನೀಡಲಾಗಿದೆ. ಸ್ಥಳಕ್ಕೆ‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಗಲಿನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ರಸ್ತೆಯ ಮೇಲೆ ಬಿದ್ದ ಮರ ತೆರವುಗೊಳಿಸಿದ ಇನ್ಸ್​ಸ್ಪೆಕ್ಟರ್​: ಇನ್ನೊಂದೆಡೆ ಬೆಂಗಳೂರು ನಗರದಲ್ಲಿ ನಿನ್ನೆ (ಶನಿವಾರ) ಸಂಜೆ ಸುರಿದ ಧಾರಾಕಾರ ಮಳೆಗೆ ಹಲವು ಭಾಗಗಳಲ್ಲಿ ಮರಗಳು ಧರೆಗೆ ಬಿದ್ದಿದ್ದವು. ಈ ವೇಳೆ ಮಳೆಯನ್ನೂ ಲೆಕ್ಕಿಸದೇ ರಸ್ತೆಯಲ್ಲಿ ಬಿದ್ದ ಮರದ ಕೊಂಬೆಯನ್ನು ಇನ್ಸ್​ಪೆಕ್ಟರ್​ವೊಬ್ಬರು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಹಿಂದೆಯೇ ರಾಜ್ಯದಲ್ಲಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಅದರಂತೆ ನಿನ್ನೆ ಸಂಜೆ ಸಿಲಿಕಾನ್​ ಸಿಟಿಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಬೃಹತ್ ಮರದ ಕೊಂಬೆಯೊಂದು ವಿಠಲ್ ಮಲ್ಯ ರಸ್ತೆಯಲ್ಲಿ ಧರೆಗುರುಳಿತ್ತು. ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಅಶೋಕ್​ ನಗರ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಗಮನಿಸಿದ್ದಾರೆ. ತಕ್ಷಣ ಪರಿಸ್ಥಿತಿಯನ್ನು ಮನಗಂಡು ತಮ್ಮ ವ್ಯಾಪ್ತಿಯಲ್ಲದಿದ್ದರೂ ಸಹ ತಾವೇ ನಿಂತು ಮರದ ಕೊಂಬೆಯನ್ನ ತೆರವುಗೊಳಿಸಿದ್ದಾರೆ.

ವಾಹನ ಸವಾರರಿಗೆ ಓಡಾಟಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಮುಂದಾಗಿ ಇನ್ಸ್‌ಪೆಕ್ಟರ್ ಕೈಗೊಂಡ ಕಾರ್ಯದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಸಹಿತ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆರ್ಭಟಿಸಿದ ವರುಣ.. ರಸ್ತೆಯ ಮೇಲೆ ಬಿದ್ದ ಮರದ ಕೊಂಬೆ ತೆರವುಗೊಳಿಸಿದ ಇನ್ಸ್‌ಪೆಕ್ಟರ್

ಬೃಹತ್ ವಾಹನ ಸಂಚಾರದಿಂದ ಸೇತುವೆಯ ಬಿರುಕು ಬಿಟ್ಟಿದೆ

ಕಾರವಾರ : ನವೀಕರಿಸಿದ ಹಳೆ ಸೇತುವೆಯ ಭೀಮ್ ಬಿರುಕು ಬಿಟ್ಟ ಪರಿಣಾಮ ಸಂಚಾರ ಸ್ಥಗಿತಗೊಂಡ ಘಟನೆ ಅಂಕೋಲಾ ಸಮೀಪದ ಹಟ್ಟಿಕೇರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಕಾರವಾರ ಅಂಕೋಲಾ ನಡುವಿನ ಹಟ್ಟಿಕೇರಿ ಬಳಿಯ ಹಳ್ಳಕ್ಕೆ 40 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆಯನ್ನು ಕಳೆದ ಮೂರು ತಿಂಗಳ ಹಿಂದೆ ಖಾಸಗಿ ಕಂಪನಿಯೊಂದು ದುರಸ್ತಿಗೊಳಿಸಿ ಡಾಂಬರೀಕರಣದ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಇಂದು ಬೃಹತ್ ವಾಹನವೊಂದು ಸಂಚರಿಸಿದ ಪರಿಣಾಮ‌ ಸೇತುವೆ ಪಿಲ್ಲರ್ ಬೇರಿಂಗ್ ಕಟ್ಟಾಗಿ ಕುಸಿದಿದ್ದು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಮಹಾರಾಷ್ಟ್ರದ ಕೊಲ್ಲಾಪುರದಿಂದ ಗೋವಾಗೆ ಪ್ರಯಾಣ ಬೆಳೆಸಿದ್ದ ಮೂರು ಬಾರಿ ವಾಹನಗಳು ವಿದ್ಯುತ್‌ ಪರಿವರ್ತಕವನ್ನು ಹೊತ್ತು ಸಾಗುತ್ತಿದ್ದವು. ಹೈಡ್ರಾಲಿಕ್ ತಂತ್ರಜ್ಞಾನ ಹೊಂದಿರುವ ಈ ಬಾರಿ ವಾಹನ 138 ಚಕ್ರಗಳೊಂದಿಗೆ ಒಟ್ಟು 228 ಟನ್ ಭಾರ ಹೊಂದಿದೆ ಎಂದು ತಿಳಿದು ಬಂದಿದೆ. ಅಧಿಕ ಭಾರ ಹೊತ್ತೊಯ್ಯುತ್ತಿದ್ದ ಮೂರು ವಾಹನಗಳ ಪೈಕಿ ಮೊದಲ ವಾಹನ ಸೇತುವೆ ದಾಟಿದಾಗ ಈ ಅವಘಡ ಸಂಭವಿಸಿದೆ. ಉಳಿದೆರಡು ವಾಹನವನ್ನು ಸಂಚಾರ ಮಾಡದಂತೆ ತಡೆಯಲಾಗಿತ್ತು.

ವಾಹನ ಸಂಚಾರ ಸಂಪೂರ್ಣ ಸ್ಥಗಿತ : ಸೇತುವೆ ಮೇಲೆ ವಾಹನ ಸಂಚಾರ ಇರುವಾಗಲೇ ಸೇತುವೆ ಪಿಲ್ಲರ್ ಕುಸಿತ ಕಂಡಿದ್ದು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಸದ್ಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಮಾಡಲಾಗಿದೆ. ಹಳೆ ಸೇತುವೆ ಬಳಿಯೇ ಹೊಸ ಸೇತುವೆ ನಿರ್ಮಾಣ ಮಾಡಿದ್ದು, ಸದ್ಯ ಅದರ ಮೇಲೆ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಳೆಯ ಸೇತುವೆ ಮೇಲೆ ಸಂಚಾರ ಮಾಡದಂತೆ ರಸ್ತೆ ಮೇಲೆ ಮಣ್ಣಿನ ರಾಶಿ ಹಾಕಿ ಸಂಚಾರಕ್ಕೆ ತಡೆ ನೀಡಲಾಗಿದೆ. ಸ್ಥಳಕ್ಕೆ‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಗಲಿನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ರಸ್ತೆಯ ಮೇಲೆ ಬಿದ್ದ ಮರ ತೆರವುಗೊಳಿಸಿದ ಇನ್ಸ್​ಸ್ಪೆಕ್ಟರ್​: ಇನ್ನೊಂದೆಡೆ ಬೆಂಗಳೂರು ನಗರದಲ್ಲಿ ನಿನ್ನೆ (ಶನಿವಾರ) ಸಂಜೆ ಸುರಿದ ಧಾರಾಕಾರ ಮಳೆಗೆ ಹಲವು ಭಾಗಗಳಲ್ಲಿ ಮರಗಳು ಧರೆಗೆ ಬಿದ್ದಿದ್ದವು. ಈ ವೇಳೆ ಮಳೆಯನ್ನೂ ಲೆಕ್ಕಿಸದೇ ರಸ್ತೆಯಲ್ಲಿ ಬಿದ್ದ ಮರದ ಕೊಂಬೆಯನ್ನು ಇನ್ಸ್​ಪೆಕ್ಟರ್​ವೊಬ್ಬರು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಹಿಂದೆಯೇ ರಾಜ್ಯದಲ್ಲಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಅದರಂತೆ ನಿನ್ನೆ ಸಂಜೆ ಸಿಲಿಕಾನ್​ ಸಿಟಿಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಬೃಹತ್ ಮರದ ಕೊಂಬೆಯೊಂದು ವಿಠಲ್ ಮಲ್ಯ ರಸ್ತೆಯಲ್ಲಿ ಧರೆಗುರುಳಿತ್ತು. ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಅಶೋಕ್​ ನಗರ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಗಮನಿಸಿದ್ದಾರೆ. ತಕ್ಷಣ ಪರಿಸ್ಥಿತಿಯನ್ನು ಮನಗಂಡು ತಮ್ಮ ವ್ಯಾಪ್ತಿಯಲ್ಲದಿದ್ದರೂ ಸಹ ತಾವೇ ನಿಂತು ಮರದ ಕೊಂಬೆಯನ್ನ ತೆರವುಗೊಳಿಸಿದ್ದಾರೆ.

ವಾಹನ ಸವಾರರಿಗೆ ಓಡಾಟಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಮುಂದಾಗಿ ಇನ್ಸ್‌ಪೆಕ್ಟರ್ ಕೈಗೊಂಡ ಕಾರ್ಯದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಸಹಿತ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆರ್ಭಟಿಸಿದ ವರುಣ.. ರಸ್ತೆಯ ಮೇಲೆ ಬಿದ್ದ ಮರದ ಕೊಂಬೆ ತೆರವುಗೊಳಿಸಿದ ಇನ್ಸ್‌ಪೆಕ್ಟರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.